AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಕೇತುವಿನಿಂದ ಯಾರಿಗೆ ಯಾವ ಫಲ?

2026ರಲ್ಲಿ ಕೇತುವಿನ ವಕ್ರ ಸಂಚಾರವು ಪೂರ್ವಾಫಲ್ಗುಣಿ ನಕ್ಷತ್ರಕ್ಕೆ ಪ್ರವೇಶಿಸಲಿದೆ. ಇದು ವಿವಿಧ ರಾಶಿಗಳ ಮೇಲೆ ಶುಭ ಮತ್ತು ಅಶುಭ ಫಲಗಳನ್ನು ತರಲಿದೆ. ಮೇಷ, ತುಲಾ, ಧನು ರಾಶಿಗಳಿಗೆ ಉತ್ತಮ ಫಲವಿದ್ದರೆ, ಸಿಂಹ, ಕುಂಭ, ವೃಶ್ಚಿಕ ರಾಶಿಗಳಿಗೆ ಮಿಶ್ರ ಫಲ ನಿರೀಕ್ಷಿಸಲಾಗಿದೆ. ಶುಕ್ರವಾರ ಲಕ್ಷ್ಮಿ ಪೂಜೆ, ಗಣಪತಿ ಅಥರ್ವಶೀರ್ಷ ಪಠಣದಿಂದ ಕೇತು ದೋಷ ನಿವಾರಣೆ ಸಾಧ್ಯ. ನಿಮ್ಮ ರಾಶಿಯ ಮೇಲೆ ಕೇತು ಪ್ರಭಾವ ತಿಳಿಯಿರಿ.

ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಕೇತುವಿನಿಂದ ಯಾರಿಗೆ ಯಾವ ಫಲ?
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 01, 2026 | 5:04 PM

Share

2026ರ ಆರಂಭದಲ್ಲಿ ಕೇತುವು ಕನ್ಯಾ ರಾಶಿಯಲ್ಲಿರುತ್ತಾನೆ. ಆದರೆ ಕೇತುವಿನ ಹಿಮ್ಮುಖ ಚಲನೆಯ ಆಧಾರದ ಮೇಲೆ, ಅವನು ಪೂರ್ವಾಫಲ್ಗುಣಿ ನಕ್ಷತ್ರಕ್ಕೆ ಸಿಂಹ ರಾಶಿ ಪ್ರವೇಶಿಸಿದಾಗ ಉಂಟಾಗುವ ಶುಭಾಶುಭ ಫಲಗಳ ವಿವರ ಇಲ್ಲಿದೆ. ಕೇತುವು ಶುಕ್ರನ ನಕ್ಷತ್ರವಾದ ಪೂರ್ವಾಫಲ್ಗುಣಿಯಲ್ಲಿ ಸಂಚರಿಸುವಾಗ ಭೋಗ ಮತ್ತು ವೈರಾಗ್ಯಗಳ ನಡುವೆ ಸಂಘರ್ಷ ಉಂಟಾಗುತ್ತದೆ.

​ಇದರಿಂದ ವಿವಿಧ ರಾಶಿಗಳ ಮೇಲಾಗುವ ಪ್ರಭಾವ ಹೀಗಿದೆ.

​ಶುಭ ಫಲ ಪಡೆಯುವ ರಾಶಿಗಳು

​ಮೇಷ ರಾಶಿ:

ಪಂಚಮ ಭಾವದಲ್ಲಿ ಕೇತು ಬರುವುದರಿಂದ ಸೃಜನಾತ್ಮಕ ಶಕ್ತಿ ಹೆಚ್ಚಲಿದೆ. ಹಳೆಯ ಹೂಡಿಕೆಗಳಿಂದ ಲಾಭವಾಗಲಿದೆ. ಆಧ್ಯಾತ್ಮಿಕ ಸಾಧಕರಿಗೆ ಇದು ಸುವರ್ಣ ಕಾಲ.

​ತುಲಾ ರಾಶಿ:

ಹನ್ನೊಂದನೇ ಮನೆಯಲ್ಲಿ ಕೇತು ಇರುವುದರಿಂದ ಅನಿರೀಕ್ಷಿತ ಧನಲಾಭವಾಗಲಿದೆ. ಈ ಹಿಂದೆ ನಿಂತುಹೋದ ಕೆಲಸಗಳು ಮರಳಿ ಆರಂಭವಾಗಲಿವೆ. ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದೆ.

​ಧನು ರಾಶಿ:

ಭಾಗ್ಯ ಸ್ಥಾನದಲ್ಲಿ ಕೇತು ಸಂಚರಿಸುವುದರಿಂದ ಧಾರ್ಮಿಕ ಪ್ರವಾಸಗಳು ಯಶಸ್ವಿಯಾಗಲಿವೆ. ತಂದೆಯ ಆಸ್ತಿಯಲ್ಲಿ ಪಾಲ ಸಿಗುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ವೃದ್ಧಿಸುತ್ತದೆ.

​ಮಿಶ್ರ ಫಲ ರಾಶಿಗಳು

​ಸಿಂಹ ರಾಶಿ:

ನಿಮ್ಮದೇ ರಾಶಿಯ ನಕ್ಷತ್ರದಲ್ಲಿ ಕೇತು ಇರುವುದರಿಂದ ಮಾನಸಿಕ ಗೊಂದಲ ಹೆಚ್ಚಲಿದೆ. ವೈಯಕ್ತಿಕ ನಿರ್ಧಾರಗಳಲ್ಲಿ ತಪ್ಪುಗಳಾಗಬಹುದು. ಆರೋಗ್ಯ, ವಿಶೇಷವಾಗಿ ಹೃದಯ ಅಥವಾ ಬೆನ್ನಿನ ಸಮಸ್ಯೆ ಬಗ್ಗೆ ಎಚ್ಚರವಿರಲಿ.

​ಕುಂಭ ರಾಶಿ:

ಸಪ್ತಮ ಭಾವದಲ್ಲಿ ಕೇತು ಸಂಚರಿಸುವುದರಿಂದ ದಾಂಪತ್ಯ ಜೀವನದಲ್ಲಿ ವಿರಸ ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ನಂಬಿಕೆ ದ್ರೋಹವಾಗುವ ಸಂಭವವಿದೆ. ಹೊಸ ಒಪ್ಪಂದಗಳಿಗೆ ಇದು ಸಕಾಲವಲ್ಲ.

​ವೃಶ್ಚಿಕ ರಾಶಿ:

ಹತ್ತನೇ ಮನೆಯಲ್ಲಿ ಕೇತು ಇರುವುದರಿಂದ ಉದ್ಯೋಗದಲ್ಲಿ ಅಸ್ಥಿರತೆ ಕಾಡಬಹುದು. ಮೇಲಧಿಕಾರಿಗಳೊಂದಿಗೆ ವಾದ ಮಾಡಬೇಡಿ. ವೃತ್ತಿ ಬದಲಾವಣೆಯ ಆಲೋಚನೆ ಸದ್ಯಕ್ಕೆ ಬೇಡ. ​ ​ಪೂರ್ವಾಫಲ್ಗುಣಿ ನಕ್ಷತ್ರವು ಶುಕ್ರನ ಅಧಿಪತ್ಯಕ್ಕೆ ಒಳಪಟ್ಟಿರುವುದರಿಂದ, ಈ ಅವಧಿಯಲ್ಲಿ ಶುಕ್ರನು ಜಾತಕದಲ್ಲಿ ಪ್ರಬಲನಾಗಿದ್ದರೆ ಅಶುಭ ಫಲಗಳು ಕಡಿಮೆಯಾಗುತ್ತವೆ.

ಶುಕ್ರವಾರ ಲಕ್ಷ್ಮಿ ದೇವಿಗೆ ಕುಂಕುಮಾರ್ಚನೆ, ಗಣಪತಿ ಅಥರ್ವಶೀರ್ಷ ಪಠಣ ಮಾಡುವುದರಿಂದ, ದೂರ್ವಾಪತ್ರ ಸಮರ್ಪಣೆಯಿಂದ ಕೇತುವಿನ ದೋಷ ನಿವಾರಣೆಯಾಗುತ್ತದೆ.

– ಲೋಹಿತ ಹೆಬ್ಬಾರ್