AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಮಧ್ಯೆಯೂ ಗ್ರಾಮವೊಂದರಲ್ಲಿ ಭರ್ಜರಿಯಾಗಿ ಕಾರಹುಣ್ಣಿಮೆ ಆಚರಣೆ

ವಿಜಯಪುರ: ಡೆಡ್ಲಿ ವೈರಸ್ ಕೊರೊನಾ ಇಡೀ ದೇಶವನ್ನೇ ತನ್ನ ಕಪಿಮುಷ್ಟಿಯಲ್ಲಿ ಹಿಡಿದು ಆಟವಾಡಿಸುತ್ತಿದೆ. ಆದರೆ ಇದರ ಭಯವೇ ಇಲ್ಲದೆ ಕೊರೊನಾ ಮಧ್ಯೆಯೂ ಭರ್ಜರಿಯಾಗಿ ಕಾರಹುಣ್ಣಿಮೆ ಆಚರಣೆ ಮಾಡಿರುವ ಘಟನೆ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿ ನಡೆದಿದೆ. ಕಾರಹುಣ್ಣಿಮೆ ಆಚರಣೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸರ್ಕಾರದ ನಿಯಮಗಳನ್ನು ಮರೆತು ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಿ, ಗುಂಪು ಗುಂಪಾಗಿ ಸೇರಿ ವಿಜೃಂಭಿಸಿದ್ದಾರೆ. ಎತ್ತಿನ ಬಂಡಿ ರೇಸ್, ಗುಂಡು ಕಲ್ಲು ಎತ್ತುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಿಗೆ ಪರವಾನಿಗೆಯನ್ನೂ ಪಡೆದಿಲ್ಲ, ಸಾಮಾಜಿಕ ಅಂತರವೂ ಕಾಪಾಡಿಲ್ಲ […]

ಕೊರೊನಾ ಮಧ್ಯೆಯೂ ಗ್ರಾಮವೊಂದರಲ್ಲಿ ಭರ್ಜರಿಯಾಗಿ ಕಾರಹುಣ್ಣಿಮೆ ಆಚರಣೆ
ಆಯೇಷಾ ಬಾನು
|

Updated on:Jun 07, 2020 | 3:32 PM

Share

ವಿಜಯಪುರ: ಡೆಡ್ಲಿ ವೈರಸ್ ಕೊರೊನಾ ಇಡೀ ದೇಶವನ್ನೇ ತನ್ನ ಕಪಿಮುಷ್ಟಿಯಲ್ಲಿ ಹಿಡಿದು ಆಟವಾಡಿಸುತ್ತಿದೆ. ಆದರೆ ಇದರ ಭಯವೇ ಇಲ್ಲದೆ ಕೊರೊನಾ ಮಧ್ಯೆಯೂ ಭರ್ಜರಿಯಾಗಿ ಕಾರಹುಣ್ಣಿಮೆ ಆಚರಣೆ ಮಾಡಿರುವ ಘಟನೆ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿ ನಡೆದಿದೆ.

ಕಾರಹುಣ್ಣಿಮೆ ಆಚರಣೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸರ್ಕಾರದ ನಿಯಮಗಳನ್ನು ಮರೆತು ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಿ, ಗುಂಪು ಗುಂಪಾಗಿ ಸೇರಿ ವಿಜೃಂಭಿಸಿದ್ದಾರೆ. ಎತ್ತಿನ ಬಂಡಿ ರೇಸ್, ಗುಂಡು ಕಲ್ಲು ಎತ್ತುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಿಗೆ ಪರವಾನಿಗೆಯನ್ನೂ ಪಡೆದಿಲ್ಲ, ಸಾಮಾಜಿಕ ಅಂತರವೂ ಕಾಪಾಡಿಲ್ಲ ಹಾಗೂ ಮಾಸ್ಕ್ ಧರಿಸದೆ ಕಾರ್ಯಕ್ರಮಗಳಲ್ಲಿ ಊರಿನ ಜನ ಭಾಗವಹಿಸಿದ್ದಾರೆ. ಎತ್ತಿನ ಬಂಡಿ ಓಟ, ಗುಂಡು ಕಲ್ಲು ಎತ್ತುವ ಸ್ಪರ್ಧೆ ನೋಡಲು ಗುಂಪು ಗುಂಪಾಗಿ ಜನ ಸೇರಿದ್ದರು.

Published On - 9:22 am, Sun, 7 June 20