ವಯನಾಡು ಸಂತ್ರಸ್ತರಿಗೆ 8 ಟ್ರಕ್​ಗಳಲ್ಲಿ ಅಗತ್ಯ ವಸ್ತುಗಳ ರವಾನೆ: ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ ಚಾಲನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 10, 2024 | 7:59 PM

ಬಿಟಿಎಂ ವಿಧಾನಸಭಾ ಶಾಸಕರ ಕಛೇರಿಯಲ್ಲಿ ವಯನಾಡು ಮಳೆ ಪ್ರವಾಹದಲ್ಲಿ ಸಂತ್ರಸ್ತರಿಗೆ ಅಗತ್ಯವಾಗಿರುವ ದಿನಸಿ, ಅಗತ್ಯ ವಸ್ತುಗಳನ್ನು 8 ಟ್ರಕ್​ಗಳಲ್ಲಿ ರವಾನೆ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್​ ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

ವಯನಾಡು ಸಂತ್ರಸ್ತರಿಗೆ 8 ಟ್ರಕ್​ಗಳಲ್ಲಿ ಅಗತ್ಯ ವಸ್ತುಗಳ ರವಾನೆ: ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ ಚಾಲನೆ
ವಯನಾಡು ಸಂತ್ರಸ್ತರಿಗೆ 8 ಟ್ರಕ್​ಗಳಲ್ಲಿ ಅಗತ್ಯ ವಸ್ತುಗಳ ರವಾನೆ: ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ ಚಾಲನೆ
Follow us on

ಬೆಂಗಳೂರು, ಆಗಸ್ಟ್​ 10: ಬಿಟಿಎಂ ವಿಧಾನಸಭಾ ಶಾಸಕರ ಕಛೇರಿಯಲ್ಲಿ ವಯನಾಡು (Wayanad) ಮಳೆ ಪ್ರವಾಹದಲ್ಲಿ ಸಂತ್ರಸ್ತರಿಗೆ ಅಗತ್ಯವಾಗಿರುವ ದಿನಸಿ, ಅಗತ್ಯ ವಸ್ತುಗಳನ್ನು 8 ಟ್ರಕ್​ಗಳಲ್ಲಿ ರವಾನೆ ಕಾರ್ಯಕ್ರಮ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಮತ್ತು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಶಾಸಕಿ ಸೌಮ್ಯರೆಡ್ಡಿ ಹಸಿರು ನಿಶಾನೆ ತೋರುವ ಮೂಲಕ ಬೀಳ್ಕೊಡುಗೆ ನೀಡಿದರು. ಸ್ಥಳೀಯ ಕಾಂಗ್ರೆಸ್ ಮುಖಂಡರು, ಮಾಜಿ ಪಾಲಿಕೆ ಸದಸ್ಯರುಗಳು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಪ್ರಕೃತಿ ಮುಂದೆ ಮಾನವರ ಆಟ ನಡೆಯುವುದಿಲ್ಲ. ಮಳೆ ಪ್ರವಾಹ ಸಂಕಷ್ಟದಲ್ಲಿ ಸಾವಿರಾರು ಜನರು ಸಂಕಷ್ಟದಲ್ಲಿ ಇದ್ದಾರೆ. ಸಹಾಯ, ಸಹಕಾರ ನೀಡುವುದು ಪ್ರತಿಯೊಬ್ಬರ ಮಾನವೀಯತೆ ಧರ್ಮ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಖಂಡಿಸಿ ಬೀದಿಗಿಳಿದ ಕರ್ನಾಟಕದ ಜನತೆ: ಸೂಕ್ತ ಕ್ರಮಕ್ಕೆ ಆಗ್ರಹ

ರಾಜ್ಯ ಸರ್ಕಾರದಿಂದ ಕೇರಳ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡಲು ಸರ್ಕಾರ ಸಹಾಯ ಮಾಡುತ್ತಿದೆ. ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ 8 ಟ್ರಕ್​ಗಳಲ್ಲಿ ಅಗತ್ಯ ಇರುವ ವಸ್ತುಗಳು ರವಾನೆಯಾಗುತ್ತಿದೆ.  ಸರ್ಕಾರದ ಜೊತೆಯಲ್ಲಿ ಸಂಘ, ಸಂಸ್ಥೆಗಳ ಸಹಕಾರವಿದ್ದಾಗ ಸರ್ಕಾರ ಎಂತಹ ಕಷ್ಟ ಬಂದರು ಸುಲಭವಾಗಿ ಪರಿಹರಿಸಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ನಡೆಸಿದ್ದು ಜನಾಂದೋಲನ ಅಲ್ಲ ಧನಾಂದೋಲನ: ಪ್ರಲ್ಹಾದ್​ ಜೋಶಿ ವಾಗ್ದಾಳಿ

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕೇರಳ ವಯನಾಡುವಿನಲ್ಲಿ ಸಾವಿರಾರು ಜನರು ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಮಯದಲ್ಲಿ ರಾಜ್ಯದ ಪಕ್ಕದ ರಾಜ್ಯಕ್ಕೆ ನಾವು ಸಹಕಾರ ನೀಡಬೇಕು. ರಕ್ತದ ಬಣ್ಣ ಕೆಂಪು ಅದರಲ್ಲಿ ಜಾತಿ, ಭೇದಬಾವವಿಲ್ಲ. ನಾವು ಎಲ್ಲರೂ ಮನುಷ್ಯರೆ. ಮಾನವೀಯತೆ ಗುಣಗಳನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು ಇದರಿಂದ ಒಬ್ಬರ ಕಷ್ಟ. ಸುಖ ಎಲ್ಲವು ಅರ್ಥವಾಗುತ್ತದೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದರೆ ಅದೆ ದೇವರ ಕೆಲಸ ಮಾಡಿದಂತೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.