AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್​​ಬುಕ್​​ ಗೆಳೆಯನ ವಂಚನೆ ಜಾಲಕ್ಕೆ ಸಿಲುಕಿ 1.7 ಕೋಟಿ ರೂಪಾಯಿ ಕಳೆದುಕೊಂಡ ವಿಚ್ಛೇದಿತ ಮಹಿಳೆ

ಬೆಂಗಳೂರಿನ ಯಶವಂತಪುರದಲ್ಲಿ ವಿಚ್ಛೇದಿತ ಮಹಿಳೆಯೊಬ್ಬರಿಗೆ ಯುಕೆ ಉದ್ಯೋಗಿ ಸೋಗಿನಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿ, ಗಿಫ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸೈಬರ್ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ದೆಹಲಿಯಲ್ಲಿ ಕಸ್ಟಮ್ಸ್​​ನಲ್ಲಿ ಗಿಫ್ಟ್ ಗಳಿದ್ದು, ಅವುಗಳನ್ನು ರಿಲೀಸ್ ಮಾಡಲು ಹಣಪಾವತಿ ಮಾಡಬೇಕು. ಆದರೆ ತನ್ನ ಬಳಿ ಇಂಡಿಯನ್‌ ಕರೆನ್ಸಿ ಇಲ್ಲ. ಹೀಗಾಗಿ ಭಾರತಕ್ಕೆ ಬಂದ ಮೇಲೆ ಹಣ ನೀಡುತ್ತೇನೆ ಎಂದು ಮಹಿಳೆಗೆ ಆರೋಪಿ ತಿಳಿಸಿದ್ದ ಎನ್ನಲಾಗಿದೆ.

ಫೇಸ್​​ಬುಕ್​​ ಗೆಳೆಯನ ವಂಚನೆ ಜಾಲಕ್ಕೆ ಸಿಲುಕಿ 1.7 ಕೋಟಿ ರೂಪಾಯಿ ಕಳೆದುಕೊಂಡ ವಿಚ್ಛೇದಿತ ಮಹಿಳೆ
ಸಾಂದರ್ಭಿಕ ಚಿತ್ರImage Credit source: Getty Images
Shivaprasad B
| Edited By: |

Updated on:Jul 28, 2026 | 11:44 AM

Share

ಬೆಂಗಳೂರು, ಜುಲೈ 28: ಸೈಬರ್​​ ವಂಚನೆ (Cyber Fraud) ದಿನಕ್ಕೊಂದು ರೂಪ ಪಡೆಯುತ್ತಿರುವ ನಡುವೆ ವಿಚ್ಚೇದಿತ ಮಹಿಳೆಯರನ್ನ ಟಾರ್ಗೆಟ್ ಮಾಡಿ ದೋಖಾ ಎಸಗುತ್ತಿರುವ ಘಟನೆ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ಫೇಸ್‌ಬುಕ್ ಸ್ನೇಹಿತನ ಬಲೆಗೆ‌ಬಿದ್ದು ಯಶವಂತಪುರದ ಮಹಿಳೆಯೋರ್ವರು 1.7 ಕೋಟಿ ರೂಪಾಯಿ ಕಳೆದುಕೊಂಡಿದ್ದು, ಮೋಸ ಹೋಗಿರೋದು ಅರಿವಾಗುತ್ತಿದ್ದಂತೆ ಈ ಸಂಬಂಧ ಉತ್ತರ ವಿಭಾಗ ಸೈಬರ್ ಠಾಣೆಗೆ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾರೆ.

ಗಿಫ್ಟ್​​ಗಳ ಫೋಟೋ ಹಂಚಿಕೊಂಡಿದ್ದ ಆರೋಪಿ

ಗಂಡನಿಂದ ದೂರುವಾಗಿದ್ದ ಯಶವಂತಪುರದ ಮಹಿಳೆಗೆ ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೋರ್ವ ತಾನು ಯುಕೆ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಪರಸ್ಪರ ಮೊಬೈಲ್​​ ನಂಬರ್​​ ಬದಲಾಯಿಸಿಕೊಂಡಿದ್ದರು. ಇದು ವಾಟ್ಸ್ಯಾಪ್​​ ಚಾಟ್​​ ಹಂತಕ್ಕೂ ಹೋಗಿತ್ತು. ಈ ನಡುವೆ ಯುಕೆಯಿಂದ ಚಿನ್ನ, ಡೈಮಂಡ್​​ ಸೀರೆ ಮತ್ತು ಗಿಫ್ಟ್​​ಗಳನ್ನು ಮಹಿಳೆಗೆ ಕಳುಹಿಸೋದಾಗಿ ಆರೋಪಿ ಆಸೆ ಹುಟ್ಟಿಸಿದ್ದ. ಉಡುಗೊರೆಗಳ ಫೋಟೋಗಳನ್ನು ಕೂಡ ಆಕೆಯ ಜೊತೆ ಹಂಚಿಕೊಂಡಿದ್ದ. ತನ್ನ ಮಾತಿನ ಬಗ್ಗೆ ಆಕೆಗೆ ನಂಬಿಕೆ ಬರುವಂತೆ ಮಾಡಲು ನಕಲಿ ಕೊರಿಯರ್​​ ರಸೀದಿಗಳನ್ನೂ ಕಳುಹಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಆನ್​​ಲೈನ್​​ ವಂಚನೆ; ಮೊಬೈಲ್, ಸಿಮ್​​ ಬದಲಿಸಿಯೂ 48.5 ಲಕ್ಷ ಕಳೆದುಕೊಂಡ ಖಾಸಗಿ ಸಂಸ್ಥೆಯ ಉದ್ಯೋಗಿ

ದೆಹಲಿಯಲ್ಲಿ ಕಸ್ಟಮ್ಸ್​​ನಲ್ಲಿ ಗಿಫ್ಟ್ ಗಳಿದ್ದು, ಅವುಗಳನ್ನು ರಿಲೀಸ್ ಮಾಡಲು ಹಣಪಾವತಿ ಮಾಡಬೇಕು. ಆದರೆ ತನ್ನ ಬಳಿ ಇಂಡಿಯನ್‌ ಕರೆನ್ಸಿ ಇಲ್ಲ. ಹೀಗಾಗಿ ಭಾರತಕ್ಕೆ ಬಂದ ಮೇಲೆ ಹಣ ನೀಡುತ್ತೇನೆ ಎಂದು ಮಹಿಳೆಗೆ ಆರೋಪಿ ತಿಳಿಸಿದ್ದ. ಆ ಬಳಿಕ ಕಸ್ಟಮ್ಸ್ ಅಧಿಕಾರಿ ಹೆಸರಿನಲ್ಲಿ ಮಹಿಳೆಗೆ ದೂರವಾಣಿ ಕರೆ ಬಂದಿದ್ದು, ಆ ಸಂದರ್ಭ 40 ಲಕ್ಷ ರೂಪಾಯಿ ಹಣವನ್ನು RTGS ಮೂಲಕ ಮಹಿಳೆ ಪಾವತಿಸಿದ್ದಳು. ಬ್ಯಾಂಕ್ ವರ್ಗಾವಣೆ ಮಾತ್ರವಲ್ಲದೆ, ಖುದ್ದಾಗಿ ಬಂದು ವಂಚಕರು ನಗದು ಸಂಗ್ರಹಿಸಿದ್ದರು. ಪದೇ ಪದ ಈ ರೀತಿಯಲ್ಲಿ ಸೈಬರ್ ವಂಚಕರು ಹಣ ಸಂಗ್ರಹ ಮಾಡಲು ಆರಂಭಿಸಿದಾಗ ಅನುಮಾನಗೊಂಡು ಮಹಿಳೆ ಯುಕೆ ವ್ಯಕ್ತಿಗೆ ಕರೆ ಮಾಡಿದ್ದಾಳೆ. ಆ ವೇಳೆ ಆತನ ನಂಬರ್​​ ಸ್ವಿಚ್ ಆಫ್ ಬಂದಿದೆ. ತಾನು ಮೋಸ ಹೋಗಿದ್ದು ಅರಿವಾಗುತ್ತಿದ್ದಂತೆ ಈ ಸಂಬಂಧ ಮಹಿಳೆ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:43 am, Tue, 28 July 26

Follow Us
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು
ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು
ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ
ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ