AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲ್ಲಿ ಕಚ್ಚಿದ್ರೆ ಏನ್​​ ಮಾಡಬೇಕು? ಇದರಿಂದ ಮನುಷ್ಯ ಸಾಯುತ್ತಾನಾ?

ಮನೆಯಲ್ಲಿ ಹಲ್ಲಿ ಕಂಡರೆ ಭಯ ಪಡುವಾಗ, ಅದು ಕಚ್ಚಿದ್ರೆ ಹೇಗಿರಬಹುದು. ಅಲ್ಲಿಗಳು ಮನಷ್ಯನಿಗೆ ಶುಕುನ ಸಂಕೇತ ಎಂದು ಹೇಳುತ್ತಾರೆ. ಮತ್ತೊಂದು ಕಡೆ ಅದು ಆಹಾರಕ್ಕೆ ಬಿದ್ದರೆ ವಿಷ ಎಂದು ಹೇಳುತ್ತಾರೆ. ಇನ್ನು ಅದು ಕಚ್ಚಿದ್ರೆ ಸಾಯುವ ಸ್ಥಿತಿ ಬರಬಹುದು ಎಂಬ ಗೊಂದಲ ಅನೇಕರಿಗೆ ಇದೆ. ಆದರೆ ಇದು ನಿಜಾನಾ? ಹಲ್ಲಿ ಕಚ್ಚಿದ್ರೆ ಏನ್​​ ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಹಲ್ಲಿ ಕಚ್ಚಿದ್ರೆ ಏನ್​​ ಮಾಡಬೇಕು? ಇದರಿಂದ ಮನುಷ್ಯ ಸಾಯುತ್ತಾನಾ?
ಸಾಂದರ್ಭಿಕ ಚಿತ್ರ Image Credit source: Getty Images
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 30, 2025 | 3:07 PM

ಮನೆಗಳಲ್ಲಿ ಹಲ್ಲಿಗಳ (lizard) ಕಾಟ ಹೆಚ್ಚು ಇರುತ್ತದೆ. ಅದರಲ್ಲೂ ಹಲ್ಲಿ ನಮ್ಮ ಹೆಗಲ ಮೇಲೆ ಬಿದ್ದರೆ ಆಯಸ್ಸು ಕಡಿಮೆ ಆಗುತ್ತದೆ ಎಂಬ ಮಾತು ಕೂಡ ಇದೆ. ಆದರೆ ಅದು ಎಷ್ಟು ಸತ್ಯ ಎನ್ನುವುದು ಗೊತ್ತಿಲ್ಲ. ಅದಕ್ಕಾಗಿ ಅನೇಕರು ಈ ಹಲ್ಲಿಗೆ ಭಯ ಪಡುವ ಮನುಷ್ಯನಿಗೆ ಹಲ್ಲಿ ಕಚ್ಚಿದ್ರೆ (lizards bite) ಹೇಗಿರಬಹುದು. ಹಲ್ಲಿ ಕಚ್ಚಿದ್ರೆ ಯಾವ ರೀತಿಯ ಚಿಕಿತ್ಸೆ ನೀಡಬೇಕು, ಹಲ್ಲಿ ಕಚ್ಚಿದರೆ ಏನಾಗುತ್ತದೆ?. ಇದರ ಜತೆಗೆ ಈ ಪ್ರಶ್ನೆ ಕೂಡ ಬರಬಹುದು, ಅಷ್ಟು ಚಿಕ್ಕ ಪ್ರಾಣಿ ಮನುಷ್ಯನನ್ನು ಕಚ್ಚಲು ಸಾಧ್ಯವೇ?ಹಲ್ಲಿಗಳು ಕಚ್ಚಬಹುದು ಆದರೆ ಭಯಪಡುವ ಅಗತ್ಯ ಇಲ್ಲ. ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಒಂದು ವರದಿ ಮಾಡಿದೆ. ವಿಜ್ಞಾನ ಸತ್ಯಗಳು ಮತ್ತು ಪುರಾಣಗಳಲ್ಲಿ ಏನು ಹೇಳುತ್ತಾರೆ? ಇಲ್ಲಿದೆ ನೋಡಿ.

ಭಯಾನಕ ರೂಮ್‌ಮೇಟ್ ಅಥವಾ ನಿರುಪದ್ರವ ಕೀಟ ಭಕ್ಷಕಗಳು ಅಂದರೆ ಹಲ್ಲಿಗಳು ಭಾರತ ಅಥವಾ ಆಗ್ನೇಯ ಏಷ್ಯಾದಲ್ಲಿ ವಾಸಿಸುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಇದು ಹೆಚ್ಚಾಗಿ ಓಡಾಟ ನಡೆಸುತ್ತದೆ. ಹಲ್ಲಿಗಳು ರಾತ್ರಿಯಲ್ಲಿ ಕೀಟಗಳನ್ನು ಬೇಟೆ ಆಡುತ್ತದೆ. ಇದು ಮನೆಯ ಗೊಡೆಗಳಲ್ಲಿ ಕಾಣಸಿಗುತ್ತದೆ. ಇಂತಹ ಹಲ್ಲಿಗಳು ಮನುಷ್ಯನನ್ನು ಕಚ್ಚಲು ಸಾಧ್ಯವೇ? ಸಾಧ್ಯ ಇದೆ ಎಂದು ಹೇಳಲಾಗಿದೆ. ಹಲ್ಲಿಗಳ ಅವುಗಳ ದವಡೆಗಳು ಚಿಕ್ಕದಾಗಿರುತ್ತವೆ ಮತ್ತು ದುರ್ಬಲವಾಗಿರುತ್ತವೆ. ಜತೆಗೆ ಅದು ತುಂಬಾ ಭಯಗೊಳ್ಳುವ ಪ್ರಾಣಿ.

ಇಂತಹ ಭಯಗೊಳ್ಳುವ ಪ್ರಾಣಿಗಳು ಮನುಷ್ಯನ ಬಳಿ ಹೋಗಿ ಕಚ್ಚುವುದಿಲ್ಲ. ಯಾವಾಗ ಅದನ್ನು ಹಿಡಿಯಲು ಹೋಗುತ್ತೇವೆ, ಆಗಾ ಅದು ತನ್ನನ್ನು ರಕ್ಷಣೆ ಮಾಡಲು ಕಚ್ಚುತ್ತದೆ. ಒಂದು ವೇಳೆ ಅದು ಕಚ್ಚಿದ್ರೆ ವಿಷಕಾರಿಯಾಗಿರುವುದಿಲ್ಲ. ಈ ಹಿಂದೆ ಟಿವಿ9 ಕನ್ನಡ ಹಲ್ಲಿಯನ್ನು ತಿಂದರೆ ಅಥವಾ ಆಹಾರಕ್ಕೆ ಹಲ್ಲಿ ಬಿದ್ದರೆ ಸಾವನ್ನಪ್ಪುತ್ತಾರೆಯೇ? ಎಂಬು ಬಗ್ಗೆ ಸಂಶೋಧಕ ಗೌರಿ ಶಂಕರ್ ಅವರ ಸಲಹೆಯ ಬಗ್ಗೆ ತಿಳಿಸಲಾಗಿತ್ತು. ಅವರು ಅದನ್ನು ಪ್ರಯೋಗಿಕವಾಗಿಯೂ ತಿಳಿಸಿದ್ದರು. ಉರಗ ತಜ್ಞರಾಗಿರುವ ಡಾ. ಪಿ. ಗೌರಿ ಶಂಕರ್ ಅವರ ಹೆಸರನ್ನು ಹಲವರು ಕೇಳಿರಬಹುದು. ಅವರು ಈ ಹಿಂದೆ ಒಂದು ವಿಡಿಯೋದಲ್ಲಿ “ಹಲ್ಲಿಗಳು ವಿಷಕಾರಿ ಅಲ್ಲ. ಅವು ಮನುಷ್ಯ ಸ್ನೇಹಿ ಆಗಿವೆ. ಇವುಗಳಿಂದ ಮನುಷ್ಯರಿಗೆ ಯಾವುದೇ ಹಾನಿಯಿಲ್ಲ. ಇವುಗಳು ವಿಷವನ್ನು ಉತ್ಪಾದಿಸುವುದಿಲ್ಲ ಅಥವಾ ಮನುಷ್ಯರಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ.ಕೆಲವು ಕೀಟಗಳಂತೆ, ಹಲ್ಲಿಗಳು ಯಾವುದೇ ಆರೋಗ್ಯದ ಅಪಾಯವನ್ನು ಕೂಡ ಉಂಟು ಮಾಡುವುದಿಲ್ಲ ಬದಲಾಗಿ ಇವು ಸೊಳ್ಳೆಗಳು, ಜಿರಳೆಗಳು ಮತ್ತು ಇತರ ಕೀಟಗಳನ್ನು ತಿಂದು ನಮ್ಮ ಮನೆಗಳನ್ನು ಸುರಕ್ಷಿತವಾಗಿ ಇರಿಸುತ್ತದೆ” ಎಂದು ಹೇಳಿದ್ದರು. ಈಗ ಆ ಹಲ್ಲಿ ಕಚ್ಚಿದ್ರೆ ಮರಣ ಬರಲು ಅಸಾಧ್ಯ. ಹಲ್ಲಿಗಳು ನಾಚಿಕೆ ಸ್ವಭಾವದ ಜೀವಿ, ಆಕ್ರಮಣಕಾರಿಯಲ್ಲದ ಜೀವಿಗಳಾಗಿದ್ದು, ಅವು ಆತ್ಮರಕ್ಷಣೆಗಾಗಿ ಮಾತ್ರ ಕಚ್ಚುತ್ತವೆ. ಇದು ಅಪಾಯಕಾರಿ ಅಲ್ಲಿದಿದ್ದರು ಇವುಗಳು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ
Image
ಪ್ರೇಮ ವಿವಾಹ ಅಥವಾ ಕೋರ್ಟ್‌ ಮ್ಯಾರೇಜ್‌ ಆಗಲು ಈ ದಾಖಲೆಗಳು ಬೇಕೇ ಬೇಕು
Image
ಪರಶುರಾಮರ ಬಗೆಗಿನ ಆಸಕ್ತಿದಾಯಕ ಕಥೆಗಳು
Image
ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುವ ಉದ್ದೇಶವೇನು?
Image
ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ಇದನ್ನೂ ಓದಿ: ಮಲದಲ್ಲಿ ಈ ಆಹಾರ ಕಣಗಳು ಕಾಣಿಸಿಕೊಂಡರೆ ಏನರ್ಥ? ಇಲ್ಲಿದೆ ನೋಡಿ ವೈದ್ಯರ ಸಲಹೆ

ಹಲ್ಲಿ ಕಚ್ಚಿದರೆ ಏನು ಮಾಡಬೇಕು?

ಒಂದು ವೇಳೆ ಹಲ್ಲಿ ಕಚ್ಚಿದ್ರೆ ಸೋಪ್ ಮತ್ತು ನೀರಿನಿಂದ ಗಾಯವನ್ನು ಸ್ವಚ್ಛಗೊಳಿಸಿ. ಆ ಗಾಯಕ್ಕೆ ನಂಜುನಿರೋಧಕ ಕ್ರೀಮ್​​ನ್ನು ಹಾಕಿ. ಊತ, ಕೆಂಪು ಅಥವಾ ಜ್ವರದಂತಹ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಮಾತ್ರ ವೈದ್ಯರನ್ನು ಭೇಟಿ ಮಾಡಿ. ಹಲ್ಲಿಯನ್ನು ಕೆಲವೊಂದು ಸಂಪ್ರಾದಾಯಕವಾಗಿ ಶುಕುನ ಎಂದು ಹೇಳಲಾಗುತ್ತದೆ. ಆದರೆ ಹಲ್ಲಿಯಷ್ಟು ಒಳ್ಳೆಯ ಪ್ರಾಣಿ ಇಲ್ಲ ಎಂಬುದನ್ನು ಅನೇಕ ಸಂಶೋಧಕರ ವಾದವಾಗಿದೆ.

ಈ ಹಲ್ಲಿಗಳಲ್ಲಿ ಪ್ರಪಂಚದಾದ್ಯಂತ 6,000 ಕ್ಕೂ ಹೆಚ್ಚು ಜಾತಿಗಳಿವೆ. ಹೆಚ್ಚಾಗಿ ಮನೆ ಅಥವಾ ಕೊಟ್ಟಿಗೆಗಳಲ್ಲಿ ವಾಸವಾಗಿರುತ್ತದೆ. ಹೆಚ್ಚಿನ ಹಲ್ಲಿಗಳು ಒಂಟಿಯಾಗಿ ಬದುಕಲು ಬಯಸುತ್ತದೆ. ಹಾಗಾಗಿ ಅವುಗಳನ್ನು ಹಿಂಸೆ ಮಾಡಬೇಡಿ ಹಾಗೂ ಅದರಿಂದ ಯಾವುದೇ ತೊಂದರೆ ಇರುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿಯಾದ ಬಸ್, 20 ಜನ ಜಸ್ಟ್ ಮಿಸ್
ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿಯಾದ ಬಸ್, 20 ಜನ ಜಸ್ಟ್ ಮಿಸ್
ಮನಾಲಿಗೆ ಬರಲೇಬೇಡಿ, ಪಾಕ್​ಗಿಂತಾ ಕೆಟ್ಟದಾಗಿದೆ ಎಂದ ಮಹಿಳೆ
ಮನಾಲಿಗೆ ಬರಲೇಬೇಡಿ, ಪಾಕ್​ಗಿಂತಾ ಕೆಟ್ಟದಾಗಿದೆ ಎಂದ ಮಹಿಳೆ
ಕಳ್ಳತನ ಆರೋಪ, ಆರೋಪಿಯ ಶರ್ಟ್​ ಬಿಚ್ಚಿ, ಚಪ್ಪಲಿ ಹಾರ ಹಾಕಿದ ಪೊಲೀಸರು
ಕಳ್ಳತನ ಆರೋಪ, ಆರೋಪಿಯ ಶರ್ಟ್​ ಬಿಚ್ಚಿ, ಚಪ್ಪಲಿ ಹಾರ ಹಾಕಿದ ಪೊಲೀಸರು
ಶಿಗ್ಗಾಂವಿ ಗುತ್ತಿಗೆದಾರನ ಕೊಲೆ: ಆರೋಪಿ ಮನೆಗೆ ಬೆಂಕಿ ಹಚ್ಚಿದ ಸಂಬಂಧಿಕರು
ಶಿಗ್ಗಾಂವಿ ಗುತ್ತಿಗೆದಾರನ ಕೊಲೆ: ಆರೋಪಿ ಮನೆಗೆ ಬೆಂಕಿ ಹಚ್ಚಿದ ಸಂಬಂಧಿಕರು
VIDEO: ಮಗಾ... ಚೆನ್ನಾಗಿ ಹೋಗ್ತಿದೆ... ಆಂಗ್ಲರ ನಾಡಿನಲ್ಲಿ ಕನ್ನಡದ ಕಂಪು
VIDEO: ಮಗಾ... ಚೆನ್ನಾಗಿ ಹೋಗ್ತಿದೆ... ಆಂಗ್ಲರ ನಾಡಿನಲ್ಲಿ ಕನ್ನಡದ ಕಂಪು
ಮಣ್ಣೆತ್ತಿನ ಅಮಾವಾಸ್ಯೆ ಮಹತ್ವ ಹಾಗೂ ಆಚರಣೆ ಬಗ್ಗೆ ತಿಳಿಯಿರಿ
ಮಣ್ಣೆತ್ತಿನ ಅಮಾವಾಸ್ಯೆ ಮಹತ್ವ ಹಾಗೂ ಆಚರಣೆ ಬಗ್ಗೆ ತಿಳಿಯಿರಿ
Daily Horoscope: ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
Daily Horoscope: ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ