AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಕರ ಕಣ್ಮನ ಸೆಳಯುತ್ತಿವೆ ವಿವಿಧ ಬಗೆಯ ಮಣ್ಣಿನ ವಿನಾಯಕ: ಗಲ್ಲಿ ಗಲ್ಲಿಗೆ ಎಂಟ್ರಿಕೊಡಲು ಸಿದ್ದನಾದ ಕಾಂತಾರ ಗಣಪ

ಈ ಭಾರಿ ಕಾಂತಾರ ಗಣೇಶನನ್ನ ಮಣ್ಣಿನಲ್ಲಿ ಮಾಡುವ ಮೂಲಕ ಯುವಕನ ಗಮನ ಸೆಳೆದಿದ್ದಾರೆ. ಗಣೇಶ ತನ್ನ ಎಡ ಭಾಗದಲ್ಲಿ ಕಾಂತಾರದ ಪಂಜುರ್ಲಿ ದೈವವನ್ನ ಕೂರಿಸಿಕೊಂಡಿರುವ ಮೂರ್ತಿಗಳು ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಈಗಾಗಲೆ ಮುಗಿ ಬಿದ್ದು ಯುವಕರು ಕಾಂತಾರ ಗಣೇಶಗಳನ್ನ ಬುಕ್ ಮಾಡಿಕೊಂಡಿದ್ದು ಕಾಂತಾರ ಗಣೇಶ ಮೂಲಕ ಅದ್ದೂರಿ ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ.

ಯುವಕರ ಕಣ್ಮನ ಸೆಳಯುತ್ತಿವೆ ವಿವಿಧ ಬಗೆಯ ಮಣ್ಣಿನ ವಿನಾಯಕ: ಗಲ್ಲಿ ಗಲ್ಲಿಗೆ ಎಂಟ್ರಿಕೊಡಲು ಸಿದ್ದನಾದ ಕಾಂತಾರ ಗಣಪ
ಕಾಂತಾರ ಗಣಪ
TV9 Web
| Edited By: |

Updated on: Sep 17, 2023 | 10:16 PM

Share

ಬೆಂಗಳೂರು ಗ್ರಾಮಾಂತರ, ಸೆಪ್ಟೆಂಬರ್​ 17: ಗಣೇಶ ಹಬ್ಬ (Ganesh Chaturthi) ಬಂತು ಅಂದರೆ ಡಿಪರೆಂಟ್ ಆಗಿರುವ ಬೇರೆಲ್ಲೂ ಇಲ್ಲದ ಗಣೇಶಗಳನ್ನ ನಮ್ಮೇರಿಯಾದಲ್ಲಿ ಕೂರಿಸಬೇಕು ಅನ್ನೂ ತವಕ ಯುವಕರಲ್ಲಿರುವುದು ಕಾಮನ್. ಹೀಗಾಗೆ ಇಂತಹ ಯುವಕರಿಗಾಗಿಯೆ ಕಳೆದ 30 ವರ್ಷದಿಂದ ಟ್ರೆಂಡಿಂಗ್ ಪರಿಸರ ಸ್ನೇಹಿ ಗಣೇಶಗಳನ್ನ ಇಲ್ಲೊಂದು ಕುಟುಂಬ ಮಾಡುತ್ತಾ ಬಂದಿದ್ದು ಈ ಭಾರಿ ಕಾಂತಾರ ಗಣೇಶ ಮಾಡುವ ಮೂಲಕ ಕಮಾಲ್ ಮಾಡಿದ್ದಾರೆ.

ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಕಳೆದ 30 ವರ್ಷಗಳಿಂದ ರಾಜಗೋಪಾಲ್ ಅನ್ನೂ ಈ ಕುಟುಂಬ ಪರಿಸರ ಗಣೇಶ ಮೂರ್ತಿಗಳನ್ನ ಮಾಡ್ತಿದ್ದಾರೆ. ಅದರಲ್ಲೂ ವರ್ಷ ವರ್ಷ ಟ್ರೆಂಡಿಂಗ್ ನಲ್ಲಿರುವ ಗಣೇಶ ಮೂರ್ತಿಗಳನ್ನ ಮಾಡುವುದು ಇವರ ಹವ್ಯಾಸವಾಗಿದ್ದು, ಈ ಭಾರಿ ಕಾಂತಾರ ಗಣೇಶನನ್ನ ಮಣ್ಣಿನಲ್ಲಿ ಮಾಡುವ ಮೂಲಕ ಯುವಕನ ಗಮನ ಸೆಳೆದಿದ್ದಾರೆ. ಗಣೇಶ ತನ್ನ ಎಡ ಭಾಗದಲ್ಲಿ ಕಾಂತಾರದ ಪಂಜುರ್ಲಿ ದೈವವನ್ನ ಕೂರಿಸಿಕೊಂಡಿರುವ ಮೂರ್ತಿಗಳು ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಈಗಾಗಲೆ ಮುಗಿ ಬಿದ್ದು ಯುವಕರು ಕಾಂತಾರ ಗಣೇಶಗಳನ್ನ ಬುಕ್ ಮಾಡಿಕೊಂಡಿದ್ದು ಕಾಂತಾರ ಗಣೇಶ ಮೂಲಕ ಅದ್ದೂರಿ ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಹೂವಿನಿಂದಲ್ಲ, ಹಣದಿಂದ ಗಣೇಶನಿಗೆ ವಿಶೇಷ ಅಲಂಕಾರ: ಬರೋಬ್ಬರಿ 2 ಕೋಟಿಗೂ ಹೆಚ್ಚು ನೋಟು, ನಾಣ್ಯಗಳಿಂದ ಸಿಂಗಾರ

ಕಳೆದ 5 ವರ್ಷದಿಂದ ಆ ವರ್ಷದಲ್ಲಿರುವ ಟ್ರೆಂಡಿಂಗನ್ನ ಗಣೇಶಗಳನ್ನ ಮಾಡ್ತಿದ್ದು ಕಳೆದ ಭಾರಿ ಅಪ್ಪು ಗಣೇಶ ಎಲ್ಲರ ಗಮನ ಸೆಳೆದಿತ್ತು. ಅದೇ ರೀತಿ ಈ ಭಾರಿ ಕಾಂತಾರ ಗಣೇಶ ಗಮನ ಸೆಳೆಯುತ್ತಿದ್ದು ಕಾಂತಾರ ಜೊತೆಗೆ ಇತರೆ ಪರಿಸರ ಸ್ನೇಹಿ ವಿವಿಧ ಬಗೆಯ ಮಣ್ಣಿನ ಗಣಪಗಳು ಎಲ್ಲರ ಗಮನ ಸೆಳೆಯುತ್ತಿದೆ. ಜೊತೆಗೆ ಇಲ್ಲಿಂದಲೆ ಬೆಂಗಳೂರು ಮೈಸೂರು ಮಂಡ್ಯ ಚಿಕ್ಕಬಳ್ಳಾಪುರ ಮತ್ತು ಕೋಲಾರದ ಕಡೆ ಸಾವಿರಾರು ಗಣೇಶಗಳು ಹೋಗ್ತಿದ್ದು ಈ ಭಾರಿಯು ಬೇಡಿಕೆ ಬಂದಿದೆ.

ಇದನ್ನೂ ಓದಿ: Ganesh Chaturthi 2023: ಚೌತಿಯಂದು ಮನೆಯಲ್ಲಿ ಗಣಪತಿ ಕೂರಿಸುವವರು ಅನುಸರಿಸಬೇಕಾದ ನಿಯಮಗಳೇನು? ಆಚರಣೆ ಹೇಗೆ?

ಈ ಭಾರಿಯ ಗಣೇಶೋತ್ಸವಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಿದ್ದು ಎಲ್ಲರೂ ಪೊಲೀಸ್ ಇಲಾಖೆ ಅನುಮತಿಯೊಂದಿಗೆ ಗಣೇಶ ಕೂರಿಸುವುದು ಕಡ್ಡಾಯ ಅಂತ ಬೆಂಗಳೂರು ಗ್ರಾಮಾಂತರ ಎಸ್ಪಿ ತಿಳಿಸಿದ್ದಾರೆ.

ಪ್ರತಿಭಾರಿ ಒಂದೊಂದು ಟ್ರೆಂಡಿಂಗ್ ಗಣೇಶ ಮಾಡಿ ಯುವಕರ ಗಮನ ಸೆಳಯುತ್ತಿರುವು ಈ ಕುಟುಂಬ ಈ ಭಾರಿಯು ಕಾಂತಾರ ಗಣೇಶ ಮೂಲಕ ಕಮಾಲ್ ಮಾಡ್ತಿದ್ದಾರೆ. ಇನ್ನೂ ನೀವು ಸಹ ಗಣೇಶ ಉತ್ಸವ ಮಾಡ್ತಿದ್ರೆ ಪರಿಸರ ಸ್ನೇಹಿ ಗಣೇಶಗಳನ್ನ ಕೂರಿಸಿ ಕಾನೂನು ನಿಯಮಗಳನ್ನ ಪಾಲಿಸುವ ಮೂಲಕ ಗಣೇಶೋತ್ಸವ ಮಾಡಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್