AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮೋಕಿಂಗ್‌ ದುಶ್ಚಟವನ್ನು ಬಿಡಲು ಬಯಸಿದರೆ ಈ ಸರಳ ಸಲಹೆಗಳನ್ನು ಪಾಲಿಸಿ

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ ಅನೇಕರು ಈ ದುಷ್ಚಟಕ್ಕೆ ದಾಸರಾಗಿದ್ದಾರೆ. ಪ್ರತಿದಿನ ಸಿಗರೇಟ್‌ ಸೇದುವುದರಿಂದ ನಂತರದಲ್ಲಿ ಹಲವು ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಧೂಮಪಾನ ಬಿಟ್ಟುಬಿಡಿ ಎಂದು ಸಲಹೆ ನೀಡಲಾಗುತ್ತದೆ. ಆದರೆ ಅನೇಕರಿಗೆ ಎಷ್ಟೇ ಪ್ರಯತ್ನಿಸಿದರೂ ಧೂಮಪಾನ ವ್ಯಸನದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ದಿನನಿತ್ಯ ಈ ಕೆಲವೊಂದು ಸರಳ ಕೆಲಸಗಳನ್ನು ಮಾಡುವ ಮೂಲಕ ಧೂಮಪಾನವನ್ನು ತ್ಯಜಿಸಬಹುದು.

ಸ್ಮೋಕಿಂಗ್‌ ದುಶ್ಚಟವನ್ನು ಬಿಡಲು ಬಯಸಿದರೆ ಈ ಸರಳ ಸಲಹೆಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರImage Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 06, 2026 | 6:11 PM

Share

ಮುಖ್ಯಾಂಶಗಳು

  • ಧೂಮಪಾನವ ಅರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ
  • ದೃಢ ಸಂಕಲ್ಪವನ್ನು ತೆಗೆದುಕೊಳ್ಳುವ ಮೂಲಕ ಧೂಮಪಾನವನ್ನು ಬಿಡಬಹುದು
  • ಧೂಮಪಾನವನ್ನು ತ್ಯಜಿಸುವ ಮೂಲಕ ಆರೋಗ್ಯಕರ ಜೀವನ ನಡೆಸಬಹುದು

ಧೂಮಪಾನವು (smoking) ಅರೋಗ್ಯದ ಮೇಲೆ ಗಂಭೀರವಾದ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಧೂಮಪಾನ  ಮೆದುಳಿನಲ್ಲಿ ಡೋಪಮೈನ್ ಅನ್ನು ಬಿಡುಗಡೆ ಮಾಡಿ, ತ್ವರಿತ ಸಂತೋಷವನ್ನು ನೀಡಿದರೂ ಇದು ದೀರ್ಘಾವಧಿಯಲ್ಲಿ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೌದು ಈ ದುಷ್ಚಟ ಕ್ಯಾನ್ಸರ್‌, ಶ್ವಾಸಕೋಶದ ಕಾಯಿಲೆ, ಹೃದ್ರೋಗ, ಕ್ಯಾನ್ಸರ್‌ನಂತಹ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಧೂಮಪಾನದ ನಕಾರಾತ್ಮಕ ಪರಿಣಾಮಗಳ ಬಗ್ಗೆ ಗೊತ್ತಿದ್ದರೂ ಸಹ ಅನೇಕರು ಈ ದುಷ್ಚಟಕ್ಕೆ ದಾಸರಾಗಿದ್ದಾರೆ. ಒಮ್ಮೆ ಈ ಅಭ್ಯಾಸಕ್ಕೆ ಅಡಿಕ್ಟ್‌ ಆದ್ರೆ ಅದನ್ನು ಬಿಡುವುದು ಅಷ್ಟು ಸುಲಭವಲ್ಲ ಜೊತೆಗೆ ಧೂಮಪಾನ ಬಿಡುವುದು ಅಷ್ಟು ಕಷ್ಟವೂ ಅಲ್ಲ, ದೃಢ ಸಂಕಲ್ಪ ಮಾಡಿ ಪ್ರತಿನಿತ್ಯ ಈ ಕೆಲವೊಂದು ಅಭ್ಯಾಸಗಳನ್ನು ಪಾಲಿಸುವ ಹಾಗೂ ದಿನಚರಿಯಲ್ಲಿ ಈ ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ಕ್ರಮೇಕ ಧೂಮಪಾನವನ್ನು ಬಿಡಬಹುದು. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸಿಗರೇಟ್ ತ್ಯಜಿಸಲು ಉತ್ತಮ ಮಾರ್ಗಗಳಿವು:

ನಿಮ್ಮ ಉದ್ದೇಶಗಳನ್ನು ಬಲಪಡಿಸಿಕೊಳ್ಳಿ: ನೀವು ಧೂಮಪಾನ ಬಿಡಲು ಬಯಸಿದರೆ, ಮೊದಲು ನಿಮ್ಮ ಸಂಕಲ್ಪವನ್ನು ಬಲಪಡಿಸಿಕೊಳ್ಳಿ. ಬಲವಾದ ಸಂಕಲ್ಪ ಇಲ್ಲದಿದ್ದರೆ ಧೂಮಪಾನ ಬಿಡುವುದು ಕಷ್ಟ. ಆದ್ದರಿಂದ ನಿಮ್ಮ ದೃಢ ಸಂಕಲ್ಪವನ್ನು ಬಲಪಡಿಸಿಕೊಳ್ಳಿ.

ಪ್ರಚೋದಕಗಳನ್ನು ತಪ್ಪಿಸಲು ಪ್ರಯತ್ನಿಸಿ: ನೀವು ಮದ್ಯಪಾನ ಮಾಡುತ್ತಿದ್ದರೆ, ನಿಮಗೆ ಸಿಗರೇಟ್ ಹಂಬಲ ಬರಬಹುದು. ಈ ಹಂಬಲಗಳನ್ನು ತಪ್ಪಿಸಲು ಪ್ರಯತ್ನಿಸಿ. ನೀವು ತಕ್ಷಣ ಧೂಮಪಾನ ಬಿಡಲು ಸಾಧ್ಯವಾಗದಿದ್ದರೆ, ಕ್ರಮೇಣ ಬಿಡಲು ಪ್ರಯತ್ನಿಸಿ. ನೀವು ದಿನಕ್ಕೆ ಸೇದುವ ಸಿಗರೇಟ್ ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಬನ್ನಿ.

ಧೂಮಪಾನಕ್ಕೆ ಪರ್ಯಾಯಗಳನ್ನು ಆರಿಸಿ: ಸಿಗರೇಟ್ ಸೇದಲು ಹಂಬಲವಾದಾಗಲೆಲ್ಲಾ ಏಲಕ್ಕಿ ಅಥವಾ ಸೋಂಪು ಅಗಿಯಿರಿ. ಇದಲ್ಲದೆ ಕಡುಬಯಕೆಗಳನ್ನು ಕಡಿಮೆ ಮಾಡಲು ಸಕ್ಕರೆ ರಹಿತ ಗಮ್ ಅಥವಾ ಗಟ್ಟಿಯಾದ ಕ್ಯಾಂಡಿ ತಿನ್ನಿ. ಸಿಗರೇಟ್ ಸೇದುವ ಬದಲು ಬಾದಾಮಿ ಮತ್ತು ವಾಲ್ನಟ್ ನಂತಹ ಬೀಜಗಳನ್ನು ಸೇವಿಸಿ. ಇದು ನಿಮ್ಮ ಗಮನವನ್ನು ಸಿಗರೇಟ್ ಅಥವಾ ಇತರ ಧೂಮಪಾನದ ಅಭ್ಯಾಸಗಳ ಕಡೆಗೆ ತಿರುಗದಂತೆ ತಡೆಯಲು ಸಹಾಯ ಮಾಡುತ್ತದೆ. ಒಣ ಕ್ಯಾರೆಟ್ ಕೂಡ ಧೂಮಪಾನ ವ್ಯಸನವನ್ನು ಬಿಡಲು ಸಹಾಯ ಮಾಡುತ್ತದೆ.

ವ್ಯಾಯಾಮ ಮತ್ತು ಯೋಗ ಮಾಡಿ: ದೈಹಿಕ ವ್ಯಾಯಾಮ ಮತ್ತು ಯೋಗವು ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ದೈಹಿಕ ಆರೋಗ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುವುದರಿಂದ ಧೂಮಪಾನ ಮಾಡುವ ಬಯಕೆಯನ್ನು ಕಡಿಮೆ ಮಾಡಬಹುದು. ಇದು ಧೂಮಪಾನ ಮಾಡುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ನಿಯಮಿತ ವ್ಯಾಯಾಮವು ಎಂಡಾರ್ಫಿನ್‌ಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ, ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು  ಕ್ರಮೇಣ ಧೂಮಪಾನ ವ್ಯಸನವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡುವ ಅಭ್ಯಾಸದಿಂದಾಗುವ ಪರಿಣಾಮಗಳೇನು?

ಕುಟುಂಬ ಮತ್ತು ಸ್ನೇಹಿತರಿಂದ ಬೆಂಬಲ ಪಡೆಯಿರಿ: ನೀವು ಧೂಮಪಾನ ಬಿಡಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಸ್ನೇಹಿತರು ಮತ್ತು ಸ್ನೇಹಿತರ ಸಹಾಯವನ್ನು ನೀವು ಪಡೆಯಬಹುದು. ನಿಮ್ಮ ಕುಟುಂಬ ಮತ್ತು ಸ್ನೇಹಿತರ ಬೆಂಬಲವು ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ, ನಿಮ್ಮ ಗುರಿಯನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.

ಹವ್ಯಾಸಗಳನ್ನು ಬೆಳೆಸಿಕೊಳ್ಳಿ: ಧೂಮಪಾನ ಬಿಡುವುದು ಸ್ವಲ್ಪ ಸವಾಲಿನ ಕೆಲಸ. ಆದ್ದರಿಂದ, ಸ್ವೆಟರ್ ಹೆಣೆಯುವಂತಹ, ಡ್ರಾಯಿಂಗ್‌, ಕ್ರಾಫ್ಟ್‌ ಇತ್ಯಾದಿ ಹವ್ಯಾಸವನ್ನು ಬೆಳೆಸಿಕೊಳ್ಳಿ. ಈ ಎಲ್ಲಾ ಹವ್ಯಾಸಗಳು ನಿಮ್ಮ ಗಮನವನ್ನು ಬೇರೆಡೆ ಸೆಳೆಯಲು ಸಹಾಯ ಮಾಡುತ್ತದೆ. ಇವು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವುದಲ್ಲದೆ ಮನಸ್ಥಿತಿಯನ್ನು ಸುಧಾರಿಸುವುದಲ್ಲದೆ, ಧೂಮಪಾನವನ್ನು ತ್ಯಜಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ