Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ: ರಸ್ತೆಗಳು ಜಲಾವೃತ, ವಾಹನ ಸವಾರರ ಪರದಾಟ

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸಂಜೆ ಮತ್ತು ರಾತ್ರಿ ಮಳೆಯಾಗುತ್ತಿದೆ. ಬುಧವಾರ ಸಂಜೆಯಿಂದ ಭಾರೀ ಮಳೆಯಾಗಿದ್ದು, ನಗರದ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ಬೆಂಗಳೂರಿನ ಶಾಂತಿನಗರ, ಜಯನಗರ, ಕೆ.ಆರ್. ಮಾರ್ಕೆಟ್ ಮುಂತಾದ ಪ್ರದೇಶಗಳಲ್ಲಿ ಮಳೆಯಾಗಿದೆ. ರಸ್ತೆ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.

ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ: ರಸ್ತೆಗಳು ಜಲಾವೃತ, ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಜಲಾವೃತಗೊಂಡ ರಸ್ತೆ
Follow us
Kiran Surya
| Updated By: ವಿವೇಕ ಬಿರಾದಾರ

Updated on: Apr 16, 2025 | 6:48 PM

ಬೆಂಗಳೂರು, ಏಪ್ರಿಲ್ 16: ಕಳೆದ ಎರಡ್ಮೂರು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಂಜೆ ಮತ್ತು ರಾತ್ರಿ ಗಾಳಿ ಸಹಿತ ಮಳೆಯಾಗುತ್ತಿದೆ. ಬುಧವಾರ (ಏ.16) ಸಂಜೆ ಬೆಂಗಳೂರಿನಲ್ಲಿ ಮತ್ತೆ ಮಳೆರಾಯನ (Rain) ಆರ್ಭಟ ಶುರುವಾಗಿದೆ. ನಗರದ ಶಾಂತಿನಗರ, ರಿಚ್ಮಂಡ್​ ಸರ್ಕಲ್, ಕಾರ್ಪೊರೇಷನ್, ಮೆಜೆಸ್ಟಿಕ್​, ಜಯನಗರ, ಕೆ.ಆರ್.ಮಾರ್ಕೆಟ್​, ಜೆ.ಪಿ.ನಗರ, ವಿಜಯನಗರ, ರಾಜಾಜಿನಗರ, ಮಹದೇವಪುರ, ಕೆ.ಆರ್​.ಪುರಂ, ಟಿನ್ ಫ್ಯಾಕ್ಟರಿ, ಮಾರತ​ಹಳ್ಳಿ ಸೇರಿದಂತೆ ನಗರದ ಹಲವೆಡೆ ಮಳೆ ಗಾಳಿ ಸಹಿತ ಮಳೆಯಾಗಿದೆ. ಭಾರಿ ಮಳೆಯಿಂದ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಯಿತು. ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು, ಕೆರೆಯಂತಗಿವೆ.

ನಗರದ ಹಲವು ರಸ್ತೆಗಳಲ್ಲಿ ನಿಂತ ಮಳೆ ನೀರು

ನಗರದ ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದು, ವಾಹನ ಸಂಚಾರ ನಿಧಾನಗತಿಯಲ್ಲಿರುತ್ತದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಿಂದ ಕಲಾಮಂದಿರ ಕಡೆಗೆ ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ ಟ್ರಾಫಿಕ್​ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ
Image
ಹಿಂಗಾರು ಮಳೆ ಜೋರು, ರಾಜಕೀಯ ಬಗ್ಗೆಯೂ ಬೊಂಬೆ ಯುಗಾದಿ ಭವಿಷ್ಯ!
Image
ಕರ್ನಾಟಕದ ಕರಾವಳಿಯ ಎಲ್ಲಾ ಜಿಲ್ಲೆಗಳು ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಮಳೆ
Image
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಹೆಚ್ಚಳ; ಹವಾಮಾನ ಇಲಾಖೆ
Image
ಇಂದಿನಿಂದ ಎರಡು ದಿನಗಳ ಕಾಲ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ

ಎಲ್ಲೆಲ್ಲಿ ನಿಧಾನಗತಿ ಸಂಚಾರ

ಕಸ್ತೂರಿ ನಗರ ಕಡೆಯಿಂದ ಎಮ್​ಎಮ್​ಟಿ ಜಂಕ್ಷನ್ (ಕೆ ಆರ್​ ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಎಂ.ಎಂ.ಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿರುವುದರಿಂದ ವೈಟ್‌ಫೀಲ್ಡ್‌, ಮಹದೇವಪುರ ಮತ್ತು ಕೆ ಆರ್ ಪುರ ಕಡೆಗೆ ಹೋಗುವ ವಾಹನಗಳು ನಿಧಾನಗವಾಗಿ ಸಂಚರಿಸಬೇಕೆಂದು ಟ್ರಾಫಿಕ್​ ಪೊಲೀಸರು ಮನವಿ ಮಾಡಿದ್ದಾರೆ.

ಕೆ ಆರ್ ಪುರ ಕಡೆಯಿಂದ ಹೊಸಕೋಟೆ ರಸ್ತೆ ಕಡೆಗೆ ಹೋಗುವ ಮಾರ್ಗದಲ್ಲಿ ಓಎಂ ಮುಖ್ಯರಸ್ತೆಯಲ್ಲಿ GRT U TURN ಹತ್ತಿರ ಮಳೆ ನೀರು ನಿಂತಿರುವುದರಿಂದ ಹೊಸಕೋಟೆ ಕಡೆಗೆ ಹೋಗುವ ವಾಹನಗಳ ನಿಧಾನಗತಿಯಲ್ಲಿ ಸಂಚರಿಸಬೇಕೆಂದು ಟ್ರಾಫಿಕ್​ ಪೊಲೀಸರು ಮನವಿ ಮಾಡಿದ್ದಾರೆ.

  • ಕಸ್ತೂರಿನಗರ ರಿಂಗ್ ರಸ್ತೆ ಗ್ರಾಂಡ್ ಸೀಸನ್ ಹೋಟೆಲ್ ಹತ್ತಿರ ಮಳೆಯಿಂದ ರಿಂಗ್ ರಸ್ತೆಯಲ್ಲಿ ನಿಧಾನವಾಗಿ ಸಂಚರಿಸಬೇಕು.
  • ಕಸ್ತೂರಿನಗರದಿಂದ ಹೆಬ್ಬಾಳ ಕಡೆಗೆ ನಿಧಾನವಾಗಿ ಸಂಚರಿಸಬೇಕು.
  • ರಾಮಮೂರ್ತಿನಗರದ ಅಂಡರ್‌ಪಾಸ್‌ನಿಂದ ಟಿನ್ ಫ್ಯಾಕ್ಟರಿ ಕಡೆಗೆ ನಿಧಾನವಾಗಿ ಸಂಚರಿಸಬೇಕು.
  • ಕಸ್ತೂರಿನಗರದಿಂದ ಹೆಬ್ಬಾಳ ಕಡೆಗೆ ನಿಧಾನವಾಗಿ ಸಂಚರಿಸಬೇಕು.
  • ರಾಮಮೂರ್ತಿನಗರದ ಅಂಡರ್‌ಪಾಸ್‌ನಿಂದ ಟಿನ್ ಫ್ಯಾಕ್ಟರಿ ಕಡೆಗೆ ನಿಧಾನವಾಗಿ ಸಂಚರಿಸಬೇಕು.
  • ರೈನ್‌ಬೋ ಆಸ್ಪತ್ರೆಯಿಂದ ಕಾರ್ತಿಕ್‌ನಗರ ಕಡೆಗೆ ನಿಧಾನವಾಗಿ ಸಂಚರಿಸಬೇಕು.
  • ಗುಂಜೂರಿನಿಂದ ವರ್ತೂರು ಕಡೆಗೆ ನಿಧಾನವಾಗಿ ಸಂಚರಿಸಬೇಕು.

ಇದನ್ನೂ ಓದಿ: ಇಂದು ಕೂಡ ಬೆಂಗಳೂರಿನಲ್ಲಿ ಮಳೆ, ಕರ್ನಾಟಕದಾದ್ಯಂತ ಹವಾಮಾನ ಹೇಗಿರಲಿದೆ?

ಬೆಂಗಳೂರಿನಲ್ಲಿ ಇನ್ನೂ 5 ದಿನ ಮಳೆ

ಮುಂದಿನ ಐದು ದಿನಗಳ ಕಾಲ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 16 ರಿಂದ ಏಪ್ರಿಲ್ 20ರ ತನಕ ಮಳೆಯಾಗಲಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ

ಮುಂದಿನ 3 ಗಂಟೆಗಳಲ್ಲಿ ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಗದಗ, ಕೊಪ್ಪಳ ಸೇರಿದಂತೆ ಒಂದು ಅಥವಾ ಎರಡು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹಾಗೇ, ದಕ್ಷಿಣ ಕರ್ನಾಟಕದ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಿಕ್ಕಿ ಬಲಗೈಯಲ್ಲಿದ್ದ ಗುಂಡನ್ನು ವೈದ್ಯರು ಹೊರತೆಗೆದಿದ್ದಾರೆ: ಜಗದೀಶ್
ರಿಕ್ಕಿ ಬಲಗೈಯಲ್ಲಿದ್ದ ಗುಂಡನ್ನು ವೈದ್ಯರು ಹೊರತೆಗೆದಿದ್ದಾರೆ: ಜಗದೀಶ್
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಪರಮೇಶ್ವರ್
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಪರಮೇಶ್ವರ್
ಮುಂಬೈನಲ್ಲಿ ದೇವಾಲಯ ಧ್ವಂಸ; ಸಾವಿರಾರು ಜೈನರಿಂದ ಪ್ರತಿಭಟನೆ
ಮುಂಬೈನಲ್ಲಿ ದೇವಾಲಯ ಧ್ವಂಸ; ಸಾವಿರಾರು ಜೈನರಿಂದ ಪ್ರತಿಭಟನೆ
ಸಮುದ್ರದಲ್ಲಿ 28 ಕಿಮೀ ಈಜಿದ ಹುಬ್ಬಳ್ಳಿ CPI
ಸಮುದ್ರದಲ್ಲಿ 28 ಕಿಮೀ ಈಜಿದ ಹುಬ್ಬಳ್ಳಿ CPI
ರಥೋತ್ಸವ ಅವಘಡದಲ್ಲಿ ಯಾರೂ ಗಾಯಗೊಳ್ಳದಿರುವುದೇ ಪವಾಡ
ರಥೋತ್ಸವ ಅವಘಡದಲ್ಲಿ ಯಾರೂ ಗಾಯಗೊಳ್ಳದಿರುವುದೇ ಪವಾಡ
ಶಿವಕುಮಾರ್ ಟೀಕಿಸಿದ್ದಕ್ಕೆ ಮುನಿರತ್ನ ಸಾಕಷ್ಟು ಅನುಭವಿಸಿದ್ದಾರೆ: ಗಣಿಗ
ಶಿವಕುಮಾರ್ ಟೀಕಿಸಿದ್ದಕ್ಕೆ ಮುನಿರತ್ನ ಸಾಕಷ್ಟು ಅನುಭವಿಸಿದ್ದಾರೆ: ಗಣಿಗ
ಆಗ ಅಹಿಂದ ಅಯ್ತು ಈಗ ಜಾತಿ ಗಣತಿ ವರದಿಯ ಸರದಿ: ಪ್ರತಾಪ್ ಸಿಂಹ
ಆಗ ಅಹಿಂದ ಅಯ್ತು ಈಗ ಜಾತಿ ಗಣತಿ ವರದಿಯ ಸರದಿ: ಪ್ರತಾಪ್ ಸಿಂಹ
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಬಂತು ಇಕೋಫಿಕ್ಸ್ ತಂತ್ರಜ್ಞಾನ
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಬಂತು ಇಕೋಫಿಕ್ಸ್ ತಂತ್ರಜ್ಞಾನ
ಚುನಾಯಿತ ಪ್ರತಿನಿಧಿಗಳು ಶಿವಕುಮಾರ್​ರನ್ನು ಭೇಟಿಯಾಗುವುದು ತಪ್ಪಲ್ಲ: ಸಂಸದ
ಚುನಾಯಿತ ಪ್ರತಿನಿಧಿಗಳು ಶಿವಕುಮಾರ್​ರನ್ನು ಭೇಟಿಯಾಗುವುದು ತಪ್ಪಲ್ಲ: ಸಂಸದ
ಕಳೆದ ವರ್ಷಕ್ಕಿಂತ ಈ ವರ್ಷ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ: ಪರಮೇಶ್ವರ್
ಕಳೆದ ವರ್ಷಕ್ಕಿಂತ ಈ ವರ್ಷ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ: ಪರಮೇಶ್ವರ್