AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ ಜಿಲ್ಲಾದ್ಯಂತ ಉತ್ತಮ ಮಳೆ, ಅರಳಿ ನಿಂತ ಕೆಂಪು ಸುಂದ್ರಿ ಗುಲಾಬಿ: ರೈತರ ಮೊಗದಲ್ಲಿ ಮಂದಹಾಸ

ಕೆಂಪು ಬಣ್ಣದ ಗುಲಾಬಿ, ಪ್ರೀತಿ, ಪ್ರೇಮದ ಸಂತೇಕ. ತಮ್ಮ ಪ್ರೀತಿ ನಿವೇದನೆಯನ್ನ ಗುಲಾಬಿ ಕೊಡುವ ಮೂಲಕ ಕೂಡ ಹೇಳಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಹಾರಕ್ಕೆ, ದೇವರ ಮುಡಿಗೂ ಕೂಡ ಅರ್ಪಣೆಯಾಗುತ್ತದೆ. ಆದರೆ ಇಂತಹ ಗುಲಾಬಿ ಹೂವಿಗೆ ಕೆಲವೇ ದಿನಗಳ ಕೆಳಗೆ ಸಂಕಷ್ಟ ಎದುರಾಗಿತ್ತು. ಬಿಸಿಲ ಜಳಕ್ಕೆ ಪ್ರೀತಿಯ ಸಂಕೇತವಾದ ಗುಲಾಬಿ ಮುದುಡಿ ಹೋಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಗುಲಾಬಿಗೆ ಮತ್ತೆ ಕಳೆ ಬಂದಿದೆ.

ಮಂಡ್ಯ ಜಿಲ್ಲಾದ್ಯಂತ ಉತ್ತಮ ಮಳೆ, ಅರಳಿ ನಿಂತ ಕೆಂಪು ಸುಂದ್ರಿ ಗುಲಾಬಿ: ರೈತರ ಮೊಗದಲ್ಲಿ ಮಂದಹಾಸ
ಮಂಡ್ಯ ಜಿಲ್ಲಾದ್ಯಂತ ಉತ್ತಮ ಮಳೆ, ಅರಳಿ ನಿಂತ ಕೆಂಪು ಸುಂದ್ರಿ ಗುಲಾಬಿ: ರೈತರ ಮೊಗದಲ್ಲಿ ಮಂದಹಾಸ
ಪ್ರಶಾಂತ್​ ಬಿ.
| Updated By: ಗಂಗಾಧರ​ ಬ. ಸಾಬೋಜಿ|

Updated on: May 26, 2024 | 5:47 PM

Share

ಮಂಡ್ಯ, ಮೇ 26: ಸಕ್ಕರಿನಗರಿ ಮಂಡ್ಯದಲ್ಲಿ ಕೆಲವೇ ದಿನಗಳ ಕೆಳಗೆ ಭೀಕರ ಬರ. ಬಿಸಿಲ ಜಳಕ್ಕೆ ರೈತ ಸಮುದಾಯ ತತ್ತರಿಸಿ ಹೋಗಿತ್ತು. ಬೆಳೆದ ಬೆಳೆಗಳನ್ನ ಉಳಿಸಿಕೊಳ್ಳಲು ಪರದಾಟ ನಡೆಸುತ್ತಿದ್ದರು. ಆದರೆ ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದೆ (Rain). ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆ ಮೂಲಕ ಬಾಡಿಹೋಗಿದ್ದ ಗುಲಾಬಿ (rose) ಹೂವಿಗೆ ಕಳೆ ಬಂದಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುಲಾಬಿ ಬೆಳೆಯನ್ನ ಕಳೆದ ಹಲವು ವರ್ಷಗಳಿಂದ ಬೆಳೆಯುತ್ತಾ ಬಂದಿದ್ದಾರೆ. ಉತ್ತಮ ಮಳೆ ಬಂದಿದ್ದರಿಂದ ಗುಲಾಬಿ ಬೆಳೆಗೆ ಕಳೆ ಬಂದಿದೆ. ಸಂಕಷ್ಟದಲ್ಲಿ ಇದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.

ಕೆಂಪು ಬಣ್ಣದ ಗುಲಾಬಿ, ಪ್ರೀತಿ, ಪ್ರೇಮದ ಸಂತೇಕ. ತಮ್ಮ ಪ್ರೀತಿ ನಿವೇದನೆಯನ್ನ ಗುಲಾಬಿ ಕೊಡುವ ಮೂಲಕ ಕೂಡ ಹೇಳಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಹಾರಕ್ಕೆ, ದೇವರ ಮುಡಿಗೂ ಕೂಡ ಅರ್ಪಣೆಯಾಗುತ್ತದೆ. ಆದರೆ ಇಂತಹ ಗುಲಾಬಿ ಹೂವಿಗೆ ಕೆಲವೇ ದಿನಗಳ ಕೆಳಗೆ ಸಂಕಷ್ಟ ಎದುರಾಗಿತ್ತು. ಬಿಸಿಲ ಜಳಕ್ಕೆ ಪ್ರೀತಿಯ ಸಂಕೇತವಾದ ಗುಲಾಬಿ ಮುದುಡಿ ಹೋಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಗುಲಾಬಿಗೆ ಮತ್ತೆ ಕಳೆ ಬಂದಿದೆ.

ಇದನ್ನೂ ಓದಿ: ವಾವ್ಹ್..!ಧಾರವಾಡದ ಸೌಂದರ್ಯ ಹೆಚ್ಚಿಸಿದ ಗುಲ್‌ ಮೊಹರ್‌ ಹೂವುಗಳು; ಈ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

ಅಂದಹಾಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಹೆಚ್ಚಾಗಿ ಗುಲಾಬಿ ಬೆಳೆಯನ್ನ ಬೆಳೆಯಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ರೈತಾಪಿ ವರ್ಗ ಗುಲಾಬಿ ಬೆಳೆಯನ್ನೇ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ ಬೆಳೆಯುವ ಗುಲಾಬಿ ಬೆಳೆಗೆ ಡಿಮ್ಯಾಂಡ್ ಸಹ ಇದೆ.

ಬಹುತೇಕ ರೈತರು ಮೈಸೂರು ಮಾರುಕಟ್ಟೆಗೆ ಗುಲಾಬಿ ಹೂವನ್ನ ಮಾರಾಟ ಮಾಡುತ್ತಾರೆ. ಇಲ್ಲಿನ ಗುಲಾಬಿ ಬಹುತೇಕ ಗುಲ್ಕಾನ್ ಮಾಡಲು ಬಳಸಿದ್ರೆ, ಮತ್ತಷ್ಟು ಗುಲಾಬಿ ಹೂವುಗಳು ದೇವರ ಮುಡಿಗೆ ಸೇರುತ್ತವೆ. ದೇವರ ಹಾರಕ್ಕೂ ಕೂಡ ಗುಲಾಬಿ ಹೂವನ್ನ ಬಳಸಲಾಗುತ್ತದೆ. ಕೆಲವಷ್ಟು ರೈತರು ದೇವಸ್ಥಾನಗಳ ಬಳಿ ಗುಲಾಬಿ ಹೂವನ್ನ ಮಾರಾಟ ಮಾಡಿದ್ರೆ, ಮತ್ತಷ್ಟು ರೈತರು ಇಂತಿಷ್ಟು ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಇದನ್ನೂ ಓದಿ: ಮಂಡ್ಯ: ಮನಸ್ಸಿಗೆ ಮುದ ನೀಡುತ್ತಿದ್ದ ಕೊಕ್ಕರೆಗಳ ನೆಲೆವೀಡು ಬೆಳ್ಳೂರು ಪಕ್ಷಿಧಾಮ ಖಾಲಿ ಖಾಲಿ

ಕಳೆದ ಹಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತನ ಮೊಗದಲ್ಲಿ ಮಂದಹಾಸ ಮೂಡಿದ್ದು, ಗುಲಾಬಿ ಹೂವಿಗೆ ಮತ್ತಷ್ಟು ಕಳೆ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ