AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆರಿಗೆಯ ನಂತರ 90 ಕೆಜಿಯಿಂದ 57 ಕೆಜಿ ತೂಕ ಇಳಿಸಿದ ಮಹಿಳೆ, ಈ ಪದ್ಧತಿಯಿಂದ ಎಲ್ಲವೂ ಸಾಧ್ಯ

ಹೆರಿಗೆಯ ನಂತರ ತೂಕ ಇಳಿಸುವುದೇ ಒಂದು ದೊಡ್ಡ ತಲೆನೋವು, ಮಗು, ಮನೆ ಎಂದು ದೊಡ್ಡ ಜವಾಬ್ದಾರಿಗಳ ಜತೆಗೆ ತಮ್ಮ ಆರೋಗ್ಯವನ್ನು ಕೂಡ ಈ ಮಹಿಳೆಯರು ಸಹಿಸಿಕೊಳ್ಳಬೇಕು. ಆದರೆ ಇದನ್ನೆಲ್ಲಾ ದಾಟಿ ತಮ್ಮ ಆರೋಗ್ಯದ ಬಗ್ಗೆ ಹಾಗೂ ತೂಕ ಇಳಿಸುವ ಬಗ್ಗೆ ಯೋಚನೆ ಮಾಡುವುದು ಅಗತ್ಯ. ಇದಕ್ಕಾಗಿ ಇನ್‌ಸ್ಟಾಗ್ರಾಮ್ ನಲ್ಲಿ ನಿಧಿ ಎಂಬುವವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಅವರ ಈ ರೀತಿಯ ಪ್ಲಾನ್​​ನಿಂದ 57 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಹೆರಿಗೆಯ ನಂತರ 90 ಕೆಜಿಯಿಂದ 57 ಕೆಜಿ ತೂಕ ಇಳಿಸಿದ ಮಹಿಳೆ, ಈ ಪದ್ಧತಿಯಿಂದ ಎಲ್ಲವೂ ಸಾಧ್ಯ
ನಿಧಿ ಗುಪ್ತಾ
ಮಾಲಾಶ್ರೀ ಅಂಚನ್​
|

Updated on:Jun 22, 2025 | 6:15 PM

Share

ಹೆರಿಗೆಯ ನಂತರ ಈ ತಾಯಿಯಂದಿರ ತೂಕ ಹೆಚ್ಚಾಗುವುದು ಗೊತ್ತೇ ಆಗುವುದಿಲ್ಲ. ತೂಕ ಕಡಿಮೆ ಮಾಡಲು ಒಂದಲ್ಲ ಒಂದು ಸರ್ಕಸ್​​ ಮಾಡುತ್ತಾ ಇರುತ್ತಾರೆ. ಆದರೆ ಮಕ್ಕಳು, ಮನೆ ಎಂಬ ಜವಾಬ್ದಾರಿಯಿಂದ ಇದು ಯಾವುದು ಸಾಧ್ಯವಾಗುದಿಲ್ಲ. ಆದರೆ ನಿಧಿ ಗುಪ್ತಾ ಎಂಬವವರು 90ರಿಂದ 57 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿರುವ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​ ಆಗಿದೆ. ಅವರು ಆರೋಗ್ಯ ತರಬೇತುದಾರರು ಕೂಡ ಹೌದು. ನಿಧಿ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ, ಗರ್ಭಧಾರಣೆಯ ನಂತರ ತಮ್ಮ ತೂಕ 90 ಕೆಜಿ ಇತ್ತು. ಆದರೆ ನಂತರದಲ್ಲಿ ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮದ ಸಂಯೋಜನೆಯಿಂದ 57 ಕೆಜಿಗೆ ಇಳಿದಿದೆ ಎಂದು ಹೇಳಿದ್ದಾರೆ. ಗರ್ಭಧಾರಣೆಯ ನಂತರ ಮೂರು ವರ್ಷಗಳ ಕಾಲ ವ್ಯಾಯಾಮ ಮತ್ತು ಸರಿಯಾದ ಆಹಾರದಿಂದ ಈ ಫಲಿತಾಂಶ ಬರಲು ಸಾಧ್ಯ ಎಂದು ಹೇಳಿದ್ದಾರೆ. ಈ ತೂಕ ಇಳಿಯುವವರೆಗೆ ತಾಳ್ಮೆಯಿಂದ ಕಾಯಬೇಕು ಎಂದು ಹೇಳಿದ್ದಾರೆ.

ಹೆರಿಗೆಯ ನಂತರ ತೂಕ ಇಳಿಸಿಕೊಳ್ಳಲು ನಿಧಿ ಮನೆಯಲ್ಲೇ ವ್ಯಾಯಾಮ ಮಾಡಲು ಪ್ರಾರಂಭಿಸಿದ್ದಾರೆ. ಬೆಳಿಗ್ಗೆ 5 ಗಂಟೆಗೆ ತನ್ನ ಮಗ ಮಲಗಿದ್ದಾಗ ಡಂಬೆಲ್ಸ್ ಎತ್ತುವುದು ಮತ್ತು ಕೆಲವು ಕಾರ್ಡಿಯೋ ವ್ಯಾಯಾಮಗಳನ್ನು ಮಾಡಿದ್ದಾರೆ. ಇದರ ಜತೆಗೆ ಆಹಾರಕ್ರಮದ ಬದಲಾವಣೆಗಳನ್ನು ಕೂಡ ಹೇಳಿದ್ದಾರೆ.

ಇದನ್ನೂ ಓದಿ
Image
ಊಟದ ನಂತರ ಯೋಗ ಮಾಡಬಹುದೇ?
Image
ಮಳೆಗಾಲದಲ್ಲಿ ಈ ರೀತಿಯ ಬಟ್ಟೆ ಧರಿಸುವುದು ಬೆಸ್ಟ್‌
Image
ಮಾಂಸಕ್ಕೆ ಪರ್ಯಾಯ ಹಲಸಿನ ಗುಜ್ಜೆ, ಸೆಲೆಬ್ರಿಟಿಗಳಿಗೂ ಇದುವೇ ಬೇಕು
Image
ಹಣ, ಯಶಸ್ಸು ಮತ್ತು ಸಂತೋಷಕ್ಕಾಗಿ ಪ್ರತಿ ರಾತ್ರಿ ಮಲಗುವಾಗ ಹೀಗೆ ಮಾಡಿ

ವಿಡಿಯೋ ಇಲ್ಲಿದೆ ನೋಡಿ:

  • ಊಟದ ಕ್ರಮ ಬಗ್ಗೆ ಗಮನ ನೀಡಿದರು. ಯಾವುದೇ ಸಂಸ್ಕರಿಸಿದ ಆಹಾರವನ್ನು ಸೇವಿಸಲಿಲ್ಲ.
  • ಯಾವುದೇ ಪಾರ್ಟಿಗಳಿಲ್ಲ ಮತ್ತು ರಾತ್ರಿಯ ಸುತ್ತಾಟವಿಲ್ಲ
  • ಒಂದೊಂದು ಬಾರಿ ಹೊರಗಡೆ ಮನೆ ಊಟ ಸಿಗಲ್ಲ ಎಂದು, ಮನೆಯಿಂದಲೇ ಊಟ ತಯಾರಿಸಿ ತೆಗೆದುಕೊಂಡು ಹೋಗುತ್ತಿದ್ದರು.

ಇದು ಕಷ್ಟಕರವಾಗಿತ್ತು ಆದರೆ ಕೊನೆ.. ಕೊನೆಗೆ ಈ ಆಹಾರ ಕ್ರಮಕ್ಕೆ ಒಗ್ಗಿಕೊಂಡೆ ಎಂದು ಹೇಳಿದ್ದಾರೆ. ಹೀಗೆ ಈ ಆಹಾರ ಪದ್ಧತಿಯನ್ನು ಮುಂದೆ ಮುಂದೆ ತೆಗೆದುಕೊಂಡು ಹೋಗಿ, ಎರಡು ವರ್ಷಗಳ ಕಾಲ ಹೀಗೆ ನಡೆಯಿತು. ಬಳಿಕ 64 ಕೆಜಿಗೆ ತೂಕ ಇಳಿಸಿಕೊಂಡ, ನಿಧಿ ತನ್ನ ಆಹಾರದಲ್ಲಿ ಹಾಲು, ಮೊಟ್ಟೆ, ಕೋಳಿ ಕೂಡ ಸೇವನೆ ಮಾಡುತ್ತಿದ್ದರು. ಇದರ ಜತೆಗೆ ಹೆವಿವೇಯ್ಟ್‌ ತರಬೇತಿಯನ್ನು ಕೂಡ ಮಾಡಿದ್ರು, ಅಲ್ಲಿಂದ ಅವರು 57 ಕೆಜಿಗೆ ಇಳಿಯಲು 4 ತಿಂಗಳ ಕಾಲ ಬೇಕಾಯಿತು. ಇದೀಗ ನಿಧಿ 60 ಕೆಜಿಗೆ ತಮ್ಮ ತೂಕವನ್ನು ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: ಮಾಂಸಕ್ಕೆ ಪರ್ಯಾಯ ಹಲಸಿನ ಗುಜ್ಜೆ, ಸೆಲೆಬ್ರಿಟಿಗಳಿಗೂ ಇದುವೇ ಬೇಕು

ನಿಧಿ ಹೇಳೋದೇನು?

ನಾವೆಲ್ಲರೂ ವಿಭಿನ್ನ ದೇಹ ಪ್ರಕಾರಗಳನ್ನು ಹೊಂದಿರುವ ವಿಭಿನ್ನ ಜನರು ಎಂದು ನಾನು ಹೇಳುತ್ತೇನೆ. ನಾವು ಏನು ಕೆಲಸ ಮಾಡುತ್ತೇವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಬೇಕು. ಅಲ್ಲದೆ, ಫಿಟ್ ಆಗಿರಲು ಪ್ರತಿದಿನ ಸಾಕಷ್ಟು ತ್ಯಾಗ, ಸಮರ್ಪಣೆ ಮತ್ತು ಬದ್ಧತೆಯನ್ನು ಹೊಂದಿರಬೇಕು ಎಂದು ನಿಧಿ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Sun, 22 June 25

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!