AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಪೊಲೀಸರಿಂದ ಭರ್ಜರಿ ಬೇಟೆ: ಕಳವಾಗಿದ್ದ 3 ಕೋಟಿ ರೂ. ಮೌಲ್ಯದ 1949 ಮೊಬೈಲ್ ವಶಕ್ಕೆ

ಬೆಂಗಳೂರು ನಗರ ಮೊಬೈಲ್ ಮಾಫಿಯಾ ನಗರವಾಗಿ ಬದಲಾಗಿದೆ. ಪ್ರತಿದಿನ ಏನಿಲ್ಲವೆಂದರೂ ಸಾವಿರಾರು ಮೊಬೈಲ್​ಗಳು ಕಳ್ಳರ ಪಾಲಾಗುತ್ತಿವೆ‌. ಮೊಬೈಲ್‌ ಕದ್ದು ಬಚಾವಾಗುವ ಕಳ್ಳರ ಉಪಾಯ ನೋಡಿದರೆ ಪೊಲೀಸರೇ ಶಾಕ್ ಆಗಬೇಕು! ಅಂಥದ್ದರಲ್ಲಿ, ಖದೀಮರ ಹೆಡೆಮುರಿ ಕಟ್ಟಿರುವ ಪೊಲೀಸರು 1949 ಮೊಬೈಲ್ ಫೋನ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಪೊಲೀಸರಿಂದ ಭರ್ಜರಿ ಬೇಟೆ: ಕಳವಾಗಿದ್ದ 3 ಕೋಟಿ ರೂ. ಮೌಲ್ಯದ 1949 ಮೊಬೈಲ್ ವಶಕ್ಕೆ
ಕಳ್ಳರಿಂದ ಪೊಲೀಸರು ವಶಪಡಿಸಿಕೊಂಡ ಮೊಬೈಲ್​ ಫೋನ್​ಗಳು
ರಾಚಪ್ಪಾಜಿ ನಾಯ್ಕ್
| Edited By: |

Updated on: Oct 30, 2025 | 9:13 AM

Share

ಬೆಂಗಳೂರು, ಅಕ್ಟೋಬರ್ 30: ಐಫೋನ್ 17, ಪ್ರೋ‌ಮ್ಯಾಕ್ಸ್, ಸ್ಯಾಮ್ಸಂಗ್ ಎಸ್ 24, ಓಪ್ಪೊ, ರೆಡ್ ಮಿ, ರಿಯಲ್ ಮೀ, ಒನ್‌ಪ್ಲಸ್ ಸರಿದಂತೆ ಕಳವಾಗಿದ್ದ ಸುಮಾರು 3 ಕೋಟಿ ರೂ. ಮೌಲ್ಯದ ವಿವಿಧ ಬ್ರ್ಯಾಂಡ್​​ಗಳ 1949 ಮೊಬೈಲ್​ಗಳನ್ನು ಬೆಂಗಳೂರು (Bengaluru) ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಬೆಂಗಳೂರು ನಗರ ಪೊಲೀಸರು ಬೃಹತ್ ಬೇಟೆಯನ್ನೇ ಆಡಿದ್ದಾರೆ‌‌. ಬೆಂಗಳೂರಿನಾದ್ಯಂತ ಒಟ್ಟು 3.36 ಕೋಟಿ ರೂ. ಮೌಲ್ಯದ 1949 ಕಳುವಾದ ಹಾಗೂ ಮಾಲೀಕರು ಕಳೆದುಕೊಂಡಿರುವ ಮೊಬೈಲ್ ಫೋನ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳನ್ನು ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದು ನಂತರ ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

ಅಲ್ಯೂಮಿನಿಯಂ ಫಾಯಿಲ್​ನಲ್ಲಿ ಮೊಬೈಲ್ ಸುತ್ತಿ ಕಳ್ಳಾಟ

ಮದನ್,ಶಾಂತಕುಮಾರ್ ಹಾಗೂ ಮೊಹಮ್ಮದ್ ಯಾಸಿನ್ ಎಂಬ ಖದೀಮರು ಒಟ್ಟಿಗೆ ಬಿಎಂಟಿಸಿ ಬಸ್ ಹತ್ತುತ್ತಾ ಇದ್ದರು. ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ಮಾಡುತ್ತಿದ್ದರು. ತಕ್ಷಣ ತಮ್ಮ ಜೊತೆಗೆ ಬಂದವರಿಗೆ ಮೊಬೈಲ್ ಪಾಸ್ ಮಾಡುತ್ತಿದ್ದರು. ಯಾರೂ ಅಕ್ಕ ಪಕ್ಕ ಇಲ್ಲ ಎಂದಾಗ ಅಲ್ಯೂಮಿನಿಯಂ ಫಾಯಿಲ್​​ನಲ್ಲಿ ಮೊಬೈಲ್ ಸುತ್ತಿ ಜೇಬಲ್ಲಿ ಇಟ್ಟುಕೊಳ್ಳುತ್ತಿದ್ದರು. ಹೀಗೆ ಇಟ್ಟಾಗ ಮೊಬೈಲ್ ನೆಟ್ ವರ್ಕ್ ಸಿಗದೆ ಜಾಮ್ ಆಗುತ್ತದೆ. ಆಗ ಮೊಬೈಲ್ ಮಾಲೀಕ ಕರೆ ಮಾಡಿದರೂ ಕೂಡ ಸ್ವಿಚ್ ಆಫ್ ಬರುತ್ತದೆ. ಈ‌ರೀತಿ ಖದೀಮರು ಕೈಚಳಕ ತೋರುತ್ತಿದ್ದರು.

ಇತ್ತ ಕಮಾಂಡ್ ಸೆಂಟರ್ ಅಧಿಕಾರಿ ಮತ್ತು ಸಿಬ್ಬಂದಿ ಕಳವಾದ ಮತ್ತು ಕಳೆದು ಹೋದ ಮೊಬೈ್​ಗಳನ್ನು ಪತ್ತೆ ಮಾಡಿದ್ದಾರೆ. ಸಿಇಐಆರ್ ಪೋರ್ಟಲ್ ಮುಖಾಂತರ 894 ಮೊಬೈಲ್ಗಳನ್ನು ಪತ್ತೆ ಮಾಡಿದ್ದರೆ.

ಸಿಇಐಆರ್ ಎಂದರೇನು? ಇದರ ಮೂಲಕ ಕಳವಾದ ಮೊಬೈಲ್ ಪತ್ತೆ ಹೇಗೆ?

ಸಿಇಐಆರ್ ಎಂದರೆ CENTRAL EQUIPMENT IDENTITY REGISTER. ಕಳೆದು‌ ಹೋದ ಮೊಬೈ‌ಲ‌್‌ನನ್ನು ಪತ್ತೆ ಮಾಡಲು ಬಳಸುವ ಪೋರ್ಟಲ್‌ ಇದಾಗಿದ್ದು, ಕಳೆದು ಹೋಗಿರುವ ಮೊಬೈಲ್​​ನ ಐಎಂಇಐ ನಂಬರ್ ಅನ್ನು ಪೋರ್ಟಲ್​ಗೆ ಅಪ್ಲೋಡ್ ಮಾಡಲಾಗುತ್ತದೆ. ಯಾವುದೇ ಸಿಮ್ ಬಳಿಸಿ ಮೊಬೈಲ್ ಆನ್ ಮಾಡಿದಾಗ ದೂರುದಾರ ಹಾಗೂ ಪೊಲೀಸರಿಗೆ ಮೆಸೆಜ್ ಬರುತ್ತದೆ. ಆ್ಯಕ್ಟಿವೇಟ್ ಆಗಿರುವ ಸಿಮ್ ನಂಬರ್ ಸಹ ಈ ಪೋರ್ಟ್​ನಲ್ಲಿ ಕಾಣಿಸುತ್ತೆ. ಅಲ್ಲದೇ, ಮೊಬೈಲ್ ಬಳಕೆಯ ಲೊಕೇಶನ್ ಕೂಡ ಗೊತ್ತಾಗುತ್ತದೆ. ಆಗ ಆ ನಂಬರ್ ಟ್ರೇಸ್ ಮಾಡಿ ಮೊಬೈ‌ಲ್‌ ವಶಕ್ಕೆ ಪಡೆಯುವ ಪೊಲೀಸರು ಮಾಲೀಕರಿಗೆ ಹಿಂದಿರುಗಿಸುತ್ತಾರೆ.

ಇದನ್ನೂ ಓದಿ: ಕುಟುಂಬದವರು ಪ್ರಿಯಕರನನ್ನು ಹೊಡೆದು ಕೊಂದಿದ್ದಕ್ಕೆ ತನ್ನ ಕತ್ತು ಸೀಳಿಕೊಂಡ ಯುವತಿ

ಪೊಲೀಸರು ಎಷ್ಟೇ ಮೊಬೈಲ್ ರಿಕವರಿ ಮಾಡಿದರೂ ಕೂಡ ಪ್ರತಿ ದಿನ ಸಾವಿರಾರು ಮೊಬೈಲ್‌ ಕಳ್ಳರ ಪಾಲಾಗುತ್ತಲೇ ಇದೆ. ಬೇಗ ಹಣ ಮಾಡಲು ಕಳ್ಳರು ಇದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ