AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಪಿಇ ಕಿಟ್ ಧರಿಸಿ ಮುನ್ನೆಚ್ಚರಿಕೆ ವಹಿಸಿದರೂ ವೈದ್ಯರಿಗೆ ಸೋಂಕು, ಕಿಟ್​ನಲ್ಲೂ ಇದೆಯಾ ಎಡವಟ್ಟು!

ದಾವಣಗೆರೆ: ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಜೀವದ ಹಂಗು ತೊರೆದು ಕೋವಿಡ್ ವಾರ್ಡ್​ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಅಗತ್ಯ ರಕ್ಷಾ ಕವಚವಿಲ್ಲದೆ ಮಹಾಮಾರಿ ಸೋಂಕು ಅಂಟಿಸಿಕೊಂಡವರಿಗೆ ಚಿಕಿತ್ಸೆ ನೀಡುವುದು ಕಷ್ಟ. ಒಮ್ಮೆ ಪಿಪಿಇ ಕಿಟ್ ಧರಿಸಿದರೇ ಕನಿಷ್ಠ ಆರು ಗಂಟೆಗಳ ಕಾಲ ಅದನ್ನ ತೆಗೆಯುವಂತಿಲ್ಲ. ಅದನ್ನ ಧರಿಸುವಾಗ ಮತ್ತು ಬಿಚ್ಚುವಾಗ ಆದಷ್ಟು ಜಾಗೃತಿ ವಹಿಸಲೇ ಬೇಕು. ಆದ್ರೆ ಈ ಕಿಟ್​ನಲ್ಲೂ ಯಡವಟ್ಟು ಇರುವುದು ಗೊತ್ತಾಗಿದೆ. ಸರ್ಕಾರ ನೀಡಿದ ಕಿಟ್ ಧರಿಸಿಯೇ ಮೂರು ವೈದ್ಯರು ಒಂದು ವಾರಗಳ ಕಾಲ […]

ಪಿಪಿಇ ಕಿಟ್ ಧರಿಸಿ ಮುನ್ನೆಚ್ಚರಿಕೆ ವಹಿಸಿದರೂ ವೈದ್ಯರಿಗೆ ಸೋಂಕು, ಕಿಟ್​ನಲ್ಲೂ ಇದೆಯಾ ಎಡವಟ್ಟು!
ಆಯೇಷಾ ಬಾನು
|

Updated on:Jun 07, 2020 | 3:34 PM

Share

ದಾವಣಗೆರೆ: ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಜೀವದ ಹಂಗು ತೊರೆದು ಕೋವಿಡ್ ವಾರ್ಡ್​ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಅಗತ್ಯ ರಕ್ಷಾ ಕವಚವಿಲ್ಲದೆ ಮಹಾಮಾರಿ ಸೋಂಕು ಅಂಟಿಸಿಕೊಂಡವರಿಗೆ ಚಿಕಿತ್ಸೆ ನೀಡುವುದು ಕಷ್ಟ. ಒಮ್ಮೆ ಪಿಪಿಇ ಕಿಟ್ ಧರಿಸಿದರೇ ಕನಿಷ್ಠ ಆರು ಗಂಟೆಗಳ ಕಾಲ ಅದನ್ನ ತೆಗೆಯುವಂತಿಲ್ಲ. ಅದನ್ನ ಧರಿಸುವಾಗ ಮತ್ತು ಬಿಚ್ಚುವಾಗ ಆದಷ್ಟು ಜಾಗೃತಿ ವಹಿಸಲೇ ಬೇಕು. ಆದ್ರೆ ಈ ಕಿಟ್​ನಲ್ಲೂ ಯಡವಟ್ಟು ಇರುವುದು ಗೊತ್ತಾಗಿದೆ.

ಸರ್ಕಾರ ನೀಡಿದ ಕಿಟ್ ಧರಿಸಿಯೇ ಮೂರು ವೈದ್ಯರು ಒಂದು ವಾರಗಳ ಕಾಲ ದಾವಣಗೆರೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದರು. ಇವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದ್ರೆ ಅವರಿಗೆ ಕಿಟ್ ಯಡವಟ್ಟಿನಿಂದಲೇ ಸೋಂಕು ತಗುಲಿದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆದ್ರೆ ಕಿಟ್​ಗಳಲ್ಲಿ ಗಾಗಲ್, ಗೌನ್, ಎರಡು ರೀತಿಯ ಮಾಸ್ಕ್ ಸೇರಿದಂತೆ ಕನಿಷ್ಠ ಹತ್ತು ವಸ್ತುಗಳು ಇರುತ್ತವೆ. ಈ ಕಿಟ್​ಗಳಿಂದ ಕೊರೊನಾ ಚಿಕಿತ್ಸೆಗೆ ತೆರಳುವ ವೈದ್ಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಸೂಕ್ತ ರಕ್ಷಣೆ ಸಿಗುತ್ತದೆ ಎಂದು ವೈದ್ಯಕೀಯ ಲೋಕ ಸ್ಪಷ್ಟ ಪಡಿಸಿದೆ.

ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ನೀಡಿರುವ ಕಿಟ್​ಗಳಲ್ಲಿ 10 ಅವಶ್ಯಕ ಸಾಮಾಗ್ರಿಗಳ ಬದಲಾಗಿ ಏಳು ಸಾಮಾಗ್ರಿಗಳಿವೆ. ಹಾಗೂ ಜೀವ ಉಳಿಸುತ್ತಿರುವ ವೈದ್ಯರ ಜೀವನದ ಜೊತೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಕಳಪೆ ಮಟ್ಟದ ಕಿಟ್​ಗಳನ್ನು ನೀಡಲಾಗುತ್ತಿದೆ. ಹೀಗಾಗಿಯೇ ವೈದ್ಯರಿಗೂ ಸೋಂಕು ತಗುಲುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ. ಈ ಬಗ್ಗೆ ಸ್ವತಃ ವೈದ್ಯರೇ ತಿಳಿಸಬೇಕಿದೆ. ಹಾಗೂ ಸೂಕ್ತ ರೀತಿಯಲ್ಲಿ ಅದನ್ನ ಧರಿಸುವ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡುವ ಅಗತ್ಯವಿದೆ.

Published On - 10:25 am, Sun, 7 June 20

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್