Crop Insurance: ಬೆಳೆ ವಿಮೆ ಬಗ್ಗೆ ಹತ್ತಾರು ಗೊಂದಲಗಳಿವೆಯಾ? ಹಾಗಾದ್ರೆ ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ತಡವಾಗಿ ಮುಂಗಾರು ಆರಂಭವಾಗಿದೆ. ಇದೇ ಸಮಯದಲ್ಲಿ ಬೆಳೆ ವಿಮೆ ಕೂಡಾ ಮಾಡಿಸಲು ಸಮಯ ಆರಂಭವಾಗಿದ್ದು, ಬೆಳೆ ವಿಮೆ ಬಗ್ಗೆ ರೈತರಿಗೆ ಹತ್ತಾರು ಗೊಂದಲಗಳಿರುತ್ತವೆ. ಅದಕ್ಕೆ ಈ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

Crop Insurance: ಬೆಳೆ ವಿಮೆ ಬಗ್ಗೆ ಹತ್ತಾರು ಗೊಂದಲಗಳಿವೆಯಾ? ಹಾಗಾದ್ರೆ ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jun 28, 2023 | 5:04 PM

ಕಲಬುರಗಿ: ರಾಜ್ಯದಲ್ಲಿ ತಡವಾಗಿ ಮುಂಗಾರು ಆರಂಭವಾಗಿದೆ. ಇದೇ ಸಮಯದಲ್ಲಿ ಬೆಳೆ ವಿಮೆ ಕೂಡಾ ಮಾಡಿಸಲು ಸಮಯ ಆರಂಭವಾಗಿದ್ದು, ಬೆಳೆ ವಿಮೆ (Crop Insurance) ಬಗ್ಗೆ ರೈತರಿಗೆ ಹತ್ತಾರು ಗೊಂದಲಗಳಿರುತ್ತವೆ. ಯಾವ ಬೆಳೆಗೆ ಎಷ್ಟು ಪ್ರೀಮಿಯಂ, ಯಾವ ಹೋಬಳಿಗೆ ಯಾವ ಬೆಳೆಗೆ ವಿಮೆ ಮಾಡಿಸಬೇಕು ಅನ್ನೋ ಗೊಂದಲ ರೈತರಲ್ಲಿ ಮೂಡವದು ಸಹಜ. ಅದಕ್ಕಾಗಿ ಕಲಬುರಗಿ ಜಿಲ್ಲಾಡಳಿತ ಬೆಳೆ ವಿಮೆ ಬಗ್ಗೆ ಅನೇಕ ಮಾಹಿತಿಯನ್ನು ನೀಡಿದೆ.

ಪ್ರಸಕ್ತ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ ಅವರು ಜಿಲ್ಲೆಯ ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.

ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ನಿಗದಿ ಮಾಡಿದ್ದು, ಬೆಳೆ ವಿಮೆ ನೋಂದಣಿಗೆ ಕಲಬುರಗಿ ಜಿಲ್ಲೆಗೆ ಯುನಿವರಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ಕಂಪನಿ ಲಿ. ಬೆಂಗಳೂರು ವಿಮಾ ಸಂಸ್ಥೆಯನ್ನು ಸರ್ಕಾರ ಗುರುತಿಸಿದೆ. ಇನ್ನು 2023-24ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಒಟ್ಟು 22 ಬೆಳೆಗಳಿಗೆ ಇಂಡಿಮ್ನಿಟಿ ಮಟ್ಟ ನೀರಾವರಿ ಬೆಳೆಗಳಿಗೆ ಶೇ.90 ಹಾಗೂ ಮಳೆ ಅಶ್ರಿತ ಬೆಳೆಗಳಿಗೆ ಶೇ.80 ಎಂದು ನಿಗದಿಪಡಿಸಿದೆ.

ಇದನ್ನೂ ಓದಿ: ರಾಜ್ಯದ ತೊಗರಿ ಕಣಜ ಖ್ಯಾತಿಯ ಕಲಬುರಗಿ ಜನರಿಗೆ ಮುಟ್ಟಿದ ತೊಗರಿ ಬೇಳೆ ಬೆಲೆ ಏರಿಕೆ ಬಿಸಿ

ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡ ರೈತರ ಜಮೀನು ಸ್ಧಳ, ನಿರ್ದಿಷ್ಟ, ಪ್ರಕೃತಿ ವಿಕೋಪ, ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಪೋಟ ಹಾಗೂ ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಘಡ ಸಂದರ್ಭದಲ್ಲಿ ಬೆಳೆ ನಷ್ಟವುಂಟಾದರೆ ವೈಯಕ್ತಿಕ ನಷ್ಟದ ನಿರ್ಧರಣೆಯನ್ನು ವೈಯುಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಈ ಯೋಜನೆಯಡಿ ಪಡೆಯಲು ಅವಕಾಶ ನೀಡಲಾಗಿದೆ.

ತಾಲೂಕುವಾರು ಬೆಳೆ ವಿಮೆ ನೋಂದಣಿಗೆ ನಿಗದಿಗೊಂಡಿರುವ ಬೆಳೆಗಳ ವಿವರ:

ಅಫಜಲಪೂರ: ಮುಖ್ಯ ಬೆಳೆಗಳಾದ ತೊಗರಿ(ನೀ ಮತ್ತು ಮ.ಆ), ನೆಲಗಡೆಲೆ (ಶೇಂಗಾ) (ಮ.ಆ), ಮುಸಕಿನಜೋಳ (ನೀ ಮತ್ತು ಮ.ಆ) ಮತ್ತು ಇತರೆ ಬೆಳೆಗಳಾದ ಇತರೆ ಬೆಳೆಗಳಾದ ಈರುಳ್ಳಿ(ನೀ) ಉದ್ದು(ಮ.ಆ), ಎಳ್ಳು(ಮ.ಆ) ಕೆಂಪು ಮೆಣಸಿನಕಾಯಿ(ನೀ) ಟೂಮ್ಯಾಟೋ-ಸಜ್ಜೆ(ಮ.ಆ), ಸೂರ್ಯಕಾಂತಿ(ನೀ ಮತ್ತು ಮ.ಆ), ಹತ್ತಿ (ನೀ ಮತ್ತು ಮ.ಆ) ಹಾಗೂ ಹೆಸರು (ಮ.ಆ.). ಆಳಂದ: ಮುಖ್ಯ ಬೆಳೆಗಳಾದ ತೊಗರಿ (ಮ.ಆ) ಮತ್ತು ಮುಸುಕಿನಜೋಳ(ಮ.ಆ). ಮತ್ತು ಇತರೆ ಬೆಳೆಗಳಾದ ಈರುಳ್ಳಿ(ನೀ), ಉದ್ದು (ಮ.ಆ), ಎಳ್ಳು(ಮ.ಆ), ಜೋಳ(ಮ.ಆ), ಸಜ್ಜೆ(ಮ.ಆ), ಸೂರ್ಯಕಾಂತಿ(ನೀ ಮತ್ತು ಮ.ಆ), ಸೋಯಅವರೆ (ಮ.ಆ) ಹಾಗೂ ಹೆಸರು (ಮ.ಆ).ಕಮಲಾಪೂರ: ಮುಖ್ಯ ಬೆಳೆಗಳಾದ ತೊಗರಿ (ನೀ ಮತ್ತು ಮ.ಆ), ಮುಸುಕಿನ ಜೋಳ(ಮ.ಆ) ಮತ್ತು ಇತರೆ ಬೆಳೆಗಳಾದ ಉದ್ದು(ಮ.ಆ), ಎಳ್ಳು(ಮ.ಆ), ಜೋಳ(ಮ.ಆ), ಸಜ್ಜೆ(ಮ.ಆ), ಸೂರ್ಯಕಾಂತಿ (ಮ.ಆ), ಸೋಯಾಅವರೆ(ಮ.ಆ) ಮತ್ತು ಹೆಸರು (ಮ.ಆ).

ಕಲಬುರಗಿ: ಮುಖ್ಯ ಬೆಳೆಗಳಾದ ತೊಗರಿ (ಮ.ಆ), ಮುಸುಕಿನ ಜೋಳ(ನೀ ಮತ್ತು ಮ.ಆ) ಮತು ಇತರೆ ಬೆಳೆಗಳಾದ ಉದ್ದು(ಮ.ಆ), ಎಳ್ಳು (ಮ.ಆ), ಸಜ್ಜೆ(ಮ.ಆ), ಸೂರ್ಯಕಾಂತಿ(ಮ.ಆ.) ಸೋಯಾಅವರೆ(ಮ.ಆ.), ಹತ್ತಿ (ಮ.ಆ) ಹಾಗೂ ಹೆಸರು (ಮ.ಆ.). ಕಾಳಗಿ: ಮುಖ್ಯ ಬೆಳೆಗಳಾದ ತೊಗರಿ(ಮ.ಆ) ಮತ್ತು ಇತರೆ ಬೆಳೆಗಳಾದ ಉದ್ದು(ಮ.ಆ), ಎಳ್ಳು(ಮ.ಆ), ಸಜ್ಜೆ(ಮ.ಆ), ಸೂರ್ಯಕಾಂತಿ(ಮ.ಆ), ಸೋಯಾಅವರೆ(ಮ.ಆ) ಹಾಗೂ ಹೆಸರು(ಮ.ಆ). ಚಿಂಚೋಳಿ: ಮುಖ್ಯ ಬೆಳೆಗಳಾದ ತೊಗರಿ(ಮ.ಆ) ಮತ್ತು ಮುಸುಕಿನಜೋಳ(ಮ.ಆ) ಹಾಗೂ ಇತರೆ ಬೆಳೆಗಳಾದ ಅರಿಶಿಣ, ಉದ್ದು (ಮ.ಆ.) ಎಳ್ಳು(ಮ.ಆ.), ಜೋಳ(ನೀ ಮತ್ತು ಮ.ಅ), ಸಜ್ಜೆ(ಮ.ಆ), ಸೂರ್ಯಕಾಂತಿ (ಮ.ಆ), ಸೋಯಾಅವರೇ(ಮ.ಆ) ಹಾಗೂ ಹೆಸರು(ಮ.ಆ). ಚಿತ್ತಾಪೂರ: ಮುಖ್ಯ ಬೆಳೆಗಳಾದ ತೊಗರಿ(ಮ.ಆ) ಮತ್ತು ಭತ್ತ(ನೀ) ಹಾಗೂ ಇತರೆ ಬೆಳೆಗಳಾದ ಉದ್ದು(ಮ.ಆ), ಎಳ್ಳು(ಮ.ಆ). ನೆಲಗಡೆಲೆ(ಶೇಂಗಾ)(ನೀ), ಸಜ್ಜೆ (ಮ.ಆ), ಸೂರ್ಯಕಾಂತಿ(ಮ.ಆ), ಹತ್ತಿ(ಮ.ಆ) ಹಾಗೂ ಹೆಸರು(ಮ.ಆ.).

ಇದನ್ನೂ ಓದಿ: ಮಳಖೇಡ ಜಯತೀರ್ಥರ ಮೂಲ ವೃಂದಾವನ ಎಲ್ಲಿದೆ ಎಂಬುದೂ ವಿವಾದದ ಕೇಂದ್ರವಾಯಿತು!

ಜೇವರ್ಗಿ: ಮುಖ್ಯ ಬೆಳೆಗಳಾದ ತೊಗರಿ (ನೀ ಮತ್ತು ಮ.ಆ.) ಮುಸುಕಿನಜೋಳ(ಮ.ಆ) ಹಾಗೂ ಇತರೆ ಬೆಳೆಗಳಾದ ಎಳ್ಳು(ಮ.ಆ), ಸಜ್ಜೆ (ಮ.ಆ), ಸೂರ್ಯಕಾಂತಿ(ನೀ ಮತ್ತು ಮ.ಆ), ಹತ್ತಿ(ನೀ ಮತ್ತು ಮ.ಆ) ಹಾಗೂ ಹೆಸರು (ಮ.ಆ). ಯಡ್ರಾಮಿ: ಮುಖ್ಯ ಬೆಳೆಗಳಾದ ತೊಗರಿ(ನೀ ಮತ್ತು ಮ.ಆ.) ನೆಲಗಡೆಲೆ(ಶೇಂಗಾ)(ಮ.ಆ), ಭತ್ತ(ನೀ), ಮುಸುಕಿನಜೋಳ(ನೀ ಮತ್ತು ಮ.ಆ.) ಮತ್ತು ಇತರೆ ಬೆಳೆಗಳಾದ ಎಳ್ಳು(ಮ.ಆ.), ಸಜ್ಜೆ(ಮ.ಆ), ಸೂರ್ಯಕಾಂತಿ(ನೀ ಮತ್ತು ಮ.ಆ), ಹತ್ತಿ(ನೀ ಮತ್ತು ಮ.ಆ) ಹಾಗೂ ಹೆಸರು(ಮ.ಆ). ಶಹಾಬಾದ: ಮುಖ್ಯ ಬೆಳೆ ತೊಗರಿ(ಮ.ಆ) ಮತ್ತು ಇತರೆ ಬೆಳೆಗಳಾದ ಉದ್ದು(ಮ.ಆ), ಎಳ್ಳು(ಮ.ಆ), ಸಜ್ಜೆ(ಮ.ಆ), ಸೂರ್ಯಕಾಂತಿ(ಮ.ಆ), ಹತ್ತಿ(ಮ.ಆ) ಹಾಗೂ ಹೆಸರು(ಮ.ಆ). ಸೇಡಂ: ಮುಖ್ಯ ಬೆಳೆ ತೊಗರಿ(ಮ.ಆ) ಮತ್ತು ಭತ್ತ(ನೀ) ಹಾಗೂ ಇತರೆ ಬೆಳೆಗಳಾದ ಉದ್ದು(ಮ.ಆ), ಜೋಳ(ಮ.ಆ), ಸಜ್ಜೆ(ಮ.ಆ), ಸೂರ್ಯಕಾಂತಿ (ಮ.ಆ), ಹತ್ತಿ(ಮ.ಆ) ಹಾಗೂ ಹೆಸರು(ಮ.ಆ).

ಜುಲೈ 31 ರೊಳಗೆ ನೋಂದಣಿ ಮಾಡಬೇಕಾದ ಬೆಳೆ, ಬೆಳೆವಾರು ಪ್ರತಿ ಹೆಕ್ಟೇರ್ ಗರಿಷ್ಠ ವಿಮಾ ಮೊತ್ತ, ರೈತರು ಪಾವತಿಸಬೇಕಾದ ಮೊತ್ತ ವಿವರ:

ಮುಸುಕಿನ ಜೋಳ(ನೀ) ಬೆಳೆಗೆ ಗರಿಷ್ಠ 64,500 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 1,290 ರೂ. ಪಾವತಿಸಬೇಕು. ಮುಸುಕಿನ ಜೋಳ(ಮ.ಆ) ಬೆಳೆಗೆ ಗರಿಷ್ಠ 56,500 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 1,130 ರೂ. ಪಾವತಿಸಬೇಕು. ಜೋಳ(ನೀ) ಬೆಳೆಗೆ ಗರಿಷ್ಠ 45,250 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 905 ರೂ. ಪಾವತಿಸಬೇಕು. ಜೋಳ(ಮ.ಆ) ಬೆಳೆಗೆ ಗರಿಷ್ಠ 38,250 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 765 ರೂ. ಪಾವತಿಸಬೇಕು. ಸಜ್ಜೆ(ಮ.ಆ) ಬೆಳೆಗೆ ಗರಿಷ್ಠ 31,500 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 630 ರೂ. ಪಾವತಿಸಬೇಕು.

ಉದ್ದು (ಮ.ಆ) ಬೆಳೆಗೆ ಗರಿಷ್ಠ 32,750 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 655 ರೂ. ಪಾವತಿಸಬೇಕು. ತೊಗರಿ(ನೀ) ಬೆಳೆಗೆ ಗರಿಷ್ಠ 50,250 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 1,005 ರೂ. ಪಾವತಿಸಬೇಕು. ತೊಗರಿ (ಮ.ಆ) ಬೆಳೆಗೆ ಗರಿಷ್ಠ 48,000 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 960 ರೂ. ಪಾವತಿಸಬೇಕು. ಹೆಸರು (ಮ.ಆ) ಬೆಳೆಗೆ ಗರಿಷ್ಠ 33,250 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 665 ರೂ. ಪಾವತಿಸಬೇಕು. ಸೋಯಾ ಅವರೆ(ಮ.ಆ) ಬೆಳೆಗೆ ಗರಿಷ್ಠ 41,000 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 820 ರೂ. ಪಾವತಿಸಬೇಕು. ಎಳ್ಳು(ಮ.ಆ) ಬೆಳೆಗೆ ಗರಿಷ್ಠ 28,750 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 575 ರೂ. ಪಾವತಿಸಬೇಕು.

ನೆಲಗಡಲೆ (ಶೇಂಗಾ) (ನೀ) ಬೆಳೆಗೆ ಗರಿಷ್ಠ 65,750 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 1,315 ರೂ. ಪಾವತಿಸಬೇಕು. ನೆಲಗಡಲೆ(ಶೇಂಗಾ)(ಮ.ಆ) ಬೆಳೆಗೆ ಗರಿಷ್ಠ 54,500 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 1,090 ರೂ. ಪಾವತಿಸಬೇಕು. ಹತ್ತಿ(ನೀ) ಬೆಳೆಗೆ ಗರಿಷ್ಠ 73,750 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 3,688 ರೂ. ಪಾವತಿಸಬೇಕು. ಹತ್ತಿ(ಮ.ಆ) ಬೆಳೆಗೆ ಗರಿಷ್ಠ 49,750 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 2,488 ರೂ. ಪಾವತಿಸಬೇಕು. ಅರಿಶಿಣ ಬೆಳೆಗೆ ಗರಿಷ್ಠ 1,42,250 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 7,113 ರೂ. ಪಾವತಿಸಬೇಕು. ಈ ಎಲ್ಲಾ ಬೆಳೆಗಳ ಬೆಳೆ ವಿಮೆ ಮಾಡಿಸಲು ದಿ.31-07-2023 ಕೊನೆಯ ದಿನಾಂಕವಾಗಿರುತ್ತದೆ.

ಆಗಸ್ಟ್ 16ರೊಳಗೆ ನೋಂದಣಿ ಮಾಡಬೇಕಾದ ಬೆಳೆ, ಬೆಳೆವಾರು ಪ್ರತಿ ಹೆಕ್ಟೇರ್ ಗರಿಷ್ಠ ವಿಮಾ ಮೊತ್ತ, ರೈತರು ಪಾವತಿಸಬೇಕಾದ ಮೊತ್ತ ವಿವರ:

ಭತ್ತ(ನೀ) ಬೆಳೆಗೆ ಗರಿಷ್ಠ 95,250 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 1,865 ರೂ. ಪಾವತಿಸಬೇಕು. ಸೂರ್ಯಕಾಂತಿ(ನೀ) ಬೆಳೆಗೆ ಗರಿಷ್ಠ 48,750 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 975 ರೂ. ಪಾವತಿಸಬೇಕು. ಸೂರ್ಯಕಾಂತಿ(ಮ.ಆ) ಬೆಳೆಗೆ ಗರಿಷ್ಠ 40,750 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 815 ರೂ. ಪಾವತಿಸಬೇಕು. ಟೊಮ್ಯಾಟೋ ಬೆಳೆಗೆ ಗರಿಷ್ಠ 1,41,500 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 7,075 ರೂ. ಪಾವತಿಸಬೇಕು. ಈರುಳ್ಳಿ(ನೀ) ಬೆಳೆಗೆ ಗರಿಷ್ಠ 80,500 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 4,025 ರೂ. ಪಾವತಿಸಬೇಕು. ಕೆಂಪು ಮೆಣಸಿನಕಾಯಿ(ನೀ) ಬೆಳೆಗೆ ಗರಿಷ್ಠ 1,07,500 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 5,375 ರೂ. ಪಾವತಿಸಬೇಕು.

ವಿಮಾ ಪ್ರತಿನಿಧಿಗಳನ್ನು ಸಂಪರ್ಕಿಸಿ:

ಬೆಳೆ ವಿಮೆ ಕುರಿತು ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ.1800-200-5142, ಹತ್ತಿರದ ರೂತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಜೊತೆಗೆ ಯುನಿವರಸಲ್ ಸೊಂಪೋ ಜೆನೆರಲ್ ಇನ್ಸರೆನ್ಸ್ ಕಂಪನಿ ಲಿ. ಈ ಕೆಳಕಂಡ ತಾಲೂಕುವಾರು ವಿಮಾ ಪ್ರತಿನಿಧಿಗಳನ್ನು ಸಂಪರ್ಕಿಸಲು ಕೋರಿದೆ. ಕಲಬುರಗಿ ಜಿಲ್ಲೆ: 8867508750, 8976889340, ಅಫಜಲಪೂರ-9902356434, ಆಳಂದ-9702944943, ಚಿಂಚೋಳಿ-8095384057, ಕಮಲಾಪೂರ-7259754689, ಯಡ್ರಾಮಿ-9880222988, ಚಿತ್ತಾಪೂರ-7996369510, ಜೇವರ್ಗಿ-9845661193, ಕಲಬುರಗಿ-8147603315, ಸೇಡಂ-7204579007 ಹಾಗೂ ಕಾಳಗಿ-9000481448.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು