AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಗಭದ್ರಾ ನದಿಗೆ ಹೆಚ್ಚಿದ ನೀರಿನ‌ ಪ್ರಮಾಣ; ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಇಟ್ಟಿಗೆ ಭಟ್ಟಿಗಳು‌‌ ಜಲಾವೃತ

ಹತ್ತಾರು ದಶಕಗಳಿಂದ ಇಟ್ಟಿಗೆ ತಯಾರು ಮಾಡುವುದೇ ಇವರ ಕೆಲಸ. ಇದನ್ನೆ ನಂಬಿಕೊಂಡು ಸಾವಿರಾರು ಕುಟುಂಬಗಳು ಇಲ್ಲಿ ಗುಳೆ ಬರುವುದು ಸಹ ವಾಡಿಕೆ. ಆದರೀಗ ಮೇಲಾಗಿ ಮುಂಗಡ ಹಣ ಪಡೆದು ಇಟ್ಟಿಗೆ ಭಟ್ಟಿಯಲ್ಲಿ ದುಡಿಯುವ ಜನರ ಕೈಗೆ ಕೆಲಸವೇ ಇಲ್ಲ. ಮಾಡಿದ ಇಟ್ಟಿಗೆಗಳು ತುಂಗಭದ್ರೆಯಲ್ಲಿ ಕೊಚ್ಚಿಕೊಂಡು ಹೋಗುವ ಭೀತಿ ಸುರುವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ತುಂಗಭದ್ರಾ ನದಿಗೆ ಹೆಚ್ಚಿದ ನೀರಿನ‌ ಪ್ರಮಾಣ; ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಇಟ್ಟಿಗೆ ಭಟ್ಟಿಗಳು‌‌ ಜಲಾವೃತ
ದಾವಣಗೆರೆಯ ಹರಿಹರದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಇಟ್ಟಿಗೆ ಭಟ್ಟಿಗಳು‌‌ ಜಲಾವೃತ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 27, 2024 | 5:56 PM

ದಾವಣಗೆರೆ, ಜು.27: ಮಲೆನಾಡಿನಲ್ಲಿ ಮಳೆಯ ಆರ್ಭಟ ಶುರುವಾಗಿದ್ದು, ತುಂಗಭದ್ರಾ ನದಿ(Tungabhadra River)ಯಲ್ಲಿ ನೀರಿನ‌ ಪ್ರಮಾಣ ಹೆಚ್ಚಿದೆ. ಇದರಿಂದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಇಟ್ಟಿಗೆ ಭಟ್ಟಿಗಳು‌‌ ಜಲಾವೃತವಾಗಿವೆ. ಹೌದು, ದಾವಣಗೆರೆ ಜಿಲ್ಲೆಯ ಹರಿಹರ(Harihara) ತಾಲೂಕಿನ ಗುತ್ತೂರು ಬಳಿಯ ನೂರಾರು ಇಟ್ಟಿಗೆ ಭಟ್ಟಿಗಳು ಈಗ ಅಕ್ಷರಶ ಜಲಾವೃತವಾಗಿವೆ. ಭಟ್ಟಿಗಳಿಗೆ ನೀರು ನುಗ್ಗಿದ್ದರಿಂದ ಕೆಲಸವಿಲ್ಲದೇ ನೂರಾರು ಜನ ಕೂಲಿ ಕಾರ್ಮಿಕರು ಖಾಲಿ ಕುಳಿತಿದ್ದಾರೆ.

ಒಂದು ಇಟ್ಟಿಗೆಯ ಬೆಲೆ ಎಳರಿಂದ ಎಂಟು ರೂಪಾಯಿ ಆಗುತ್ತದೆ. ಒಂದು ರೀತಿಯಲ್ಲಿ ಪ್ರತಿ ಇಟ್ಟಿಗೆ ಹಿಂದೆ ಅಷ್ಟೆ ಪರಿಶ್ರಮ ಇದೆ. ಇಲ್ಲಿ ಸಿಗುವ ಮಣ್ಣು, ಮರಳು, ನೀರು ಉತ್ತಮ ಗುಣಮಟ್ಟದ್ದು. ಬೆಳಗಾವಿ ಸುವರ್ಣ ಸೌಧ ಕಟ್ಟಡಕ್ಕೂ ಇಲ್ಲಿಂದಲೇ ಮರಳು ಪೂರೈಕೆ ಆಗಿದ್ದು. ಇಂತಹ ಇಟ್ಟಿಗೆ ಭಟ್ಟಿಗಳು ಪ್ರವಾಹದಲ್ಲಿ ನೀರಿನ ಹೊಡೆತಕ್ಕೆ ಕೊಚ್ಚಿಕೊಂಡು ಹೋದರೆ ಎಂಬ ಭಯ ಶುರುವಾಗಿದೆ.

ಇದನ್ನೂ ಓದಿ:ಬೆಳಗಾವಿ: ಜಲಾವೃತವಾದ ಸೇತುವೆ ಮೇಲೆ ವಾಹನ ಸಂಚಾರ; ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ್

ಹರಿಹರದ ಗುತ್ತೂರು ಸೇರಿದಂತೆ ಹಲವಾರು ಗ್ರಾಮಗಳಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿ ಇಟ್ಟಿಗೆ ಭಟ್ಟಿಗಳಿದ್ದು, ಶತಮಾನಗಳಿಂದ‌ ಇಲ್ಲಿನ ಇಟ್ಟಿಗೆ ಭಟ್ಟಿಗಳು ಪ್ರಸಿದ್ದಿ ಪಡೆದಿವೆ. ಇದು ಬಡ ಜನರ ಕೈಗೆ ಕೆಲಸ ಕೊಡುವ ಮಹತ್ವದ ಉದ್ಯಮ‌ ಕೂಡ ಹೌದು. ಮಣ್ಣು, ನೀರು ಇಲ್ಲಿ ಲಭ್ಯ ಇದ್ದ ಹಿನ್ನೆಲೆ ನಿರಂತರವಾಗಿ ಇಲ್ಲಿ ಇಟ್ಟಿಗೆ ಸಿದ್ದವಾಗುತ್ತಲೇ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಹ ಬಂದು ಇಡಿ ಇಟ್ಟಿಗೆ ಭಟ್ಟಿ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

ಹೀಗೆ ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ವ್ಯಾಪ್ತಿಯಲ್ಲಿ ತುಂಗಭದ್ರಾ ನದಿ ಹರಿಯುತ್ತದೆ. ಇದರಿಂದ ನದಿ ಪಾತ್ರದ 67 ಗ್ರಾಮಗಳಿಗೆ ಪ್ರವಾಹದ ಭೀತಿ ಇದೆ. ಇದೀಗ ಇನ್ನೂ ಸಹ ಸಂಪೂರ್ಣವಾಗಿ ಸುಡದ ಇಟ್ಟಿಗೆಗಳು ಇದಾಗಿದ್ದು, ಭಟ್ಟಿಗೆ ನುಗ್ಗಿದ ನೀರು ಹಾಗೆ ಇದ್ದರೆ ಸಂಪೂರ್ಣ ಹಾನಿಯಾಗುತ್ತದೆ. ಹೀಗಾಗಿ ಕೋಟ್ಯಾಂತರ ರೂಪಾಯಿಯ ಇಟ್ಟಿಗೆ ಭಟ್ಟಿಗಳು ಹಾನಿಯಾಗುತ್ತಿದ್ದು, ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್