AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಳುನಾಡಿನ ವಿಶಿಷ್ಟ ಸಂಪ್ರದಾಯ; ಆಷಾಢದಲ್ಲಿ ಊರಿನ ಮಾರಿ ಕಳೆಯಲು ಬರುವನು ಆಟಿ ಕಳಂಜ

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡಿನ ತುಳುವರು (ತುಳು ಭಾಷಿಗರು) ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಈಗಲೂ ಆಟಿ ತಿಂಗಳಲ್ಲಿ ಆಟಿ ಕಳಂಜ ಬರುತ್ತಾನೆ. ಈತ ಊರಿಗೆ ಅಂಟಿದ ರೋಗ ರುಜಿನಗಳನ್ನು ನಿವಾರಿಸುವ ಮಾಂತ್ರಿಕ ಎಂಬ ನಂಬಿಕೆ ತುಳುನಾಡಿನಲ್ಲಿದೆ. ಆಷಾಢ ಮಾಸದಲ್ಲಿ ಮಾತ್ರ ಬರುವ ಈ ಆಟಿ ಕಳಂಜನ ಬಗ್ಗೆ, ತುಳುನಾಡಿನ ನಂಬಿಕೆ ಸಂಪ್ರದಾಯಗಳ ಬಗ್ಗೆ ಇಲ್ಲಿದೆ ಮಾಹಿತಿ.

ತುಳುನಾಡಿನ ವಿಶಿಷ್ಟ ಸಂಪ್ರದಾಯ; ಆಷಾಢದಲ್ಲಿ ಊರಿನ ಮಾರಿ ಕಳೆಯಲು ಬರುವನು ಆಟಿ ಕಳಂಜ
ಆಟಿ ಕಳಂಜImage Credit source: Wiki
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Jun 24, 2024 | 2:20 PM

Share

ತುಳುನಾಡಿನಲ್ಲಿರುವ (Tulunadu) ವಿಶಿಷ್ಟ ಆಚರಣೆಗಳಲ್ಲೊಂದು ಆಟಿ ಕಳಂಜ (Aati Kalenja). ತುಳುವಿನಲ್ಲಿ ಆಟಿ ತಿಂಗಳು ಅಂದರೆ ಆಷಾಢ ಮಾಸ. ಜೋರು ಮಳೆ ಬರುವ ಈ ಹೊತ್ತಲ್ಲಿ ಕೃಷಿ ಕೆಲಸಗಳು, ಹಬ್ಬವಾಗಲೀ ಶುಭ ಕಾರ್ಯವಾಗಲೀ ನಡೆಯುವುದಿಲ್ಲ. ಮಳೆಯಿಂದಾಗಿ ರೋಗ ರುಜಿನಗಳೂ ಬರುವ ಕಾಲ. ಹೀಗೆ ಊರಿಗೇ ಊರೇ ತಾಪತ್ರಯ ಎದುರಿಸುವಾಗ ಊರಿನ ಮಾರಿ ಕಳೆಯಲು ಮನೆಗೆ ಮನೆಗೆ ಬರುತ್ತಾನೆ ಆಟಿ ಕಳಂಜ. ಆಟಿ ಅಂದರೆ ಆಷಾಢ, ಕಳಂಜ/ಕಳೆಂಜ ಅಂದ್ರೆ ಕಳೆಯುವವನು ಎಂದರ್ಥ. ಆಷಾಢ ಮಾಸದ ಕಷ್ಟಗಳನ್ನು ಕಳೆಯಲು ಬರುವ ಆಟಿ ಕಳಂಜ ಈಗೀಗ ಅಪರೂಪ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡಿನ ತುಳುವರು (ತುಳು ಭಾಷಿಗರು) ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಈಗಲೂ ಆಟಿ ತಿಂಗಳಲ್ಲಿ ಆಟಿ ಕಳಂಜ ಬರುತ್ತಾನೆ. ಆಟಿ ಕಳಂಜೆ ಬತ್ತುಂಡ್ ( ಆಟಿ ಕಳಂಜ ಬಂದ) ಎಂದು ಆಟಿ ಕಳಂಜನಿಗೆ ಬೇಕಾದ ವಸ್ತುಗಳನ್ನು ಮನೆಮಂದಿ ದಾನ ಮಾಡುವುದನ್ನು ಗ್ರಾಮೀಣ ಪ್ರದೇಶದಲ್ಲಿ ಈಗಲೂ ಕಾಣಬಹುದು. ಈ ಜಾನಪದ ಸಂಪ್ರದಾಯದ ಬಗ್ಗೆ  ಮತ್ತಷ್ಟು ತಿಳಿಯೋಣ… ಆಟಿ ಕಳಂಜನೆಂಬ ನಂಬಿಕೆ ಆಷಾಢ ತಿಂಗಳು ಅಂದರೆ ಜೋರು ಮಳೆಗಾಲ ಬೇರೆ ಹೀಗಾಗಿ ಊರಿನಲ್ಲಿ ಮನುಷ್ಯರಿಗೆ ಪ್ರಾಣಿಗಳಿಗೆ ಕಾಯಿಲೆ ಹರಡುವುದು ಸರ್ವೇ ಸಾಮಾನ್ಯ. ಇಂಥಾ ಸಾಂಕ್ರಾಮಿಕ ಸೋಂಕುಗಳನ್ನು ಜನರು ಊರಿಗೆ ಮಾರಿ ಬಂತು ಎಂದೇ ಭಾವಿಸುತ್ತಾರೆ. ಈ ಮಾರಿಯನ್ನು ಕಳೆಯಲು ಬರುವವನೇ ಆಟಿ ಕಳಂಜ. ತುಳುನಾಡಿನಲ್ಲಿ ಭೂತಕಟ್ಟುವ ಸಮುದಾಯ (ನಲಿಕೆಯವರು) ಆಟಿ ಕಳಂಜ ವೇಷ ಹಾಕಿ ಮನೆ ಮನೆಗೆ ಬರುತ್ತಾರೆ. ಬೆಳ್ತಂಗಡಿ ಭಾಗದಲ್ಲಿ ಮೇರ ಜನಾಂಗದವರು ಈ ವೇಷ ತೊಡುತ್ತಾರೆ....

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು
ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು
ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ
ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ
ಪತ್ನಿಯ ಪಾರ್ಥಿವ ಶರೀರವನ್ನ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು
ಪತ್ನಿಯ ಪಾರ್ಥಿವ ಶರೀರವನ್ನ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು
ಸಾವಿಗೂ ಮುನ್ನ ಚೆನ್ನಮ್ಮರ ಕೊನೆ ಕ್ಷಣಗಳ ವೀಡಿಯೋ ನೋಡಿ!
ಸಾವಿಗೂ ಮುನ್ನ ಚೆನ್ನಮ್ಮರ ಕೊನೆ ಕ್ಷಣಗಳ ವೀಡಿಯೋ ನೋಡಿ!
ICUನಲ್ಲಿ ಚೆನ್ನಮ್ಮರ ಕೊನೆಕ್ಷಣ ಹೇಗಿತ್ತು? ಪುತ್ರಿ ಅನುಸೂಯ ಹೇಳಿದ್ದಿಷ್ಟು
ICUನಲ್ಲಿ ಚೆನ್ನಮ್ಮರ ಕೊನೆಕ್ಷಣ ಹೇಗಿತ್ತು? ಪುತ್ರಿ ಅನುಸೂಯ ಹೇಳಿದ್ದಿಷ್ಟು
ಚೆನ್ನಮ್ಮ ದೇವೇಗೌಡರ ಮನೆಯ ಮಹಾಲಕ್ಷ್ಮೀ: ಬ್ರಹ್ಮಾಂಡ ಗುರೂಜಿ
ಚೆನ್ನಮ್ಮ ದೇವೇಗೌಡರ ಮನೆಯ ಮಹಾಲಕ್ಷ್ಮೀ: ಬ್ರಹ್ಮಾಂಡ ಗುರೂಜಿ
ಇಳಕಲ್‌ನಲ್ಲಿ ವರುಣನ ಅಬ್ಬರ: ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ!
ಇಳಕಲ್‌ನಲ್ಲಿ ವರುಣನ ಅಬ್ಬರ: ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ!
ಜುಲೈ 20 ರಿಂದ 26ರ ವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿ ತಿಳಿಯಿರಿ
ಜುಲೈ 20 ರಿಂದ 26ರ ವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿ ತಿಳಿಯಿರಿ
'ನನ್ನ ದೇವರನ್ನೇ ಕಳೆದುಕೊಂಡೆ': ತಾಯಿ ನೆನೆದು ಗಳ ಗಳತೆ ಅತ್ತ ರೇವಣ್ಣ
'ನನ್ನ ದೇವರನ್ನೇ ಕಳೆದುಕೊಂಡೆ': ತಾಯಿ ನೆನೆದು ಗಳ ಗಳತೆ ಅತ್ತ ರೇವಣ್ಣ
ತಾಯಿ ಹೇಳಿಕೊಟ್ಟ ಬದುಕಿನ ಪಾಠ ಮರೆಯಲಾಗಲ್ಲ: ಹೆಚ್​.ಡಿ. ಕುಮಾರಸ್ವಾಮಿ ಭಾವುಕ
ತಾಯಿ ಹೇಳಿಕೊಟ್ಟ ಬದುಕಿನ ಪಾಠ ಮರೆಯಲಾಗಲ್ಲ: ಹೆಚ್​.ಡಿ. ಕುಮಾರಸ್ವಾಮಿ ಭಾವುಕ