AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ, ಇಂಡೋನೇಷ್ಯಾ ದೇಶದಂತೆ ರಾಮನಗರ ಮಹಿಳೆಯರಿಗೆ ವಾಷಿಂಗ್ ಮಷೀನ್: ಏನಿದು ಯೋಜನೆ?

ರಾಮನಗರ ಪಟ್ಟಣದ ಮಹಿಳೆಯರು ಇನ್ನು ಮುಂದೆ ಬಟ್ಟೆ ತೊಳೆಯಲು ನದಿ, ಕೆರೆ ಪಕ್ಕ ಹೋಗುವ ಅವಶ್ಯಕತೆ ಇಲ್ಲ. ಚೈನಾ, ಇಂಡೋನೇಷ್ಯಾ ದೇಶಗಳ ಮಾದರಿಯಲ್ಲಿ ರಾಮನಗರದಲ್ಲಿ ಮಹಿಳೆಯರಿಗೆ ಬಟ್ಟೆ ತೊಳೆಯಲು ಸಾರ್ವಜನಿಕ ವಾಷಿಂಗ್ ಮಷೀನ್ ಅಳವಡಿಕೆ ಮಾಡಲು ಪ್ಲಾನ್ ಮಾಡಲಾಗಿದೆ. ಈ ಬಗ್ಗೆ ಶಾಸಕ ಇಕ್ಬಾಲ್ ಹುಸೇನ್ ಅವರು ಘೋಷಣೆ ಮಾಡಿದ್ದು, ನಗರದಲ್ಲಿ ಜಾಗ ಗುರುತಿಸಿದ್ದಾರೆ.

ಚೀನಾ, ಇಂಡೋನೇಷ್ಯಾ ದೇಶದಂತೆ ರಾಮನಗರ ಮಹಿಳೆಯರಿಗೆ ವಾಷಿಂಗ್ ಮಷೀನ್: ಏನಿದು ಯೋಜನೆ?
ರಾಮನಗರದಲ್ಲಿ ಬಟ್ಟೆ ತೊಳೆಯಲು ಬರಲಿದೆ ಪಬ್ಲಿಕ್ ವಾಷಿಂಗ್ ಮಷೀನ್: ಪಕ್ಕದಲ್ಲಿ ಮಕ್ಕಳಿಗೂ ಕಾರ್ಟೂನ್ ನೋಡಲು ವ್ಯವಸ್ಥೆ (ಫೋಟೋ: ಶಾಸಕ ಇಕ್ಬಾಲ್ ಹುಸೇನ್ ಮತ್ತು ವಾಷಿಂಗ್ ಮಷೀನ್ ಸಾಂದರ್ಭಿಕ ಚಿತ್ರ)
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: Rakesh Nayak Manchi

Updated on: Mar 04, 2024 | 4:42 PM

ರಾಮನಗರ, ಮಾ.4: ಪಟ್ಟಣದ ಮಹಿಳೆಯರು ಇನ್ನು ಮುಂದೆ ಬಟ್ಟೆ ತೊಳೆಯಲು ನದಿ, ಕೆರೆ ಪಕ್ಕ ಹೋಗುವ ಅವಶ್ಯಕತೆ ಇಲ್ಲ. ಚೈನಾ, ಇಂಡೋನೇಷ್ಯಾ ದೇಶಗಳ ಮಾದರಿಯಲ್ಲಿ ರಾಮನಗರದಲ್ಲಿ (Ramanagara) ಮಹಿಳೆಯರಿಗೆ ಬಟ್ಟೆ ತೊಳೆಯಲು ಸಾರ್ವಜನಿಕ ಸ್ಥಳಗಳಲ್ಲಿ ವಾಷಿಂಗ್ ಮಷೀನ್ (Public Washing Machine) ಅಳವಡಿಕೆ ಮಾಡಲು ಪ್ಲಾನ್ ಮಾಡಲಾಗಿದೆ. ಈ ಬಗ್ಗೆ ಶಾಸಕ ಇಕ್ಬಾಲ್ ಹುಸೇನ್ ಅವರು ಘೋಷಣೆ ಮಾಡಿದ್ದಾರೆ.

ಹಳ್ಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮಹಿಳೆಯರು ಬಟ್ಟೆಗಳನ್ನು ತೊಳೆಯಲು ನದಿ ದಡ ಅಥವಾ ಕೆರೆಗಳ ಬಳಿ ಹೋಗುತ್ತಾರೆ. ಮಕ್ಕಳು ಕೂಡ ತೆರಳುತ್ತಾರೆ. ಹಲವೆಡೆ, ಬಟ್ಟೆ ತೊಳೆಯಲು ಹೋಗಿ ನೀರಿನಲ್ಲಿ ಕೊಚ್ಚಿದ ಘಟನೆಗಳು ನಡೆದಿವೆ. ಹೀಗಾಗಿ ಮಹಿಳೆಯರ ಅನುಕೂಲಕ್ಕಾಗಿ ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ವಾಷಿಂಗ್ ಮಷೀನ್ ಅಳವಡಿಕೆ ಮಾಡಲು ಮುಂದಾಗಿದ್ದಾರೆ.

ಇಂತಹ ವ್ಯವಸ್ಥೆ ಚೈನಾ, ಇಂಡೋನೇಷ್ಯಾದಂತಹ ದೇಶಗಳಲ್ಲಿ ಜಾರಿಯಲ್ಲಿವೆ. ಇದೇ ವ್ಯವಸ್ಥೆಯನ್ನ ರಾಮನಗರದಲ್ಲಿ ಅಳವಡಿಕೆ ಮಾಡಲು ಚಿಂತಿಸಿರುವ ಶಾಸಕರು, ಹೈಜೂರು ಸರ್ಕಲ್ ಮತ್ತು ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಗುರುತಿಸಿದ್ದಾರೆ. ಪ್ರಾರಂಭಿಕವಾಗಿ 10 ವಾಷಿಂಗ್ ಮಷೀನ್ ಅಳವಡಿಕೆಗೆ ಮುಂದಾಗಿದ್ದಾರೆ. ಸಂಸದ ಡಿಕೆ ಸುರೇಶ್ ‌ಕೂಡ ಯೋಜನೆ ಅನುಷ್ಠಾನದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ರಾಮನಗರ: ಗ್ರೇಸ್ ಕಮ್ಯೂನಿಟಿ ಚರ್ಚ್​ಗೆ ಬೆಂಕಿ, ಸುಟ್ಟು ಕರಕಲಾದ ಪ್ರಾರ್ಥನಾ ಪರಿಕರ, ಶಿಲುಬೆ, ಏಸುವಿನ ಮೂರ್ತಿ

ಕೆಲವೇ ದಿನಗಳಲ್ಲಿ ವಾಷಿಂಗ್ ಮಷೀನ್ ಅಳವಡಿಕೆ ಮಾಡಲಾಗುತ್ತಿದೆ. ಶಾಸಕರ ಅನುದಾನ ಸಿಗದಿದ್ದರೂ ತಮ್ಮ ಜೇಬಿನಿಂದ ಅನುಷ್ಠಾನ ಮಾಡಿತ್ತೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಒಂದು ಮಷೀನ್​ಗೆ 35 ಲಕ್ಷ ರೂಪಾಯಿ ಇದ್ದು, ಒಟ್ಟು 10 ಮಷೀನ್​ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಈ ಯೋಜನೆಗೆ ಅಂದಾಜಿ 2 ಕೋಟಿ ರೂಪಾಯಿ ತಗಲುವ ಸಾಧ್ಯತೆ ಇದೆ.

ಮಕ್ಕಳಿಗೆ ಕಾರ್ಟೂನ್ ನೋಡಲು ಡಿಸ್ಪ್ಲೇ ವ್ಯವಸ್ಥೆ

ಸಾಮಾನ್ಯವಾಗಿ ತಾಯಂದಿರುವ ಬಟ್ಟೆ ತೊಳೆಯಲು ಹೋದಾಗ ಸಣ್ಣ ಮಕ್ಕಳು ಕೂಡ ಹೊರಡುತ್ತಾರೆ. ಹೀಗೆ ವಾಷಿಂಗ್ ಮಷೀನ್ ಕೇಂದ್ರಗಳಿಗೆ ತಾಯಂದಿರ ಜೊತೆ ಬರುವ ಮಕ್ಕಳಿಗೆ ಮನರಂಜನೆ ನೀಡಲು ಕಾರ್ಟೂನ್ ನೋಡಲು ಡಿಸ್ಪ್ಲೇ ಅಳವಡಿಸಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ವಾಷಿಂಗ್ ಮಷೀನ್ ಪಕ್ಕದಲ್ಲೇ 10/10 ಡಿಸ್ಪ್ಲೇ ಹಾಕಲಾಗುತ್ತದೆ.

ವಾಷಿಂಗ್ ಮಷೀನ್ ಕೇಂದ್ರ ಉದ್ಘಾಟನೆ

ಪ್ರಾರಂಭಿಕವಾಗಿ 10 ಸಾರ್ವಜನಿಕ ವಾಷಿಂಗ್ ಮಷೀನ್​ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಆರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಈ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ. ಲೋಕಸಭೆ ಚುನಾವಣೆ ಬಳಿಕ ಸ್ವಂತ ಕಟ್ಟಡ ನಿರ್ಮಾಣ ಮಾಡಿ ಅಲ್ಲಿ ವಾಷಿಂಗ್ ಮಷೀನ್​ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಪ್ರತಿ ಕೇಂದ್ರದಲ್ಲೂ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಚುನಾವಣೆ ಸಮೀಪದಲ್ಲಿರುವುದರಿಂದ ಈ ಯೋಜನೆಗೆ ಯಾವುದೇ ಹೆಸರನ್ನು ಇಟ್ಟಿಲ್ಲ. ಚುನಾವಣೆ ನಂತರ ಯೋಜನೆಗೆ ಹೆಸರು ಇಡಲು ನಿರ್ಧರಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ
ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ; ಸೈಂಜ್ ಕಣಿವೆಯಲ್ಲಿ ಪ್ರವಾಹ
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ; ಸೈಂಜ್ ಕಣಿವೆಯಲ್ಲಿ ಪ್ರವಾಹ
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು