AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ತೆಕ್ಕೆಗೆ ಬಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ; ಚುನಾವಣೆಯ ಪ್ರಕ್ರಿಯೆ ಇಲ್ಲಿದೆ

ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ  ಚುನಾವಣೆ  ನಡೆದಿದ್ದು,  ಮಧ್ಯಾಹ್ನ 1.30ಕ್ಕೆ ಕೈ ಎತ್ತುವ ಮೂಲಕ ಮೇಯರ್ ಆಯ್ಕೆ ಪ್ರಕ್ರಿಯೆ ನಡೆದಿದೆ. ಬಿಜೆಪಿ ಅಭ್ಯರ್ಥಿ  ಈರೇಶ ಅಂಚಟಗೇರಿ ಮೇಯರ್ ಆಗಿ, ಉಮಾ ಮುಕುಂದ್ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ತೆಕ್ಕೆಗೆ ಬಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ; ಚುನಾವಣೆಯ ಪ್ರಕ್ರಿಯೆ ಇಲ್ಲಿದೆ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆImage Credit source: Hubballi
TV9 Web
| Updated By: ವಿವೇಕ ಬಿರಾದಾರ|

Updated on:May 28, 2022 | 4:01 PM

Share

ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎನಿಸಿಕೊಂಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (Hubli-Dharwad Municipal Corporation) ಮೇಯರ್, ಉಪ ಮೇಯರ್ ಚುನಾವಣೆ (Mayor, Deputy Mayor Election) ಇಂದು ನಡೆದಿದ್ದು, ನಿರೀಕ್ಷೆಯಂತೆ ಹು-ಧಾ ಗದ್ದುಗೆ ಬಿಜೆಪಿ ತಕ್ಕೆಗೆ ಬಿದ್ದಿದೆ. ಈ ಮಹಾನಗರ ಪಾಲಿಕೆ ಚುನಾವಣೆ ಇಷ್ಟೊಂದು ಸದ್ದು ಮಾಡಲು ಕಾರಣ ಏನು. ಈ ಮಹಾನಗರ ಪಾಲಿಕೆಯ ಬಲಾಬಲ ಏನು ಇಲ್ಲಿದೆ ಮಾಹಿತಿ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮೊದಲು 67 ವಾರ್ಡಗಳಿದ್ದವು. ನಂತರ ಕೆಲವು ವಾರ್ಡನಗಳನ್ನು ವಿಸ್ತೀರಣದ ಆಧಾರದ ಮೇಲೆ ಮರು ವಿಂಗಡಣೆ ಮಾಡಿದ್ದು, ಸದ್ಯ 82 ವಾರ್ಡಗಳಿದ್ದು, 8,11,537 ಮತದಾರರು ಇದ್ದಾರೆ. ಈ 82 ವಾರ್ಡಗಳಿಗೆ ಎಂಟು ತಿಂಗಳ ಹಿಂದೆ ಸೆಪ್ಟೆಂಬರ್ 3  2021 ರಲ್ಲಿ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ 420 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಎಲ್ಲ 82 ವಾರ್ಡ್‍ಗಳಲ್ಲಿ ಕಣದಲ್ಲಿದ್ದರು. ಜೆಡಿಎಸ್ 49, ಸಿಪಿಐ (ಎಮ್) 1, ಬಿಎಸ್‍ಪಿ 7, ಎಎಪಿ 1, ಉತ್ತಮ ಪ್ರಜಾಕೀಯ 11, ಕರ್ನಾಟಕ ರಾಷ್ಟ್ರ ಸಮಿತಿ 4, ಎಐಎಮ್‍ಐಎಂ 12, ಎಸ್‍ಡಿಪಿಐ 4, ಕರ್ನಾಟಕ ಶಿವಸೇನೆ 4, ಕರ್ನಾಟಕ ಜನಸೇವೆ ಪಾರ್ಟಿ 1, ಪಕ್ಷೇತರ 122 ಸೇರಿದಂತೆ ಒಟ್ಟು 420 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಇದನ್ನು ಓದಿ: ಅಂಚೆ ಇಲಾಖೆಯಲ್ಲಿ ಉದ್ಯೋಗ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

ಇದನ್ನೂ ಓದಿ
Image
GT vs RR Head to Head Records: ಫೈನಲ್ ಕದನದಲ್ಲಿ ಗೆಲುವು ಯಾರಿಗೆ? ಮುಖಾಮುಖಿ ವರದಿ ಕಥೆ ಹೇಳುವುದೇನು?
Image
ಬಾಲಕಿ ಒಂಟಿಕಾಲಲ್ಲಿ ಜಿಗಿದುಕೊಂಡು ಶಾಲೆಗೆ ಹೋಗುವ ದೇಶವಿದು! ಹಾಗಾದರೆ ಶಾಲೆಗೆ ನಡೆದುಹೋಗುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ!? ಇಲ್ಲಿದೆ ಅಂಕಿ ಅಂಶಗಳು
Image
Relationship: ನಿಮ್ಮ ಪತಿ ಸದಾ ಸಂತೋಷದಿಂದರಬೇಕು ಎಂದರೆ ಹೀಗೆ ಮಾಡಿ
Image
IPL 2022 Prize Money: ಚಾಂಪಿಯನ್​ಗೆ 20 ಕೋಟಿ, ರನ್ನರ್ ಅಪ್​ಗೆ 13 ಕೋಟಿ! ಆರ್​ಸಿಬಿಗೆ ಸಿಕ್ಕಿದ್ದೆಷ್ಟು?

ಸೆಪ್ಟೆಂಬರ್ 7 ರಂದು ಚುನಾವಣೆ ಫಲಿತಾಂಶ ಪ್ರಕಟಗೊಂಡಿತ್ತು. ಚುನಾವಣೆಯಲ್ಲಿ 82 ಸ್ಥಾನಗಳ ಪೈಕಿ ಈ ಬಾರಿ  ಬಿಜೆಪಿ 39 ಕಾಂಗ್ರೆಸ್ 33 ಪಕ್ಷೇತರ 06 ಎಐಎಂಐಎಂ 03 ಜೆಡಿಎಸ್ 01ರಲ್ಲಿ ಗೆಲವು ದಾಖಲಿಸಿದೆ. ಈ ಫಲಿತಾಂಶ ಅತಂತ್ರವಾಗಿ ಹೊರ ಹೊಮ್ಮಿತ್ತು. ಏಕೆಂದರೆ ಮಹಾನಗರ ಪಾಲಿಕೆಯ ಬಹುಮತ 42 ಇದ್ದು ಯಾವ ಪಕ್ಷಕ್ಕು ಬಹುಮತ ಬರಲ್ಲಿಲ್ಲ. ಅತಂತ್ರದ ಸ್ಥತಿ ನಿರ್ಮಾಣವಾಗಿತ್ತು. ಆದರೆ ನಾವು ಇಲ್ಲಿ ನೆನಪು ಇಟ್ಟುಕೊಳ್ಳಬೇಕಾದ ಸಂಗತಿ ಅಂದರೆ ಮೇಯರ್ ಆಯ್ಕೆಗೆ  ನಾಲ್ವರು ಶಾಸಕರು, ನಾಲ್ವರು ಎಂ.ಎಲ್.ಸಿ. ಹಾಗೂ ಓರ್ವ ಸಂಸದರು ಕೂಡ ಮತ ಚಲಾಯಿಸಬಹುದು. ಇದು ಬಿಜೆಪಿ ಮೇಯರ್ ಆಯ್ಕೆಗೆ ವರವಾಗಿದೆ. ಹೇಗೆಂದರೆ  ನಾಲ್ವರು ಶಾಸಕರ ಪೈಕಿ ಮೂವರು ಬಿಜೆಪಿ, ಇಬ್ಬರು ಎಂ.ಎಲ್.ಸಿ. ಹಾಗೂ ಓರ್ವ ಸಂಸದ ಸೇರಿ ಆರು ಜನಪ್ರತಿನಿಧಿಗಳು ಬಿಜೆಪಿ ಪಾಲಿಗೆ ವರವಾಗಿದ್ದಾರೆ. ಇನ್ನು ಕಾಂಗ್ರೆಸ್​ಗೆ ಇಬ್ಬರು ವರವಾಗಿದ್ದಾರೆ.

6 ಪಕ್ಷೇತರ ಅಭ್ಯರ್ಥಿಗಳಲ್ಲಿ ಮೂವರು ಬಿಜೆಪಿಗೆ ಸೇರ್ಪಡೆ ಹಿನ್ನೆಲೆ ಬಿಜೆಪಿ ಬಲ 42 ಆಗಿದೆ. ಪಕ್ಷೇತರರಾಗಿದ್ದ ದುರ್ಗಮ್ಮ ಬೀಜವಾಡ, ಚಂದ್ರಿಕಾ ಮೇಸ್ತ್ರಿ ಹಾಗೂ ಕಿಷನ್ ಬೆಳಗಾವಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ ಹಾಗೂ ಎಸ್.ವಿ. ಸಂಕನೂರ ವಿಶೇಷ ಮತ ಚಲಾಯಿಸಿದ್ದಾರೆ. ಒಟ್ಟ 48 ಮತಗಳು ಬಿಜೆಪಿ ಪಾಳಯಕ್ಕೆ ಬಂದಿವೆ. ಇನ್ನು ಎರಡು ಮತಗಳು ತಿಳಿದು ಬಂದಿಲ್ಲ.

ಇದನ್ನು ಓದಿ: ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಎರಡನೆ ದಿನ; ಎಕ್ಸ್​ಪೋಗೆ ಭೇಟಿ ನೀಡಿ, ಚಿನ್ನ ಗೆಲ್ಲಿ

ಮೇಯರ್ ಚುನಾವಣೆ 

ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ  ಚುನಾವಣೆ  ನಡೆದಿದ್ದು,  ಮಧ್ಯಾಹ್ನ 1.30ಕ್ಕೆ ಕೈ ಎತ್ತುವ ಮೂಲಕ ಮೇಯರ್ ಆಯ್ಕೆ ಪ್ರಕ್ರಿಯೆ ನಡೆದಿದೆ. ಬಿಜೆಪಿ ಅಭ್ಯರ್ಥಿ  ಈರೇಶ ಅಂಚಟಗೇರಿ ಪರ  50 ಮತ ಹಾಕಿದ್ದರೇ,  ಈರೇಶ್ ವಿರುದ್ದ 35 ಮತ ಚಲಾಯಿಸಿದ್ದು, 3 ತಟಸ್ಥವಾಗಿವೆ ಬಿಜೆಪಿ ಉಪಮೇಯರ್ ಅಭ್ಯರ್ಥಿ ಉಮಾ ಮುಕುಂದ್  ಪರ 51,  ವಿರುದ್ಧ-35,  ತಟಸ್ಥ 03 ಮತ ಪಡೆಯುವ ಮೂಲಕ ಗೆಲವು ಸಾಧಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:48 pm, Sat, 28 May 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?