Relationship Tips : ಸಂಗಾತಿಯೊಂದಿಗೆ ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಗುತ್ತಾ? ಆ ನೋವಿನಿಂದ ಹೊರಬರಲು ಇಲ್ಲಿದೆ ಟಿಪ್ಸ್

ಯಾವ ಸಂಬಂಧದಲ್ಲಿ ಜಗಳವಿರಲ್ಲ ಹೇಳಿ, ಪ್ರೀತಿಯಿದ್ದಲ್ಲಿ ಮುನಿಸು, ಮನಸ್ತಾಪಗಳು ಸರ್ವೇ ಸಾಮಾನ್ಯ. ಹಾಗಂತ ಮಾತ್ರಕ್ಕೆ ಬೆಳಗ್ಗೆ ಎದ್ದಾ ಗಿನಿಂದ ರಾತ್ರಿ ಮಲಗುವವರೆಗೆ ಜಗಳವೇ ತುಂಬಿದ್ದರೆ ನೆಮ್ಮದಿ ಅನ್ನೋದೇ ಇರಲ್ಲ. ಕೆಲವೊಮ್ಮೆ ಆತ್ಮೀಯರ ಜೊತೆಗಿನ ಸಣ್ಣ ಪುಟ್ಟ ವಾದವಿವಾದಗಳು ಮನಸ್ಸಿಗೆ ತೀರಾ ಆಘಾತವನ್ನುಂಟು ಮಾಡುತ್ತದೆ. ಕೆಲವರು ಅದನ್ನು ಅರಗಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಈ ಕೆಲವು ಸಲಹೆಗಳನ್ನು ಪಾಲಿಸಿದರೆ ಆ ಕಹಿ ನೋವಿನಿಂದ ಹೊರಬರಬಹುದು.

Relationship Tips : ಸಂಗಾತಿಯೊಂದಿಗೆ ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಗುತ್ತಾ? ಆ ನೋವಿನಿಂದ ಹೊರಬರಲು ಇಲ್ಲಿದೆ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 05, 2024 | 4:50 PM

ಸಂಬಂಧಗಳು ಸದಾ ಸಿಹಿಯಾಗಿಯೇ ಇರಬೇಕೆಂದೇನಿಲ್ಲ. ಕೆಲವೊಮ್ಮೆ ಆತ್ಮೀಯರು ಪ್ರೀತಿ ತುಂಬಿದ ಮಾತುಗಳನ್ನಾಡಿದರೆ, ಇನ್ನು ಕೆಲವೊಮ್ಮೆ ಖಾರವಾದ ಮಾತುಗಳನ್ನಾಡಿ ಮನಸ್ಸಿಗೆ ನೋವು ಮಾಡುತ್ತಾರೆ. ವಾದ ವಿವಾದಗಳು ನಡೆದಾಗ ಆ ನೋವಿನಿಂದ ಹೊರಬರುವುದು ಕಷ್ಟವಾಗುತ್ತದೆ. ಇದೇ ವಿಚಾರವಾಗಿ ಟೆನ್ಶನ್ ಮಾಡಿಕೊಳ್ಳುತ್ತಾರೆ. ಈ ಕೆಲವು ಸಲಹೆಗಳನ್ನು ಪಾಲಿಸಿದರೆ ಸಂಬಂಧದಲ್ಲಿ ಉಂಟಾದ ಕಲಹಗಳಿಂದ ಚೇತರಿಸಿಕೊಳ್ಳಬಹುದು.

  • ಮನಸ್ಸು ಹಗುರವಾಗುವಂತೆ ಅತ್ತು ಬಿಡಿ : ಆತ್ಮೀಯರ ಮಾತಿನಿಂದ ನೋವಾದಾಗ ಆ ಕಹಿ ನೋವನ್ನು ಹೊರಹಾಕಲು ಅತ್ಯುತ್ತಮವಾದ ಮಾರ್ಗವೆಂದರೆ ಅಳು. ಮನಸ್ಸು ಭಾರವೆನಿಸಿದ ಅನುಭವವಾದರೆ ಅತ್ತು ಹಗುರಾಗುವುದು ಉತ್ತಮ. ಇದರಿಂದ ಸ್ವಲ್ಪ ಆರಾಮದಾಯಕವೆನಿಸುತ್ತದೆ. ಅದಲ್ಲದೇ ಟೆನ್ಶನ್ ನಿಂದ ದೂರವಾಗಿ ನೋವಿನ ಭಾವನೆಯೂ ಕಡಿಮೆಯಾಗಿ ಮತ್ತೆ ಚೇತರಿಸಿಕೊಳ್ಳುವಂತೆ ಮಾಡುತ್ತದೆ.
  • ಸ್ವಲ್ಪ ಹೊತ್ತು ನಿದ್ರಿಸಿ : ಸಂಬಂಧದಲ್ಲಿ ವಾದ ವಿವಾದಗಳಾದಾಗ ಮನಸ್ಸಿಗೆ ನೋವಾಗುವುದು ಸಹಜ. ಈ ವೇಳೆಯಲ್ಲಿ ಭಾವನಾತ್ಮಕ ಒತ್ತಡಕ್ಕೆ ಒಳಗಾಗುತ್ತಾರೆ. ಮನಸ್ಸು ಚೇತರಿಸಿಕೊಳ್ಳಲು ವಿಶ್ರಾಂತಿ ಪಡೆಯುವುದು ಅಗತ್ಯ. ಸ್ವಲ್ಪ ಹೊತ್ತು ಮಲಗುವುದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ, ಇದರಿಂದ ಸುಧಾರಿಸಿಕೊಳ್ಳಬಹುದು.
  • ಸ್ನೇಹಿತರಿಗೆ ಕರೆ ಮಾತನಾಡಿ : ಸಂಗಾತಿಯ ಅಥವಾ ಆತ್ಮೀಯರ ಮಾತನ್ನು ಅರಗಿಸಿಕೊಳ್ಳುವುದು ಕಷ್ಟವಾಗಬಹುದು. ತನಗಾದ ನೋವನ್ನು ಯಾರಿಗಾದರೂ ಹೇಳಿಕೊಳ್ಳಬೇಕು ಎಂದು ಅನಿಸಬಹುದು. ಆ ತಕ್ಷಣವೇ ನಮ್ಮ ಮನಸ್ಸಿನ ಮಾತಿಗೆ ಕಿವಿಯಾಗುವ ತಮ್ಮನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಯೊಂದಿಗೆ ಈ ಬಗ್ಗೆ ಹಂಚಿಕೊಳ್ಳುವುದು ಸೂಕ್ತ. ಪರಿಸ್ಥಿತಿಯನ್ನು ಸುಗಮಗೊಳಿಸಿ ಕಾಡುವ ಒಂಟಿತನವು ದೂರವಾಗುತ್ತದೆ.
  • ಇಷ್ಟವಾದ ಕೆಲಸದಲ್ಲಿ ಬ್ಯುಸಿಯಾಗಿ: ವಾದ ವಿವಾದಗಳಾದಾಗ ಅದರ ಬಗ್ಗೆಯೇ ಯೋಚನೆ ಮಾಡುತ್ತಾ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದಕ್ಕಿಂತ ತಮಗಿಷ್ಟದ ಕೆಲಸವಾದ ಪುಸ್ತಕ ಓದುವುದು, ಚಿತ್ರ ಬಿಡಿಸುವುದು, ಹಾಡು ಕೇಳುವುದು ಹೀಗೆ ಇನ್ನಿತ್ತರ ಕೆಲಸದಲ್ಲಿ ಬ್ಯುಸಿಯಾಗುವುದರಿಂದ ಮನಸ್ಸು ಸ್ವಲ್ಪ ರಿಲ್ಯಾಕ್ಸ್ ಆಗುತ್ತದೆ.
  • ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ : ಆತ್ಮೀಯರು ಅಥವಾ ಸಂಗಾತಿಯೊಂದಿಗೆ ವಾದ ವಿವಾದಗಳಾದಾಗ ಇದು ಅಗತ್ಯವಿತ್ತೆ ಎನ್ನುವುದನ್ನು ಒಮ್ಮೆ ಪ್ರಶ್ನೆ ಮಾಡಿಕೊಳ್ಳುವುದು ಒಳ್ಳೆಯದು. ಅದಲ್ಲದೇ, ಚುಚ್ಚು ಮಾತಿನಿಂದ ನೋವಾಗಿದ್ದರೆ ಆ ನೋವಿನಿಂದ ಹೊರಬರುವುದು ಹೇಗೆ ಎನ್ನುವುದನ್ನು ಪ್ರಶ್ನಿಸಿಕೊಳ್ಳಿ. ಈ ಮೂಲಕ ನಿಮ್ಮ ಬಗ್ಗೆ ನೀವು ಸ್ವಯಂ ಕಾಳಜಿ ವಹಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ