AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಲಾ ಮೌನ ತಂದ ಆಪತ್ತು; ಮೂರನೇ ವಾರದ ಎಲಿಮಿನೇಷನ್​ಗೆ ನಾಮಿನೇಟ್​ ಆದ ಪ್ರಶಾಂತ್​ ಸಂಬರಗಿ!

ನಿರ್ಮಲಾ ಮನೆಯಿಂದ ಹೊರ ಹೋಗುವಾಗ ಮುಂದಿನ ವಾರದ ಎಲಿಮಿನೇಷನ್​ಗೆ ಯಾರನ್ನಾದರೂ ನಾಮಿನೇಟ್​ ಮಾಡಬೇಕು ಎಂದು ಬಿಗ್​ ಬಾಸ್​ ಹೇಳಿದರು. ಆದರೆ, ಇದಕ್ಕೆ ನಿರ್ಮಲಾ ಮನಸ್ಸು ಒಪ್ಪಲೇ ಇಲ್ಲ.

ನಿರ್ಮಲಾ ಮೌನ ತಂದ ಆಪತ್ತು; ಮೂರನೇ ವಾರದ ಎಲಿಮಿನೇಷನ್​ಗೆ ನಾಮಿನೇಟ್​ ಆದ ಪ್ರಶಾಂತ್​ ಸಂಬರಗಿ!
ಪ್ರಶಾಂತ್​ ಸಂಬರಗಿ
Follow us
ರಾಜೇಶ್ ದುಗ್ಗುಮನೆ
| Updated By: ಆಯೇಷಾ ಬಾನು

Updated on:Mar 15, 2021 | 6:50 AM

ಪ್ರಶಾಂತ್​ ಸಂಬರಗಿ ಎರಡನೇ ವಾರದಲ್ಲಿ ಸೇಫ್​ ಆಗಿದ್ದಾರೆ. ಅಬ್ಬಾ ನಾನಂತೂ ಸೇಫ್​ ಎಂದು ನಿಟ್ಟುಸಿರು ಬಿಡುವಾಗಲೇ ಮತ್ತೆ ಮೂರನೇ ವಾರದ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದಾರೆ. ಈ ವಿಚಾರ ಅವರಿಗೆ ನಿಜಕ್ಕೂ ಶಾಕ್​ ನೀಡಿದೆ! ಅಷ್ಟಕ್ಕೂ ಇವರು ಎಲಿಮಿನೇಟ್​ ಆಗಲು ಕಾರಣ ನಿರ್ಮಲಾ ಚೆನ್ನಪ್ಪ ಮೌನ! ಬಹುಪ್ರತಿಭಾನ್ವಿತ ನಿರ್ಮಲಾ ಚೆನ್ನಪ್ಪ ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಗಳಲ್ಲಿ ಒಬ್ಬರಾಗಿ ಮನೆ ಸೇರಿದ್ದರು. ಆದರೆ, ಅವರು ಅಂದುಕೊಂಡ ಮಟ್ಟದಲ್ಲಿ ಆಟವಾಡಿಲ್ಲ. ಸತತ ಎರಡನೇ ವಾರವೂ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದರು. ಕಳೆದ ವಾರ ಬಚಾವ್​ ಆಗಿದ್ದ ಅವರು, ಈ ವಾರ ಎಲಿಮಿನೇಟ್​ ಆಗಿದ್ದರು.

ನಿರ್ಮಲಾ ಮನೆಯಿಂದ ಹೊರ ಹೋಗುವಾಗ ಮುಂದಿನ ವಾರದ ಎಲಿಮಿನೇಷನ್​ಗೆ ಯಾರನ್ನಾದರೂ ನಾಮಿನೇಟ್​ ಮಾಡಬೇಕು ಎಂದು ಬಿಗ್​ ಬಾಸ್​ ಹೇಳಿದರು. ಆದರೆ, ಇದಕ್ಕೆ ನಿರ್ಮಲಾ ಮನಸ್ಸು ಒಪ್ಪಲೇ ಇಲ್ಲ. ನಾನು ಮನೆಯಲ್ಲಿ ಎಲ್ಲರ ಜತೆಗೂ ಉತ್ತಮವಾಗಿದ್ದೆ. ಹೀಗಾಗಿ, ನನಗೆ ಯಾರನ್ನೂ ನಾಮಿನೇಟ್​ ಮಾಡೋಕೆ ಇಷ್ಟವಿಲ್ಲ ಎಂದರು.

ಒಂದೊಮ್ಮೆ ನಿರ್ಮಲಾ ಯಾರ ಹೆಸರನ್ನೂ ಸೂಚಿಸದಿದ್ದರೆ ಪ್ರಶಾಂತ್​ ಅವರು ಮುಂದಿನ ವಾರದ ಎಲಿಮಿನಿಷೇನ್​ಗೆ ನೇರವಾಗಿ ನಾಮಿನೇಟ್​ ಆಗುತ್ತಾರೆ ಎಂದು ಬಿಗ್​ ಬಾಸ್​ ಘೋಷಿಸಿದರು. ಬಿಗ್​ ಬಾಸ್ ಹೀಗೆ ಘೋಷಿಸುವುದಕ್ಕೂ ಒಂದು ಕಾರಣವಿದೆ.

ಇಂದು ಒಂದು ಟಾಸ್ಕ್​ ನೀಡಲಾಗಿತ್ತು. ಇದರನ್ವಯ ಪ್ರತಿ ಅಭ್ಯರ್ಥಿ ಯಾರು ಫೇಕ್​, ಯಾರು ಒಳ್ಳೆಯವರು ಎಂದು ಹೇಳಬೇಕು. ಆಗ ನಿರ್ಮಲಾ ಆಯ್ಕೆ ಮಾಡಿದ್ದು ಪ್ರಶಾಂತ್​ ಸಂಬರಗಿಯನ್ನ. ನಿರ್ಮಲಾ ಫೇಕ್​ ಎಂದು ಆಯ್ಕೆ ಮಾಡಿದವರನ್ನು ನಾಮಿನೇಷನ್​ ಮಾಡುವ ನಿರ್ಧಾರಕ್ಕೆ ಬಿಗ್​ ಬಾಸ್​ ಬಂದಿದ್ದರಿಂದ ಪ್ರಶಾಂತ್​ ನಾಮಿನೇಟ್​ ಆದರು.

ನಿರ್ಮಲಾ ಮನೆಯಿಂದ ಹೊರ ಹೋಗೋಕೆ ಕಾರಣ:

ನಿರ್ಮಲಾ ಮನೆಯವರ ಜತೆ ಹೆಚ್ಚು ಹೊಂದುಕೊಳ್ಳುತ್ತಿಲ್ಲ. ಅವರೇ ಬೇರೆ ರೀತಿ ಇರುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಮೊದಲ ವಾರದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಸ್ಪರ್ಧಿ ಎಂದರೆ ಅದು ನಿರ್ಮಲಾ ಚೆನ್ನಪ್ಪ. ಎಲ್ಲ ಸದಸ್ಯರು ಒಂದು ಹಾದಿಯಲ್ಲಿ ಸಾಗಿದರೆ, ನಿರ್ಮಲಾ ಪ್ರತ್ಯೇಕ ಹಾದಿಯಲ್ಲಿ ಹೋಗುತ್ತಿದ್ದರು. ಅವರ ವರ್ತನೆ ಅನೇಕರಿಗೆ ಅಚ್ಚರಿ ಮೂಡಿಸಿತ್ತು. ದೊಡ್ಮನೆಯೊಳಗೆ ನಿರ್ಮಲಾ ಬಗ್ಗೆ ಇರುವ ಮೊದಲ ಮತ್ತು ಮುಖ್ಯವಾದ ಕಂಪ್ಲೆಂಟ್​ ಎಂದರೆ, ಅವರು ಕ್ಯಾಮರಾ ಎದುರು ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಾರೆ ಎಂಬುದು. ಹಗಲು-ರಾತ್ರಿ ಎನ್ನದೇ ಅವರು ಏನೇನೋ ಮಾತನಾಡುತ್ತ ಇರುತ್ತಿದ್ದರು. ಸೋಮವಾರ ನಾಮಿನೇಷನ್​ ಆಗುವಾಗ ಅತಿ ಹೆಚ್ಚು ಮತ ಬಿದ್ದಿದ್ದು ಕೂಡ ಇವರಿಗೇ ಆಗಿತ್ತು. ಈಗ ವೀಕ್ಷಕರು ನಿರ್ಮಲಾ ಕೈ ಹಿಡಿದಿಲ್ಲ. ಹೀಗಾಗಿ, ಅವರು ಬಿಗ್​ ಬಾಸ್ ಮನೆಯಿಂದ ಹೊರ ಹೋಗುತ್ತಿರುವ ಎರಡನೇ ಅಭ್ಯರ್ಥಿ ಇವರಾಗಿದ್ದಾರೆ.

ಇದನ್ನೂ ಓದಿ: Bigg Boss Kannada Elimination: ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆದ ನಿರ್ಮಲಾ ಚೆನ್ನಪ್ಪ; ಇಲ್ಲಿದೆ ಕಾರಣ

Published On - 6:48 am, Mon, 15 March 21

ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು