Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಅಂದರಹಳ್ಳಿಯಲ್ಲಿ ಬೇಸಿಗೆ ಆರಂಭದಲ್ಲೇ ಜಲಕ್ಷಾಮ, ಬತ್ತಿ ಹೋದ ಬೋರ್ ವೆಲ್, ಟ್ಯಾಂಕರ್​ ನೀರೇ ಗತಿ

ಬೆಂಗಳೂರಿನ ಅಂದರಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೇಸಿಗೆ ಆರಂಭದಲ್ಲೇ ತೀವ್ರ ನೀರಿನ ಕೊರತೆ ಎದುರಾಗಿದೆ. ಬೋರ್‌ವೆಲ್‌ಗಳು ಹಾಳಾಗಿರುವುದು ಮತ್ತು ಕಾವೇರಿ ನೀರಿನ ಪೈಪ್‌ಲೈನ್ ಸಂಪರ್ಕವಿಲ್ಲದಿರುವುದು ಇದಕ್ಕೆ ಕಾರಣ. ಜಲಮಂಡಳಿಯ ನಿರ್ಲಕ್ಷ್ಯದಿಂದ ಜನರು ಟ್ಯಾಂಕರ್‌ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಟಿವಿ9 ವರದಿಯಿಂದ ಗೊರಗುಂಟೆಪಾಳ್ಯದ ಸ್ಲಂ ಪ್ರದೇಶಕ್ಕೆ ನೀರು ಪೂರೈಕೆಯಾಗಿದೆ.

ಬೆಂಗಳೂರು: ಅಂದರಹಳ್ಳಿಯಲ್ಲಿ ಬೇಸಿಗೆ ಆರಂಭದಲ್ಲೇ ಜಲಕ್ಷಾಮ, ಬತ್ತಿ ಹೋದ ಬೋರ್ ವೆಲ್, ಟ್ಯಾಂಕರ್​ ನೀರೇ ಗತಿ
ಸಾಂದರ್ಭಿಕ ಚಿತ್ರ
Follow us
ಶಾಂತಮೂರ್ತಿ
| Updated By: ವಿವೇಕ ಬಿರಾದಾರ

Updated on: Mar 04, 2025 | 7:58 AM

ಬೆಂಗಳೂರು, ಮಾರ್ಚ್​ 04: ಕಳೆದ ವರ್ಷ ಬೇಸಿಗೆಯಲ್ಲಿ (Summer) ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಿರಿಗಾಗಿ ಜನರು ಸಾಕಷ್ಟು ಪರದಾಡಿದ್ದರು. ಇದೀಗ ಮತ್ತೆ ಬೇಸಿಗೆ ಆರಂಭದಲ್ಲೇ ಬೆಂಗಳೂರಿನ ಅಂದರಹಳ್ಳಿ ಸುತ್ತಮುತ್ತಲಿನ ಜನರು ನೀರಿಗಾಗಿ ಬವಣಿಸುತ್ತಿದ್ದಾರೆ. ಬೇಸಿಗೆ ಆರಂಭದಲ್ಲೇ ಜಲ ಬವಣೆಗೆ ನಿವಾಸಿಗಳು ಸುಸ್ತಾಗಿದ್ದಾರೆ. ಬೋರ್ ವೆಲ್​ಗಳೆಲ್ಲ ಹಾಳಾಗಿದ್ದರಿಂದ, ನಿತ್ಯ ಬಳಕೆಗೂ ಟ್ಯಾಂಕರ್ ನೀರನ್ನೇ ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದರೂ ಜಲಮಂಡಳಿ ತಲೆಕೆಡಿಸಿಕೊಂಡಿರಲಿಲ್ಲ. ಹಾಳಾಗಿದ್ದ ಬೋರ್​ವೆಲ್​ಗಳನ್ನು ರಿಪೇರಿ ಮಾಡಿಸಲು ಸಹ ಮುಂದಾಗಲಿಲ್ಲ. ಇದರ ಪರಿಣಾಮ ಈ ವರ್ಷ ಬೇಸಿಗೆ ಆರಂಭದಲ್ಲಿ ನೀರು ಸಿಗದೆ ಜನರು ಪರದಾಡುವಂತಾಗಿದೆ. ಇನ್ನು, ಕಾವೇರಿ ನೀರಿನ ಪೈಪ್ ಲೈನ್ ಕನೆಕ್ಷನ್ ಕೂಡ ಆಗದಿರುವುದು ಬೇಸಿಗೆ ಶುರುವಿನಲ್ಲೇ ಜಲಕಂಟಕ ತಂದಿಟ್ಟಿದೆ.

ಸದ್ಯ ಕಾವೇರಿ ನೀರಾಗಲಿ, ಬೋರ್​ವೆಲ್​ ನೀರಾಗಲಿ ಬಾರದೆ ಕಂಗಾಲಾಗಿರುವ ನಿವಾಸಿಗಳು, ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ನಿತ್ಯ ಬಳಕೆಗೂ ನೀರಿಲ್ಲದೇ ಮನೆ ಮಾಲೀಕರು ನೀರಿಗೆ ದುಪ್ಪಟ್ಟು ಹಣ ಕೇಳುತ್ತಿರುವುದರಿಂದ ಬಾಡಿಗೆದಾರರು ಮನೆ ಖಾಲಿ ಮಾಡುತ್ತಿದ್ದಾರೆ. ಪ್ರತಿ ಬಾರಿ ಬೇಸಿಗೆಗೆ ಇದೇ ಸಮಸ್ಯೆ ತಲೆದೂರುತ್ತಿದ್ದರೂ ಇತ್ತ ತಿರುಗಿನೋಡದ ಜಲಮಂಡಳಿ, ಸ್ಥಳೀಯ ಶಾಸಕರ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
ಹೀಟ್ ಸ್ಟ್ರೋಕ್ ಬಗ್ಗೆ ಎಚ್ಚರ, ತುರ್ತು ಸ್ಥಿತಿಯಲ್ಲಿ ಈ ಸಂಖ್ಯೆಗೆ ಕರೆ ಮಾಡಿ
Image
ಬೇಸಿಗೆ ಜೊತೆಗೆ ಮಕ್ಕಳಲ್ಲಿ ಶುರುವಾಯ್ತು ಇನ್ಫೆಕ್ಷನ್​​ ಹಾವಳಿ
Image
ಬೇಸಿಗೆಯಲ್ಲಿ ಯಾವ ಬಣ್ಣದ ಬಟ್ಟೆ ಬೆಸ್ಟ್? ಇಲ್ಲಿದೆ ಸಿಂಪಲ್ ಟಿಪ್ಸ್
Image
ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿಗೆ ತತ್ತರಿಸಿದ ಬಳ್ಳಾರಿ ಜನರು

ಟಿವಿ9 ಬಿತ್ತರಿಸಿದ ವರದಿಗೆ ಫಲಶೃತಿ

ಅಂದರಹಳ್ಳಿ ಕತೆ ಹೀಗಾದರೇ, ಇತ್ತ ರವಿವಾರ ಟಿವಿ9 ಬಿತ್ತರಿಸಿದ್ದ ವರದಿಗೆ ಫಲಶೃತಿ ಸಿಕ್ಕಿದೆ. ಗೊರಗುಂಟೆಪಾಳ್ಯದ ಜ್ಯೋತಿಬಾಫುಲೆ ಸ್ಲಂನಲ್ಲಿ ನೂರು ಮನೆಗಳಿವೆ. ಆದರೆ, ಇಲ್ಲಿ ಎರಡೇ, ಎರಡು ನಲ್ಲಿಗಳಿದ್ದು, ನೀರು ತುಂಬಿಸಲು ಮಹಿಳೆಯರು ಪರದಾಡುತ್ತಿದ್ದರು. ಅಲ್ಲದೇ ನೀರಿಗಾಗಿ ನಿತ್ಯ ಗಲಾಟೆ, ಜಗಳ ನಡೆಯುತ್ತಿತ್ತು. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿ ಅಧಿಕಾರಿಗಳ ಗಮನಸೆಳೆದಿತ್ತು. ಸದ್ಯ ಟಿವಿ9 ವರದಿ ಬಳಿಕ ಅಲರ್ಟ್ ಆದ ಜಲಮಂಡಳಿಯ ಅಧಿಕಾರಿಗಳು ಈ ಏರಿಯಾಗೆ ಸಿಂಟೆಕ್ಸ್ ಟ್ಯಾಂಕ್ ಇಟ್ಟು ಉಚಿತ ನೀರು ಸರಬರಾಜು ಮಾಡಿದ್ದಾರೆ. ಅಲ್ಲದೇ ನಿತ್ಯ ಉಚಿತವಾಗಿ ನೀರು ಪೂರೈಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Car Mileage: ಬೇಸಿಗೆಯಲ್ಲಿ ಕಾರು ಕಡಿಮೆ ಮೈಲೇಜ್ ನೀಡುವುದೇಕೆ? ಇಲ್ಲಿದೆ ನೋಡಿ ಕಾರಣ

ಒಟ್ಟಿನಲ್ಲಿ ಕಳೆದ ಬಾರಿ ಬೇಸಿಗೆ ಬೇಗೆಯ ಜೊತೆಗೆ ಜಲಕ್ಷಾಮದಿಂದ ಬೆಂದಿದ್ದ ಬೆಂಗಳೂರಿಗೆ ಈ ಬಾರಿ ನೀರಿನ ಸಮಸ್ಯೆ ಬರಲ್ಲ ಅಂತ ಸರ್ಕಾರ ಹಾಗೂ ಜಲಮಂಡಳಿ ಆರಾಮಾಗಿತ್ತು. ಆದ್ರೆ ಇದೀಗ ಬೇಸಿಗೆ ಶುರುವಾಗುವ ಮೊದಲೇ ಹಲವು ಏರಿಯಾಗಳಲ್ಲಿ ನೀರಿನ ಬವಣೆ ಕೂಡ ಸದ್ದುಮಾಡುತ್ತದೆ. ಸದ್ಯ ಮುಂದಿನ ಮೂರು ತಿಂಗಳಿನ ಬಿರುಬೇಸಿಗೆಗೆ ಜಲಮಂಡಳಿ ಯಾವ ರೀತಿ ತಯಾರಾಗಿದೆ ಅನ್ನೋದನ್ನ ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್​ನ ತಳ್ಳಿದ ರಿಷಭ್ ಪಂತ್
VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್​ನ ತಳ್ಳಿದ ರಿಷಭ್ ಪಂತ್
VIDEO: ಗೆಲ್ಲುವ ಪಂದ್ಯವನ್ನು 'ಕೈ ಚೆಲ್ಲಿದ' ರಿಷಭ್ ಪಂತ್
VIDEO: ಗೆಲ್ಲುವ ಪಂದ್ಯವನ್ನು 'ಕೈ ಚೆಲ್ಲಿದ' ರಿಷಭ್ ಪಂತ್