AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಬೆಂಗಳೂರಲ್ಲಿ ಕೆಫೆ ತೆರೆದ ಸ್ನೇಹಿತರು!

ಭಾರತದ ಪ್ರತಿಷ್ಠಿತ ಐಐಟಿ ಖರಗ್‌ಪುರ ಮತ್ತು ಐಐಎಂ ಬೆಂಗಳೂರು ಸಂಸ್ಥೆಗಳಲ್ಲಿ ಓದಿ, ಅಮೆರಿಕದ ಲಕ್ಸುರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸ್ನೇಹಿತರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನಲ್ಲಿ ಸ್ವಂತ ಕೆಫೆ ಆರಂಭಿಸಿದ್ದಾರೆ. ಕಾರ್ಪೊರೇಟ್ ಜಗತ್ತಿನ ಕೋಟ್ಯಂತರ ರೂಪಾಯಿ ಸಂಬಳದ ಆಫರ್ ಬಿಟ್ಟು, ಉದ್ಯಮಶೀಲತೆಯ ಹಾದಿ ಹಿಡಿದ ಈ ಯುವಕರ ಸಾಹಸದ ಕಥೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಅಮೆರಿಕದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಬೆಂಗಳೂರಲ್ಲಿ ಕೆಫೆ ತೆರೆದ ಸ್ನೇಹಿತರು!
ಅಮೆರಿಕದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಬೆಂಗಳೂರಲ್ಲಿ ಕೆಫೆ ತೆರೆದ ಸ್ನೇಹಿತರು!
ಭಾವನಾ ಹೆಗಡೆ
|

Updated on: Jun 01, 2026 | 1:04 PM

Share

ಬೆಂಗಳೂರು, ಜೂನ್ 01: ಕೈಯಲ್ಲಿ ದೇಶದ ಪ್ರತಿಷ್ಠಿತ ಐಐಟಿ (IIT) ಮತ್ತು ಐಐಎಂ (IIM) ಪದವಿಗಳು, ಅಮೆರಿಕದ ಪ್ರಸಿದ್ಧ ಕಂಪನಿಯಲ್ಲಿ ಕೈತುಂಬಾ ಸಂಬಳ ತಂದುಕೊಡುವ ಉದ್ಯೋಗ, ಐಷಾರಾಮಿ ಜೀವನ ಹೀಗೆ ಎಲ್ಲವೂ ಇದ್ದರೂ, ಅವೆಲ್ಲವನ್ನೂ ಬಿಟ್ಟು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಂತ ಕೆಫೆ (Cafe) ಆರಂಭಿಸುವ ಮೂಲಕ ಇಬ್ಬರು ಸ್ನೇಹಿತರು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.

ಮುಖ್ಯಾಂಶಗಳು

  • ಐಐಟಿ ಖರಗ್‌ಪುರ ಹಾಗೂ ಐಐಎಂ ಬೆಂಗಳೂರು ಪದವೀಧರರಿಂದ ಸ್ವಂತ ಉದ್ಯಮದ ಸಾಹಸ.
  • ಅಮೆರಿಕದ ಪ್ರತಿಷ್ಠಿತ ಕಾರ್ಪೊರೇಟ್ ಕಂಪನಿಯ ಉದ್ಯೋಗ ತೊರೆದು ಬೆಂಗಳೂರಿಗೆ ಮರಳಿದ ಸ್ನೇಹಿತರು.
  • ಸಿಲಿಕಾನ್ ಸಿಟಿಯಲ್ಲಿ ಹೊಸ ಕೆಫೆ ಆರಂಭಿಸಿದ ಯುವಕರ ಕಥೆ ನೆಟ್ಟಿಗರ ಮನಗೆದ್ದಿದೆ.

ಸ್ಟಾರ್ಟ್‌ಅಪ್ ಹಬ್‌ನಲ್ಲಿ ಹೊಸ ಸಾಹಸ

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಐಐಟಿ ಖರಗ್‌ಪುರ (IIT Kharagpur) ಮತ್ತು ಐಐಎಂ ಬೆಂಗಳೂರು (IIM Bangalore) ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದ ಇಬ್ಬರು ಯುವಕರು ಅಮೆರಿಕದ ಪ್ರಸಿದ್ಧ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ರೆಸ್ಯೂಮೆ (CV) ನೋಡಿದರೆ ಯಾವುದೇ ದೊಡ್ಡ ಕಂಪನಿಯಾದರೂ ತಕ್ಷಣ ಕೋಟ್ಯಂತರ ರೂಪಾಯಿ ಪ್ಯಾಕೇಜ್ ನೀಡಲು ಸಿದ್ಧವಿತ್ತು. ಆದರೆ, ಈ ಯುವಕರು ಕೇವಲ ಸಂಬಳದ ಗುಲಾಮರಾಗಿರಲು ಬಯಸಲಿಲ್ಲ. ಕಾರ್ಪೊರೇಟ್ ಬದುಕಿಗೆ ಬೈ ಹೇಳಿದ ಈ ಜೋಡಿ, ತಮ್ಮದೇ ಆದ ಉದ್ಯಮ ಆರಂಭಿಸಲು ನಿರ್ಧರಿಸಿ ಬೆಂಗಳೂರಿಗೆ ಮರಳಿತು

ಪ್ರಸ್ತುತ ಈ ಇಬ್ಬರು ಸ್ನೇಹಿತರು ಬೆಂಗಳೂರಿನಲ್ಲಿ ಸ್ವಂತ ಕೆಫೆಯೊಂದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇವರ ಈ ಯಶೋಗಾಥೆಯು ಲಿಂಕ್ಡ್‌ಇನ್ (LinkedIn) ಹಾಗೂ ಎಕ್ಸ್ (X) ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ

ಸಾಮಾನ್ಯವಾಗಿ ಐಐಟಿ-ಐಐಎಂ ಪದವೀಧರರು ದೊಡ್ಡ ತಂತ್ರಜ್ಞಾನ ಕಂಪನಿಗಳು ಅಥವಾ ಹಣಕಾಸು ಸಂಸ್ಥೆಗಳ ಮುಖ್ಯಸ್ಥರಾಗಲು ಬಯಸುತ್ತಾರೆ. ಆದರೆ, ಈ ಯುವಕರು ತಳಮಟ್ಟದಿಂದ ಆಹಾರ ಉದ್ಯಮದಲ್ಲಿ ಹೊಸದೇನನ್ನಾದರೂ ಸಾಧಿಸಲು ಹೊರಂತಿರುವುದು ನೆಟ್ಟಿಗರ ಗಮನ ಸೆಳೆದಿದೆ. ನಿಮ್ಮ ಕನಸನ್ನು ಬೆನ್ನಟ್ಟುವುದು ಸುಲಭವಲ್ಲ, ಅದಕ್ಕೆ ಅಪಾರ ಧೈರ್ಯ ಬೇಕು ಎಂದು ಹಲವರು ಇವರ ನಿರ್ಧಾರವನ್ನು ಕೊಂಡಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Bhavana Hegde
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More