AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘರ್ಜಿಸಿದ ನಮ್ಮ ರಾಜ್ಯದ ಹೆಮ್ಮೆಯ ದೇಶಿ ತಳಿ ಮುಧೋಳ್ ಶ್ವಾನ

ದಾವಣಗೆರೆಯಲ್ಲಿ ಏಪ್ರಿಲ್ 7 ರಂದು ನಡೆದ 7ನೇ ವಾರ್ಷಿಕ ರಾಜ್ಯಮಟ್ಟದ ಡಾಗ್ ಮತ್ತು ಕ್ಯಾಟ್ ಶೋ ಅತ್ಯಂತ ಯಶಸ್ವಿಯಾಯಿತು. ಕರ್ನಾಟಕ, ಮಹಾರಾಷ್ಟ್ರ, ಕೇರಳ ಮುಂತಾದ ರಾಜ್ಯಗಳಿಂದ 200 ಕ್ಕೂ ಹೆಚ್ಚು ನಾಯಿಗಳು ಭಾಗವಹಿಸಿದವು. ವಿವಿಧ ತಳಿಯ ನಾಯಿಗಳು ಮತ್ತು ಬೆಕ್ಕುಗಳು ತಮ್ಮ ಸೌಂದರ್ಯ ಮತ್ತು ಚಲನವಲನಗಳಿಂದ ಎಲ್ಲರ ಗಮನ ಸೆಳೆದವು. ದೇಶಿಯ ಮುಧೋಳ್ ನಾಯಿಗಳಿಗೆ ಪ್ರತ್ಯೇಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಘರ್ಜಿಸಿದ ನಮ್ಮ ರಾಜ್ಯದ ಹೆಮ್ಮೆಯ ದೇಶಿ ತಳಿ ಮುಧೋಳ್ ಶ್ವಾನ
ದಾವಣಗೆರೆಯಲ್ಲಿ ನಾಯಿ ಸ್ಪರ್ಧೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ವಿವೇಕ ಬಿರಾದಾರ|

Updated on:Apr 07, 2025 | 11:02 PM

Share

ದಾವಣಗೆರೆ, ಏಪ್ರಿಲ್​ 07: ದಾವಣಗೆರೆ (Davangere) ನಗರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಲವ್ ಪೆಟ್ ಅಸೋಷಿಯೇಷನ್​ನಿಂದ ಸೋಮವಾರ (ಏ.07) ನಾಯಿ ಮತ್ತು ಬೆಕ್ಕು ಪ್ರದರ್ಶನ (Dog and Cat Show) ಹಾಗೂ ಸ್ಪರ್ಧೆ ಆಯೋಜಿಸಲಾಗುತ್ತಿತ್ತು. 7 ನೇ ಬಾರಿಯ ರಾಜ್ಯಮಟ್ಟದ ಶೋನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಸೇರಿದಂತೆ ಹಲವು ರಾಜ್ಯಗಳಿಂದ ವಿವಿಧ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿವೆ.

ಡಾಬರ್ ಮೆನ್, ಜರ್ಮನ್ ಶಫರ್ಡ, ರೂಬಿ, ಫಮೆರಿಯನ್, ಫಗ್, ರೆಟ್ರಿವರ್ ಸೇರಿದಂತೆ ದೇಶಿಯ ಮುಧೋಳು ಶ್ವಾನ ಸೇರಿದಂತೆ ಹಲವು ತಳಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಇದರಲ್ಲಿ ಒಂದು ವರ್ಷದೊಳಗೆ ಮತ್ತು ನಂತರ ಹೀಗೆ ವಿವಿಧ ಹಂತಗಳ ಶ್ವಾನಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಶೋನಿಂದ ಮನರಂಜನೆ ಮತ್ತು ಉದ್ಯಮ ಬಗ್ಗೆ ಜನರಲ್ಲಿ ಆಸಕ್ತಿ, ಆಕರ್ಷಣೆ ಬರಲೆಂದು ಆಯೋಜಿಸಲಾಗಿದೆ ಎಂದು ಪೆಟ್ ಅಸೋಸಿಯೇಷನ್ ಹೇಳಿದೆ.

ವಿಶೇಷ ಎಂದರೆ ಈ ಬಾರಿ ಬೀದಿ ನಾಯಿಗಳನ್ನು ಸಾಕುತ್ತಿರುವ ಮಾಲೀಕರಿಗೂ ಕೂಡ ಅವಕಾಶ ನೀಡಲಾಗಿತ್ತು. ಅವುಗಳ ಪ್ರದರ್ಶನವನ್ನೂ ಕೂಡ ಆಯೋಜಿಸಲಾಗಿತ್ತು. ಅದರಲ್ಲೂ ದೇಶಿಯ ತಳಿ ನಮ್ಮ ರಾಜ್ಯದ ಹೆಮ್ಮೆಯ ನಾಯಿಗಳಾದ ಮುಧೋಳ ನಾಯಿಗಳಿಗೆ ಪ್ರತ್ಯೇಕವಾದ ಸ್ಪರ್ಧೆ ಆಯೋಜಿಸಲಾಗಿತ್ತು. ನೆರೆದಿರುವ ಜನರು ಮುಧೋಳ ನಾಯಿಗಳನ್ನು ನೋಡಿ‌ ಫುಲ್ ಫಿಧಾ ಆಗಿದ್ದಾರೆ. ದೇಶಿ ತಳಿಗಳ ಸ್ಪರ್ಧೆಯಲ್ಲಿ ಮುಧೋಳ್ ನಾಯಿಗೆ ಪ್ರಥಮ ಸ್ಥಾನ ಸಿಕ್ಕಿದ್ದು ವಿಶೇಷವಾಗಿದೆ. ಇಂಥ ಪ್ರದರ್ಶನದಿಂದ ತುಂಬಾ ಖುಷಿಯಾಗಿದೆ ಹತ್ತಾರು ಬಗೆಯ ಸಾಕು ಪ್ರಾಣಿ ಶ್ವಾನ ಹಾಗೂ ಬೆಕ್ಕುಗಳನ್ನ ನೋಡಲು ಉತ್ತಮ ವೇದಿಕೆ ಎಂದು ಪ್ರಾಣಿ ಪ್ರಿಯರು ಹೇಳಿದರು.

ಇದನ್ನೂ ಓದಿ
Image
ದಾವಣಗೆರೆಯಲ್ಲೊಂದು ಅಮಾನುಷ ಕೃತ್ಯ: ಮರಕ್ಕೆ ಕಟ್ಟಿ ಚಿತ್ರಹಿಂಸೆ
Image
ಎಚ್ಚರ: ಬುರ್ಖಾ ಧರಿಸಿ ಬರ್ತಾರೆ, ಚಿನ್ನ-ಬೆಳ್ಳಿ ಎಗರಿಸಿ ಪರಾರಿಯಾಗ್ತಾರೆ!
Image
ಜಾತ್ರೆಗೆ ಬಂದಿದ್ದ ದಲಿತ ಮಹಿಳೆ ಮೇಲೆ ಬಸ್​ನಲ್ಲಿ ಲೈಂಗಿಕ ದೌರ್ಜನ್ಯ ಯತ್ನ
Image
ದಾವಣಗೆರೆ ಮಠದಲ್ಲಿದೆ ​ನಟ ಸುನಿಲ್​ ಶೆಟ್ಟಿ ಕಳುಹಿಸಿದ ರೋಬೋಟಿಕ್​ ಆನೆ

ವಿಡಿಯೋ ನೋಡಿ: ಹರಪನಹಳ್ಳಿ: ಒಂದೇ ಫಾರಂನಲ್ಲಿನ ಮೂರು ಸಾವಿರ ಕೋಳಿಗಳ ಸಾವು

ರಾಜ್ಯ ಹಾಗೂ ಹೊರ ರಾಜ್ಯದಿಂದ 200ಕ್ಕೆ ಹೆಚ್ಚು ಮುದ್ದಾದ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಶ್ವಾನಗಳು ತಮ್ಮ ಚಲನವಲನ, ಸೌಂದರ್ಯದಿಂದ ಎಲ್ಲರ ಗಮನ ಸೆಳೆದವು. ಈ ಅಪರೂಪದ ಶ್ವಾನ ಪ್ರದರ್ಶನಕ್ಕೆ ನೂರಾರು ಮಂದಿ ಸಾಕ್ಷಿಯಾದರು. ಈ ಪ್ರದರ್ಶನದಲ್ಲಿ ಭಾಗಹಿಸುವ ಮೂಲಕ ಸಖತ್ ಎಂಜಾಯ್ ಮಾಡಿದರು. ಹತ್ತಾರು ಬಗೆಯ ಶ್ವಾನ ನೋಡುವ ಮೂಲಕ ಖುಷಿಪಟ್ಟರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:54 pm, Mon, 7 April 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!