AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಡೇ ಲಾಕ್​ಡೌನ್​ಗೆ ಬೆಂಗಳೂರಿಗರು ಡೋಂಟ್ ಕೇರ್, ಬ್ಯಾರಿಕೇಡ್ ಹಾಕಿದ್ರೂ ಸಂಚಾರ

ಬೆಂಗಳೂರು: ಕೊರೊನಾ ಕಟ್ಟಿಹಾಕಲು ರಾಜ್ಯ ಸರ್ಕಾರ ಕಳೆದ ವಾರ ಬೆಂಗಳೂರಿಗೆ ಬೀಗ ಹಾಕಿತ್ತು. ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಲಾಕ್​ಡೌನ್ ತೆರವುಗೊಳಿಸಿ, ಸಂಡೇ ಲಾಕ್​ಡೌನ್​ನ ಮುಂದುವರಿಸಿತ್ತು. ಹೀಗಾಗಿಯೇ ನಿನ್ನೆ ರಾತ್ರಿಯಿಂದ ಸಂಡೇ ಲಾಕ್​ಡೌನ್ ಶುರುವಾಗಿದ್ದು, ನಾಳೆ ಬೆಳಗಿನವರೆಗೆ ಎಲ್ಲವೂ ಬಂದ್ ಆಗಿರಬೇಕಿತ್ತು. ಆದರೆ ಅದ್ಯಾವುದು ಆಗಿಲ್ಲ. ಬ್ಯಾರಿಕೇಡ್ ಹಾಕಿದ್ರೂ ಡೋಂಟ್ ಕೇರ್ ಕೊರೊನಾ ಏಟಿಗೆ ಬೆಂಗಳೂರಿನ ರಸ್ತೆಗಳು ಬಿಕೋ ಅನ್ನಬೇಕಿತ್ತು ಆದರೆ ಜನ ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗಳಿದಿದ್ದಾರೆ. ಆದರೆ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್​ಗಳಿಲ್ಲದೆ […]

ಸಂಡೇ ಲಾಕ್​ಡೌನ್​ಗೆ ಬೆಂಗಳೂರಿಗರು ಡೋಂಟ್ ಕೇರ್, ಬ್ಯಾರಿಕೇಡ್ ಹಾಕಿದ್ರೂ ಸಂಚಾರ
ಆಯೇಷಾ ಬಾನು
| Updated By: |

Updated on:Jul 26, 2020 | 3:52 PM

Share

ಬೆಂಗಳೂರು: ಕೊರೊನಾ ಕಟ್ಟಿಹಾಕಲು ರಾಜ್ಯ ಸರ್ಕಾರ ಕಳೆದ ವಾರ ಬೆಂಗಳೂರಿಗೆ ಬೀಗ ಹಾಕಿತ್ತು. ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಲಾಕ್​ಡೌನ್ ತೆರವುಗೊಳಿಸಿ, ಸಂಡೇ ಲಾಕ್​ಡೌನ್​ನ ಮುಂದುವರಿಸಿತ್ತು. ಹೀಗಾಗಿಯೇ ನಿನ್ನೆ ರಾತ್ರಿಯಿಂದ ಸಂಡೇ ಲಾಕ್​ಡೌನ್ ಶುರುವಾಗಿದ್ದು, ನಾಳೆ ಬೆಳಗಿನವರೆಗೆ ಎಲ್ಲವೂ ಬಂದ್ ಆಗಿರಬೇಕಿತ್ತು. ಆದರೆ ಅದ್ಯಾವುದು ಆಗಿಲ್ಲ.

ಬ್ಯಾರಿಕೇಡ್ ಹಾಕಿದ್ರೂ ಡೋಂಟ್ ಕೇರ್ ಕೊರೊನಾ ಏಟಿಗೆ ಬೆಂಗಳೂರಿನ ರಸ್ತೆಗಳು ಬಿಕೋ ಅನ್ನಬೇಕಿತ್ತು ಆದರೆ ಜನ ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗಳಿದಿದ್ದಾರೆ. ಆದರೆ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್​ಗಳಿಲ್ಲದೆ ಸಂಪೂರ್ಣ ಸ್ತಬ್ಧವಾಗಿದೆ.

ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಹಿನ್ನೆಲೆಯಲ್ಲಿ K.R.ಮಾರ್ಕೆಟ್‌ ಓಪನ್ ಇಲ್ಲದಿದ್ರೂ ರಸ್ತೆ ಬದಿ, ಕೆ.ಆರ್.ಮಾರ್ಕೆಟ್‌ ಸುತ್ತಮುತ್ತ ಹಣ್ಣು, ತರಕಾರಿ ಮಾರಾಟ ಮಾಡಲಾಗುತ್ತಿದೆ. ಲಾಲ್‌ಬಾಗ್‌ ಕ್ಲೋಸ್‌ ಆಗಿದ್ರೂ ಪಾರ್ಕ್‌ ಹೊರಗೆ ಜನರು ವಾಕಿಂಗ್‌ ಮಾಡುತ್ತಿದ್ದಾರೆ. ಬ್ಯಾರಿಕೇಡ್ ಹಾಕಿದ್ರೂ ಲಾಲ್‌ಬಾಗ್‌ ಸುತ್ತಮುತ್ತ ಎಂದಿನಂತೆ ವಾಹನಗಳ ಸಂಚಾರ ಕಂಡು ಬಂತು.

ಈ ಬಾರಿಯ ಸಂಡೇ ಲಾಕ್​ಡೌನ್​ಗೆ ಜನ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಪ್ರತಿ ದಿನದಂತೆ ರಸ್ತೆಗಿಳಿಯುತ್ತಿದ್ದಾರೆ. ಈಗಾಗಲೇ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ ಇದರ ನಡುವೆ ಈ ರೀತಿ ಜನರು ವರ್ತಿಸುತ್ತಿರುವುದು ಮುಂದೆ ದೊಡ್ಡ ಕಂಟಕಕ್ಕೆ ಆಹ್ವಾನ ನೀಡಿದಂತಾಗುತ್ತೆ.

Published On - 8:42 am, Sun, 26 July 20

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್