5 ಬಾರಿ OTP ನೀಡಿದ್ದ ಗ್ರಾಹಕ! ಕೊನೆಗೂ ಕುಖ್ಯಾತ ಸೈಬರ್ ಎಕ್ಸ್ಪರ್ಟ್ ಅಂದರ್
ಬೆಂಗಳೂರು: ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿ ಜನರಿಗೆ ವಂಚಿಸಿದ್ದ ನಟೋರಿಯಸ್ ಸೈಬರ್ ಎಕ್ಸ್ಪರ್ಟ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿ ಶಿವಪ್ರಸಾದ್ನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಮಾತಿನ ವರಸೆಯಿಂದಲೇ ಆರೋಪಿ ಲಕ್ಷ ಲಕ್ಷ ಹಣ ಪೀಕುತ್ತಿದ್ದ. ಸಾಮಾನ್ಯ ಜನರನ್ನೇ ಈ ನಟೋರಿಯಸ್ ಸೈಬರ್ ಎಕ್ಸ್ಪರ್ಟ್ ಟಾರ್ಗೆಟ್ ಮಾಡುತ್ತಿದ್ದ. ಥೇಟ್ ಬ್ಯಾಂಕ್ ಅಧಿಕಾರಿಯ ರೀತಿ ತಾಂತ್ರಿಕ ಮಾಹಿತಿ ನೀಡಿ ಜನರನ್ನು ಖೆಡ್ಡಾಗೆ ಕೆಡವುತ್ತಿದ್ದ. ರವಿ ಎಂಬುವರ ಬಳಿ […]

ಬೆಂಗಳೂರು: ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿ ಜನರಿಗೆ ವಂಚಿಸಿದ್ದ ನಟೋರಿಯಸ್ ಸೈಬರ್ ಎಕ್ಸ್ಪರ್ಟ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿ ಶಿವಪ್ರಸಾದ್ನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಮಾತಿನ ವರಸೆಯಿಂದಲೇ ಆರೋಪಿ ಲಕ್ಷ ಲಕ್ಷ ಹಣ ಪೀಕುತ್ತಿದ್ದ. ಸಾಮಾನ್ಯ ಜನರನ್ನೇ ಈ ನಟೋರಿಯಸ್ ಸೈಬರ್ ಎಕ್ಸ್ಪರ್ಟ್ ಟಾರ್ಗೆಟ್ ಮಾಡುತ್ತಿದ್ದ. ಥೇಟ್ ಬ್ಯಾಂಕ್ ಅಧಿಕಾರಿಯ ರೀತಿ ತಾಂತ್ರಿಕ ಮಾಹಿತಿ ನೀಡಿ ಜನರನ್ನು ಖೆಡ್ಡಾಗೆ ಕೆಡವುತ್ತಿದ್ದ.
ರವಿ ಎಂಬುವರ ಬಳಿ ಒಂದೇ ಗಂಟೆಯಲ್ಲಿ 5 ಬಾರಿ OTP ಪಡೆದಿದ್ದ. ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಕ್ರೆಡಿಟ್ ಕಾರ್ಡ್ನ ಮಾಹಿತಿ ಪಡೆದಿದ್ದ. ಆರೋಪಿ ಮಾತಿಗೆ ಮರುಳಾಗಿ ರವಿ 4-5ಬಾರಿ OTPನೀಡಿದ್ದ. ಬಳಿಕ ಒಂದೇ ಗಂಟೆಯಲ್ಲಿ ಆರೋಪಿ ಶಿವಪ್ರಸಾದ್ 67 ಲಕ್ಷ ಹಣ ವರ್ಗಾವಣೆ ಮಾಡಿದ್ದ. ಹೀಗೆ 10ಕ್ಕೂ ಹೆಚ್ಚು ಜನರ 20 ಲಕ್ಷಕ್ಕೂ ಹೆಚ್ಚು ಹಣ ವರ್ವಾವಣೆ ಮಾಡಿಕೊಂಡಿದ್ದ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Published On - 1:07 pm, Sat, 4 January 20