AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದ; ಭ್ರಷ್ಟಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ಫ್ರಾನ್ಸ್​​ನಲ್ಲೊಂದು ಮಹತ್ವದ ಬೆಳವಣಿಗೆ

Rafale Deal: ರಫೇಲ್​ ಒಪ್ಪಂದ 2016ರಲ್ಲಿ ನಡೆದಾಗಿನಿಂದಲೂ ಒಂದಲ್ಲ ಒಂದು ವಿವಾದ ಏಳುತ್ತಲೇ ಇದೆ. 7.8 ಬಿಲಿಯನ್​ ಯುರೋ ಮೊತ್ತದ ಈ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್​ ಕೂಡ ಆರೋಪ ಮಾಡುತ್ತಲೇ ಇದೆ.

ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದ; ಭ್ರಷ್ಟಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ಫ್ರಾನ್ಸ್​​ನಲ್ಲೊಂದು ಮಹತ್ವದ ಬೆಳವಣಿಗೆ
ರಫೇಲ್ ಯುದ್ಧ ವಿಮಾನ
TV9 Web
| Edited By: |

Updated on: Jul 03, 2021 | 12:13 PM

Share

ದೆಹಲಿ: 2016ರಲ್ಲಿ ಭಾರತ ಮತ್ತು ಫ್ರಾನ್ಸ್​ ನಡುವೆ ನಡೆದಿರುವ ರಫೇಲ್​ ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಪಕ್ಷಪಾತ ನಡೆದಿದೆ ಎಂಬ ಆರೋಪ ಪದೇಪದೆ ಕೇಳಿಬರುತ್ತಿರುವ ಬೆನ್ನಲ್ಲೇ, ಈಗೊಂದು ಹೊಸ ಬೆಳವಣಿಗೆ ನಡೆದಿದೆ. ರಫೇಲ್​ ಒಪ್ಪಂದದ ಬಗ್ಗೆ ಭ್ರಷ್ಟಾಚಾರ ಆರೋಪದ ಸಂಬಂಧ ತನಿಖೆ ನಡೆಸಲು ಫ್ರಾನ್ಸ್​​ನ ರಾಷ್ಟ್ರೀಯ ಫೈನಾನ್ಸಿಯಲ್​ ಪ್ರಾಸಿಕ್ಯೂಟರ್​​ ಕಚೇರಿ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಿದೆ. ರಫೇಲ್​ ಒಪ್ಪಂದ 2016ರಲ್ಲಿ ನಡೆದಾಗಿನಿಂದಲೂ ಒಂದಲ್ಲ ಒಂದು ವಿವಾದ ಏಳುತ್ತಲೇ ಇದೆ. 7.8 ಬಿಲಿಯನ್​ ಯುರೋ ಮೊತ್ತದ ಈ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್​ ಕೂಡ ಆರೋಪ ಮಾಡುತ್ತಲೇ ಇದೆ.

ಇದೀಗ ತನಿಖೆ ನಡೆಸಲು ನ್ಯಾಯಾಧೀಶರೊಬ್ಬರು ನೇಮಕವಾದ ಬಗ್ಗೆ ಫ್ರೆಂಚ್​​​ನ ತನಿಖಾ ವೆಬ್​ಸೈಟ್ ಆದ ಮೀಡಿಯಾಪಾರ್ಟ್​ ವರದಿ ಮಾಡಿದೆ. ಭಾರತ ಮತ್ತು ಫ್ರಾನ್ಸ್​ ನಡುವೆ 36 ರಫೇಲ್​ ಜೆಟ್​​ಗಳ ಖರೀದಿ ಒಪ್ಪಂದದ ಸಮಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಶಯ ನಿವಾರಣೆ ಆಗುವುದು ಅಗತ್ಯವಾಗಿದೆ. ಹೀಗಾಗಿ ನ್ಯಾಯಾಂಗ ತನಿಖೆ ನಡೆಸಲು ಫ್ರಾನ್ಸ್​ ಸರ್ಕಾರ ನಿರ್ಧರಿಸಿದೆ. ತನ್ನಿಮಿತ್ತ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಿ, ತನಿಖೆಯ ಸಂಪೂರ್ಣ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ರಫೇಲ್​ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬುದಕ್ಕೆ ಸಂಬಂಧಪಟ್ಟಂತೆ ಮೀಡಿಯಾ ಪಾರ್ಟ್​ ಇತ್ತೀಚೆಗೆ ಹಲವು ವರದಿಗಳನ್ನು ಪ್ರಕಟಿಸುತ್ತಲೇ ಇದೆ. ರಫೇಲ್​ ಯುದ್ಧ ವಿಮಾನ ತಯಾರಿಸಿದ ಡಸಾಲ್ಟ್​ ಏವಿಯೇಶನ್​ ಕಂಪನಿ ಅದರ ಖರೀದಿಗಾಗಿ ಭಾರತದ ಮಧ್ಯವರ್ತಿಯೊಬ್ಬರಿಗೆ 1 ಮಿಲಿಯನ್​ ಯುರೋ ಲಂಚ ನೀಡಿದೆ. ಈ ಮಧ್ಯವರ್ತಿಗೂ ಹಗರಣದ ಹಿನ್ನೆಲೆ ಇದೆ. 2019ರಲ್ಲಿ ಭಾರತದಲ್ಲಿ ನಡೆದ ವಿವಿಐಪಿ ಚಾಪರ್​ ಹಗರಣದಲ್ಲಿ ಈ ಮಧ್ಯವರ್ತಿಯ ಹೆಸರೂ ಕೇಳಿಬಂದಿತ್ತು ಎಂದು ಇತ್ತೀಚೆಗಷ್ಟೇ ಮೀಡಿಯಾಪಾರ್ಟ್​ ವರದಿ ಮಾಡಿತ್ತು. ಅದನ್ನು ಡಸಾಲ್ಟ್ ಏವಿಯೇಶನ್​ ನಿರಾಕರಿಸಿತ್ತು. ಆದರೆ ಇದೀಗ ಫ್ರಾನ್ಸ್​ ನ್ಯಾಯಾಧೀಶರು ತನಿಖೆಯ ಜವಾಬ್ದಾರಿ ಹೊತ್ತಿದ್ದು, ಜೂ.14ರಿಂದಲೇ ತನಿಖೆಯೂ ಶುರುವಾಗಿದೆ ಎಂದು ಮತ್ತೊಮ್ಮೆ ಮೀಡಿಯಾಪಾರ್ಟ್ ವರದಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

59,000 ಕೋಟಿ ರೂಪಾಯಿ ಮೊತ್ತದ ರಫೇಲ್​ ಜೆಟ್​ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಹಿಂದೆ ಕಾಂಗ್ರೆಸ್ ಆರೋಪ ಮಾಡಿತ್ತು. ಇದು ದೇಶದ ಬಹುದೊಡ್ಡ ರಕ್ಷಣಾ ಹಗರಣ ಎಂದು ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ಆರೋಪ ಮಾಡಿದ್ದರು. ಅಲ್ಲದೆ ಒಪ್ಪಂದದಲ್ಲಿ ಸಾರ್ವಜನಿಕ ವಲಯದ ಹಿಂದೂಸ್ತಾನ್ ಎರೋನಾಟಿಕ್ಸ್​ ಲಿಮಿಟೆಡ್​​ನ್ನು ಒಳಗೊಳ್ಳುವ ಬದಲು, ಖಾಸಗಿ ಸಂಸ್ಥೆಯನ್ನೇಕೆ ಬಳಸಿಕೊಳ್ಳಲಾಗಿದೆ ಎಂದೂ ಪ್ರಶ್ನೆ ಎತ್ತಿತ್ತು. ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣದಲ್ಲಿ ಅಂತಿಮವಾಗಿ ಕೇಂದ್ರ ಸರ್ಕಾರಕ್ಕೆ ಜಯ ಸಿಕ್ಕಿತ್ತು. ಒಪ್ಪಂದದಡಿ ಈಗಾಗಲೇ ಆರು ಬ್ಯಾಚ್​​ಗಳಲ್ಲಿ ರಫೇಲ್​ ಜೆಟ್​ಗಳು ಭಾರತಕ್ಕೆ ತಲುಪಿದ್ದು, 36ರಲ್ಲಿ ಎಷ್ಟು ಬಂದಿವೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.

ಇದನ್ನೂ ಓದಿ: MIS-C Cases: ನಿರ್ಲಕ್ಷಿಸಿದರೆ ಮಕ್ಕಳ ಅಂಗಾಂಗಕ್ಕೆ ಮಾರಕ ಮಿಸ್​ ಸಿ; ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ಈ ಲಕ್ಷಣಗಳಿದ್ದರೆ ನಿಗಾ ವಹಿಸಿ

A Judge appointed to probe alleged corruption In Rafale Deal reported By mediapart Website

Follow Us
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು