AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹವಾಮಾನ ಇಲಾಖೆ ಹೇಗೆ ಕೆಲಸ ಮಾಡುತ್ತದೆ? ಮಳೆ ಮುನ್ಸೂಚನೆಗೆ ಈಗ ಬಳಸುತ್ತಿರುವ ತಂತ್ರಜ್ಞಾನ ಯಾವುದು?

ಹವಾಮಾನ ಇಲಾಖೆ ನೀಡುವ ಮಳೆ ಮುನ್ಸೂಚನೆಗಳು ಬಹುತೇಕ ಸಮಯದಲ್ಲಿ ಸುಳ್ಳಾಗುತ್ತವೆ ಈ ಬಗ್ಗೆ ಹಲವು ಜೋಕುಗಳೆ ಚಾಲ್ತಿಯಲ್ಲಿವೆ. ಹಾಗಿದ್ದರೆ ಈ ಇಲಾಖೆ ಹವಾಮಾನ ಮುನ್ಸೂಚನೆ ನೀಡಲು ಬಳಸುವ ತಂತ್ರಜ್ಞಾನ ಯಾವುದು? ಮಳೆ ಮುನ್ಸೂಚನೆಗಳು ಸುಳ್ಳಾಗುವುದೇಕೆ? ಈ ಬಗ್ಗೆ ವಿವರವಾಗಿ ವಿಜ್ಞಾನಿ ಕುವಿ ಅರಸನ್ ಮಾತನಾಡಿದ್ದಾರೆ.

ಮಂಜುನಾಥ ಸಿ.
| Edited By: |

Updated on:Apr 27, 2024 | 5:13 PM

Share

‘ಹವಾಮಾನ ಇಲಾಖೆ ಕೊಡುವ ಮಳೆ ಮುನ್ಸೂಚನೆ ನಿಜವಾಗುತ್ತದೆ ಎಂದರೆ ನಂಬಬಹುದೇನೋ, ಆರ್​ಸಿಬಿ ಕಪ್ ಗೆಲ್ಲುತ್ತದೆ ಎಂದರೆ ನಂಬಲಾಗದು’ ಸಾಮಾಜಿಕ ಜಾಲತಾಣದಲ್ಲಿಈ ರೀತಿಯ ಜೋಕ್​ಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಈ ಜೋಕ್​ನಲ್ಲಿ ಆರ್​ಸಿಬಿ ಭಾಗವನ್ನು ಬಿಟ್ಟು ಗಮನಿಸಿದರೆ ಹವಾಮಾನ ಇಲಾಖೆ ಬಗ್ಗೆ ಜನರಿಗೆ ಇರುವ ಅಪನಂಬಿಕೆ, ತಾತ್ಸಾರದ ಅರಿವಾಗುತ್ತದೆ. ಇದು ಮಾತ್ರವಲ್ಲ ಹವಾಮಾನ ಇಲಾಖೆ ನೀಡುವ ಮುನ್ಸೂಚನೆಗಳು ಸುಳ್ಳಾಗುವ ಬಗ್ಗೆ ಹಲವು ಜೋಕ್​ಗಳು ಚಾಲ್ತಿಯಲ್ಲಿವೆ. ಹವಾಮಾನ ಇಲಾಖೆಯ ಮುನ್ಸೂಚನೆಗಳು ಸುಳ್ಳಾಗುವುದೇಕೆ? ಇಲಾಖೆಯ ಅಧಿಕಾರಿಗಳು ಸುಮ್ಮನೆ ಆಕಾಶ ನೋಡಿ ಮುನ್ಸೂಚನಾ ವರದಿ ನೀಡುತ್ತಾರೆಯೇ? ವರದಿ ನೀಡಲು ಇಲಾಖೆ ಬಳಸುವ ತಂತ್ರಜ್ಞಾನಗಳು ಯಾವುವು? ಹವಾಮಾನದ ಗುಣ ಅಳೆಯುವ ಮಾಪನಗಳು ಯಾವುವು? ಮುನ್ಸೂಚನೆಗಳು ವಿಫಲವಾಗುವುದು ಏಕೆ? ಎಲ್ಲ ವಿಷಯಗಳ ಬಗ್ಗೆ ಬೆಂಗಳೂರಿನ ಹವಾಮಾನ ಇಲಾಖೆ ಮುಖ್ಯಸ್ಥ ವಿಜ್ಞಾನಿ ಕುವಿ ಅರಸನ್ ವಿವರವಾಗಿ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಭೂ ವಿಜ್ಞಾನ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುವ ಮೆಟ್ರೊಲೊಜಿ ಅಥವಾ ಹವಾಮಾನ ಮುನ್ಸೂಚನೆ ಮತ್ತು ಮಾಪನ ವಿಭಾಗವು ಕೇವಲ ಮಳೆ ಮುನ್ಸೂಚನೆಗಳನ್ನು ಮಾತ್ರವೇ ನೀಡುವುದಿಲ್ಲ. ಈ ವಿಭಾಗವು ರೈತರಿಗೆ ಮಳೆ ಮುನ್ಸೂಚನೆ ನೀಡುವ ಜೊತೆಗೆ ದೇಶದ ಪ್ರತಿಯೊಂದು ವಿಮಾನ ನಿಲ್ದಾಣದಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ಹವಾಮಾನ ಮಾಹಿತಿ ನೀಡುತ್ತದೆ. ದೇಶದ ಎಲ್ಲ ವಿಮಾನ ನಿಲ್ದಾಣದಲ್ಲಿ ಹವಾಮಾನ ಇಲಾಖೆಯ ಕಚೇರಿ ಇದೆ. ಅಣೆಕಟ್ಟೆ ನೀರಿನ ಮಟ್ಟ ನಿಗಾ, ಸ್ಯಾಟಲೈಟ್ ಮಾಪನ, ಅಂತರ್ಜಲದ ಅಧ್ಯಯನ, ಭೂಕಂಪನ ಮಾಪನ ಇನ್ನೂ ಕೆಲವು ಕಾರ್ಯಗಳು ಈ ಸಂಸ್ಥೆಯ ಕಾರ್ಯಮಿತಿಯಲ್ಲಿ ಬರುತ್ತವೆ. ಈ ಇಲಾಖೆ ನೀಡುವ ಹವಾಮಾನ ಮುನ್ಸೂಚನೆಯನ್ನು ದೇಶದ ಹಲವು...

Published On - 12:31 pm, Thu, 25 April 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು