AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಕಚೇರಿಯಲ್ಲಿ ಕೆಲಸದ ವೇಳೆ ಹೆಚ್ಚು ಆಕ್ಟಿವ್ ಆಗಿರಲು ಸಹಾಯಕವಾಗುವ ಸಿಂಪಲ್ ಟಿಪ್ಸ್

ಕಚೇರಿ ಕೆಲಸದ ವೇಳೆ ಉದಾಸಿನ ಅಥವಾ ದೇಹಕ್ಕೆ ಜಡ ಹಿಡಿಯುವುದು ಕೆಲವರಿಗೆ ಸರ್ವೆ ಸಾಮಾನ್ಯ. ಆದರೆ ಈ ಜಡ ದೇಹವನ್ನು ಹೆಚ್ಚು ಆಕ್ಟಿವ್ ಆಗಿರುವಂತೆ ಮಾಡಲು ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿರುತ್ತದೆ.

Health Tips: ಕಚೇರಿಯಲ್ಲಿ ಕೆಲಸದ ವೇಳೆ ಹೆಚ್ಚು ಆಕ್ಟಿವ್ ಆಗಿರಲು ಸಹಾಯಕವಾಗುವ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
TV9 Web
| Updated By: Rakesh Nayak Manchi|

Updated on: Sep 12, 2022 | 6:30 AM

Share

ಕಚೇರಿ ಕೆಲಸದ ವೇಳೆ ಉದಾಸಿನ ಅಥವಾ ದೇಹಕ್ಕೆ ಜಡ ಹಿಡಿಯುವುದು ಕೆಲವರಿಗೆ ಸರ್ವೆ ಸಾಮಾನ್ಯ. ಆದರೆ ಈ ಜಡ ದೇಹವನ್ನು ಹೆಚ್ಚು ಆಕ್ಟಿವ್ ಆಗಿರುವಂತೆ ಮಾಡಲು ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿರುತ್ತದೆ. ನಾವು ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂಬುದರ ಬಗ್ಗೆ ಗಮನಹರಿಸಬೇಕು. ಹಿಂದೂಸ್ತಾನ್ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ  ಗ್ರೇಟ್ ಪ್ಲೇಸ್ ಟು ವರ್ಕ್ ಇಂಡಿಯಾದಲ್ಲಿ ವೆಲ್‌ನೆಸ್ ಮತ್ತು ಪಾಲುದಾರಿಕೆ ವಿಭಾಗದ ಮುಖ್ಯಸ್ಥರಾದ ಪ್ರೀತಿ ಮಲ್ಹೋತ್ರಾ ಮತ್ತು ಲಿವ್‌ಲಾಂಗ್‌ನ ಸಿಇಒ ಗೌರವ್ ದುಬೆ ಅವರು ಐದು ಸಲಹೆಗಳನ್ನು ನೀಡಿದ್ದಾರೆ. ಅವುಗಳು ಈ ಕೆಳಗಿನಂತಿವೆ.

ಆಹಾರ ಪದ್ಧತಿ: ಹೆಚ್ಚಿನ ನೌಕರರು ಆರೋಗ್ಯಕರವಾದ ಆಹಾರವನ್ನು ಸೇವಿಸುವುದಿಲ್ಲ, ಇದಕ್ಕೆ ಅವರು ಒತ್ತಡದ ಕೆಲಸದ ಸಮಯವನ್ನು ದೂಷಿಸುತ್ತಾರೆ. ಆದರೆ ಮುಖ್ಯವಾಗಿ ನೀವು ತಿನ್ನುವ ಊಟಕ್ಕೆ ಗಮನ ಕೊಡಬೇಕು. ಬೆಳಿಗ್ಗೆ ತೃಪ್ತಿಕರವಾದ ಉಪಹಾರವನ್ನು ಸೇವಿಸಿ. ಅನಾರೋಗ್ಯಕರ ಮತ್ತು ಎಣ್ಣೆಯುಕ್ತ ಆಹಾರವನ್ನು ತಪ್ಪಿಸಿ. ಮಧ್ಯಾಹ್ನದ ಊಟಕ್ಕೆ ಸಲಾಡ್ ಮತ್ತು ಹಣ್ಣುಗಳನ್ನು ಸೇವಿಸಿ.

ಹೈಡ್ರೇಟ್: ನೀವು ಕೆಲಸದ ವಿಚಾರದಲ್ಲಿ ಹೆಚ್ಚು ಬ್ಯುಸಿಯಾಗಿದ್ದಾಗ ನೀರು ಕುಡಿಯುವುದನ್ನೇ ಮರೆತುಬಿಡಬಹುದು. ಆದರೆ ನಿಮ್ಮ ದೇಹವನ್ನು ಹೈಡ್ರೇಟ್ ಆಗಿರಿಸಲು ಹಾಗೂ ಆರೋಗ್ಯವಾಗಿಡಲು ನೀವು ಸಾಕಷ್ಟು ನೀರು ಕುಡಿಯಬೇಕು ಎಂಬುದನ್ನು ಮರೆಯದಿರಿ. ಹೆಚ್ಚು ನೀರು ಕುಡಿದರೆ ನಿಮ್ಮ ಆಯಾಸ ಮತ್ತು ಆಲಸ್ಯವನ್ನು ತೊಡೆದುಹಾಕಬಹುದು. ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ 6-8ಗ್ಲಾಸ್ ನೀರನ್ನು ಸೇವಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ನಿಮ್ಮ ದೈಹಿಕ ಚಟುವಟಿಕೆಯ ಮಟ್ಟವನ್ನು ಅವಲಂಬಿಸಿ ನೀವು ಹೆಚ್ಚು ನೀರು ಕುಡಿಯಬೇಕಾಗಬಹುದು. ನೀವು ಸಾಕಷ್ಟು ಕುಡಿಯದಿದ್ದರೆ ಅದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ನಿರ್ಜಲೀಕರಣ, ಸೌಮ್ಯವಾದ ನಿರ್ಜಲೀಕರಣವೂ ಸಹ ನಿಮ್ಮ ಶಕ್ತಿಯ ಮಟ್ಟವನ್ನು ತಗ್ಗಿಸಬಹುದು.

ಸಮತೋಲಿತ ಆಹಾರ: ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಪೋಷಕಾಂಶಗಳನ್ನು ಸಮತೋಲಿತ ಆಹಾರದಿಂದ ಪಡೆಯುತ್ತದೆ. ಆರೋಗ್ಯಕರ ಪೋಷಣೆಯು ಶಕ್ತಿಯನ್ನು ಹೆಚ್ಚಿಸುತ್ತದೆ, ನಿಮ್ಮ ದೇಹವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಹೆಚ್ಚಿಸುತ್ತದೆ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ತೂಕವನ್ನು ಹೆಚ್ಚಿಸದಂತೆ ಮಾಡುತ್ತದೆ.  ವಿಟಮಿನ್ ಕೊರತೆ ಅಥವಾ ಸರಿಯಾದ ಪೋಷಣೆಯ ಕೊರತೆಯಿಂದಾಗಿ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅನೇಕ ಉದಾಹರಣೆಗಳನ್ನು ಇವೆ.

ಭಂಗಿ: ಸೂಕ್ತವಾದ ಭಂಗಿಯನ್ನು ಕಾಪಾಡಿಕೊಳ್ಳುವ ಪ್ರಯತ್ನದ ಅಗತ್ಯವಿದೆ. ಹೆಚ್ಚಿನ ಕಛೇರಿಯ ಕೆಲಸಗಾರರು ತಮ್ಮ ಕಂಪ್ಯೂಟರ್ ಪರದೆಯತ್ತ ನೋಡುತ್ತಾ ಗಂಟೆಗಟ್ಟಲೆ ಕಳೆಯುತ್ತಾರೆ. ನಿರ್ದಿಷ್ಟ ಮೇಜಿನ ವ್ಯಾಯಾಮಗಳನ್ನು ಅಳವಡಿಸಿಕೊಳ್ಳುವುದು ಕೆಟ್ಟ ಭಂಗಿಯನ್ನು ತಡೆಯಲು ಸಹಾಯ ಮಾಡುತ್ತದೆ. ಬೆನ್ನಿನಲ್ಲು ಕುಳಿತುಕೊಳ್ಳುವುದು ಅಥವಾ ಬೆನ್ನಿಗೆ ಒತ್ತಡ ಹಾಕುವುದನ್ನು ತಪ್ಪಿಸಲು ಶಿಫಾರಸ್ಸು ಮಾಡಲಾಗುತ್ತದೆ. ಆ ರೀತಿ ಮಾಡಿದರೆ ಅಸ್ವಸ್ಥತೆ ಅಥವಾ ದೇಹದ ನೋವು ಉಂಟಾಗಬಹುದು.

ವಿರಾಮ: ಕೆಲಸದ ಗಡುವನ್ನು ಪೂರ್ಣಗೊಳಿಸಲು ನಾವು ನಿರಂತರವಾಗಿ ಶ್ರಮಿಸುತ್ತೇವೆ. ಆದಾಗ್ಯೂ, ನೀವು ವಿರಾಮ ತೆಗೆದುಕೊಳ್ಳದೆ ನಿಮ್ಮ ಮೇಜಿನ ಬಳಿ ದೀರ್ಘಕಾಲದ ವರೆಗೆ ಕುಳಿತುಕೊಳ್ಳುತ್ತಾರೆ. ವಿರಾಮ ತೆಗೆದುಕೊಳ್ಳುವುದು ಸಮಯವನ್ನು ಹಾಳಾಗುತ್ತದೆ ಎಂದು ನೀವು ನಂಬಬಹುದು. ವಿರಾಮಗಳು ನಿಜವಾಗಿಯೂ ದೇಹದ ಆರೋಗ್ಯಕ್ಕೆ ಉಪಯುಕ್ತವಾಗಬಹುದು. ಒತ್ತಡದ ಕೆಲಸದ ನಡುವೆ ನಿಮ್ಮ ಮನಸ್ಸು ರಿಫ್ರೆಶ್ ಮಾಡಲು ವಿಶ್ರಾಂತಿಯು ಸಹಕಾರಿಯಾಗಲಿದೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?