AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಬೂಸ್ಟರ್​ ಡೋಸ್​ ಆಗಿ ಕೊವಾವ್ಯಾಕ್ಸ್​ ನೀಡುವುದು ಉತ್ತಮ, ಕೊವಿಶೀಲ್ಡ್ ಬೇಡ ಎಂದ ಅನುರಾಗ್ ಅಗರ್​ವಾಲ್​

ಈ ಕೊವಾವ್ಯಾಕ್ಸ್​ ಲಸಿಕೆ ಒಮಿಕ್ರಾನ್​ ರೂಪಾಂತರದ ವಿರುದ್ಧ ಎಷ್ಟು ಪರಿಣಾಮಕಾರಿ ಎಂಬುದನ್ನು ಸ್ಪಷ್ಟವಾಗಿ ಅರಿಯಲು ಇನ್ನೂ ಕ್ಲಿನಿಕಲ್ ಅಧ್ಯಯನಗಳು ಅಗತ್ಯ ಇವೆ ಎಂದು ಅನುರಾಗ್​ ಅಗರ್​ವಾಲ್​ ತಿಳಿಸಿದ್ದಾರೆ.

ಭಾರತದಲ್ಲಿ ಬೂಸ್ಟರ್​ ಡೋಸ್​ ಆಗಿ ಕೊವಾವ್ಯಾಕ್ಸ್​ ನೀಡುವುದು ಉತ್ತಮ, ಕೊವಿಶೀಲ್ಡ್ ಬೇಡ ಎಂದ ಅನುರಾಗ್ ಅಗರ್​ವಾಲ್​
ಕೊವಾವ್ಯಾಕ್ಸ್​
TV9 Web
| Edited By: |

Updated on:Dec 18, 2021 | 3:25 PM

Share

ಸೀರಮ್​ ಸಂಸ್ಥೆ ಉತ್ಪಾದಿಸುವ ಕೊವಾವ್ಯಾಕ್ಸ್​ ಲಸಿಕೆಯ ತುರ್ತು ಬಳಕೆಗೆ ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆ (WHO) ಅನುಮೋದನೆ ನೀಡಿದೆ. ಅದರ ಬೆನ್ನಲ್ಲೇ ಭಾರತ ಸರ್ಕಾರದ ಉನ್ನತ ವಿಜ್ಞಾನಿಯೊಬ್ಬರು, ಈ ಕೊವಾವ್ಯಾಕ್ಸ್​ನ್ನು ಭಾರತದಲ್ಲಿ ಬೂಸ್ಟರ್​ ಡೋಸ್​ ಆಗಿ ಬಳಸುವಂತೆ ಶಿಫಾರಸ್ಸು ಮಾಡಿದ್ದಾರೆ. ಇದೀಗ ಕೊವಿಡ್ 19 ಸೋಂಕಿನ ಹೊಸ ರೂಪಾಂತರವಾದ ಒಮಿಕ್ರಾನ್​ ದೇಶಕ್ಕೂ ಕಾಲಿಟ್ಟಿದ್ದು, ಈ ಹೊತ್ತಲ್ಲಿ ಕೊರೊನಾ ಲಸಿಕೆ ಇನ್ನೊಂದು ಡೋಸ್ ಅಗತ್ಯವಿದೆಯಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಸೂಚನೆ ಹೊರಬಿದ್ದಿಲ್ಲ. ಹೀಗಿರುವಾಗ ಸರ್ಕಾರದ ಜಿನೋಮ್ ಸಿಕ್ವೆನ್ಸಿಂಗ್​ ಮೇಲ್ವಿಚಾರಣೆ ಏಜೆನ್ಸಿಯ ಉನ್ನತ ನಿರ್ದೇಶಕ ಅನುರಾಗ್​ ಅಗರ್​ವಾಲ್​ ಹೀಗೊಂದು ಶಿಫಾರಸ್ಸು ಮಾಡಿದ್ದಾರೆ. ಕೊವಾವ್ಯಾಕ್ಸ್ ಬಲವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಒಳಗೊಂಡಿದೆ ಮತ್ತು ಅತ್ಯುತ್ತಮ ಸುರಕ್ಷತಾ ಅಂಶವನ್ನು ಹೊಂದಿದೆ ಎಂದು ಹೇಳಿದ್ದಾರೆ.  

ಅಮೆರಿಕನ್​ ಬಯೋಟೆಕ್ನಾಲಜಿ ಸಂಸ್ಥೆ ನೊವಾವ್ಯಾಕ್ಸ್ ಅಭಿವೃದ್ಧಿ ಪಡಿಸಿರುವ ಕೊವಿಡ್ 19 ವ್ಯಾಕ್ಸಿನ್​​ನ್ನು ಭಾರತದಲ್ಲಿ ಕೊವಾವ್ಯಾಕ್ಸ್​ ಎಂದು ಕರೆಯಲಾಗಿದ್ದು, ಇದನ್ನು ಉತ್ಪಾದನೆ ಮಾಡಲು ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಪರವಾನಗಿ ಪಡೆದಿದೆ. ಇದೊಂದು ಮರುಸಂಯೋಜಿತ ಲಸಿಕೆಯಾಗಿದೆ. ಕೊರೊನಾ ವೈರಸ್​ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸ್ಪೈಕ್​ ಪ್ರೋಟಿನ್​​ನ್ನು ಬಳಸಿ, ಈ ವ್ಯಾಕ್ಸಿನ್​ ಅಭಿವೃದ್ಧಿಪಡಿಸಲಾಗಿದೆ. ಈ ಕೊವಾವ್ಯಾಕ್ಸ್​​ನ್ನು ಭಾರತದಲ್ಲಿ ಬೂಸ್ಟರ್ ಡೋಸ್​​ಗೆ ಬಳಸಬಹುದು. ಬೂಸ್ಟರ್ ಡೋಸ್​ ಆಗಿ ಕೊವಿಶೀಲ್ಡ್​ ಲಸಿಕೆ ನೀಡುವುದಕ್ಕಿಂತಲೂ  ಕೊವಾವ್ಯಾಕ್ಸ್​ ಹೆಚ್ಚಿನ ಪರಿಣಾಮಕಾರಿ ಎಂದು ಅನುರಾಗ್​ ಅಗರ್​ವಾಲ್​ ತಿಳಿಸಿದ್ದಾರೆ.

ಆದರೆ ಇನ್ನೊಂದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೇನೋ ಈ ಕೊವಾವ್ಯಾಕ್ಸ್ ಹೆಚ್ಚಿಸುತ್ತದೆ. ಆದರೆ ಈ ಲಸಿಕೆ ಒಮಿಕ್ರಾನ್​ ರೂಪಾಂತರದ ವಿರುದ್ಧ ಎಷ್ಟು ಪರಿಣಾಮಕಾರಿ ಎಂಬುದನ್ನು ಸ್ಪಷ್ಟವಾಗಿ ಅರಿಯಲು ಇನ್ನೂ ಕ್ಲಿನಿಕಲ್ ಅಧ್ಯಯನಗಳು ಅಗತ್ಯ ಇವೆ. ಕೊವಾವ್ಯಾಕ್ಸ್ ಬೇಟಾ ವಿರುದ್ಧ ಶೇ.50ರಷ್ಟು ಪರಿಣಾಮಕಾರಿ. ಹಾಗೇ, ಒಮಿಕ್ರಾನ್​ ವಿರುದ್ಧವೂ ತುಂಬ ಪ್ರಭಾವ ಕೊಡುತ್ತದೆ ಎಂದು ನಾನು ಹೇಳುವುದಿಲ್ಲ. ಹಾಗಿದ್ದಾಗ್ಯೂ ಕೂಡ ಭಾರತದಲ್ಲಿ ಮೂರನೇ ಡೋಸ್​ ಕೊಡುವುದೇ ಆದರೆ, ಕೊವಾವ್ಯಾಕ್ಸ್ ಲಸಿಕೆ ನೀಡುವುದು ಒಳಿತು ಎಂಬುದು ನನ್ನ ಅನಿಸಿಕೆ ಎಂದಿದ್ದಾರೆ.

ಕೊವಾವ್ಯಾಕ್ಸ್​ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ್ದು, ಭಾರತದ ಪಾಲಿಗೆ ಒಳ್ಳೆಯ ಸುದ್ದಿ ಎಂದು ಸೀರಮ್​ ಇನ್​ಸ್ಟಿಟ್ಯೂಟ್​​ನ ಸಿಇಒ ಆದರ್​ ಪೂನಾವಾಲಾ ತಿಳಿಸಿದ್ದಾರೆ. ಈ ಕೊವಾವ್ಯಾಕ್ಸ್​ನ್ನು ಭಾರತ ಹೊರತುಪಡಿಸಿ ಇನ್ನೆಲ್ಲ ರಾಷ್ಟ್ರಗಳಲ್ಲೂ ನೊವಾವ್ಯಾಕ್ಸ್ ಎಂದೇ ಕರೆಯಲಾಗುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಒಟ್ಟು 29,960 ಜನರ ಮೇಲೆ ಕ್ಲಿನಿಕಲ್​ ಟ್ರಯಲ್​ ನಡೆಸಲಾಗಿತ್ತು. ಆಗ ಈ ಲಸಿಕೆ ಕೊರೊನಾ ವಿರುದ್ಧ ಶೇ.90.4ರಷ್ಟು ಪರಿಣಾಮಕಾರಿ ಎಂಬುದು ಗೊತ್ತಾಗಿದೆ. ಹಾಗೇ, ಯುಕೆಯಲ್ಲಿ ನಡೆಸಲಾದ ಕ್ಲಿನಿಕಲ್​ ಟ್ರಯಲ್​ನಲ್ಲಿ ಇದು ಶೇ.96ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಚ್ಚಿದಾನಂದ ಆಶ್ರಮದಲ್ಲಿ ಕಾರ್ಯಸಿದ್ಧಿ ಹನುಮಾನ್ ದೇವಾಲಯ ಉದ್ಘಾಟನೆ ಮಾಡಿದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

Published On - 2:14 pm, Sat, 18 December 21

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ