AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ವರ್ಷಗಳಾದರೂ ಬಯಲಾಗಿಲ್ಲ ಗೀತಾಂಜಲಿ ಸಾವಿನ ರಹಸ್ಯ; ಸೊಸೆಯ ವರದಕ್ಷಿಣೆ ಕೇಸಲ್ಲಿ ಮಾಜಿ ನ್ಯಾಯಾಧೀಶರ ಕುಟುಂಬ ಖುಲಾಸೆ

ಹರ್ಯಾಣದ ಮಾಜಿ ನ್ಯಾಯಾಧೀಶರ ಸೊಸೆ 12 ವರ್ಷಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದರು. ಅವರ ಮೈಮೇಲೆ 4 ಬುಲೆಟ್ ಗುಂಡುಗಳ ಗುರುತಿತ್ತು. ವರದಕ್ಷಿಣೆಗಾಗಿ ಗೀತಾಂಜಲಿ ಅವರನ್ನು ಅವರ ಗಂಡನ ಮನೆಯವರೇ ಕೊಲೆ ಮಾಡಿದ್ದಾರೆಂದು ಕೇಸ್ ದಾಖಲಾಗಿತ್ತು. ಆದರೆ, ಸಿಬಿಐ ತನಿಖೆ ನಡೆಸಿದರೂ ಕೊನೆಗೂ ಆಕೆಯ ಸಾವಿನ ರಹಸ್ಯ ಬಯಲಾಗಿಲ್ಲ. ಇಂದು ಸಿಬಿಐ ನ್ಯಾಯಾಲಯವು ಹರ್ಯಾಣದ ನ್ಯಾಯಾಧೀಶ ಮತ್ತು ಅವರ ಮಗ, ಹೆಂಡತಿಯನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.

12 ವರ್ಷಗಳಾದರೂ ಬಯಲಾಗಿಲ್ಲ ಗೀತಾಂಜಲಿ ಸಾವಿನ ರಹಸ್ಯ; ಸೊಸೆಯ ವರದಕ್ಷಿಣೆ ಕೇಸಲ್ಲಿ ಮಾಜಿ ನ್ಯಾಯಾಧೀಶರ ಕುಟುಂಬ ಖುಲಾಸೆ
Geetanjali With Her Husband
ಸುಷ್ಮಾ ಚಕ್ರೆ
|

Updated on: Dec 17, 2025 | 9:12 PM

Share

ನವದೆಹಲಿ, ಡಿಸೆಂಬರ್ 17: ಹರಿಯಾಣದ ನ್ಯಾಯಾಂಗ ಅಧಿಕಾರಿಯ ಪತ್ನಿ ಹಾಗೂ ಮಾಜಿ ನ್ಯಾಯಾಧೀಶರ ಸೊಸೆ 28 ವರ್ಷದ ಗೀತಾಂಜಲಿ ಗುರುಗ್ರಾಮ್‌ನಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದರು. ಅದಾದ 12 ವರ್ಷಗಳ ನಂತರ, ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಆಕೆಯ ಪತಿ, ಮಾವ, ಅತ್ತೆಯನ್ನು ವರದಕ್ಷಿಣೆ (Dowry) ಸಾವು, ಕ್ರಿಮಿನಲ್ ಪಿತೂರಿ ಮತ್ತು ಕ್ರೌರ್ಯ ಆರೋಪಗಳಿಂದ ಖುಲಾಸೆಗೊಳಿಸಿದೆ.

ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಗುರುಗ್ರಾಮ್‌ನ ಮಾಜಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ರವನೀತ್ ಗಾರ್ಗ್ ಮತ್ತು ಅವರ ಪೋಷಕರಾದ ನಿವೃತ್ತ ಸೆಷನ್ಸ್ ನ್ಯಾಯಾಧೀಶರಾದ ಕೆ.ಕೆ ಗಾರ್ಗ್ ಮತ್ತು ರಚನಾ ಗಾರ್ಗ್ ಅವರನ್ನು 2013ರ ಗೀತಾಂಜಲಿ ಗಾರ್ಗ್ ಅವರ ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ. 12 ವರ್ಷಗಳ ಕಾಲ ನಡೆದ ಕಾನೂನು ಹೋರಾಟ ಇದೀಗ ಅಂತ್ಯವಾಗಿದೆ. ಆದರೂ ಗೀತಾಂಜಲಿಯ ಸಾವಿಗೆ ನ್ಯಾಯ ದೊರೆತಿಲ್ಲ. ಸಾಕ್ಷ್ಯಗಳ ಕೊರತೆಯಿಂದ ಈ ಪ್ರಕರಣ ಖುಲಾಸೆಯಾಗಿದೆ.

ಇದನ್ನೂ ಓದಿ: 1 ಕೋಟಿ ರೂ. ಹಣಕ್ಕಾಗಿ ತನ್ನ ಕಾರಿನಲ್ಲಿ ಬೇರೆಯವನಿಗೆ ಬೆಂಕಿ ಹಚ್ಚಿ ಸಾವಿನ ಕತೆ ಕಟ್ಟಿದ ವ್ಯಕ್ತಿ!

ಜುಲೈ 17, 2013ರಂದು ಗುರುಗ್ರಾಮ್‌ನ ಪೊಲೀಸ್ ಲೈನ್ಸ್ ಪೆರೇಡ್ ಮೈದಾನದಲ್ಲಿ ರವನೀತ್ ಅವರ ಪತ್ನಿ ಗೀತಾಂಜಲಿ ಗಾರ್ಗ್ (28) ಅವರ ಶವ ಪತ್ತೆಯಾಗಿತ್ತು. ಅವರಿಗೆ 4 ಗುಂಡುಗಳು ತಗುಲಿದ್ದವು. ಆ ಶವದ ಬಳಿ ರವನೀತ್ ಗರ್ಗ್ ಅವರ ಲೈಸೆನ್ಸ್ ಪಡೆದ ರಿವಾಲ್ವರ್ ಪತ್ತೆಯಾಗಿತ್ತು. ನ್ಯಾಯಾಂಗದಲ್ಲಿ ರವನೀತ್ ಅವರ ಸ್ಥಾನ ಮತ್ತು ಶವ ಪತ್ತೆಯಾದ ಸಂದರ್ಭಗಳಿಂದಾಗಿ ಈ ಸಾವು ವ್ಯಾಪಕ ಗಮನ ಸೆಳೆದಿತ್ತು.

ಸ್ಥಳೀಯ ಪೊಲೀಸರು ಮೊದಲು ಈ ಘಟನೆಯನ್ನು ಆತ್ಮಹತ್ಯೆ ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸಿದರು. ಆದರೆ ಹರಿಯಾಣ ಸರ್ಕಾರ ಸ್ವತಂತ್ರ ತನಿಖೆಗೆ ಶಿಫಾರಸು ಮಾಡಿದ ನಂತರ ಈ ತನಿಖೆಯನ್ನು ಆಗಸ್ಟ್ 2013ರಲ್ಲಿ ಸಿಬಿಐಗೆ ವರ್ಗಾಯಿಸಲಾಯಿತು. 2016ರಲ್ಲಿ ಸಲ್ಲಿಸಲಾದ ತನ್ನ ಚಾರ್ಜ್‌ಶೀಟ್‌ನಲ್ಲಿ ಸಿಬಿಐ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಆರೋಪವನ್ನು ಕೈಬಿಟ್ಟಿತು. ಅದರ ಬದಲಿಗೆ ವರದಕ್ಷಿಣೆ ಸಾವು, ಕ್ರಿಮಿನಲ್ ಪಿತೂರಿ ಮತ್ತು ಕ್ರೌರ್ಯಕ್ಕೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಕೇಸ್ ಮುಂದುವರೆಸಿತು.

ಇದನ್ನೂ ಓದಿ: ಬೀಗ ಹಾಕಿದ ಮನೆಯೊಳಗೆ ನೇಣು ಹಾಕಿಕೊಂಡು ತಾಯಿ-ಮಕ್ಕಳು ಸಾವು

ಗೀತಾಂಜಲಿ ಅವರ ಸಹೋದರ, ಪ್ರಮುಖ ದೂರುದಾರ ಮತ್ತು ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿ ಪ್ರದೀಪ್ ಅಗರ್ವಾಲ್ ವಿಚಾರಣೆಯ ಸಮಯದಲ್ಲಿ ಪ್ರತಿಕೂಲವಾಗಿ ತಿರುಗಿದಾಗ ಪ್ರಾಸಿಕ್ಯೂಷನ್ ಪ್ರಕರಣವು ದೊಡ್ಡ ಹಿನ್ನಡೆಯನ್ನು ಅನುಭವಿಸಿತು. ಜುಲೈ 2018ರಲ್ಲಿ ನೀಡಿದ ತಮ್ಮ ಸಾಕ್ಷ್ಯದಲ್ಲಿ ಅಗರ್ವಾಲ್ ತಮ್ಮ ಹಿಂದಿನ ಆರೋಪಗಳನ್ನು ಹಿಂತೆಗೆದುಕೊಂಡರು. ಮದುವೆಯಲ್ಲಿ ಭಿನ್ನಾಭಿಪ್ರಾಯ ಅಥವಾ ಕ್ರೌರ್ಯದ ಯಾವುದೇ ಪುರಾವೆಗಳಿಲ್ಲ ಎಂದು ಪ್ರತಿವಾದಿಗಳು ವಾದಿಸಿದರು.

ಈ ಪ್ರಕರಣವು 9 ವರ್ಷಗಳ ಕಾಲ ವಿಚಾರಣೆಗೆ ಒಳಗಾಯಿತು, ಆದರೆ ಗೀತಾಂಜಲಿಯನ್ನು ಅವರ ನ್ಯಾಯಾಧೀಶ ಪತಿ ರವನೀತ್ ಗರ್ಗ್, ಮಾವ ಮತ್ತು ಅತ್ತೆ ಕೊಲೆ ಮಾಡಿದ್ದಾರೆ ಎಂದು ಸಾಬೀತುಪಡಿಸಲು ಸಿಬಿಐಗೆ ಸಾಧ್ಯವಾಗಲಿಲ್ಲ. ಹೀಗಾಗಿ ಸಿಬಿಐ ನ್ಯಾಯಾಲಯವು ಮೂವರನ್ನೂ ಖುಲಾಸೆಗೊಳಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!