AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ನೀವು ಆಯ್ಕೆ ಮಾಡಿಕೊಳ್ಳುವ ಉಡುಗೆಯೇ ನಿಮ್ಮ ನಿಗೂಢ ವ್ಯಕ್ತಿತ್ವ ರಿವೀಲ್ ಮಾಡುತ್ತೆ

ಫ್ಯಾಷನ್ ಲೋಕ ದಲ್ಲಿ ವಿಭಿನ್ನ ವಿನ್ಯಾಸದ ಉಡುಗೆಗಳು ಸದ್ದು ಮಾಡುತ್ತವೆ. ಕೆಲವರು ಮಾರ್ಡನ್ ಉಡುಗೆಯನ್ನು ಇಷ್ಟ ಪಟ್ಟರೆ, ಇನ್ನು ಕೆಲವರು ಸಾಂಪ್ರದಾಯಿಕ ಶೈಲಿಯ ಉಡುಗೆಗಳ ಕಡೆಗೆ ಹೆಚ್ಚು ಒಲವು ಹೊಂದಿರುತ್ತಾರೆ. ಆದರೆ ಇಲ್ಲಿ ತೋರಿಸಲಾದ ಚಿತ್ರದಲ್ಲಿ ನೀವು ಆಯ್ಕೆ ಮಾಡುವ ಉಡುಗೆ ಯಾವುದು ಎನ್ನುವುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹಾಗೂ ಗುಣಸ್ವಭಾವವು ರಿವೀಲ್ ಆಗುತ್ತದೆ. ಹಾಗಾದ್ರೆ ಈ ಕುರಿತಾದ ಸಂಗತಿ ಇಲ್ಲಿದೆ.

Personality Test : ನೀವು ಆಯ್ಕೆ ಮಾಡಿಕೊಳ್ಳುವ ಉಡುಗೆಯೇ ನಿಮ್ಮ ನಿಗೂಢ ವ್ಯಕ್ತಿತ್ವ ರಿವೀಲ್ ಮಾಡುತ್ತೆ
Hidden Personality
ಸಾಯಿನಂದಾ
| Edited By: |

Updated on:Jan 14, 2025 | 3:43 PM

Share

ಒಬ್ಬರಿಗಿಂತ ಒಬ್ಬರದ್ದು ಡ್ರೆಸ್ಸಿಂಗ್ ಸ್ಟೈಲ್ ಭಿನ್ನವಾಗಿರುತ್ತದೆ. ಕೆಲವರು ಮಾಡರ್ನ್ ಉಡುಗೆಯನ್ನು ಹೆಚ್ಚು ಇಷ್ಟ ಪಟ್ಟರೆ, ಇನ್ನು ಕೆಲವರಲ್ಲಿ ಟ್ರಡಿಷನಲ್ ಉಡುಗೆಗಳ ಕಲೆಕ್ಷನ್ ಹೆಚ್ಚಿರುತ್ತದೆ. ಈ ಉಡುಗೆಗಳ ಆಯ್ಕೆಯಲ್ಲಿ ಸಾಕಷ್ಟು ಭಿನ್ನತೆಯನ್ನು ಕಾಣಬಹುದು. ಆದರೆ ನಾವು ಧರಿಸುವ ಉಡುಗೆಗಳು ನಮ್ಮ ಲುಕ್ ಬದಲಾಯಿಸುವುದರೊಂದಿಗೆ ವ್ಯಕ್ತಿತ್ವವನ್ನು ತೆರೆದಿಡುತ್ತದೆ. ಹೌದು ನೀವು ಯಾವ ರೀತಿ ಉಡುಗೆ ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ವ್ಯಕ್ತಿತ್ವವು ನಿರ್ಧಾರವಾಗುತ್ತದೆ. ಹೀಗಾಗಿ ನಿಮ್ಮ ಉಡುಗೆಯ ಆಧಾರದ ಮೇಲೆ ನಿಮ್ಮ ನಿಗೂಢ ಗುಣಸ್ವಭಾವ ತಿಳಿಯಿರಿ.

  • ಚಿತ್ರ ಒಂದರಲ್ಲಿ ತೋರಿಸಲಾದ ಉಡುಗೆಯನ್ನು ಧರಿಸುವ ವ್ಯಕ್ತಿಗಳು ಅತಿಯಾದ ಆತ್ಮವಿಶ್ವಾಸ ಮತ್ತು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಧೈರ್ಯಶಾಲಿಗಳಾಗಿದ್ದು, ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಜನರು ಉತ್ಸಾಹದಿಂದ ಜೀವನ ನಡೆಸುತ್ತಾರೆ. ನೀವು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಾರೆ. ಜೀವನದಲ್ಲಿ ಎದುರಾಗುವ ತೊಂದರೆಗಳು ಹಾಗೂ ಅಡೆತಡೆಗಳಿಗೆ ಹೆದರದೇ ತಲೆ ಎತ್ತಿ ನಡೆಯುತ್ತಾರೆ. ಈ ವ್ಯಕ್ತಿಗಳಿಗೆ ತಮ್ಮ ಜೀವನದಲ್ಲಿ ಏನು ಬೇಕು ಎನ್ನುವುದರ ಸ್ಪಷ್ಟತೆಯಿದೆ. ನೇರವಾಗಿ ಮಾತನಾಡುವ ಸ್ವಭಾವವನ್ನು ಹೊಂದಿದ್ದು, ನಾಚಿಕೆ ಸ್ವಭಾವದವರಲ್ಲ. ಟೀಕೆ ಅಥವಾ ಹೊಸ ಪ್ರಯೋಗಗಳಿಗೆ ಹೆದರುವುದಿಲ್ಲ. ಹೊಸ ವಿಷಯಗಳನ್ನು ಮತ್ತು ಹೊಸ ಮಾರ್ಗಗಳನ್ನು ಅನ್ವೇಷಿಸಲು ಇಷ್ಟಪಡುವ ವ್ಯಕ್ತಿಗಳಾಗಿದ್ದು, ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ.
  • ಚಿತ್ರ ಎರಡರಲ್ಲಿ ತೋರಿಸಲಾದ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳು ಇತರ ಜನರೊಂದಿಗೆ ಸಂಪರ್ಕ ಸಾಧಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ಮುಖದಲ್ಲಿ ಸದಾ ನಗು ತುಂಬಿಕೊಂಡಿರುತ್ತಾರೆ. ಆದರೆ ಈ ವ್ಯಕ್ತಿಗಳನ್ನು ಇತರರು ಸುಲಭವಾಗಿ ಬಳಸಿಕೊಳ್ಳಬಹುದು. ಕೆಲವೊಮ್ಮೆ ನಿಷ್ಪ್ರಯೋಜಕರಾಗಿರುವಂತೆ ವರ್ತಿಸುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಈ ಜನರು ನಿರಾತಂಕ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಆಶಾವಾದಿಗಳಾಗಿದ್ದು, ಇದು ನಕಾರಾತ್ಮಕತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
  • ಚಿತ್ರ ಮೂರರಲ್ಲಿ ತೋರಿಸುವ ಉಡುಪನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳು ನಾಚಿಕೆ ಸ್ವಭಾವ ಹಾಗೂ ಕರುಣಾಮಯಿಗಳಾಗಿರುತ್ತಾರೆ. ಸಮಯ ಸಂದರ್ಭಗಳೇ ಈ ಗುಣವನ್ನು ಬಹಿರಂಗಪಡಿಸುತ್ತದೆ. ಈ ಜನರು ಜಗಳ, ಮನಸ್ತಾಪಗಳಿಂದ ದೂರವಿಡಲು ಬಯಸುತ್ತಾರೆ. ಇತರರೊಂದಿಗೆ ಹೆಚ್ಚು ಸಹಾನುಭೂತಿ ಹೊಂದುತ್ತಾರೆ. ಇತರರ ತಪ್ಪುಗಳನ್ನು ಕ್ಷಮಿಸುವ ಗುಣವನ್ನು ಹೊಂದಿದ್ದು, ಆ ತಪ್ಪಿನ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳುವ ಗುಣ ಇವರಿಗಿರುತ್ತದೆ. ಅದಲ್ಲದೇ, ಏಕಾಂಗಿಯಾಗಿ ಸ್ವಲ್ಪ ಸಮಯವನ್ನು ತಮ್ಮೊಂದಿಗೆ ಕಳೆಯಲು ಇಷ್ಟ ಪಡುತ್ತಾರೆ.
  • ಚಿತ್ರ ನಾಲ್ಕರಲ್ಲಿ ತೋರಿಸುವ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳು ತಾರ್ಕಿಕ ಗುಣವನ್ನು ಹೊಂದಿರುತ್ತಾರೆ. ಇವರು ಅತ್ಯಂತ ಬುದ್ಧಿವಂತರಾಗಿದ್ದು ಇವರನ್ನು ಯಾರು ಕೂಡ ಸುಲಭವಾಗಿ ಮೋಸಗೊಳಿಸಲು ಸಾಧ್ಯವಿಲ್ಲ. ಅದಲ್ಲದೇ ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ದೃಢನಿಶ್ಚಯದ ವ್ಯಕ್ತಿ, ದೊಡ್ಡ ದೊಡ್ಡ ಕನಸು ಕಾಣುತ್ತಾರೆ. ಈ ವ್ಯಕ್ತಿಗಳು ತಮ್ಮ ಗುರಿಯನ್ನು ಸಾಧಿಸುವ ಶ್ರಮಿಸುವ ವ್ಯಕ್ತಿಗಳಾಗಿರುತ್ತಾರೆ. ಸಂಭಾಷಣೆಗಳನ್ನು ನಡೆಸುವಾಗಲು ಇವರು ಸೌಮ್ಯ ಸ್ವಭಾವವನ್ನೇ ಹೊಂದಿರುತ್ತಾರೆ. ತಮ್ಮ ಜೀವನದಲ್ಲಿ ಬೇಕಾದ್ದನ್ನು ಪಡೆಯಲು ಇತರರನ್ನು ನೋಯಿಸುವುದಿಲ್ಲ.
  • ಚಿತ್ರ ಐದರಲ್ಲಿ ತೋರಿಸುವ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳುವವರು ಸ್ವತಂತ್ರರಾಗಿ ಜೀವಿಸುವ ವ್ಯಕ್ತಿಗಳಾಗಿರುತ್ತಾರೆ. ಇವರು ಯಾರನ್ನು ಕೂಡ ಅಷ್ಟು ಸುಲಭವಾಗಿ ನೋಯಿಸುವುದಿಲ್ಲ. ಈ ವ್ಯಕ್ತಿಗಳು ಎದುರಿಸುವ ಟೀಕೆಗಳನ್ನು ರಚನಾತ್ಮಕವಾಗಿ ತೆಗೆದುಕೊಂಡು ಕೆಲಸವನ್ನು ಮಾಡಿಮುಗಿಸುತ್ತಾರೆ. ಸಹಾಯವನ್ನು ಕೇಳಲು ಹಾಗೂ ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟ ಪಡುತ್ತಾರೆ. ದೃಢ ನಂಬಿಕೆಯುಳ್ಳವರಾಗಿದ್ದು, ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ. ಇವರ ಹೃದಯವನ್ನು ಸ್ಪರ್ಶಿಸುವ ಜನರು ಸಾಮಾನ್ಯವಾಗಿ ದೀರ್ಘಕಾಲದವರೆಗೆ ಸ್ನೇಹಿತರಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Tue, 14 January 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ