Horoscope: ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಸಿಹಿ ಸುದ್ದಿ ಕೇಳುವರು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಪಂಚಮೀ ತಿಥಿ, ಬುಧವಾರ ಸಂಬಂಧ ಮರು ನಿರ್ಮಾಣದಲ್ಲಿ ಸೋಲು, ಬಲ್ಲವರಿಂದ ಸಲಹೆ, ಕೆಣಕುವವರ ಎದುರು ನಗೆಪಾಟಲು, ಔದ್ಯೋಗಿಕ ಚಿಂತೆ ಇವು ಇಂದಿನ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ: ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಬುಧ, ತಿಥಿ : ಪಂಚಮೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಪ್ರೀತಿ, ಕರಣ : ಗರಜ, ಸೂರ್ಯೋದಯ – 06:28 am, ಸೂರ್ಯಾಸ್ತ – 06:43 pm, ಇಂದಿನ ಶುಭಾಶುಭಕಾಲ: ರಾಹು ಕಾಲ 12:36 – 14:08, ಯಮಘಂಡ ಕಾಲ 08:01 – 09:32, ಗುಳಿಕ ಕಾಲ 11:04-12:36
ತುಲಾ ರಾಶಿ: ಆರ್ಥಿಕ ವಿಭಾಗವನ್ನು ಹೆಚ್ಚು ಕೆಲಸ ಮತ್ತು ಒತ್ತಡಗಳು ಇರುವುದು. ಸಣ್ಣ ಕಾರ್ಯವೂ ನಿಮಗೆ ಮನಸ್ಸಿಗೆ ಅನೇಕ ಸಕಾರ ಹಾಗೂ ನಕಾರಾತ್ಮಕವಾದ ಆಲೋಚನೆಗಳು ತಂದುಕೊಡುವುದು. ನಿಮ್ಮ ಕ್ರಿಯಾಶೀಲತೆಯಿಂದ ಪ್ರಶಂಸೆಯು ಸಿಗಲಿದೆ. ಸಂಗಾತಿಯ ಒತ್ತಡವನ್ನು ನೀವು ಕಡಿಮೆ ಮಾಡುವಿರಿ. ವ್ಯಾಪಾರದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ. ಇಂದಿನ ಕಲಹದಿಂದ ನಿಮ್ಮ ಒಳ ಮನಸ್ಸು ಅರ್ಥವಾಗುವುದು. ನೀವು ಒತ್ತಡವನ್ನು ತಂದುಕೊಳ್ಳಬಾರದು ಎಂದು ಅಂದುಕೊಂಡಿದ್ದರೂ ಅಂತಹ ಸಂದರ್ಭವು ಸೃಷ್ಟಿಯಾಗಬಹುದು. ವಿದ್ಯಾರ್ಥಿಗಳು ವೃತ್ತಿಯ ಬಗ್ಗೆ ಹೆಚ್ಚು ಚಿಂತೆ ಮಾಡಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಕೆಲವು ಯೋಜನೆಗಳನ್ನು ಸಹ ಮಾಡಬಹುದು. ಆರ್ಥಿಕ ಲಾಭಕ್ಕಾಗಿ ನೀವು ಅವಕಾಶಗಳನ್ನು ಪಡೆಯುವುದನ್ನು ಮುಂದುವರಿಸುವಿರಿ. ಸ್ಥಿರಾಸ್ತಿಯನ್ನು ಪಡೆಯುವ ಚಿಂತನೆ ಸಫಲವಾಗುವುದು. ಉದ್ಯೋಗದಿಂದ ತೆಗೆದುಹಾಕುವ ಭೀತಿಯು ನಿಮ್ಮನ್ನು ಕಾಡಬಹುದು.
ವೃಶ್ಚಿಕ ರಾಶಿ: ಇಂದು ನಿಮಗೆ ಹಣಕಾಸಿನ ಹೊಂದಾಣಿಕೆ ಕಷ್ಟವಾಗುವುದು. ಯಾರ ಬಳಿಯೂ ಸಹಾಯ ಸುಲಭವಾಗಿ ಸಿಗದು. ಆದರೆ ನಿಮ್ಮ ಆರೋಗ್ಯದ ಬಗ್ಗೆ ನಿಮ್ಮ ಗಮನವೂ ಬೇಕು. ಮನೆಯ ನಿರ್ಮಾಣ ಒತ್ತಡದಿಂದ ಆರೋಗ್ಯದ ವ್ಯತ್ಯಾಸ. ಇಂದು ನೀವು ದಿನದ ಕೊನೆಯಲ್ಲಿ ಸುವಾರ್ತೆಯನ್ನು ನಿರೀಕ್ಷಿಸಬಹುದು. ಬಾಡಿಗೆ ಮನೆಯವರು ಮನೆಯನ್ನು ಬದಲಾಯಿಸುವರು. ಯಾರನ್ನಾದರೂ ಮನವೊಲಿಸಿ ಮಾಡುವ ಕಾರ್ಯಕ್ಕೆ ಫಲ ಸಿಗುವುದು. ಗುಣಮುಖವಾಗುವ ಆರೋಗ್ಯದಿಂದ ಸಮಾಧಾನ ಸಿಗಲಿದೆ. ನಿಮ್ಮನ್ನು ತಿಳಿದವರೇ ನಿಮಗೆ ವಂಚನೆ ಮಾಡಬಹುದು. ಇಂದು ನಿಮ್ಮ ಹವ್ಯಾಸವನ್ನು ಪೂರೈಸಲು ಸಮಯವನ್ನು ತೆಗೆದುಕೊಳ್ಳುವಿರಿ. ನಿಮ್ಮನ್ನು ಆಶ್ರಯಿಸಿ ಬಂದವರಿಗೆ ಸರಿಯಾದ ದಿಕ್ಕನ್ನು ಪರಿಚಯಿಸುವಿರಿ. ಹಳೆಯ ಸ್ನೇಹಿತ ನಿಮ್ಮನ್ನು ಭೇಟಿಯಾಗಬಹುದು. ಮನೆಯಲ್ಲಿ ಇಂದು ಸಂಭ್ರಮದ ವಾತಾವರಣ ಇರುವುದು. ಪ್ರಭಾವಿ ವ್ಯಕ್ತಿಗಳ ಸಹವಾಸ ಕಡಿತವಾಗುವುದು. ಸಹೋದರಿಯರ ಭೇಟಿಯು ನಿಮಗೆ ಸಂತೋಷ ಕೊಡುವುದು.
ಧನು ರಾಶಿ: ಪ್ರಯಾಣದಲ್ಲಿ ಉಂಟಾದ ಪರಿಚಯದಿಂದ ಅಪಾಯ ಬರಬಹುದು. ನಿಮ್ಮ ಅಮೂಲ್ಯ ವಸ್ತುಗಳು ಪರವಶವಾಗಲಿವೆ. ನೀವು ಇಂದು ಒಮ್ಮೆಲೆ ಸ್ವೀಕರಿಸಲು ಒಪ್ಪಲಾರಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಕ್ಕೆ ವಿಳಂಬವಾಗಿ ತೆರಳುವಿರಿ. ನೀವು ಇಂದು ವ್ಯಾಪಾರದಲ್ಲಿ ಲಾಭವನ್ನು ಪಡೆಯುವಿರಿ. ಕೆಲವು ದಿಟ್ಟ ಹೆಜ್ಜೆಯ ಮೂಲಕ ನೀವು ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಪರಿವಾರದಲ್ಲಿ ಪ್ರೀತಿ ಮತ್ತು ಸಾಮರಸ್ಯ ಉಳಿಯಲಿದೆ. ಉಷ್ಣತೆಯಿಂದ ಬಾಧೆಗೊಳಗಾಗುವಿರಿ. ಪೋಷಕರು ಬೆಂಬಲಿಸಲು ಸಾಧ್ಯವಾಗುತ್ತದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆದರೆ ಸಂಗಾತಿಯ ಆರೋಗ್ಯ ಸ್ವಲ್ಪ ಚಿಂತಾಜನಕವಾಗಿರುತ್ತದೆ. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನೂ ಕೊಡುವರು. ವೈಚಾರಿಕ ಭಿನ್ನಾಭಿಪ್ರಾಯವು ವೈಯಕ್ತಿಕವಾಗಿ ಬದಲಾಗಬಹುದು. ಹಳೆಯ ರೋಗವೇ ಪುನಃ ಕಾಣಸಿಕೊಳ್ಳುವುದು. ಇಂದು ನೀವು ಸಮಾನ್ಯಾರಂತೆ ತೋರುವಿರಿ. ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಕಡಿಮೆ ಎನಿಸುವುದು.
ಮಕರ ರಾಶಿ: ಪ್ರಸಿದ್ಧ ಪುಣ್ಯ ಸ್ಥಳಕ್ಕೆ ಹೋಗುವ ಮತ್ತು ವಿಶೇಷ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ. ಇಂದು ನಿಮ್ಮ ಕೆಲಸದ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದಾಗಿ ನೀವು ಗೌರವವನ್ನು ಪಡೆಯಬಹುದು. ನಿಮ್ಮ ಪ್ರಭಾವವೂ ಇಂದು ಇತರರ ಮೇಲೆ ಹೆಚ್ಚಾಗಿರಲಿದೆ. ನಿಮ್ಮ ಮಾತಿನಿಂದ ಶತ್ರುಪಾಳ್ಯದ ಬಲ ಉಡುಗಿಹೋಗುವುದು. ಕುಟುಂಬದಲ್ಲಿಯೂ ನೀವು ಗೌರವವನ್ನು ಪಡೆಯುವಿರಿ. ಬಲವಾದ ನೋವನ್ನು ಪಡೆಯಬೇಕಾದೀತು. ಉನ್ನತ ಅಧಿಕಾರಿಗಳ ಜೊತೆ ಸೆಣೆಸಾಡುವ ಸ್ಥಿತಿಯೂ ಬರಬಹುದು. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಸ್ವಂತ ಹಣವನ್ನು ದುಪ್ಪಟ್ಟು ಖರ್ಚುಮಾಡುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಗುರುತನ್ನು ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಭೂಮಿಯ ಮೇಲೆ ಹೂಡಿಕೆ ಮಾಡಲು ನಿಮಗೆ ಅವಕಾಶ ಸಿಗುವುದು. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡಬೇಕಾದೀತು. ಆರ್ಥಿಕ ಸಂಕಷ್ಟವನ್ನು ಜಾಣ್ಮೆಯಿಂದ ನಿರ್ವಹಿಸಲು ಸಾಧ್ಯವಾಗುವುದು. ಅತಿಯಾದ ಆಸೆ ಕಡಿಮೆ ಆಗಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಮಗ್ನರಾಗುವಿರಿ.
ಕುಂಭ ರಾಶಿ: ವೈವಾಹಿಕ ಜೀವನದ ಹಾದಿ ಸುಗಮ ಎನಿಸಿದರೂ ಪೂರ್ಣ ಸಂತಸವಿರದು. ನೀವು ಇಂದು ಕೆಲವು ಕೌಟುಂಬಿಕ ವಿಷಯಗಳ ಬಗ್ಗೆ ಗೊಂದಲಕ್ಕೊಳಗಾಗಬಹುದು. ವಾಹನದಲ್ಲಿ ಕಂಡ ಅನಿರೀಕ್ಷಿತ ದುರಸ್ತಿಯ ಕಾರಣ ಪ್ರಯಾಣ ರದ್ಧಾಗುವುದು. ಕೆಲಸದ ಸ್ಥಳದಲ್ಲಿ ಉದ್ವಿಗ್ನತೆ ಇರುತ್ತದೆ. ನೀವು ವಿರುದ್ಧ ಲಿಂಗಿಗಳ ಬೆಂಬಲವನ್ನು ಪಡೆಯುತ್ತೀರಿ. ಖಾಸಗಿ ಕೆಲಸಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ಇಂದು ಬಹಳ ಮುಖ್ಯವಾಗಿರುತ್ತದೆ. ಯಾವುದೇ ಸಲಹೆಯು ನಿಮಗೆ ಸಂತೋಷವನ್ನು ನೀಡುತ್ತದೆ. ಸ್ನೇಹದಿಂದ ನಿರೀಕ್ಷೆ ಇಲ್ಲದಿದ್ದರೂ ಸಿಕ್ಕಿದ್ದು ಅಚ್ಚರಿ. ಹೂಡಿಕೆ ಲಾಭದಾಯಕವಾಗಲಿದೆ. ನಿಮಗೆ ಬರಬೇಕಾದ ಹಣವನ್ನು ನೀವು ಬಿಟ್ಟುಕೊಡುವಿರಿ. ಚಂಚಲ ಮನಸ್ಸನ್ನು ನೀವು ನಿಯಂತ್ರಿಸಲು ಆಗದು. ಇದರಿಂದ ತೀರ್ಮಾನ ಸರಿಯಾಗಿ ತೆಗೆದುಕೊಳ್ಳಲಾಗದು. ನಿಮ್ಮಿಂದ ಕುಟುಂಬಕ್ಕೆ ಕೀರ್ತಿ. ಕಛೇರಿಯಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸ ಮಾಡಲು ಆಗದು.
ಮೀನ ರಾಶಿ: ಕಾನೂನಾತ್ಮಕ ಹೊಸ ದಿಕ್ಕು ಸಿಗಲಿದೆ. ಉದ್ಯೋಗದಲ್ಲಿರುವ ಹಲವಾರು ಸಂಕೀರ್ಣತೆಯನ್ನು ನಿಮಗೆ ನಿಭಾಯಿಸಲಾಗದು. ಇಂದು ಆರ್ಥಿಕ ವಿಷಯಗಳಿಗೆ ಬಂಧುಗಳ ಪ್ರವೇಶವಾಗಬಹುದು. ಮಕ್ಕಳು ನಿಮ್ಮ ವಿರುದ್ಧ ದಿಕ್ಕಿನ ಕಡೆ ಇರುವರು. ಅನಿರೀಕ್ಷಿತ ಬಂಧುಗಳ ಆಗಮನದಿಂದ ಕೊಂಚ ಗಲಿಬಿಲಿ ಆಗುವುದು. ಕಹಿ ಅನುಭವಗಳಿಂದ ನೀವು ಸ್ತಬ್ಧರಾಗುವಿರಿ. ಆತ್ಮೀಯರ ಜೊತೆ ಇದ್ದು ಹಣವನ್ನು ಖರ್ಚು ಮಾಡುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಮಕ್ಕಳ ಮೇಲೆ ನಿಮಗೆ ಅತಿಯಾದ ಮೋಹ ಬೇಡ. ಸಹನೆಯ ನಿಮ್ಮ ಮೇಲೆ ಪ್ರಹಾರ ಅಧಿಕವಾಗಬಹುದು. ವಿದ್ಯಾಭ್ಯಾಸದ ವಿಚಾರದಲ್ಲಿ ಯಾವ ಸಡಿಲಿಕೆಯನ್ನೂ ಮಾಡಿಕೊಳ್ಳದಿರಿ. ದುರ್ಘಟನೆಯ ಕಾರಣದಿಂದ ನಿಮಗೆ ಭಯವು ಇರುವುದು. ದಾಂಪತ್ಯದಲ್ಲಿ ನೀವು ಸಂತೋಷವಾಗಿರುವಿರಿ. ಬಂಧುಗಳನ್ನು ಕಳೆದುಕೊಳ್ಳುವಿರಿ. ಇಂದಿನ ಒತ್ತಡದಲ್ಲಿ ನೀವು ಅನೇಕ ವಿಚಾರಗಳನ್ನು ಮರೆಯುವಿರಿ. ಮನಸ್ಸಿಗೆ ನೆಮ್ಮದಿ ಸಿಗುವ ಜಾಗಕ್ಕೆ ಹೋಗುವಿರಿ. ಅಪರಿಚಿತರ ಮುಂದೆ ಅಸಭ್ಯ ವರ್ತನೆ ಬೇಡ.