AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಯೆಲ್ಲೋ ಲೈನ್ ವಿಳಂಬದಿಂದ ಬಿಎಂಟಿಸಿಗೆ ಲಾಭ! ನಾನ್ ಸ್ಟಾಪ್ ಬಸ್​ಗಳಿಗೆ ಭರ್ಜರಿ ಬೇಡಿಕೆ

ನಮ್ಮ ಮೆಟ್ರೋ ಯೆಲ್ಲೋ ಲೈನ್ ಮಾರ್ಗ ಉದ್ಘಾಟನೆಗೆ ಕಾಲವೇ ಕೂಡಿ ಬರುತ್ತಿಲ್ಲ. ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಿಎಂಟಿಸಿ, ಈ ಮಾರ್ಗಕ್ಕೆ ಭರ್ಜರಿ ಯೋಜನೆ ರೂಪಿಸಿ, ಹೆಚ್ಚು ಪ್ರಯಾಣಿಕರನ್ನು ಸೆಳೆಯುತ್ತಿದೆ. ಅದ್ಹೇಗೆ? ಅದೇನು ಯೋಜನೆ? ಇಲ್ಲಿದೆ ವಿವರ.

ಮೆಟ್ರೋ ಯೆಲ್ಲೋ ಲೈನ್ ವಿಳಂಬದಿಂದ ಬಿಎಂಟಿಸಿಗೆ ಲಾಭ! ನಾನ್ ಸ್ಟಾಪ್ ಬಸ್​ಗಳಿಗೆ ಭರ್ಜರಿ ಬೇಡಿಕೆ
ಬಿಎಂಟಿಸಿ ನಾನ್ ಸ್ಟಾಪ್ ಎಕ್ಸ್​ಪ್ರೆಸ್ ಬಸ್
ಕಿರಣ್​ ಸೂರ್ಯ
| Edited By: |

Updated on: Jul 02, 2025 | 7:19 AM

Share

ಬೆಂಗಳೂರು, ಜುಲೈ 2: ಮೆಟ್ರೋ ಯೆಲ್ಲೋ (Namma Metro Yellow Line) ಮಾರ್ಗ ಉದ್ಘಾಟನೆ ಯಾವಾಗ ಎಂಬ ಸ್ಪಷ್ಟತೆ ಇನ್ನೂ ಇದ್ದ ಹಾಗೇ ಕಾಣಿಸುತ್ತಿಲ್ಲ. ಜನ ಕೂಡ ಈ ಬಗ್ಗೆ ನಂಬಿಕೆ ಬಿಟ್ಟಿದ್ದಾರೆ. ಆದರೆ, ಬಿಎಂಟಿಸಿ (BMTC) ಇದರ ಉಪಯೋಗ ಪಡೆಯಲು ಮುಂದಾಗಿದೆ. ಅದು ಕೂಡ ಹೊಸ ರೀತಿಯ ಬಸ್ ಮಾರ್ಗ ಪರಿಚಯಿಸುವ ಮೂಲಕ. ಹನ್ನೆರಡು ದಿನದ ಹಿಂದಷ್ಟೇ ಬಿಎಂಟಿಸಿ ಬೆಂಗಳೂರಿಗರ ಸಮಯ ಉಳಿತಾಯದ ಕಾರಣ ಹೊಸ ವೇಗದೂತ ಬಸ್​​​ಗಳನ್ನು ಪರಿಚಯ ಮಾಡಿತ್ತು. ಸಾಮಾನ್ಯ ಬಸ್ ದರದಲ್ಲಿ ನಗರದ ಆಯ್ದ ಪ್ರದೇಶಗಳಿಗೆ ವೇಗದೂತ ಬಸ್​​ಗಳ ಸಂಪರ್ಕ ಒದಗಿಸಲು ಮುಂದಾಗಿತ್ತು. ಅಂದರೆ, ಒಂದು ಕಡೆಯಿಂದ ತಲುಪಬೇಕಿರುವ ಮತ್ತೊಂದು ಸ್ಥಳಕ್ಕೆ ಕೇವಲ ಎರಡ್ಮೂರು ಸ್ಟಾಪ್ ಮಾತ್ರ ಕೊಟ್ಟು, ಎರಡೂವರೆ ಗಂಟೆ ಸಮಯದ ಪ್ರಯಾಣವನ್ನು ಕೇವಲ 40 ನಿಮಿಷಕ್ಕೆ ಇಳಿಸುವ ಮೂಲಕ ವೇಗದ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿತ್ತು.

ಅದರಲ್ಲಿ ಯಾವಾಗಲೂ ಟ್ರಾಫಿಕ್, ಹೆಚ್ಚು ಜನಸಂದಣಿ‌ ಇರುವ ಪ್ರದೇಶಗಳಾದ ನಮ್ಮ ಮೆಟ್ರೋದ ಉದ್ದೇಶಿತ ಯೆಲ್ಲೋ ಮಾರ್ಗ ಕೂಡ ಒಂದು. ಈ ಮಾರ್ಗದಲ್ಲಿ ಮೆಜೆಸ್ಟಿಕ್ ಟು ಅತ್ತಿಬೆಲೆ, ಬನಶಂಕರಿ ಟು ಅತ್ತಿಬೆಲೆ ಮಾರ್ಗಕ್ಕೆ ನಿತ್ಯ ನಾನ್ ಸ್ಟಾಪ್ 343 ಟ್ರಿಪ್ ಸೇವೆ ಒದಗಿಸುವ ಮೂಲಕ ಬಿಎಂಟಿಸಿ ಜನರಿಗೆ ನೆರವಾಗಿದೆ. ಇದರಿಂದ ಮೆಟ್ರೋ ಇಲ್ಲದೆ, ಸಾಮಾನ್ಯ ಬಸ್​ನಲ್ಲಿ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗದ ಐಟಿ ಉದ್ಯೋಗಿಗಳಿಗೆ ಪ್ರಯೋಜನವಾಗಿದೆ. ಈ ಮೂಲಕ ಬಿಎಂಟಿಸಿ ಯೆಲ್ಲೋ ಲೈನ್ ಮೆಟ್ರೋ ಇಲ್ಲ ಅನ್ನುವ ಕೊರಗು ನೀಗಿಸುವ ಜೊತೆಗೆ, ಕಡಿಮೆ ಸಮಯದ ಪ್ರಯಾಣದ ಮೂಲಕ ಜನರನ್ನು ಆಕರ್ಷಣೆ ಮಾಡುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಖಾಡಕ್ಕಿಳಿದ ಆರ್​​ಟಿಓ ಅಧಿಕಾರಿಗಳು: ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಆಟೋಗಳು ಸೀಜ್

ಇದನ್ನೂ ಓದಿ
Image
ಬೆಂಗಳೂರು: ದುಪ್ಪಟ್ಟು ದರ ವಸೂಲಿ ಮಾಡಿದ್ದ 56 ಆಟೋ ಸೀಜ್, 183 ಕೇಸ್
Image
ಗೋ ಸಾಗಾಣೆ ವಾಹನ ಹಿಡಿದು ಠಾಣೆಗೆ ತಂದರೂ ನಿರ್ಲಕ್ಷ್ಯ: PSI ಸಸ್ಪೆಂಡ್
Image
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್
Image
ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಗುಡ್​ ನ್ಯೂಸ್

ಎಕ್ಸ್​ಪ್ರೆಸ್ ಮಾರ್ಗ ಆರಂಭವಾದ ಹದಿನೈದು ದಿನಕ್ಕೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದ್ದು, ಇಲ್ಲಿಯವರೆಗೆ ಎರಡು ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಈ ಎಕ್ಸ್​ಪ್ರೆಸ್ ಬಸ್​ಗಳಲ್ಲಿ ಪ್ರತಿದಿನ 13 ರಿಂದ 14 ಸಾವಿರ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, 48 ಬಸ್ಸುಗಳಿಂದ 343 ಟ್ರಿಪ್ ಮಾಡಲಾಗ್ತಿದೆ. ಈ ಬಸ್ ಸೇವೆ ಬಗ್ಗೆ ಪ್ರಯಾಣಿಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Kiran Surya
Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಇನ್ನೂ ಹೆಚ್ಚಾಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ? ತಜ್ಞರು ಹೇಳೋದೇನು ನೋಡಿ
ಇನ್ನೂ ಹೆಚ್ಚಾಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ? ತಜ್ಞರು ಹೇಳೋದೇನು ನೋಡಿ
ಮಗ, ಸೊಸೆ-ಮೊಮ್ಮಕ್ಳು ಬೆಳಗಾಗೋದ್ರೊಳಗೆ ಸತ್ತೋದ್ರು: ತಾಯಿಯ ಕಣ್ಣೀರ ಮಾತು
ಮಗ, ಸೊಸೆ-ಮೊಮ್ಮಕ್ಳು ಬೆಳಗಾಗೋದ್ರೊಳಗೆ ಸತ್ತೋದ್ರು: ತಾಯಿಯ ಕಣ್ಣೀರ ಮಾತು
ದರ್ಶನ್ ಜಾಮೀನು ಅರ್ಜಿ ನಿರಾಕರಣೆಯಾಗಿದ್ದು ಒಳ್ಳೆಯದು: ವಕೀಲರ ವಿಶ್ಲೇಷಣೆ
ದರ್ಶನ್ ಜಾಮೀನು ಅರ್ಜಿ ನಿರಾಕರಣೆಯಾಗಿದ್ದು ಒಳ್ಳೆಯದು: ವಕೀಲರ ವಿಶ್ಲೇಷಣೆ
ಬಸ್ಸಿನಲ್ಲಿ ಮೊಬೈಲ್ ಕಳವು ತಡೆಯಲು ಈ ಯುವಕನ ಐಡಿಯಾ ಫಾಲೋ ಮಾಡಿ
ಬಸ್ಸಿನಲ್ಲಿ ಮೊಬೈಲ್ ಕಳವು ತಡೆಯಲು ಈ ಯುವಕನ ಐಡಿಯಾ ಫಾಲೋ ಮಾಡಿ
ಹುಟ್ಟುಹಬ್ಬಕ್ಕೆ ಸ್ಪೆಷಲ್​​ ಗಿಫ್ಟ್​: ರಂಗೋಲಿಯಲ್ಲಿ ಮೂಡಿದ ಡಿಕೆಶಿ
ಹುಟ್ಟುಹಬ್ಬಕ್ಕೆ ಸ್ಪೆಷಲ್​​ ಗಿಫ್ಟ್​: ರಂಗೋಲಿಯಲ್ಲಿ ಮೂಡಿದ ಡಿಕೆಶಿ
ಡಿ.ಕೆ. ಶಿವಕುಮಾರ್ ಜನ್ಮದಿನ: ವೇದಘೋಷದೊಂದಿಗೆ ಆಶೀರ್ವದಿಸಿದ ವಿದ್ವಾಂಸರು!
ಡಿ.ಕೆ. ಶಿವಕುಮಾರ್ ಜನ್ಮದಿನ: ವೇದಘೋಷದೊಂದಿಗೆ ಆಶೀರ್ವದಿಸಿದ ವಿದ್ವಾಂಸರು!
ಪೆಟ್ರೋಲ್​​, ಡೀಸೆಲ್ ದರ ಏರಿಕೆ ಬಗ್ಗೆ ಬೆಂಗಳೂರಿನಲ್ಲಿ ಜನ ಏನಂತಾರೆ ನೋಡಿ!
ಪೆಟ್ರೋಲ್​​, ಡೀಸೆಲ್ ದರ ಏರಿಕೆ ಬಗ್ಗೆ ಬೆಂಗಳೂರಿನಲ್ಲಿ ಜನ ಏನಂತಾರೆ ನೋಡಿ!
ಅಭಿಮಾನಿಗಳ ಜತೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಡಿಕೆ ಶಿ​ವಕುಮಾರ್
ಅಭಿಮಾನಿಗಳ ಜತೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಡಿಕೆ ಶಿ​ವಕುಮಾರ್
ವಿಜಯಪುರದಲ್ಲಿ ಭೀಕರ ದುರಂತ: ಮನೆ ಮೇಲ್ಛಾವಣಿ ಕುಸಿದು ನಾಲ್ವರು ಜೀವಂತ ಸಮಾಧಿ
ವಿಜಯಪುರದಲ್ಲಿ ಭೀಕರ ದುರಂತ: ಮನೆ ಮೇಲ್ಛಾವಣಿ ಕುಸಿದು ನಾಲ್ವರು ಜೀವಂತ ಸಮಾಧಿ
ಕೊನೆಯ ಓವರ್​ ರೋಚಕತೆ; ರೋಹಿತ್​​ಗೆ ತಿಲಕ್ ವರ್ಮ ವಿಶೇಷ ಗೌರವ
ಕೊನೆಯ ಓವರ್​ ರೋಚಕತೆ; ರೋಹಿತ್​​ಗೆ ತಿಲಕ್ ವರ್ಮ ವಿಶೇಷ ಗೌರವ