AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ರಾಜಧಾನಿಗೆ ಬರಲಿವೆ ಇನ್ನಷ್ಟು ಕಸ ಗುಡಿಸುವ ಟ್ರಕ್​ಗಳು; ಏನಿದರ ವಿಶೇಷ? ಇಲ್ಲಿದೆ ನೋಡಿ

ಬೆಂಗಳೂರು ನಗರದ ರಸ್ತೆಗಳಲ್ಲಿ ದೂಳು ಮತ್ತು ಕಸ ಹೆಚ್ಚುತ್ತಿದ್ದು, ಸ್ವಚ್ಛವಾಗಿಡಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಕಸಗುಡಿಸುವ ಯಂತ್ರಗಳ ಮೊರೆ ಹೋಗಿದೆ. ಈಗಾಗಲೇ ಬಿಬಿಎಂಪಿ ಬಳಿ ಕಸ ಗುಡಿಸುವ ಯಂತ್ರಗಳಿದ್ದರೂ ಅವು ಸಾಕಾಗುತ್ತಿಲ್ಲ. ಈ ಸಂಬಂಧ ಬಿಬಿಎಂಪಿ ಹೊಸದಾಗಿ, ಹೆಚ್ಚಿನ ಯಂತ್ರಗಳನ್ನು ಖರೀದಿಸಲು ಚಿಂತನೆ ನಡೆಸಿದೆ.

Bengaluru: ರಾಜಧಾನಿಗೆ ಬರಲಿವೆ ಇನ್ನಷ್ಟು ಕಸ ಗುಡಿಸುವ ಟ್ರಕ್​ಗಳು; ಏನಿದರ ವಿಶೇಷ? ಇಲ್ಲಿದೆ ನೋಡಿ
ಕಸ ಗುಡಿಸುವ ಯಂತ್ರ
ವಿವೇಕ ಬಿರಾದಾರ
|

Updated on:Feb 20, 2023 | 11:37 AM

Share

ಬೆಂಗಳೂರು: ದಿನದಿಂದ ದಿನಕ್ಕೆ ಸಿಲಿಕಾನ್​ ಸಿಟಿ ಬೆಳೆಯುತ್ತಿದೆ. ನಗರದ ರಸ್ತೆಗಳಲ್ಲಿ ದೂಳು ಮತ್ತು ಕಸ ಹೆಚ್ಚುತ್ತಿದ್ದು, ಸ್ವಚ್ಛವಾಗಿಡಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಕಸಗುಡಿಸುವ ಯಂತ್ರಗಳ ಮೊರೆ ಹೋಗಿದೆ. ಈಗಾಗಲೇ ಬಿಬಿಎಂಪಿ (BBMP) ಬಳಿ ಕಸ ಗುಡಿಸುವ ಯಂತ್ರಗಳಿದ್ದರೂ ಅವು ಸಾಕಾಗುತ್ತಿಲ್ಲ. ಈ ಸಂಬಂಧ ಬಿಬಿಎಂಪಿ ಹೊಸದಾಗಿ, ಹೆಚ್ಚಿನ ಯಂತ್ರಗಳನ್ನು ಖರೀದಿಸಲು ಚಿಂತನೆ ನಡೆಸಿದೆ.

ಬಿಬಿಎಂಪಿ ಹೆಚ್ಚಿಗೆ 25 ಕಸ ಗುಡಿಸುವ ಯಂತ್ರಗಳನ್ನು ಖರೀದಿಸಲು ಟೆಂಡರ್​ ಕರೆಯಲಿದೆ. ನಗರದಲ್ಲಿ 1,940 ಕಿ ಮೀ ರಸ್ತೆ ಮತ್ತು ಉಪರಸ್ತೆಗಳಿದ್ದು ಪ್ರಸ್ತುತ ಬಿಬಿಎಂಪಿ ಬಳಿ ಇರುವ 27 ಕಸಗುಡಿಸುವ ಯಂತ್ರಗಳಿಂದ ಈ ಎಲ್ಲ ರಸ್ತೆಗಳ ಕಸಗುಡಿಸಲು ಸಾಧ್ಯವಾಗುತ್ತಿಲ್ಲ. ಬಿಬಿಎಂಪಿ ಪ್ರಕಾರ ಬೆಂಗಳೂರಿಗೆ ಬರೊಬ್ಬರಿ 200 ಕಸಗುಡಿಸುವ ಯಂತ್ರಗಳು ಬೇಕಿವೆ.

ಈ ಬಗ್ಗೆ ಘನ ತ್ಯಾಜ್ಯ ವಿಲೇವಾರಿ ಘಟಕದ ವಿಶೇಷ ಆಯುಕ್ತ ಹರೀಶ್ ಕುಮಾರ್​ ಮಾತನಾಡಿ ನಾವು ಈಗಾಗಲೇ 25 ಯಂತ್ರಗಳನ್ನು ಕೊಂಡುಕೊಳ್ಳಲು ಟೆಂಡರ್​ ಕರೆಯಲಿದ್ದೇವೆ. ಒಂದು ಯಂತ್ರ 6 ರಿಂದ 8 ಗಂಟೆಗಳಲ್ಲಿ 40 ಕಿ ಮೀ ರಸ್ತೆಯನ್ನು ಗುಡಿಸುತ್ತದೆ. ಈಗ ಹೆಚ್ಚಿನ ಯಂತ್ರಗಳು ಬರುವುದರಿಂದ ಹೆಚ್ಚಿನ ನಗರಗಳನ್ನು ತಲುಪಲು ಸಾಧ್ಯವಾಗುತ್ತದೆ ಎಂದರು.

ಒಂದು ಯಂತ್ರಕ್ಕೆ 2 ಕೋಟಿ ರೂ. ಇದ್ದು, ಸದ್ಯ 70 ಕೋಟಿ ರೂ. ಟೆಂಡರ್​ ಇದ್ದು, ಇದರಲ್ಲಿ ಯಂತ್ರದ ನಿರ್ವಹಣೆ ಕೂಡ ಒಳಗೊಂಡಿದೆ. ಪ್ರತಿ ಕಸ ಗುಡಿಸುವ ಯಂತ್ರ (ಟ್ರಕ್​) 5 ರಿಂದ 6 ಕ್ಯೂಬಿಕ್​ ಮೀಟರ್​ ಕಸ ಮತ್ತು ಎಲೆಗಳನ್ನು ಸಂಗ್ರಹಣೆ ಮಾಡಿಕೊಳ್ಳುತ್ತದೆ. 1 ಕ್ಯೂಬಿಕ್​ ಮಿಟರ್​ ಅಂದ್ರೆ 900 ಕೇಜಿ ಎಷ್ಟು ಕಸವನ್ನು ಶೇಖರಣೆ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿದೆ.

ಪ್ರಸ್ತುತ ಇರುವ ಯಂತ್ರಗಳು 100 ಟನ್​ಗಳಷ್ಟು ದೂಳನ್ನು ಶೇಖರಣೆ ಮಾಡಿಕೊಳ್ಳುತ್ತವೆ. ಈ ಯಂತ್ರಗಳ ಮೂಲಕ ಮುಖ್ಯ ರಸ್ತೆಗಳಲ್ಲಿ ಮಾತ್ರ ಕಸ ಗುಡಿಸಲು ಸಾಧ್ಯವಾಗುತ್ತಿದೆ. ಯಂತ್ರಗಳು ಕಡಿಮೆ ಇರುವ ಕಾರಣ ಉಪ ರಸ್ತೆಗಳಲ್ಲಿ ಕಸ ಗುಡಿಸಲು ಸಾಧ್ಯವಾಗುತ್ತಿಲ್ಲವಾಗಿದ್ದು, ಅಲ್ಲಿ ಪೌರಕಾರ್ಮಿಕರು ಕಸ ಗುಡಿಸುತ್ತಿದ್ದಾರೆ. ಹೀಗಾಗಿ ರಾಜಧಾನಿಗೆ 200 ಯಂತ್ರಗಳು ಅವಶ್ಯಕತೆ ಇದೆ.

ನಗರವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಹಾಗೆ ಮಾಲಿನ್ಯ ಕೂಡ ಹೆಚ್ಚುತ್ತಿದೆ. ಈ ಹಿನ್ನೆಲೆ ವಾಯು ಗುಣಮಟ್ಟವನ್ನು ಸುಧಾರಿಸುವತ್ತ ಗಮನಹರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಬಿಎಂಪಿಗೆ ಸೂಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Mon, 20 February 23

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ