AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಯೆಲ್ಲೋ ಲೈನ್ ವಿಳಂಬದಿಂದ ಬಿಎಂಟಿಸಿಗೆ ಲಾಭ! ನಾನ್ ಸ್ಟಾಪ್ ಬಸ್​ಗಳಿಗೆ ಭರ್ಜರಿ ಬೇಡಿಕೆ

ನಮ್ಮ ಮೆಟ್ರೋ ಯೆಲ್ಲೋ ಲೈನ್ ಮಾರ್ಗ ಉದ್ಘಾಟನೆಗೆ ಕಾಲವೇ ಕೂಡಿ ಬರುತ್ತಿಲ್ಲ. ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಿಎಂಟಿಸಿ, ಈ ಮಾರ್ಗಕ್ಕೆ ಭರ್ಜರಿ ಯೋಜನೆ ರೂಪಿಸಿ, ಹೆಚ್ಚು ಪ್ರಯಾಣಿಕರನ್ನು ಸೆಳೆಯುತ್ತಿದೆ. ಅದ್ಹೇಗೆ? ಅದೇನು ಯೋಜನೆ? ಇಲ್ಲಿದೆ ವಿವರ.

ಮೆಟ್ರೋ ಯೆಲ್ಲೋ ಲೈನ್ ವಿಳಂಬದಿಂದ ಬಿಎಂಟಿಸಿಗೆ ಲಾಭ! ನಾನ್ ಸ್ಟಾಪ್ ಬಸ್​ಗಳಿಗೆ ಭರ್ಜರಿ ಬೇಡಿಕೆ
ಬಿಎಂಟಿಸಿ ನಾನ್ ಸ್ಟಾಪ್ ಎಕ್ಸ್​ಪ್ರೆಸ್ ಬಸ್
Kiran Surya
| Updated By: Ganapathi Sharma|

Updated on: Jul 02, 2025 | 7:19 AM

Share

ಬೆಂಗಳೂರು, ಜುಲೈ 2: ಮೆಟ್ರೋ ಯೆಲ್ಲೋ (Namma Metro Yellow Line) ಮಾರ್ಗ ಉದ್ಘಾಟನೆ ಯಾವಾಗ ಎಂಬ ಸ್ಪಷ್ಟತೆ ಇನ್ನೂ ಇದ್ದ ಹಾಗೇ ಕಾಣಿಸುತ್ತಿಲ್ಲ. ಜನ ಕೂಡ ಈ ಬಗ್ಗೆ ನಂಬಿಕೆ ಬಿಟ್ಟಿದ್ದಾರೆ. ಆದರೆ, ಬಿಎಂಟಿಸಿ (BMTC) ಇದರ ಉಪಯೋಗ ಪಡೆಯಲು ಮುಂದಾಗಿದೆ. ಅದು ಕೂಡ ಹೊಸ ರೀತಿಯ ಬಸ್ ಮಾರ್ಗ ಪರಿಚಯಿಸುವ ಮೂಲಕ. ಹನ್ನೆರಡು ದಿನದ ಹಿಂದಷ್ಟೇ ಬಿಎಂಟಿಸಿ ಬೆಂಗಳೂರಿಗರ ಸಮಯ ಉಳಿತಾಯದ ಕಾರಣ ಹೊಸ ವೇಗದೂತ ಬಸ್​​​ಗಳನ್ನು ಪರಿಚಯ ಮಾಡಿತ್ತು. ಸಾಮಾನ್ಯ ಬಸ್ ದರದಲ್ಲಿ ನಗರದ ಆಯ್ದ ಪ್ರದೇಶಗಳಿಗೆ ವೇಗದೂತ ಬಸ್​​ಗಳ ಸಂಪರ್ಕ ಒದಗಿಸಲು ಮುಂದಾಗಿತ್ತು. ಅಂದರೆ, ಒಂದು ಕಡೆಯಿಂದ ತಲುಪಬೇಕಿರುವ ಮತ್ತೊಂದು ಸ್ಥಳಕ್ಕೆ ಕೇವಲ ಎರಡ್ಮೂರು ಸ್ಟಾಪ್ ಮಾತ್ರ ಕೊಟ್ಟು, ಎರಡೂವರೆ ಗಂಟೆ ಸಮಯದ ಪ್ರಯಾಣವನ್ನು ಕೇವಲ 40 ನಿಮಿಷಕ್ಕೆ ಇಳಿಸುವ ಮೂಲಕ ವೇಗದ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿತ್ತು.

ಅದರಲ್ಲಿ ಯಾವಾಗಲೂ ಟ್ರಾಫಿಕ್, ಹೆಚ್ಚು ಜನಸಂದಣಿ‌ ಇರುವ ಪ್ರದೇಶಗಳಾದ ನಮ್ಮ ಮೆಟ್ರೋದ ಉದ್ದೇಶಿತ ಯೆಲ್ಲೋ ಮಾರ್ಗ ಕೂಡ ಒಂದು. ಈ ಮಾರ್ಗದಲ್ಲಿ ಮೆಜೆಸ್ಟಿಕ್ ಟು ಅತ್ತಿಬೆಲೆ, ಬನಶಂಕರಿ ಟು ಅತ್ತಿಬೆಲೆ ಮಾರ್ಗಕ್ಕೆ ನಿತ್ಯ ನಾನ್ ಸ್ಟಾಪ್ 343 ಟ್ರಿಪ್ ಸೇವೆ ಒದಗಿಸುವ ಮೂಲಕ ಬಿಎಂಟಿಸಿ ಜನರಿಗೆ ನೆರವಾಗಿದೆ. ಇದರಿಂದ ಮೆಟ್ರೋ ಇಲ್ಲದೆ, ಸಾಮಾನ್ಯ ಬಸ್​ನಲ್ಲಿ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗದ ಐಟಿ ಉದ್ಯೋಗಿಗಳಿಗೆ ಪ್ರಯೋಜನವಾಗಿದೆ. ಈ ಮೂಲಕ ಬಿಎಂಟಿಸಿ ಯೆಲ್ಲೋ ಲೈನ್ ಮೆಟ್ರೋ ಇಲ್ಲ ಅನ್ನುವ ಕೊರಗು ನೀಗಿಸುವ ಜೊತೆಗೆ, ಕಡಿಮೆ ಸಮಯದ ಪ್ರಯಾಣದ ಮೂಲಕ ಜನರನ್ನು ಆಕರ್ಷಣೆ ಮಾಡುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಖಾಡಕ್ಕಿಳಿದ ಆರ್​​ಟಿಓ ಅಧಿಕಾರಿಗಳು: ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಆಟೋಗಳು ಸೀಜ್

ಇದನ್ನೂ ಓದಿ
Image
ಬೆಂಗಳೂರು: ದುಪ್ಪಟ್ಟು ದರ ವಸೂಲಿ ಮಾಡಿದ್ದ 56 ಆಟೋ ಸೀಜ್, 183 ಕೇಸ್
Image
ಗೋ ಸಾಗಾಣೆ ವಾಹನ ಹಿಡಿದು ಠಾಣೆಗೆ ತಂದರೂ ನಿರ್ಲಕ್ಷ್ಯ: PSI ಸಸ್ಪೆಂಡ್
Image
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್
Image
ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಗುಡ್​ ನ್ಯೂಸ್

ಎಕ್ಸ್​ಪ್ರೆಸ್ ಮಾರ್ಗ ಆರಂಭವಾದ ಹದಿನೈದು ದಿನಕ್ಕೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದ್ದು, ಇಲ್ಲಿಯವರೆಗೆ ಎರಡು ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಈ ಎಕ್ಸ್​ಪ್ರೆಸ್ ಬಸ್​ಗಳಲ್ಲಿ ಪ್ರತಿದಿನ 13 ರಿಂದ 14 ಸಾವಿರ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, 48 ಬಸ್ಸುಗಳಿಂದ 343 ಟ್ರಿಪ್ ಮಾಡಲಾಗ್ತಿದೆ. ಈ ಬಸ್ ಸೇವೆ ಬಗ್ಗೆ ಪ್ರಯಾಣಿಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ
ರಸ್ತೆ ಗುಂಡಿ, ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಮತ್ತಷ್ಟು ಅವ್ಯವಸ್ಥೆ ಬಯಲು
ರಸ್ತೆ ಗುಂಡಿ, ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಮತ್ತಷ್ಟು ಅವ್ಯವಸ್ಥೆ ಬಯಲು
ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸುಪ್ರೀಂಗೆ ಅರ್ಜಿ
ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸುಪ್ರೀಂಗೆ ಅರ್ಜಿ