Health Tips: ಲಾಕ್​ಡೌನ್​ನಲ್ಲಿ ಪಾಲಿಸಲೇಬೇಕಾದ ಸರಳ ಆರೋಗ್ಯ ಸೂತ್ರಗಳು

ನಮ್ಮನ್ನು ನಾವು ಸದೃಢವಾಗಿರಿಸಿಕೊಳ್ಳಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದರ ಹೊರತಾಗಿ ಏನು ಮಾಡಬಹುದು? ಈ ಬಗ್ಗೆ ಯೋಚಿಸಿದಾಗ ಇಂತಹ ಪ್ರಶ್ನೆಗಳಿಗೆ ಉತ್ತರಗಳು ಬೇಕಷ್ಟು ಸಿಕ್ಕಿರುತ್ತವೆ. ಆದರೆ ಇದು ಎಲ್ಲಾ ವಯಸ್ಸಿನ ಜನರಿಗೆ ನಿಜವಾಗಿಯೇ ಬಿಡುತ್ತದೆ ಎಂಬುದರ ಬಗ್ಗೆ ಎಲ್ಲೂ ವಿಶ್ಲೇಷಣೆಗಳಿಲ್ಲ.

Health Tips: ಲಾಕ್​ಡೌನ್​ನಲ್ಲಿ ಪಾಲಿಸಲೇಬೇಕಾದ ಸರಳ ಆರೋಗ್ಯ ಸೂತ್ರಗಳು
ಸಾಂದರ್ಭಿಕ ಚಿತ್ರ
Follow us
| Updated By: Digi Tech Desk

Updated on:May 11, 2021 | 6:17 PM

ಇಡೀ ದೇಶವೇ ಕೊರೊನಾ ಸೋಂಕು ನಿಯಂತ್ರಣಕ್ಕೆ ಹೋರಾಡುತ್ತಿದೆ. ವ್ಯಾಪಕವಾಗಿ ಕೊರೊನಾ ಹರಡುವಿಕೆ ಹೆಚ್ಚಾಗುತ್ತಿದ್ದಂತೆಯೇ ಎಲ್ಲಾ ಜನರಿಗೂ ಎದುರಾಗುವ ಪ್ರಶ್ನೆ ಎಂದರೆ ನಮ್ಮ ಆರೋಗ್ಯವನ್ನು ಸುಧಾರಿಸುಕೊಳ್ಳುವುದು ಹೇಗೆ? ನಮ್ಮನ್ನು ನಾವು ಸದೃಢವಾಗಿರಿಸಿಕೊಳ್ಳಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದರ ಹೊರತಾಗಿ ಏನು ಮಾಡಬಹುದು? ಈ ಬಗ್ಗೆ ಯೋಚಿಸಿದಾಗ ಇಂತಹ ಪ್ರಶ್ನೆಗಳಿಗೆ ಉತ್ತರಗಳು ಬೇಕಷ್ಟು ಸಿಕ್ಕಿರುತ್ತವೆ. ಆದರೆ ಇದು ಎಲ್ಲಾ ವಯಸ್ಸಿನ ಜನರಿಗೆ ನಿಜವಾಗಿಯೇ ಬಿಡುತ್ತದೆ ಎಂಬುದರ ಬಗ್ಗೆ ಎಲ್ಲೂ ವಿಶ್ಲೇಷಣೆಗಳಿಲ್ಲ.

ದೇಹ ಸದೃಢವಾಗಿರಲು 10,000 ಹೆಜ್ಜೆಗಳು ನಡೆಯುವುದು ಅಗತ್ಯವೇ? ದೇಹದ ಫಿಟ್​ನೆಸ್​ ಕಾಪಾಡಿಕೊಳ್ಳಲು ಪ್ರತಿನಿತ್ಯ 10,000 ಹೆಜ್ಜೆಗಳನ್ನು ಸಾಗಬೇಕು ಎಂಬುದನ್ನು ಕೇಳಿಯೇ ಇರುತ್ತೀರಿ. ಆದರೆ ಫಿಟ್​ನೆಸ್​ ಕಾಪಾಡಿಕೊಂಡು ಸಾಗಲು 10 ಸಾವಿರ ಹೆಜ್ಜೆಗಳನ್ನು ಸಾಗಬೇಕು ಎಂಬುದಕ್ಕೆ ಎಲ್ಲಿಯೂ ಪುರಾವೆಗಳಿಲ್ಲ. 20 ವರ್ಷ ವಯಸ್ಸಿನವರಿಗೆ 10 ಸಾವಿರ ಹೆಜ್ಜೆಗಳು ತುಂಬಾ ಕಡಿಮೆ. ಆದರೆ ಅದೇ 60 ವರ್ಷ ವಯಸ್ಸಿನವರಿಗೆ 10 ಸಾವಿರ ಹೆಜ್ಜೆ ನಡೆಯಬೇಕು ಅಂದರೆ ಅದೆಲ್ಲಿಂದ ಸಾಧ್ಯ? ಹಾಗಾಗಿ ವಯಸ್ಸಿನ ಆಧಾರದ ಮೇಲೆ ಕೆಲವು ಅಂಕಿಅಂಶಗಳು ಅವಲಂಬಿತವಾಗಿರುತ್ತದೆ.

ಆರೋಗ್ಯವಾಗಿರಲು ಪ್ರತಿನಿತ್ಯ 8 ಗಂಟೆಗಳ ನಿದ್ರೆ ಅಗತ್ಯವಿದೆಯೇ? ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರ ಜೊತೆಗೆ ಮಾನಸಿಕವಾಗಿ ಆರೋಗ್ಯವಾಗಿರಲು ನಿದ್ರೆ ಅತ್ಯವಶ್ಯಕ. ಜೊತೆಗೆ ಮಧುಮೇಹ, ಹೃದಯರೋಗದಂತಹ ಕಾಯಿಲೆಗಳನ್ನು ತಪ್ಪಿಸಲು ನಿದ್ರೆ ಅವಶ್ಯಕ. ನ್ಯಾಷನಲ್​ ಸ್ಲೀಪ್ ಪೌಂಡೇಶನ್​ ಅವರ ಪ್ರಕಾರ, ಆರೋಗ್ಯವಂತ ವಯಸ್ಕರು ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ಮಲಗಬೇಕು. ಅದೇ ಮಕ್ಕಳಿಗಾದರೆ ಇನ್ನೂ ಹೆಚ್ಚಿನ ನಿದ್ದೆ ಅವಶ್ಯಕ. ಆದರೆ 60 ವರ್ಷಕ್ಕಿಂತ ಮೆಲ್ಪಟ್ಟ ಹಿರಿಯರು 7 ರಿಂದ 8 ಗಂಟೆಗಳ ಕಾಲ ಮಲಗಬೇಕು. ಪ್ರತಿದಿನ 6 ಗಂಟೆಗಿಂತ ಕಡಿಮೆ ಇದ್ದೆ ಮಾಡುವ ಜನರು ವೃದ್ದಾಪ್ಯದಲ್ಲಿ ಬುದ್ದಿಮಾಂದ್ಯತೆಗೆ ಒಳಗಾಗುತ್ತಾರೆ.

ಪ್ರತಿನಿತ್ಯ 8 ಲೀಟರ್​ ನೀರು ಕುಡಿಯುವುದು ಅಗತ್ಯವೇ? ದೇಹಕ್ಕೆ ನೀರು ಬಹಳ ಮುಖ್ಯ. ಆದರೆ ಆರೋಗ್ಯ ತಜ್ಞರ ಪ್ರಕಾರ, ವ್ಯಕ್ತಿಯ ದೇಹಕ್ಕೆ ಎಷ್ಟು ನೀರು ಬೇಕು? ಬದಲಾಗುತ್ತಿರುವ ಹವಾಮಾನದಲ್ಲಿ ವ್ಯಕ್ತಿಯ ಆರೋಗ್ಯ ಸ್ಥಿತಿ ಹೇಗಿರುತ್ತದೆ? ವ್ಯಕ್ತಿಯ ದೈಹಿಕ ಚಟುವಟಿಕೆ ಮತ್ತು ಆತನ ತೂಕ, ಆತನ ಬೆವರು ಯಾವ ಪ್ರಮಾಣದಲ್ಲಿರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಜೊತೆಗೆ, ನಾವು ಚಹಾ, ಕಾಫಿ, ಜ್ಯೂಸ್, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುತ್ತೇವೆ. ಇದರಿಂದಾಗಿ ಅಗತ್ಯವಾದ ನೀರು ನಮ್ಮ ದೇಹಕ್ಕೆ ಪೂರಕವಾಗಿರುತ್ತದೆ.

ಪ್ರತಿನಿತ್ಯ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೇವಿಸುವುದು ಅಗತ್ಯವೇ? ಸಂಶೋಧಕರು, ಪ್ರತಿನಿತ್ಯ 400 ಗ್ರಾಂ ಬದಲಿಗೆ 800 ಗ್ರಾಂ ಹಣ್ಣುಗಳನ್ನು ಸೇವಿಸುವುದರಿಂದ ಅರೋಗ್ಯ ಚೆನ್ನಾಗಿರುತ್ತದೆ ಎಂದು ತಿಳಿಸಿದ್ದಾರೆ. ಮತ್ತು ಪೌಷ್ಠಿಕಾಂಶಯುಕ್ತ ಆಹಾರ, ದೇಹದ ಸಮತೋಲನಕ್ಕೆ ಸಹಾಯಕ. ಜೊತೆಗೆ ಹಣ್ಣು ಮತ್ತು ತರಕಾರಿಗಳ ಸೇವನೆ ದೇಹಕ್ಕೆ ಹೆಚ್ಚು ರಕ್ಷಣೆಯನ್ನು ನೀಡುತ್ತದೆ.

ಕಡಿಮೆ ಬೆಳಕಿನಲ್ಲಿ ಓದುವುದು ಕಣ್ಣುಗಳನ್ನು ಹಾಳು ಮಾಡುತ್ತದೆಯೇ? ಕಡಿಮೆ ಬೆಳಕಿನಲ್ಲಿ ಅಥವಾ ಮಂದ ಬೆಳಕಿನಲ್ಲಿ ಓದುವುದು ಬಹಳ ಕಷ್ಟ ಅನಿಸಬಹುದು. ಕಣ್ಣುಗಳಿಗೆ ಹೆಚ್ಚು ಒತ್ತಡವನ್ನುಂಟು ಮಾಡುವುದರಿಂದ ತಲೆನೋವು ಉಂಟಾಗುತ್ತದೆ. ಆದರೆ ತಜ್ಞರು ತಿಳಿಸುವಂತೆ, ಕಡಿಮೆ ಬೆಳಕಿನಲ್ಲಿ ಓದುವುದು ಕಣ್ಣಿಗೆ ಶಾಶ್ವತವಾಗಿ ಹೊಡೆತ ಬೀಳುವುದಿಲ್ಲ. ಹಾಗೂ ಕಣ್ಣಿನ ಸಮಸ್ಯೆ, ವ್ಯಕ್ತಿಯ ಕಣ್ಣಿನ ಆರೋಗ್ಯದ ಸ್ಥಿತಿಗತಿಯ ಮೇಲೆ ಇದು ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ: Health Tips: ಉತ್ತಮ ಆರೋಗ್ಯಕ್ಕೆ ಯಾವ ಯಾವ ಹಣ್ಣು ಪೂರಕ?

Published On - 4:32 pm, Tue, 11 May 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ