ಸೈಲೆಂಟ್ ಕಿಲ್ಲರ್ ಆಗ್ತಿದೆ ಗ್ಯಾಸ್ ಗೀಸರ್: ಜನರೇ ಎಚ್ಚರ!
ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಗ್ಯಾಸ್ ಗೀಸರ್ನಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿದ್ದು, ಜನರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಳಪೆ ಗುಣಮಟ್ಟದ ಗ್ಯಾಸ್ ಗೀಸರ್ ಬಳಕೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ನಿತ್ಯ ಸ್ನಾನಕ್ಕೆ ಗ್ಯಾಸ್ ಗೀಸರ್ ಬಳಕೆ ಮಾಡುವವರು ಎಚ್ಚರವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಬೆಂಗಳೂರು, ಡಿಸೆಂಬರ್ 10: ಇತ್ತೀಚೆಗೆ ರಾಜ್ಯದಲ್ಲಿ (Karnataka) ಗ್ಯಾಸ್ ಗೀಸರ್ನಿಂದ (gas geyser) ಅನಾಹುತಗಳು ಸಂಭವಿಸುತ್ತಿದ್ದು, ಜನರು ಜೀವ ಕೂಡ ಕಳೆದುಕೊಳ್ಳುತ್ತಿದ್ದಾರೆ. ಕಳಪೆ ಗುಣಮಟ್ಟದ ಗ್ಯಾಸ್ ಗೀಸರ್ ಕೂಡ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಹೀಗಾಗಿ ಗ್ಯಾಸ್ ಗೀಸರ್ನಿಂದ ಜನರು ಎಚ್ಚರ ವಹಿಸಬೇಕಿದೆ. ಈ ಗ್ಯಾಸ್ ಗೀಸರ್ಗಳನ್ನು ಹೆಚ್ಚಾಗಿ ಸ್ನಾನದ ಮನೆಯಲ್ಲಿ ಅಳವಡಿಸಲಾಗುತ್ತದೆ. ಅಗ್ಗದ ಕಳಪೆ ಗುಣಮಟ್ಟದ ಗ್ಯಾಸ್ ಗೀಸರ್ ದಿನದಿಂದ ದಿನಕ್ಕೆ ಸೈಲೆಂಟ್ ಕಿಲ್ಲರ್ ಆಗುತ್ತಿದೆ.
ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಮಹಾನಗರಗಳಲ್ಲಿ ಜನರು ಆಧುನಿಕ ಜೀವನಕ್ಕೆ ಹೊಂದಿಕೊಳ್ಳಲು ಜೀವನ ಶೈಲಿಯನ್ನ ಬದಲಾಯಿಸಿಕೊಳ್ಳುತ್ತಿದ್ದಾರೆ. ಅದು ಉಡುಗೆ-ತೊಡುಗೆಯಿಂದ ಹಿಡಿದು ಸ್ನಾನದ ಗೃಹದವರೆಗೂ ಆಧುನಿಕ ಜೀವನದ ಮೊರೆ ಹೋಗುತ್ತಿದ್ದಾರೆ. ಅಂತಹ ಜೀವನ ಶೈಲಿ ಜನರ ಜೀವಕ್ಕೆ ಕುತ್ತು ತರುತ್ತಿದೆ. ಇತ್ತೀಚೆಗೆ ರಾಜಧಾನಿಯಲ್ಲಿ ಗ್ಯಾಸ್ ಗೀಸರ್ನಿಂದ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಸ್ನಾನದ ಗೃಹಕ್ಕೆ ಸ್ನಾನ ಮಾಡಲು ಅಂತಾ ಹೋದವರು ಶವವಾಗಿ ಬರುತ್ತಿದ್ದಾರೆ. ಇದಕ್ಕೆ ಕಾರಣ ಗ್ಯಾಸ್ ಗೀಸರ್.
ಇದನ್ನೂ ಓದಿ: ಬೆಂಗಳೂರು: ಗ್ಯಾಸ್ ಗೀಸರ್ನಿಂದ ವಿಷಾನಿಲ ಸೋರಿಕೆ; ತಾಯಿ, ಮಗ ಸಾವು
ದಿನದಿಂದ ದಿನಕ್ಕೆ ಗ್ಯಾಸ್ ಗೀಸರ್ ಸೈಲೆಂಟ್ ಕಿಲ್ಲರ್ ಆಗುತ್ತಿದ್ದು, ಕಳಪೆ ಗುಣಮಟ್ಟದ ಗ್ಯಾಸ್ ಗೀಸರ್ ಅನ್ನು ಜನರು ಬಳಕೆ ಮಾಡುತ್ತಿದ್ದು, ಇದರಿಂದ ಹೊರ ಬರುವ ಕಾರ್ಬೋಹೈಡ್ರೇಟ್ ಶ್ವಾಸಕೋಶಕ್ಕೆ ಸೇರಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಾರ್ಬೋಹೈಡ್ರೇಟ್ಗೆ ಯಾವುದೇ ಬಣ್ಣ, ರುಚಿ, ವಾಸನೆ ಇಲ್ಲದೆ ಇರುವುದರಿಂದ ಇದು ಲೀಕ್ ಆಗಿ ಮಾನವನ ಶ್ವಾಸಕೋಶ ಸೇರುವುದು ಕೂಡ ಗೊತ್ತಾಗುವುದಲ್ಲಿ ಎನ್ನುತ್ತಾರೆ ತಜ್ಞರು. ಇತ್ತೀಚೆಗೆ ಗ್ಯಾಸ್ ಗೀಸರ್ ಲೀಕೇಜ್ನಿಂದ ಸಾವನ್ನಪ್ಪುತ್ತಿರುವ ಪ್ರಕರಣ ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ.
ಈ ವರ್ಷ 15ಕ್ಕೂ ಹೆಚ್ಚು ಕೇಸ್
ಎರಡು ದಿನದ ಹಿಂದೆ ಅಂದರೆ ಡಿಸೆಂಬರ್ 08ರಂದು ಗೋವಿಂದರಾಜ ನಗರದ ನಿವಾಸಿ ತಾಯಿ ಚಾಂದಿನಿ (26) ಹಾಗೂ 4 ವರ್ಷದ ಮಗ ಮಧ್ಯಾಹ್ನ ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥರಾಗಿದ್ದರು. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಒಟ್ಟಿಗೆ ಸ್ನಾನ ಮಾಡಲು ಬಾತ್ ರೂಮ್ಗೆ ಹೋಗಿದ್ದ ಅಕ್ಕ ತಂಗಿ ದುರಂತ ಸಾವು: ಆಗಿದ್ದೇನು?
ಡಿಸೆಂಬರ್ 01ರಂದು ಬೆಂಗಳೂರಿನ ತೋಟದ ಗುಡ್ಡದಹಳ್ಳಿ ನಿವಾಸಿ ಭೂಮಿಕಾ ಕೂಡ ಗ್ಯಾಸ್ ಗೀಜರ್ ಸೋರುವಿಕೆಯಿಂದಾಗಿ ಸಾವಿಗೆ ತುತ್ತಾಗಿದ್ದರು. ನವೆಂಬರ್ 25ರಂದು ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಮನೆಯೊಂದರಲ್ಲಿ ಸ್ನಾನಕ್ಕೆ ಹೋದ ಸಹೋದರಿಯರು ಗ್ಯಾಸ್ ಗೀಸರ್ ಸೋರಿಕೆಯಿಂದ ದುರಂತ ಅಂತ್ಯ ಕಂಡಿದ್ದರು.
ಮುನ್ನೆಚ್ಚರಿಕಾ ಕ್ರಮಗಳೇನು?
- ಒಳ್ಳೆಯ ಗುಣಮಟ್ಟದ ಗೀಜರ್ ಬಳಕೆ ಮಾಡಬೇಕು.
- ಗೀಜರ್ ಆನ್ ಮಾಡಿಕೊಂಡು ಸ್ನಾನ ಬೇಡ, ಕಿಟಕಿ ಓಪನ್ ಇರಬೇಕು.
- ಸ್ನಾನ ಗೃಹದಲ್ಲಿ ಸಿಲಿಂಡರ್ ಇರಬಾರದು.
- ಕಾರ್ಬೋಹೈಡ್ರೇಟ್ ಸೋರಿಕೆಗೆ ಅಲಾರಂ ಬಳಕೆ ಮಾಡಬೇಕು.
ಒಟ್ಟಿನಲ್ಲಿ ಸ್ನಾನಕ್ಕೆ ಅಂತಾ ಹೋದವರು ಸಾವನ್ನಪ್ಪಿರುವಂತಹ ಪ್ರಕರಣ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದ್ದು, ಹೀಗಾಗಿ ಜನರು ಈ ಬಗ್ಗೆ ಆದಷ್ಟು ಎಚ್ಚರಿಕೆ ವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



