AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ಯಾಮಗೊಂಡ್ಲು: ಮದುವೆಯಾಗಿ ಮಗುವಾದ ಮೇಲೆ ಪತ್ನಿಪೀಡಕನಾದ ಗಂಡನಿಂದ ವರದಕ್ಷಿಣೆ ಕಿರುಕುಳ

ಒಂದೇ ಕೋಮಿನವರಾದ್ದರಿಂದ ಹಿರಿಯರು ಮಾತುಕತೆ ನಡೆಸಿ ಕಾಲಾಂತರದಲ್ಲಿ ಭರ್ಜರಿಯಾಗಿ ಮದುವೆ ಮಾಡಿ ಮನೆ ತುಂಬಿಸಿಕೊಂಡಿದ್ದರು. ಬಳಿಕ ಮಗಳು ಗರ್ಭಿಣಿಯಾದಾಗ ಸೀಮಂತ ಕೂಡ ಭರ್ಜರಿಯಾಗಿ ಮಾಡಿದ್ದರು ತಂದೆ ಹನುಮಂತರಾಜು. ಆದರೆ ಗಂಡನ ಕರಾಳ ಮುಖ ಆಗ ಅನಾವರಣಗೊಂಡಿದೆ.

ತ್ಯಾಮಗೊಂಡ್ಲು: ಮದುವೆಯಾಗಿ ಮಗುವಾದ ಮೇಲೆ ಪತ್ನಿಪೀಡಕನಾದ ಗಂಡನಿಂದ ವರದಕ್ಷಿಣೆ ಕಿರುಕುಳ
ಮದುವೆಯಾಗಿ ಮಗುವಾದ ಮೇಲೆ ಪತ್ನಿಪೀಡಕನಾದ ಗಂಡನಿಂದ ವರದಕ್ಷಿಣೆ ಕಿರುಕುಳ
TV9 Web
| Edited By: |

Updated on: Jan 27, 2023 | 4:44 PM

Share

ಅವರಿಬ್ಬರೂ ಪ್ರೀತಿಗೆ ಮನಸೋತು ಮನೆಯವರಿಗೆ ಗೊತ್ತಾಗದಂತೆ ಮದುವೆಯಾಗಿದ್ರು (Love Marriage). ಆದರೂ, ಒಂದೇ ಕೋಮಿನವರಾದ್ದರಿಂದ ಎರಡೂ ಮನೆಯವರು ಒಪ್ಪಿಕೊಂಡು, ಆ ಯುವತಿಯನ್ನ ಮನೆ ತುಂಬಿಸಿಕೊಂಡಿದ್ದರು. ಆದರೆ, ಒಂದು ಹೆಣ್ಣು ಮಗು ಜನಿಸುತ್ತಿದ್ದಂತೆ ಮದುವೆಯಾದ ಪತಿರಾಯನ ಗೋಮುಖ ವ್ಯಾಘ್ರತನ (Dowry Harassment) ಗೊತ್ತಾಗಿದೆ. ಅಷ್ಟಕ್ಕೂ ಎನಾಯ್ತು ಅಂತೀರಾ? ಈ ಸ್ಟೋರಿ ನೋಡಿ. ಚಿತ್ರದಲ್ಲಿರುವಂತೆ ಮಗುವನ್ನ ಕೈಯಲ್ಲಿ ಹಿಡಿದುಕೊಂಡು ತಂದೆ ಜೊತೆ ನಿಂತಿರುವ ಮಹಿಳೆ, ಫೋಟೋದಲ್ಲಿ ಪರೋಡಿ ತರಹ ಕಾಣಿಸ್ತಾ ಇದ್ದಾನಲ್ಲ ಆ ಹುಡುಗನನ್ನ ಪ್ರೀತಿಸಿ ಮದುವೆಯಾದವಳು. ಹೌದು ಈ ನತದೃಷ್ಟೆಯ ಹೆಸರು ನೇತ್ರಾವತಿ. ಈಕೆಯದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ನೆಲಮಂಗಲ (Nelamangala) ತಾಲೂಕಿನ ಬಳಗೆರೆ. ಪಕ್ಕದ ಬಿದಲೂರಿನ ನಿವಾಸಿ ವೆಂಕಟೇಶ್ (Husband). ಈತ ಬಳೆಗೆರೆಗೆ ಸೌಮ್ಯ ಎನ್ನುವವರ ಮನೆಗೆ ಬಂದು ಹೋಗ್ತಿದ್ದ. ಆಗ ನೇತ್ರಾವತಿಯನ್ನ ಪಟಾಯಿಸಿ ಪ್ರೀತಿಸಿ ತನ್ನ ಬುಟ್ಟಿಗೆ ಹಾಕಿಕೊಂಡು ನೇತ್ರಾವತಿ ಮನೆಯವರಿಗೆ ಗೊತ್ತಿಲ್ಲದಂತೆ ಓಡಿ ಹೋಗಿ ಅವಳನ್ನ ತುಮಕೂರು ಜಿಲ್ಲೆಯ ದಿಬ್ಬೂರಿನ ಚಿಕ್ಕಣ್ಣಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿದ್ದ.

ಹಲವು ತಿಂಗಳುಗಳು ಕಳೆದ ನಂತರ ಒಂದೇ ಕೋಮಿನವರಾದ್ದರಿಂದ ಹಿರಿಯರು ಮಾತುಕತೆ ನಡೆಸಿ 2021 ರ ಮಾರ್ಚ್ ತಿಂಗಳ 8ನೇ ತಾರೀಖಿನಂದು ಭರ್ಜರಿಯಾಗಿ ಮದುವೆ ಮಾಡಿ ಮನೆ ತುಂಬಿಸಿಕೊಂಡಿದ್ದರು. ಬಳಿಕ ಗರ್ಭಿಣಿಯಾದಾಗ ಸೀಮಂತ ಕೂಡ ಭರ್ಜರಿಯಾಗಿ ಮಾಡಿಕೊಂಡು ತಂದೆ ಹನುಮಂತರಾಜು ಮನೆಗೆ ಬಂದಳು.

ಅದೇ ವೇಳೆ ನನಗೆ 5 ಲಕ್ಷ ನಗದು, ಒಂದು ಆಟೋ, ಒಂದು ಮನೆ ಸೇರಿದಂತೆ ಒಡವೆಯಲ್ಲಿ ಅರ್ಧ ಪಾಲು ಕೊಡುವಂತೆ ಕೇಳಿದ್ದಾನೆ ಗಂಡ ವೆಂಕಟೇಶ್. ಆದರೆ ಯುವತಿಯ ಮನೆಯವರು ನಾವು ಕೊಡಲು ಸಾಧ್ಯವಿಲ್ಲ ಅಂದಿದ್ದಾರೆ. ಆಗ ಸುಮ್ಮನಿದ್ದವನು ಹೆಣ್ಣು ಮಗು ಆಗುತ್ತಿದ್ದಂತೆ ತನ್ನ ಚಾಳಿ ಶುರು ಮಾಡಿದ್ದಾನೆ. ಆದರೆ ಮುಂದೆ ಪತಿ ವೆಂಕಟೇಶ್ ಕಿರುಕುಳ ತಾಳಲಾಗದೇ, ಸ್ವತಂತ್ರವಾಗಿ ಬಾಳುಬದುಕಲು ನಿರ್ಧರಿಸಿ, ತನ್ನ ಪುಟ್ಟ ಮಗಳನ್ನೂ ತಾನೇ ಸಾಕುವೆ ಎನ್ನುತ್ತಿದ್ದಾಳೆ ನೇತ್ರಾವತಿ.

ಇದೀಗ ಪತಿ ವೆಂಕಟೇಶ ವರದಕ್ಷಿಣೆ ಕೂಡು, ಇಲ್ಲದಿದ್ದರೆ ಡೈವೋರ್ಸ್ ಕೊಡು ಎನ್ನುತ್ತಾನೆ. ಆಗ ಕಿರುಕುಳದಿಂದ ಬೇಸತ್ತ ನೇತ್ರಾವತಿ ಗಂಡನ ಆಣತಿಯಂತೆ ಡೈವೋರ್ಸ್ ಗೆ ಮುಂದಾಗಿದ್ದು ಈಗಾಗಲೆ ಡೈವೋರ್ಸ್ ಗೆ ಅಪ್ಲೈ ಮಾಡಿದ್ದು ಮಗು ಮತ್ತು ಅವಳು ತವರುಮನೆ ಸೇರಿದ್ದಾರೆ. ಹೀಗಿದ್ದರೂ ಕೂಡ ಪ್ರತಿನಿತ್ಯ ಸಾಯಂಕಾಲ ಕಂಠಪೂರ್ತಿ ಕುಡಿದುಬರುವ ವೆಂಕಟೇಶ, ಪತ್ನಿ ನೇತ್ರಾವತಿ ಮನೆಗೆ ಬಂದು ಬಾಗಿಲು ಬಡಿಯುವುದು, ಮಾವನಿಗೆ ಕೊಲೆ ಬೆದರಿಕೆ ಹಾಕೋದು, ಅದಲ್ಲದೆ ತನ್ನ ಪುಟ್ಟ ಮಗುವಿನ ಮುಖವನ್ನ ನೋಡೋದಕ್ಕೆ ಬಂದಿದ್ದೇನೆ ಅಂತ ಹೇಳಿಕೊಂಡು ಬರುತ್ತಾನಂತೆ.

ಅದಾದಮೇಲೆ, ಹೆಂಡತಿಗೆ ಹೊಡೆಯುವುದು ಬಡಿಯುವುದು ಮಾಡುತ್ತಾನಂತೆ. ಇದೆಲ್ಲಾ ನಡೆಯುತ್ತಿದ್ದಂತೆ ಸ್ಥಳೀಯ ತ್ಯಾಮಗೊಂಡ್ಲು ಪೊಲೀಸ್ ಠಾಣೆಗೆ (Thyamagondlu police) ಐದಾರು ಬಾರಿ ದೂರು ಸಲ್ಲಿಸಿದ ಬಳಿಕ, ವೆಂಕಟೇಶ್‌ನನ್ನ ಠಾಣೆಗೆ ಕರೆಯಿಸಿ ಸಂಧಾನ ಮಾಡಿಸಲಾಗಿದೆ. ಆದರೂ ಕೂಡ ವೆಂಕಟೇಶ್ ತನ್ನ ಚಾಳಿಯನ್ನು ಮುಂದುವರೆಸಿದ್ದು, ಠಾಣೆ ಮೆಟ್ಟಿಲೇರಿದರು ಕೂಡ ಎನೂ ಪ್ರಯೋಜನವಾಗಿಲ್ಲ ಎಂದು ನೇತ್ರಾವತಿ ತಂದೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮನೆಯವರಿಗೆ ಗೊತ್ತಿಲ್ಲದೆ ಪ್ರೀತಿ ಮಾಡಿ ವೆಂಕಟೇಶ್‌ನನ್ನು ನಂಬಿ ಮದುವೆಯಾಗಿದ್ದು ಈಗ ಹೆಣ್ಣು ಮಗು ಜನಿಸಿದ ಮೇಲೆ ಗಂಡನ ನಿಜರೂಪ ಬಯಲಾಗಿದೆ. ಒಟ್ಟಿನಲ್ಲಿ ಈಗಿನ ಯುವಕ ಯುವತಿಯರು ಎನೂ ಅರಿಯದ ವಯಸ್ಸಿನಲ್ಲಿ ಹುಚ್ಚು ಪ್ರೀತಿಗೆ ಮನಸೋತು ಈ ರೀತಿ ಪಡಿಪಾಟಲು ಅನುಭವಿಸುವುದು ಸಾಕಷ್ಟು ನಡೆಯುತ್ತಿದೆ. ಹೀಗಾಗಿ ವಯಸ್ಸಿಗೆ ಬಂದ ಮಕ್ಕಳಿಗೆ ಪೋಷಕರ ಮಾರ್ಗದರ್ಶನದ ಅವಶ್ಯಕತೆ ಇದೆ. ಹುಷಾರು, ಹುಚ್ಚುಕೋಡಿ ಮನಸು!

ವರದಿ: ವಿನಾಯಕ್ ಗುರವ್, ಟಿವಿ9, ನೆಲಮಂಗಲ 

ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!