AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಪೊಲೀಸರಿಂದ ಭರ್ಜರಿ ಬೇಟೆ: ಕಳವಾಗಿದ್ದ 3 ಕೋಟಿ ರೂ. ಮೌಲ್ಯದ 1949 ಮೊಬೈಲ್ ವಶಕ್ಕೆ

ಬೆಂಗಳೂರು ನಗರ ಮೊಬೈಲ್ ಮಾಫಿಯಾ ನಗರವಾಗಿ ಬದಲಾಗಿದೆ. ಪ್ರತಿದಿನ ಏನಿಲ್ಲವೆಂದರೂ ಸಾವಿರಾರು ಮೊಬೈಲ್​ಗಳು ಕಳ್ಳರ ಪಾಲಾಗುತ್ತಿವೆ‌. ಮೊಬೈಲ್‌ ಕದ್ದು ಬಚಾವಾಗುವ ಕಳ್ಳರ ಉಪಾಯ ನೋಡಿದರೆ ಪೊಲೀಸರೇ ಶಾಕ್ ಆಗಬೇಕು! ಅಂಥದ್ದರಲ್ಲಿ, ಖದೀಮರ ಹೆಡೆಮುರಿ ಕಟ್ಟಿರುವ ಪೊಲೀಸರು 1949 ಮೊಬೈಲ್ ಫೋನ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಪೊಲೀಸರಿಂದ ಭರ್ಜರಿ ಬೇಟೆ: ಕಳವಾಗಿದ್ದ 3 ಕೋಟಿ ರೂ. ಮೌಲ್ಯದ 1949 ಮೊಬೈಲ್ ವಶಕ್ಕೆ
ಕಳ್ಳರಿಂದ ಪೊಲೀಸರು ವಶಪಡಿಸಿಕೊಂಡ ಮೊಬೈಲ್​ ಫೋನ್​ಗಳು
ರಾಚಪ್ಪಾಜಿ ನಾಯ್ಕ್
| Edited By: |

Updated on: Oct 30, 2025 | 9:13 AM

Share

ಬೆಂಗಳೂರು, ಅಕ್ಟೋಬರ್ 30: ಐಫೋನ್ 17, ಪ್ರೋ‌ಮ್ಯಾಕ್ಸ್, ಸ್ಯಾಮ್ಸಂಗ್ ಎಸ್ 24, ಓಪ್ಪೊ, ರೆಡ್ ಮಿ, ರಿಯಲ್ ಮೀ, ಒನ್‌ಪ್ಲಸ್ ಸರಿದಂತೆ ಕಳವಾಗಿದ್ದ ಸುಮಾರು 3 ಕೋಟಿ ರೂ. ಮೌಲ್ಯದ ವಿವಿಧ ಬ್ರ್ಯಾಂಡ್​​ಗಳ 1949 ಮೊಬೈಲ್​ಗಳನ್ನು ಬೆಂಗಳೂರು (Bengaluru) ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಬೆಂಗಳೂರು ನಗರ ಪೊಲೀಸರು ಬೃಹತ್ ಬೇಟೆಯನ್ನೇ ಆಡಿದ್ದಾರೆ‌‌. ಬೆಂಗಳೂರಿನಾದ್ಯಂತ ಒಟ್ಟು 3.36 ಕೋಟಿ ರೂ. ಮೌಲ್ಯದ 1949 ಕಳುವಾದ ಹಾಗೂ ಮಾಲೀಕರು ಕಳೆದುಕೊಂಡಿರುವ ಮೊಬೈಲ್ ಫೋನ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳನ್ನು ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದು ನಂತರ ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

ಅಲ್ಯೂಮಿನಿಯಂ ಫಾಯಿಲ್​ನಲ್ಲಿ ಮೊಬೈಲ್ ಸುತ್ತಿ ಕಳ್ಳಾಟ

ಮದನ್,ಶಾಂತಕುಮಾರ್ ಹಾಗೂ ಮೊಹಮ್ಮದ್ ಯಾಸಿನ್ ಎಂಬ ಖದೀಮರು ಒಟ್ಟಿಗೆ ಬಿಎಂಟಿಸಿ ಬಸ್ ಹತ್ತುತ್ತಾ ಇದ್ದರು. ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ಮಾಡುತ್ತಿದ್ದರು. ತಕ್ಷಣ ತಮ್ಮ ಜೊತೆಗೆ ಬಂದವರಿಗೆ ಮೊಬೈಲ್ ಪಾಸ್ ಮಾಡುತ್ತಿದ್ದರು. ಯಾರೂ ಅಕ್ಕ ಪಕ್ಕ ಇಲ್ಲ ಎಂದಾಗ ಅಲ್ಯೂಮಿನಿಯಂ ಫಾಯಿಲ್​​ನಲ್ಲಿ ಮೊಬೈಲ್ ಸುತ್ತಿ ಜೇಬಲ್ಲಿ ಇಟ್ಟುಕೊಳ್ಳುತ್ತಿದ್ದರು. ಹೀಗೆ ಇಟ್ಟಾಗ ಮೊಬೈಲ್ ನೆಟ್ ವರ್ಕ್ ಸಿಗದೆ ಜಾಮ್ ಆಗುತ್ತದೆ. ಆಗ ಮೊಬೈಲ್ ಮಾಲೀಕ ಕರೆ ಮಾಡಿದರೂ ಕೂಡ ಸ್ವಿಚ್ ಆಫ್ ಬರುತ್ತದೆ. ಈ‌ರೀತಿ ಖದೀಮರು ಕೈಚಳಕ ತೋರುತ್ತಿದ್ದರು.

ಇತ್ತ ಕಮಾಂಡ್ ಸೆಂಟರ್ ಅಧಿಕಾರಿ ಮತ್ತು ಸಿಬ್ಬಂದಿ ಕಳವಾದ ಮತ್ತು ಕಳೆದು ಹೋದ ಮೊಬೈ್​ಗಳನ್ನು ಪತ್ತೆ ಮಾಡಿದ್ದಾರೆ. ಸಿಇಐಆರ್ ಪೋರ್ಟಲ್ ಮುಖಾಂತರ 894 ಮೊಬೈಲ್ಗಳನ್ನು ಪತ್ತೆ ಮಾಡಿದ್ದರೆ.

ಸಿಇಐಆರ್ ಎಂದರೇನು? ಇದರ ಮೂಲಕ ಕಳವಾದ ಮೊಬೈಲ್ ಪತ್ತೆ ಹೇಗೆ?

ಸಿಇಐಆರ್ ಎಂದರೆ CENTRAL EQUIPMENT IDENTITY REGISTER. ಕಳೆದು‌ ಹೋದ ಮೊಬೈ‌ಲ‌್‌ನನ್ನು ಪತ್ತೆ ಮಾಡಲು ಬಳಸುವ ಪೋರ್ಟಲ್‌ ಇದಾಗಿದ್ದು, ಕಳೆದು ಹೋಗಿರುವ ಮೊಬೈಲ್​​ನ ಐಎಂಇಐ ನಂಬರ್ ಅನ್ನು ಪೋರ್ಟಲ್​ಗೆ ಅಪ್ಲೋಡ್ ಮಾಡಲಾಗುತ್ತದೆ. ಯಾವುದೇ ಸಿಮ್ ಬಳಿಸಿ ಮೊಬೈಲ್ ಆನ್ ಮಾಡಿದಾಗ ದೂರುದಾರ ಹಾಗೂ ಪೊಲೀಸರಿಗೆ ಮೆಸೆಜ್ ಬರುತ್ತದೆ. ಆ್ಯಕ್ಟಿವೇಟ್ ಆಗಿರುವ ಸಿಮ್ ನಂಬರ್ ಸಹ ಈ ಪೋರ್ಟ್​ನಲ್ಲಿ ಕಾಣಿಸುತ್ತೆ. ಅಲ್ಲದೇ, ಮೊಬೈಲ್ ಬಳಕೆಯ ಲೊಕೇಶನ್ ಕೂಡ ಗೊತ್ತಾಗುತ್ತದೆ. ಆಗ ಆ ನಂಬರ್ ಟ್ರೇಸ್ ಮಾಡಿ ಮೊಬೈ‌ಲ್‌ ವಶಕ್ಕೆ ಪಡೆಯುವ ಪೊಲೀಸರು ಮಾಲೀಕರಿಗೆ ಹಿಂದಿರುಗಿಸುತ್ತಾರೆ.

ಇದನ್ನೂ ಓದಿ: ಕುಟುಂಬದವರು ಪ್ರಿಯಕರನನ್ನು ಹೊಡೆದು ಕೊಂದಿದ್ದಕ್ಕೆ ತನ್ನ ಕತ್ತು ಸೀಳಿಕೊಂಡ ಯುವತಿ

ಪೊಲೀಸರು ಎಷ್ಟೇ ಮೊಬೈಲ್ ರಿಕವರಿ ಮಾಡಿದರೂ ಕೂಡ ಪ್ರತಿ ದಿನ ಸಾವಿರಾರು ಮೊಬೈಲ್‌ ಕಳ್ಳರ ಪಾಲಾಗುತ್ತಲೇ ಇದೆ. ಬೇಗ ಹಣ ಮಾಡಲು ಕಳ್ಳರು ಇದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ