ಇಂದಿನ ಕರ್ನಾಟಕ ವಾಯು ಗುಣಮಟ್ಟ ವರದಿ: ರಾಜಧಾನಿಯಲ್ಲಿ ಸಾಧಾರಣ, ಕರಾವಳಿಯಲ್ಲಿ ಶುದ್ಧ ಗಾಳಿ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಪ್ರಕಾರ, ಬೆಂಗಳೂರು ಸೇರಿದಂತೆ ಕರ್ನಾಟಕದ ಹೆಚ್ಚಿನ ನಗರಗಳಲ್ಲಿ ಗಾಳಿಯ ಗುಣಮಟ್ಟ 'ಸಾಧಾರಣ'ದಿಂದ 'ಉತ್ತಮ' ಮಟ್ಟದಲ್ಲಿದೆ. ಬೆಂಗಳೂರು ಸರಾಸರಿ AQI 65-85 ರಷ್ಟಿದ್ದರೆ, ಕರಾವಳಿ, ಮಲೆನಾಡು ಹಾಗೂ ಮೈಸೂರಿನಲ್ಲಿ 'ಅತ್ಯುತ್ತಮ'ವಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಮಾಲಿನ್ಯ ಕೊಂಚ ಹೆಚ್ಚಿದ್ದು, ಸಾಮಾನ್ಯ ನಾಗರಿಕರಿಗೆ ತೊಂದರೆಯಿಲ್ಲ. ಆದರೆ ಶ್ವಾಸಕೋಶದ ಸಮಸ್ಯೆ ಇರುವವರು ಬೆಳಿಗ್ಗೆ ವಾಕಿಂಗ್ ಮಾಡುವಾಗ ಮಾಸ್ಕ್ ಧರಿಸಲು ಸೂಚಿಸಲಾಗಿದೆ.

ಬೆಂಗಳೂರು, ಸೆ.3: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಇಂದಿನ ವರದಿಯ ಪ್ರಕಾರ, ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹೆಚ್ಚಿನ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ (Air Quality Index – AQI) ‘ಸಾಧಾರಣ’ (Moderate) ನಿಂದ ‘ಉತ್ತಮ’ (Good) ಮಟ್ಟದಲ್ಲಿದೆ. ರಾಜಧಾನಿ ಬೆಂಗಳೂರಿನ ಸರಾಸರಿ AQI 65 ರಿಂದ 85 ರಷ್ಟಿದ್ದು, ಸಾಧಾರಣ (Moderate) ವ್ಯಾಪ್ತಿಯಲ್ಲಿದೆ. ಪೀಣ್ಯ, ಮೈಸೂರು ರಸ್ತೆ ಹಾಗೂ ಸಿಲ್ಕ್ ಬೋರ್ಡ್ನಂತಹ ಹೆಚ್ಚು ವಾಹನ ಸಂಚಾರವಿರುವ ಪ್ರದೇಶಗಳಲ್ಲಿ ಮಾಲಿನ್ಯ ಪ್ರಮಾಣ ಕೊಂಚ ಹೆಚ್ಚಾಗಿದೆ.
ಕರಾವಳಿ ಪ್ರದೇಶಗಳಲ್ಲಿ ಸಮುದ್ರದ ತೀರದ ಗಾಳಿಯ ಪ್ರಭಾವದಿಂದ ವಾಯು ಗುಣಮಟ್ಟವು 36 ರಿಂದ 45 ರಷ್ಟಿದ್ದು, ‘ಅತ್ಯುತ್ತಮ’ (Good) ಸ್ಥಿತಿಯಲ್ಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ AQI 40 ರಿಂದ 55 ರಷ್ಟಿದ್ದು, ಶುದ್ಧ ಹಾಗೂ ನೈರ್ಮಲ್ಯ ಗಾಳಿ ದಾಖಲಾಗಿದೆ. ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಾಂಕವು 55 ರಿಂದ 70 ರಷ್ಟಿದ್ದು, ‘ಸಾಧಾರಣ’ ಸ್ಥಿತಿಯಲ್ಲಿದೆ.
ಇನ್ನು ಹಸಿರಿನಿಂದ ಕಂಗೊಳಿಸುವ ಮಲೆನಾಡು ಪ್ರದೇಶ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಯು ಗುಣಮಟ್ಟ ಸೂಚಿ 25 ರಿಂದ 40 ರಷ್ಟಿದ್ದು, ‘ಅತ್ಯುತ್ತಮ’ (Good) ವಾತಾವರಣವಿದೆ. ದಟ್ಟ ಕಾಡು ಹಾಗೂ ಇತ್ತೀಚಿನ ಮಳೆಯಿಂದಾಗಿ ಗಾಳಿಯಲ್ಲಿ ಶುದ್ಧತೆ ಹೆಚ್ಚಾಗಿದೆ. ಹಾಸನ ಜಿಲ್ಲೆಯಲ್ಲಿ ಇಂದಿನ AQI 35 ರಿಂದ 45 ರಷ್ಟಿದ್ದು, ಅತ್ಯಂತ ಶುದ್ಧ ಹಾಗೂ ನೈರ್ಮಲ್ಯ ಗಾಳಿ ದಾಖಲಾಗಿದೆ.
ವಿದ್ಯಾಕಾಶಿ ಧಾರವಾಡ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ 45 ರಿಂದ 60 ರಷ್ಟಿದ್ದು, ‘ಉತ್ತಮ/ಸಾಧಾರಣ’ ವ್ಯಾಪ್ತಿಯಲ್ಲಿದೆ. ಗದಗ ಜಿಲ್ಲೆಯಲ್ಲಿ ವಾಯು ಮಾಲಿನ್ಯ ಸೂಚಿ 50 ರಿಂದ 65 ರಷ್ಟಿದ್ದು, ‘ಸಾಧಾರಣ’ ಸ್ಥಿತಿಯಲ್ಲಿದೆ. ಬಿಸಿಲಿನ ತಾಪ ಹಾಗೂ ಧೂಳಿನ ಪ್ರಭಾವ ಹೆಚ್ಚಿರುವ ರಾಯಚೂರು ನಗರದಲ್ಲಿ AQI 65 ರಿಂದ 80 ರಷ್ಟಿದ್ದು, ಸಾಧಾರಣ (Moderate) ವಾತಾವರಣವಿದೆ. ಪ್ರಮುಖ ರಸ್ತೆಗಳು ಹಾಗೂ ಕೈಗಾರಿಕಾ ವಲಯಗಳಲ್ಲಿ ಧೂಳಿನ ಪ್ರಭಾವ ಕೊಂಚ ಕಂಡುಬರುತ್ತಿದೆ.
ಇದನ್ನೂ ಓದಿ: ಇಂದಿನ ಕರ್ನಾಟಕ ಹವಾಮಾನ ವರದಿ: ಕರಾವಳಿಯಲ್ಲಿ ಸಾಧಾರಣ ಮಳೆ, ಒಳನಾಡಿನಲ್ಲಿ ಒಣ ಹವಾಮಾನ
ಸಾಮಾನ್ಯ ನಾಗರಿಕರಿಗೆ ಇಂದಿನ ಗಾಳಿಯ ಗುಣಮಟ್ಟದಿಂದ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳಿಲ್ಲ. ಆದಾಗ್ಯೂ, ದೂಳಿನ ಪ್ರಭಾವ ಹೆಚ್ಚಿರುವ ಕೈಗಾರಿಕಾ ಹಾಗೂ ಟ್ರಾಫಿಕ್ ವಲಯಗಳಲ್ಲಿ ಶ್ವಾಸಕೋಶದ ತೊಂದರೆ ಅಥವಾ ಆಸ್ತಮಾ ಇರುವ ಹಿರಿಯರು ಮತ್ತು ಮಕ್ಕಳು ಬೆಳಗಿನ ಜಾವದ ವಾಕಿಂಗ್ ವೇಳೆ ಮಾಸ್ಕ್ ಧರಿಸುವುದು ಸೂಕ್ತ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




