AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಕರ ಕಣ್ಮನ ಸೆಳಯುತ್ತಿವೆ ವಿವಿಧ ಬಗೆಯ ಮಣ್ಣಿನ ವಿನಾಯಕ: ಗಲ್ಲಿ ಗಲ್ಲಿಗೆ ಎಂಟ್ರಿಕೊಡಲು ಸಿದ್ದನಾದ ಕಾಂತಾರ ಗಣಪ

ಈ ಭಾರಿ ಕಾಂತಾರ ಗಣೇಶನನ್ನ ಮಣ್ಣಿನಲ್ಲಿ ಮಾಡುವ ಮೂಲಕ ಯುವಕನ ಗಮನ ಸೆಳೆದಿದ್ದಾರೆ. ಗಣೇಶ ತನ್ನ ಎಡ ಭಾಗದಲ್ಲಿ ಕಾಂತಾರದ ಪಂಜುರ್ಲಿ ದೈವವನ್ನ ಕೂರಿಸಿಕೊಂಡಿರುವ ಮೂರ್ತಿಗಳು ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಈಗಾಗಲೆ ಮುಗಿ ಬಿದ್ದು ಯುವಕರು ಕಾಂತಾರ ಗಣೇಶಗಳನ್ನ ಬುಕ್ ಮಾಡಿಕೊಂಡಿದ್ದು ಕಾಂತಾರ ಗಣೇಶ ಮೂಲಕ ಅದ್ದೂರಿ ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ.

ಯುವಕರ ಕಣ್ಮನ ಸೆಳಯುತ್ತಿವೆ ವಿವಿಧ ಬಗೆಯ ಮಣ್ಣಿನ ವಿನಾಯಕ: ಗಲ್ಲಿ ಗಲ್ಲಿಗೆ ಎಂಟ್ರಿಕೊಡಲು ಸಿದ್ದನಾದ ಕಾಂತಾರ ಗಣಪ
ಕಾಂತಾರ ಗಣಪ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 17, 2023 | 10:16 PM

ಬೆಂಗಳೂರು ಗ್ರಾಮಾಂತರ, ಸೆಪ್ಟೆಂಬರ್​ 17: ಗಣೇಶ ಹಬ್ಬ (Ganesh Chaturthi) ಬಂತು ಅಂದರೆ ಡಿಪರೆಂಟ್ ಆಗಿರುವ ಬೇರೆಲ್ಲೂ ಇಲ್ಲದ ಗಣೇಶಗಳನ್ನ ನಮ್ಮೇರಿಯಾದಲ್ಲಿ ಕೂರಿಸಬೇಕು ಅನ್ನೂ ತವಕ ಯುವಕರಲ್ಲಿರುವುದು ಕಾಮನ್. ಹೀಗಾಗೆ ಇಂತಹ ಯುವಕರಿಗಾಗಿಯೆ ಕಳೆದ 30 ವರ್ಷದಿಂದ ಟ್ರೆಂಡಿಂಗ್ ಪರಿಸರ ಸ್ನೇಹಿ ಗಣೇಶಗಳನ್ನ ಇಲ್ಲೊಂದು ಕುಟುಂಬ ಮಾಡುತ್ತಾ ಬಂದಿದ್ದು ಈ ಭಾರಿ ಕಾಂತಾರ ಗಣೇಶ ಮಾಡುವ ಮೂಲಕ ಕಮಾಲ್ ಮಾಡಿದ್ದಾರೆ.

ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಕಳೆದ 30 ವರ್ಷಗಳಿಂದ ರಾಜಗೋಪಾಲ್ ಅನ್ನೂ ಈ ಕುಟುಂಬ ಪರಿಸರ ಗಣೇಶ ಮೂರ್ತಿಗಳನ್ನ ಮಾಡ್ತಿದ್ದಾರೆ. ಅದರಲ್ಲೂ ವರ್ಷ ವರ್ಷ ಟ್ರೆಂಡಿಂಗ್ ನಲ್ಲಿರುವ ಗಣೇಶ ಮೂರ್ತಿಗಳನ್ನ ಮಾಡುವುದು ಇವರ ಹವ್ಯಾಸವಾಗಿದ್ದು, ಈ ಭಾರಿ ಕಾಂತಾರ ಗಣೇಶನನ್ನ ಮಣ್ಣಿನಲ್ಲಿ ಮಾಡುವ ಮೂಲಕ ಯುವಕನ ಗಮನ ಸೆಳೆದಿದ್ದಾರೆ. ಗಣೇಶ ತನ್ನ ಎಡ ಭಾಗದಲ್ಲಿ ಕಾಂತಾರದ ಪಂಜುರ್ಲಿ ದೈವವನ್ನ ಕೂರಿಸಿಕೊಂಡಿರುವ ಮೂರ್ತಿಗಳು ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಈಗಾಗಲೆ ಮುಗಿ ಬಿದ್ದು ಯುವಕರು ಕಾಂತಾರ ಗಣೇಶಗಳನ್ನ ಬುಕ್ ಮಾಡಿಕೊಂಡಿದ್ದು ಕಾಂತಾರ ಗಣೇಶ ಮೂಲಕ ಅದ್ದೂರಿ ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಹೂವಿನಿಂದಲ್ಲ, ಹಣದಿಂದ ಗಣೇಶನಿಗೆ ವಿಶೇಷ ಅಲಂಕಾರ: ಬರೋಬ್ಬರಿ 2 ಕೋಟಿಗೂ ಹೆಚ್ಚು ನೋಟು, ನಾಣ್ಯಗಳಿಂದ ಸಿಂಗಾರ

ಕಳೆದ 5 ವರ್ಷದಿಂದ ಆ ವರ್ಷದಲ್ಲಿರುವ ಟ್ರೆಂಡಿಂಗನ್ನ ಗಣೇಶಗಳನ್ನ ಮಾಡ್ತಿದ್ದು ಕಳೆದ ಭಾರಿ ಅಪ್ಪು ಗಣೇಶ ಎಲ್ಲರ ಗಮನ ಸೆಳೆದಿತ್ತು. ಅದೇ ರೀತಿ ಈ ಭಾರಿ ಕಾಂತಾರ ಗಣೇಶ ಗಮನ ಸೆಳೆಯುತ್ತಿದ್ದು ಕಾಂತಾರ ಜೊತೆಗೆ ಇತರೆ ಪರಿಸರ ಸ್ನೇಹಿ ವಿವಿಧ ಬಗೆಯ ಮಣ್ಣಿನ ಗಣಪಗಳು ಎಲ್ಲರ ಗಮನ ಸೆಳೆಯುತ್ತಿದೆ. ಜೊತೆಗೆ ಇಲ್ಲಿಂದಲೆ ಬೆಂಗಳೂರು ಮೈಸೂರು ಮಂಡ್ಯ ಚಿಕ್ಕಬಳ್ಳಾಪುರ ಮತ್ತು ಕೋಲಾರದ ಕಡೆ ಸಾವಿರಾರು ಗಣೇಶಗಳು ಹೋಗ್ತಿದ್ದು ಈ ಭಾರಿಯು ಬೇಡಿಕೆ ಬಂದಿದೆ.

ಇದನ್ನೂ ಓದಿ: Ganesh Chaturthi 2023: ಚೌತಿಯಂದು ಮನೆಯಲ್ಲಿ ಗಣಪತಿ ಕೂರಿಸುವವರು ಅನುಸರಿಸಬೇಕಾದ ನಿಯಮಗಳೇನು? ಆಚರಣೆ ಹೇಗೆ?

ಈ ಭಾರಿಯ ಗಣೇಶೋತ್ಸವಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಿದ್ದು ಎಲ್ಲರೂ ಪೊಲೀಸ್ ಇಲಾಖೆ ಅನುಮತಿಯೊಂದಿಗೆ ಗಣೇಶ ಕೂರಿಸುವುದು ಕಡ್ಡಾಯ ಅಂತ ಬೆಂಗಳೂರು ಗ್ರಾಮಾಂತರ ಎಸ್ಪಿ ತಿಳಿಸಿದ್ದಾರೆ.

ಪ್ರತಿಭಾರಿ ಒಂದೊಂದು ಟ್ರೆಂಡಿಂಗ್ ಗಣೇಶ ಮಾಡಿ ಯುವಕರ ಗಮನ ಸೆಳಯುತ್ತಿರುವು ಈ ಕುಟುಂಬ ಈ ಭಾರಿಯು ಕಾಂತಾರ ಗಣೇಶ ಮೂಲಕ ಕಮಾಲ್ ಮಾಡ್ತಿದ್ದಾರೆ. ಇನ್ನೂ ನೀವು ಸಹ ಗಣೇಶ ಉತ್ಸವ ಮಾಡ್ತಿದ್ರೆ ಪರಿಸರ ಸ್ನೇಹಿ ಗಣೇಶಗಳನ್ನ ಕೂರಿಸಿ ಕಾನೂನು ನಿಯಮಗಳನ್ನ ಪಾಲಿಸುವ ಮೂಲಕ ಗಣೇಶೋತ್ಸವ ಮಾಡಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ