AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದ; ಭ್ರಷ್ಟಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ಫ್ರಾನ್ಸ್​​ನಲ್ಲೊಂದು ಮಹತ್ವದ ಬೆಳವಣಿಗೆ

Rafale Deal: ರಫೇಲ್​ ಒಪ್ಪಂದ 2016ರಲ್ಲಿ ನಡೆದಾಗಿನಿಂದಲೂ ಒಂದಲ್ಲ ಒಂದು ವಿವಾದ ಏಳುತ್ತಲೇ ಇದೆ. 7.8 ಬಿಲಿಯನ್​ ಯುರೋ ಮೊತ್ತದ ಈ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್​ ಕೂಡ ಆರೋಪ ಮಾಡುತ್ತಲೇ ಇದೆ.

ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದ; ಭ್ರಷ್ಟಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ಫ್ರಾನ್ಸ್​​ನಲ್ಲೊಂದು ಮಹತ್ವದ ಬೆಳವಣಿಗೆ
ರಫೇಲ್ ಯುದ್ಧ ವಿಮಾನ
TV9 Web
| Updated By: Lakshmi Hegde|

Updated on: Jul 03, 2021 | 12:13 PM

Share

ದೆಹಲಿ: 2016ರಲ್ಲಿ ಭಾರತ ಮತ್ತು ಫ್ರಾನ್ಸ್​ ನಡುವೆ ನಡೆದಿರುವ ರಫೇಲ್​ ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಪಕ್ಷಪಾತ ನಡೆದಿದೆ ಎಂಬ ಆರೋಪ ಪದೇಪದೆ ಕೇಳಿಬರುತ್ತಿರುವ ಬೆನ್ನಲ್ಲೇ, ಈಗೊಂದು ಹೊಸ ಬೆಳವಣಿಗೆ ನಡೆದಿದೆ. ರಫೇಲ್​ ಒಪ್ಪಂದದ ಬಗ್ಗೆ ಭ್ರಷ್ಟಾಚಾರ ಆರೋಪದ ಸಂಬಂಧ ತನಿಖೆ ನಡೆಸಲು ಫ್ರಾನ್ಸ್​​ನ ರಾಷ್ಟ್ರೀಯ ಫೈನಾನ್ಸಿಯಲ್​ ಪ್ರಾಸಿಕ್ಯೂಟರ್​​ ಕಚೇರಿ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಿದೆ. ರಫೇಲ್​ ಒಪ್ಪಂದ 2016ರಲ್ಲಿ ನಡೆದಾಗಿನಿಂದಲೂ ಒಂದಲ್ಲ ಒಂದು ವಿವಾದ ಏಳುತ್ತಲೇ ಇದೆ. 7.8 ಬಿಲಿಯನ್​ ಯುರೋ ಮೊತ್ತದ ಈ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್​ ಕೂಡ ಆರೋಪ ಮಾಡುತ್ತಲೇ ಇದೆ.

ಇದೀಗ ತನಿಖೆ ನಡೆಸಲು ನ್ಯಾಯಾಧೀಶರೊಬ್ಬರು ನೇಮಕವಾದ ಬಗ್ಗೆ ಫ್ರೆಂಚ್​​​ನ ತನಿಖಾ ವೆಬ್​ಸೈಟ್ ಆದ ಮೀಡಿಯಾಪಾರ್ಟ್​ ವರದಿ ಮಾಡಿದೆ. ಭಾರತ ಮತ್ತು ಫ್ರಾನ್ಸ್​ ನಡುವೆ 36 ರಫೇಲ್​ ಜೆಟ್​​ಗಳ ಖರೀದಿ ಒಪ್ಪಂದದ ಸಮಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಶಯ ನಿವಾರಣೆ ಆಗುವುದು ಅಗತ್ಯವಾಗಿದೆ. ಹೀಗಾಗಿ ನ್ಯಾಯಾಂಗ ತನಿಖೆ ನಡೆಸಲು ಫ್ರಾನ್ಸ್​ ಸರ್ಕಾರ ನಿರ್ಧರಿಸಿದೆ. ತನ್ನಿಮಿತ್ತ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಿ, ತನಿಖೆಯ ಸಂಪೂರ್ಣ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ರಫೇಲ್​ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬುದಕ್ಕೆ ಸಂಬಂಧಪಟ್ಟಂತೆ ಮೀಡಿಯಾ ಪಾರ್ಟ್​ ಇತ್ತೀಚೆಗೆ ಹಲವು ವರದಿಗಳನ್ನು ಪ್ರಕಟಿಸುತ್ತಲೇ ಇದೆ. ರಫೇಲ್​ ಯುದ್ಧ ವಿಮಾನ ತಯಾರಿಸಿದ ಡಸಾಲ್ಟ್​ ಏವಿಯೇಶನ್​ ಕಂಪನಿ ಅದರ ಖರೀದಿಗಾಗಿ ಭಾರತದ ಮಧ್ಯವರ್ತಿಯೊಬ್ಬರಿಗೆ 1 ಮಿಲಿಯನ್​ ಯುರೋ ಲಂಚ ನೀಡಿದೆ. ಈ ಮಧ್ಯವರ್ತಿಗೂ ಹಗರಣದ ಹಿನ್ನೆಲೆ ಇದೆ. 2019ರಲ್ಲಿ ಭಾರತದಲ್ಲಿ ನಡೆದ ವಿವಿಐಪಿ ಚಾಪರ್​ ಹಗರಣದಲ್ಲಿ ಈ ಮಧ್ಯವರ್ತಿಯ ಹೆಸರೂ ಕೇಳಿಬಂದಿತ್ತು ಎಂದು ಇತ್ತೀಚೆಗಷ್ಟೇ ಮೀಡಿಯಾಪಾರ್ಟ್​ ವರದಿ ಮಾಡಿತ್ತು. ಅದನ್ನು ಡಸಾಲ್ಟ್ ಏವಿಯೇಶನ್​ ನಿರಾಕರಿಸಿತ್ತು. ಆದರೆ ಇದೀಗ ಫ್ರಾನ್ಸ್​ ನ್ಯಾಯಾಧೀಶರು ತನಿಖೆಯ ಜವಾಬ್ದಾರಿ ಹೊತ್ತಿದ್ದು, ಜೂ.14ರಿಂದಲೇ ತನಿಖೆಯೂ ಶುರುವಾಗಿದೆ ಎಂದು ಮತ್ತೊಮ್ಮೆ ಮೀಡಿಯಾಪಾರ್ಟ್ ವರದಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

59,000 ಕೋಟಿ ರೂಪಾಯಿ ಮೊತ್ತದ ರಫೇಲ್​ ಜೆಟ್​ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಹಿಂದೆ ಕಾಂಗ್ರೆಸ್ ಆರೋಪ ಮಾಡಿತ್ತು. ಇದು ದೇಶದ ಬಹುದೊಡ್ಡ ರಕ್ಷಣಾ ಹಗರಣ ಎಂದು ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ಆರೋಪ ಮಾಡಿದ್ದರು. ಅಲ್ಲದೆ ಒಪ್ಪಂದದಲ್ಲಿ ಸಾರ್ವಜನಿಕ ವಲಯದ ಹಿಂದೂಸ್ತಾನ್ ಎರೋನಾಟಿಕ್ಸ್​ ಲಿಮಿಟೆಡ್​​ನ್ನು ಒಳಗೊಳ್ಳುವ ಬದಲು, ಖಾಸಗಿ ಸಂಸ್ಥೆಯನ್ನೇಕೆ ಬಳಸಿಕೊಳ್ಳಲಾಗಿದೆ ಎಂದೂ ಪ್ರಶ್ನೆ ಎತ್ತಿತ್ತು. ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣದಲ್ಲಿ ಅಂತಿಮವಾಗಿ ಕೇಂದ್ರ ಸರ್ಕಾರಕ್ಕೆ ಜಯ ಸಿಕ್ಕಿತ್ತು. ಒಪ್ಪಂದದಡಿ ಈಗಾಗಲೇ ಆರು ಬ್ಯಾಚ್​​ಗಳಲ್ಲಿ ರಫೇಲ್​ ಜೆಟ್​ಗಳು ಭಾರತಕ್ಕೆ ತಲುಪಿದ್ದು, 36ರಲ್ಲಿ ಎಷ್ಟು ಬಂದಿವೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.

ಇದನ್ನೂ ಓದಿ: MIS-C Cases: ನಿರ್ಲಕ್ಷಿಸಿದರೆ ಮಕ್ಕಳ ಅಂಗಾಂಗಕ್ಕೆ ಮಾರಕ ಮಿಸ್​ ಸಿ; ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ಈ ಲಕ್ಷಣಗಳಿದ್ದರೆ ನಿಗಾ ವಹಿಸಿ

A Judge appointed to probe alleged corruption In Rafale Deal reported By mediapart Website

ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್