Naga Panchami 2022: ನಾಗರ ಪಂಚಮಿಯ ವಿಶೇಷ ತಿನಿಸು ಅರಶಿನ ಎಲೆಯ ಸಿಹಿ ಕಡುಬು

ಅರಶಿನ ಎಲೆಯ ಕಡುಬನ್ನು ಹೆಚ್ಚಾಗಿ ದಕ್ಷಿಣ ಕನ್ನಡ ಉಡುಪಿ ಭಾಗದ ಜನರು ಮಾಡುತ್ತಾರೆ. ನಾಗರ ಪಂಚಮಿಯ ಶುಭ ದಿನದಂದು ಪ್ರತೀ ಮನೆಯಲ್ಲೂ ಅರಶಿನ ಎಲೆಯ ಕಡುಬನ್ನು ತಯಾರು ಮಾಡಿ ಸವಿಯುತ್ತಾರೆ.

Naga Panchami 2022: ನಾಗರ ಪಂಚಮಿಯ ವಿಶೇಷ ತಿನಿಸು ಅರಶಿನ ಎಲೆಯ ಸಿಹಿ ಕಡುಬು
Naga Panchami
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 02, 2022 | 9:52 AM

ಹಿಂದುಗಳ ಪವಿತ್ರ ಹಬ್ಬಗಳಲ್ಲಿ ನಾಗರ ಪಂಚಮಿಯೂ ಒಂದು. ಈ ದಿನ ನಾಗ ದೇವರಿಗೆ ಹಾಲೆರಿಯುವ ಪದ್ದತಿಯು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂದಿಗೂ ಅದೇ ಪದ್ದತಿ ಆಚರಣೆಯನ್ನು ಮಾಡಲಾಗುತ್ತಿದೆ. ಒಂದೊಂದು ಕಡೆಯಲ್ಲಿ ಅವರದೇ ಆದ ಸಂಪ್ರದಾಯವಿದೆ.. ನಾಗರ ಪಂಚಮಿಯ ಹಬ್ಬವನ್ನು ಪ್ರತೀ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ವಿಶೇಷವಾದ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಮಾಡಲಾಗುತ್ತದೆ. ಪಂಚಕಜ್ಜಾಯ, ಕಡುಬು, ಲಡ್ಡು ಹೀಗೆ ಅನೇಕ ಬಗೆಯ ತಿನಿಸಿಗಳನ್ನು ಮಾಡಲಾಗುತ್ತದೆ. ನಾಗರ ಪಂಚಮಿಯ ವಿಶೇಷವಾದ ತಿಂಡಿಗಳಲ್ಲಿ ಅರಶಿನ ಎಲೆಯ ಕಡುಬು ಕೂಡಾ ಒಂದು.

ಈ ಅರಶಿನ ಎಲೆಯ ಕಡುಬನ್ನು ಹೆಚ್ಚಾಗಿ ದಕ್ಷಿಣ ಕನ್ನಡ ಉಡುಪಿ ಭಾಗದ ಜನರು ಮಾಡುತ್ತಾರೆ. ನಾಗರ ಪಂಚಮಿಯ ಶುಭ ದಿನದಂದು ಪ್ರತೀ ಮನೆಯಲ್ಲೂ ಅರಶಿನ ಎಲೆಯ ಕಡುಬನ್ನು ತಯಾರು ಮಾಡಿ ಸವಿಯುತ್ತಾರೆ. ಈ ಕಡುಬನ್ನು ಹೇಗೆ ಮಾಡಲಾಗುತ್ತದೆ ಅಂದ್ರೆ, ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಅರಶಿನ ಎಲೆ, ಅಕ್ಕಿ, ಅವಲಕ್ಕಿ, ತೆಂಗಿನ ಕಾಯಿ ತುರಿ, ಬಿಳಿ ಅಥವಾ ಕಪ್ಪು ಎಳ್ಳು, ಬೆಲ್ಲ ಹಾಗೂ ಸ್ವಲ್ಪ ಏಲಕ್ಕಿ. ಮೊದಲಿಗೆ ಅಕ್ಕಿಯನ್ನು ನುಣ್ಣಗೆ ರುಬ್ಬಿ ದಪ್ಪಗಿನ ಪೇಸ್ಟ್ ತಯಾರಿಸಬೇಕು. ಅದಾದ ಬಳಿಕ ಅವಲಕ್ಕಿ, ತೆಂಗಿನ ಕಾಯಿ ತುರಿ, ತುರಿದ ಬೆಲ್ಲವನ್ನು ಸೇರಿಸಿ ಪಾಕವನ್ನು ಮಾಡಬೇಕು ಅದಕ್ಕೆ ಡ್ರೆಹಿ ರೋಸ್ಟ್ ಮಾಡಿದ ಎಳ್ಳನ್ನು ಸೇರಿಸಬೇಕು.

ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಇವೆಲ್ಲದರ ಸಿಹಿ ಹೂರಣವನ್ನು ತಯಾರು ಮಾಡಬೇಕು. ನಂತರ ಶುದ್ಧವಾಗಿ ತೊಳೆದಿಟ್ಟ ಅರಶಿನ ಎಲೆಯ ಮೇಲೆ ಮೊದಲಿಗೆ ಅಕ್ಕಿಯ ದಪ್ಪಗಿನ ಹಿಟ್ಟನ್ನು ಸವರಿ ಅದರ ಮೇಲೆ ಮೊದಲೇ ತಯಾರು ಮಾಡಿ ಇಟ್ಟಂತಹ ಸಿಹಿ ಹೂರಣವನ್ನು ಹಾಕಿ ಎಲೆಯನ್ನು ಮಡಚಬೇಕು. ಕೊನೆಯ ಹಂತದಲ್ಲಿ ಒಂದು ಇಡ್ಲಿ ಪಾತ್ರೆಯಲ್ಲಿ ತಯಾರಿಸಿದಂತಹ ತಿಂಡಿಯನ್ನು ಇಟ್ಟು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬೇಯಿಸಬೇಕು. ಇವಿಷ್ಟು ಅರಶಿನ ಕಡುಬು ತಯಾರಿಸುವ ವಿಧಾನವಾಗಿದೆ. ಬಹಳ ಸುಲಭವಾಗಿ ತಯಾರಿಸಬಹುದಾದಂತಹ ಒಂದು ರುಚಿಕರವಾದ ಸಿಹಿ ತಿನಿಸು ಇದಾಗಿದೆ. ಇದನ್ನು ತುಪ್ಪದ ಜೊತೆ ಸವಿದರೆ ಇದರ ರುಚಿ ಇನ್ನು ಹೆಚ್ಚಾಗಿರುತ್ತದೆ. ನಾಗರ ಪಂಚಮಿಯ ವಿಷೇಶ ತಿನಿಸುಗಳಲ್ಲಿ ಇದು ಕೂಡಾ ಒಂದಾಗಿದೆ. ನಾಗರ ಪಂಚಮಿಯ ದಿನದಂದೆ ಈ ತಿನಿಸನ್ನು ತಯಾರಿಸುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ.

ಇದನ್ನೂ ಓದಿ
Image
ಈ ನಾಲ್ಕು ವಿಧಗಳಲ್ಲಿ ಹಣ ಸಂಪಾದಿಸಿದರೆ.. ಅಂತಹವರ ಜೀವನ ಯಾವಾಗಲೂ ಕಷ್ಟಕರವಾಗಿರುತ್ತದೆ!
Image
Naga Panchami 2022: ನಾಗರ ಪಂಚಮಿ ಹಬ್ಬದ ವಿಶೇಷತೆ, ಆಚರಣೆ ಮತ್ತು ಮಹತ್ವದ ಮಾಹಿತಿ ಇಲ್ಲಿದೆ
Image
ತಿರುಮಲ ತಿರುಪತಿ ಹುಂಡಿ ಆದಾಯ: ಶ್ರೀವಾರಿ ಹುಂಡಿಗೆ ಹಣದ ಪ್ರವಾಹ, ಜುಲೈ ತಿಂಗಳಲ್ಲಿ ಈ ಬಾರಿ ಅತ್ಯಧಿಕ
Image
Spiritual: ಶ್ರಾವಣ ಸೋಮವಾರ ಉಪವಾಸದ ಕ್ರಮ ಮತ್ತು ಫಲ ಏನು ಗೊತ್ತಾ? ಇಲ್ಲಿದೆ ನೋಡಿ

ಮಾಲಾಶ್ರೀ ಅಂಚನ್ 

Published On - 9:49 am, Tue, 2 August 22

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ