AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Special Food : ಮಳೆಗಾಲದಲ್ಲಿ ಕರಾವಳಿಗರ ಅಡುಗೆ ಮನೆಯಲ್ಲಿ ‘ನರ್ತೆ’ ಘಮ

ಮಳೆಗಾಲ ಆರಂಭವಾಗುತ್ತಿದ್ದಂತೆ ಕರಾವಳಿಯ ಜನರ ಆಹಾರ ಪದ್ಧತಿಯೇ ವಿಭಿನ್ನ. ಜಿಟಿ ಜಿಟಿ ಮಳೆ ಶುರುವಾಗುತ್ತಿದ್ದಂತೆ ಗದ್ದೆಯಲ್ಲಿ ಸಿಗುವ ಬಸವನ ಹುಳುವಿನ ಜಾತಿಯ (ನರ್ತೆ) ಅಡುಗೆ ಸಿಕ್ಕಾಪಟ್ಟೆ ಫೇಮಸ್. ಯಾರ ಮನೆ ಬಾಗಿಲಿಗೆ ಹೋದರೂ ಈ ಅಡುಗೆ ಘಮವು ಮೂಗಿಗೆ ಬಡಿಯುತ್ತದೆ. ಹಾಗಾದ್ರೆ ಈ ವಿಶೇಷ ಅಡುಗೆಯ ಆ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ.

Special Food : ಮಳೆಗಾಲದಲ್ಲಿ ಕರಾವಳಿಗರ ಅಡುಗೆ ಮನೆಯಲ್ಲಿ 'ನರ್ತೆ' ಘಮ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jun 25, 2024 | 4:10 PM

Share

ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಲಿಸಿದರೆ ಆಹಾರ ಪದ್ಧತಿಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದು. ಆದರೆ ಮಳೆಗಾಲದಲ್ಲಿ ಕರಾವಳಿ ಪ್ರದೇಶದ ಆಹಾರ ಪದ್ಧತಿಯು ವಿಶೇಷತೆಯಿಂದ ಕೂಡಿದೆ. ಸುತ್ತ ಮುತ್ತಲಿನ ಪರಿಸರದಲ್ಲೇ ಸಿಗುವುದರಲ್ಲಿಯೇ ಆಹಾರವನ್ನು ತಯಾರಿಸಿ ಸೇವಿಸುವ ಬಗೆ ತುಳುವರಿಗೆ ಮಾತ್ರ ಗೊತ್ತು. ಮಳೆಗಾಲದ ಆರಂಭದಲ್ಲಿ ಕರಾವಳಿಗರ ಮನೆಗೆ ಹೋದರೆ ನರ್ತೆ (ಮೃದ್ವಂಗಿಗಳು)ಯ ಅಡುಗೆಯ ಘಮವೇ ಬೇರೆ.

ಹೌದು, ಜೂನ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಗದ್ದೆಗಳಲ್ಲಿ ಕಾಣ ಸಿಗುವ ಶಂಖಾಕೃತಿಯ ಈ ಮೃದ್ವಂಗಿಗಳಿಗೆ ಕರಾವಳಿಗರು ಆಡುಭಾಷೆಯಲ್ಲಿ ನರ್ತೆ ಎಂದು ಕರೆಯುತ್ತಾರೆ. ಗಾತ್ರದಲ್ಲಿ ತುಂಬಾ ಚಿಕ್ಕದಿದ್ದರೆ ಅವುಗಳನ್ನು ಗುಳ್ಳೆ ಎನ್ನುವುದಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಇಲ್ಲಿನ ಜನರು ಗದ್ದೆಯ ಬದುಗಳಲ್ಲಿ ನರ್ತೆ ಹೆಕ್ಕುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇದೊಂದು ಮಾಂಸಹಾರವಾಗಿದ್ದು, ಈ ಚಿಪ್ಪಿರುವ ಜೀವಿಯನ್ನು ಪಲ್ಯ ಅಥವಾ ಸುಕ್ಕ ಮಾಡಿ ಸೇವಿಸಿದರೆ ಅದರ ರುಚಿ ಸವಿದವರಿಗೆ ಮಾತ್ರ ಬಲ್ಲರು. ಕೆಲವರು ಈ ನರ್ತೆಗೆ ಬಸಳೆ ಹಾಗೂ ಸೌತೆಕಾಯಿಯನ್ನು ಹಾಕಿ ಪದಾರ್ಥ ಮಾಡಿ ಸೇವಿಸುತ್ತಾರೆ.

ರೈತರ ಮಿತ್ರ ಈ ನರ್ತೆ ಅಥವಾ ಮೃದ್ವಂಗಿಗಳು

ಬೇಸಿಗೆಗಾಲ ಪ್ರಾರಂಭವಾಗುತ್ತಿದ್ದಂತೆ ಮಣ್ಣಿನಡಿಲ್ಲಿರುವ ಜೀವಿಸುವ ಈ ಜೀವಿಗಳು ಮತ್ತೆ ಕಾಣಿಸಿಕೊಳ್ಳುವುದು ಮಳೆಗಾಲದಲ್ಲೇ ಮಾತ್ರ. ಹೌದು, ಗದ್ದೆಗಳ ಅಂಟುಮಣ್ಣಿನಲ್ಲಿ ಅವಿತಿರುವ ಈ ನರ್ತೆಗಳಿಗೆ ಪಾಚಿ, ಕೆಸರು ಮಣ್ಣೇ ಆಹಾರವಾಗಿದೆ. ರೈತರ ಮಿತ್ರ ಎಂದೇ ಕರೆಸಿಕೊಂಡಿರುವ ಈ ಮೃದ್ವಂಗಿಗಳು ಮಣ್ಣನ್ನು ಹದಗೊಳಿಸುವ ಕೆಲಸ ಹಾಗೂ ಬೆಳೆ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಇದನ್ನೂ ಓದಿ: ಒತ್ತಡಲ್ಲಿರುವಾಗ ಈ ಆಹಾರಗಳ ಕಡೆಗೆ ತಿರುಗಿಯೂ ನೋಡಬೇಡಿ

ಗದ್ದೆಗಳಲ್ಲಿ ಕಾಣಸಿಗುವ ನರ್ತೆಯ ದೇಹ ರಚನೆ ಹೇಗಿದೆ?

ಮೃದ್ವಂಗಿಗಳ ಮೆತ್ತನೆಯ ಮುದ್ದೆಯಂತಹ ಶರೀರ, ಅಸ್ಥಿಪಂಜರ ರಹಿತ ದೇಹವನ್ನು ಹೊಂದಿದೆ. ತಮ್ಮ ಶರೀರ ರಕ್ಷಣೆಗೆ ಹಾಗೂ ಚಲನೆಗೆ ಯೋಗ್ಯವಾಗುವಂತಹ ಗಟ್ಟಿಯಾದ ಬಾಹ್ಯ ಕವಚವು ಶರೀರವನ್ನು ಆವರಿಸಿದೆ. ಮಳೆಗಾಲದಲ್ಲಿ ಗದ್ದೆಯ ನೀರಿನ ಹರಿವಿನೊಂದಿಗೆ ಸಂಚರಿಸುವ ಈ ಜೀವಿಗಳು ಇಂದು ಅಳಿವಿನಂಚಿನಲ್ಲಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ