AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gemini Personality Horoscope: ಮಿಥುನ ರಾಶಿಯವರ ವ್ಯಕ್ತಿತ್ವ ಹೇಗಿರಲಿದೆ? ನಿಮಗೆ ಗೊತ್ತಾದರೆ ಅಚ್ಚರಿಪಡುವುದು ಖಂಡಿತಾ..!

ಮಿಥುನ ರಾಶಿಯಲ್ಲಿ ಜನಿಸಿದ ಪುರುಷರಿಗೆ ಸ್ತ್ರೀಯರಲ್ಲಿ ಆಸಕ್ತಿ ಹೆಚ್ಚು. ಸ್ತ್ರೀಯರಿಗೆ ಪುರುಷರಲ್ಲಿ ಆಸಕ್ತಿ ಅಧಿಕವಾಗಿರುತ್ತದೆ. ಎಲ್ಲ‌ ಕಾರ್ಯಗಳನ್ನು ಬಲ್ಲವನಾಗುವನು. ಮಾತ್ರವಲ್ಲ ಅದನ್ನು ಮಾಡುವ ರೀತಿಯೂ ಚೆನ್ನಾಗಿ ಗೊತ್ತಾಗುವುದು. ‌ಬಹಳ ಕುಶಲತೆಯಿಂದ ಎಲ್ಲವನ್ನೂ ಮಾಡುವರು.

Gemini Personality Horoscope: ಮಿಥುನ ರಾಶಿಯವರ ವ್ಯಕ್ತಿತ್ವ ಹೇಗಿರಲಿದೆ? ನಿಮಗೆ ಗೊತ್ತಾದರೆ ಅಚ್ಚರಿಪಡುವುದು ಖಂಡಿತಾ..!
ಮಿಥುನ ರಾಶಿ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jul 15, 2024 | 12:57 PM

Share

ಜ್ಯೋತಿಷ್ಯ ಶಾಸ್ತ್ರವು ಕಣ್ಣಿನಂತೆ. ನಮ್ಮ ಜೀವನವನ್ನು ನೋಡಲು ಅತ್ಯುಪಯುಕ್ತ ವಿದ್ಯೆ ಇದು. ಹಿಂದಿನವರು ತಮ್ಮ ಬದುಕನ್ನು ಇದೆಲ್ಲದರ ಆಧಾರದ ಮೇಲೆ ನಿರ್ಮಿಸಿಕೊಳ್ಳುತ್ತಿದ್ದರು. ಹನ್ನೆರಡು ರಾಶಿಗಳು, ಒಂಭತ್ತು ಗ್ರಹಗಳು, ಇಪ್ಪತ್ತೇಳು ನಕ್ಷತ್ರಗಳಲ್ಲಿ ಬದುಕನ್ನು ಕಟ್ಟಿಕೊಳ್ಳುವ ಬಗೆ ಭಾರತೀಯರದ್ದು.

ರಾಶಿ ಚಕ್ರದ ಮೂರನೇ ರಾಶಿ ಮಿಥುನ ರಾಶಿ. ಈ ರಾಶಿಯ ಸ್ವರೂಪ ಒಬ್ಬ ಪುರುಷ ಹಾಗೂ ಒಬ್ಬಳು ಸ್ತ್ರೀ. ಪುರುಷನು ಕೈಯಲ್ಲಿ ಗದೆ ಇದೆ. ಸ್ತ್ರೀಯ ಕೈಯಲ್ಲಿ ವೀಣೆ. ಇದರ ಅಧಿಪತಿ ಬುಧ. ಬುಧನು ಚಂದ್ರನ ಮಗನೆಂದು ಪ್ರಸಿದ್ಧ. ಹಾಗಾಗಿಯೇ ಬುಧನಿಗೆ ಸೌಮ್ಯ ಎಂದು ಕರೆಯುವುದು. ಸೋಮನ ಮಗ ಎಂದರ್ಥ. ಈ ಬುಧನು ಚಂದ್ರನಿಗೆ ಸಮಾನನಾಗಿರುವನು. ಆದರೆ ಚಂದ್ರನು ಬುಧನಿಗೆ ಶತ್ರುವಾಗಿರವನು. ಹಾಗಾಗಿ‌ ಇದು ಒಂದು ಕಡೆಯಿಂದ ಸಕಾರಾತ್ಮಕ ಹಾಗೂ ಮತ್ತೊಂದು‌ ಕಡೆಯಿಂದ ನಕಾರಾತ್ಮಕವಾಗಿ ಇರಲಿದೆ.

ಈ ರಾಶಿಯಲ್ಲಿ ಜನಿಸಿದ ಪುರುಷರಿಗೆ ಸ್ತ್ರೀಯರಲ್ಲಿ ಆಸಕ್ತಿ ಹೆಚ್ಚು. ಸ್ತ್ರೀಯರಿಗೆ ಪುರುಷರಲ್ಲಿ ಆಸಕ್ತಿ ಅಧಿಕವಾಗಿರುತ್ತದೆ.

ಎಲ್ಲ‌ ಕಾರ್ಯಗಳನ್ನು ಬಲ್ಲವನಾಗುವನು. ಮಾತ್ರವಲ್ಲ ಅದನ್ನು ಮಾಡುವ ರೀತಿಯೂ ಚೆನ್ನಾಗಿ ಗೊತ್ತಾಗುವುದು. ‌ಬಹಳ ಕುಶಲತೆಯಿಂದ ಎಲ್ಲವನ್ನೂ ಮಾಡುವರು.

ಯಾವುದಾದರೊಂದು ವಿದ್ಯೆಯಲ್ಲಿ‌ ವಿಶೇಷ ಪಾಂಡಿತ್ಯವುಳ್ಳವನಾಗುವನು. ದೂತ ಕಾರ್ಯವನ್ನು ನಿಷ್ಣಾತನಾಗಿ ನಿರ್ವಹಿಸುವನು. ವ್ಯವಹಾರದಲ್ಲಿ ಚುರುಕಾದ ಬುದ್ಧಿಯುಳ್ಳವರಾಗುವರು. ಇನ್ನೊಬ್ಬರ ಸ್ವಭಾವವನ್ನು ಅರಿಯುವ ವಿದ್ಯೆಯನ್ನು ತಾನಾಗಿಯೇ ಒಲಿಸಿಕೊಳ್ಳುವರು‌.

ಹಾಸ್ಯ ಸ್ವಭಾವವು ಇವರಲ್ಲಿ ಅಧಿಕ.‌ ಎಲ್ಲವನ್ನೂ ತಮಾಷೆಯಾಗಿ ನೋಡುವರು.‌ ಗಂಭೀರವಾದ ವಿಚಾರಗಳು ಇವರ ತಲೆಗೆ ಸುಲಭಕ್ಕೆ ಹೋಗದು. ಹೋದರೂ ಅದು ಹಾಸ್ಯವಾಗಿ ಪರಿವರ್ತನೆಯಾಗುವುದು.

ದುರಭ್ಯಾಸದಲ್ಲಿ ಆಸಕ್ತಿ ಹೆಚ್ಚಿರುವುದು. ಆಕರ್ಷಕ ರೂಪವನ್ನು ಹೊಂದಿರುವರು. ಎಲ್ಲರೂ ಮೆಚ್ಚುವಂತೆ ಮಾತನಾಡುವರು. ಅಷ್ಟೇ ಅಲ್ಲದೇ ಹೆಚ್ಚು ಆಹಾರವನ್ನು ತಿನ್ನುವರು ಅಥವಾ ಸದಾ ತಿನ್ನವ ಕಡೆ ಮನಸ್ಸಿರುವುದು.‌ ಹೊಸ ರುಚಿಗಳ ಬಗ್ಗೆ ಆಸಕ್ತಿ ಇರುವುದು.

ಸಂಗೀತ ವಾದ್ಯ ನೃತ್ಯ ಮುಂತಾದ ಕಲೆಗಳನ್ನು ಇಷ್ಟಪಡುವರು ಅಥವಾ ಕಲಿಯುವ ಹವ್ಯಾಸವಿರುವುದು. ಇವರು ಅಪುಂಸಕರ ಸಹವಾಸವನ್ನು ಹೆಚ್ಚು ಮಾಡುವರು.

ಇದನ್ನೂ ಓದಿ: ವೃಷಭ ರಾಶಿಯಲ್ಲಿ ಜನಿಸಿದ್ದೀರಾ ನೀವು? ಹಾಗಾದರೆ ನೀವು ಹೀಗಿರುವಿರಿ…!

ಇದೆಲ್ಲವನ್ನೂ ವಿಶೇಷವಾಗಿ ಆರ್ದ್ರಾ ನಕ್ಷತ್ರದಲ್ಲಿ‌ ಜನಿಸಿದ ವ್ಯಕ್ತಿಗಳಲ್ಲಿ ನೋಡಲು ಸಾಧ್ಯ. ಚಂದ್ರನು ತಮ್ಮ ಸಂಚಾರ ಕಾಲದಲ್ಲಿ ಮಿಥುನ ರಾಶಿಗೆ ಬಂದಾಗ ಕೆಲವನ್ನು ಉಂಟುಮಾಡಿಸುವನು.

– ಲೋಹಿತ ಹೆಬ್ಬಾರ್ – 8762924271

Published On - 12:49 pm, Mon, 15 July 24

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​