AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shraddha Murder Case: ಶ್ರದ್ಧಾಳನ್ನು ಕೊಲೆ ಮಾಡಿರುವುದಾಗಿ ಅಫ್ತಾಬ್ ಒಪ್ಪಿಕೊಂಡರೂ ನ್ಯಾಯಾಲಯವು ಸಾಕ್ಷ್ಯ ಎಂದು ಪರಿಗಣಿಸುತ್ತಿಲ್ಲ ಏಕೆ?

ಶ್ರದ್ಧಾ ವಾಕರ್(Shraddha Walker) ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು 4 ದಿನಗಳ ಕಾಲ ವಿಸ್ತರಿಸಲಾಗಿದೆ.

Shraddha Murder Case: ಶ್ರದ್ಧಾಳನ್ನು ಕೊಲೆ ಮಾಡಿರುವುದಾಗಿ ಅಫ್ತಾಬ್ ಒಪ್ಪಿಕೊಂಡರೂ ನ್ಯಾಯಾಲಯವು  ಸಾಕ್ಷ್ಯ ಎಂದು ಪರಿಗಣಿಸುತ್ತಿಲ್ಲ ಏಕೆ?
Aftab
Follow us
TV9 Web
| Updated By: ನಯನಾ ರಾಜೀವ್

Updated on: Nov 23, 2022 | 7:08 AM

ಶ್ರದ್ಧಾ ವಾಕರ್(Shraddha Walker) ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು 4 ದಿನಗಳ ಕಾಲ ವಿಸ್ತರಿಸಲಾಗಿದೆ. ವೀಡಿಯೋ ಕಾನ್ಫರೆನ್ಸ್ ವೇಳೆ ಅಫ್ತಾಬ್ ಸಿಟ್ಟಿನ ಭರದಲ್ಲಿ ಕೊಲೆ ಮಾಡಿರುವುದಾಗಿ ನ್ಯಾಯಾಧೀಶರ ಮುಂದೆ ಒಪ್ಪಿಕೊಂಡಿದ್ದಾನೆ.   ಗಮನಿಸಬೇಕಾದ ಅಂಶವೆಂದರೆ ಶ್ರದ್ಧಾಳನ್ನು ತಾನೇ ಕೊಂದಿರುವುದಾಗಿ ಅಫ್ತಾಬ್ ತಪ್ಪೊಪ್ಪಿಕೊಂಡಿಲ್ಲ. ಏನೇ ನಡೆದರೂ ಸಿಟ್ಟಿನಲ್ಲಿ ನಡೆದಿದೆ ಎಂದು ಹೇಳಿದ್ದಾನೆ.

ಅಫ್ತಾಬ್ ವಕೀಲರ ಪ್ರಕಾರ, ನ್ಯಾಯಾಲಯವು ಈ ಹೇಳಿಕೆಯನ್ನು ಸಾಕ್ಷ್ಯವಾಗಿ ತೆಗೆದುಕೊಂಡಿಲ್ಲ. ವರದಿಯ ಪ್ರಕಾರ, ಪಾಲಿಗ್ರಫಿ ಪರೀಕ್ಷೆಗೆ ಅಫ್ತಾಬ್ ಸಹ ಒಪ್ಪಿಗೆ ನೀಡಿದ್ದಾರೆ. ಇದಾದ ಬಳಿಕ ನ್ಯಾಯಾಲಯ ಪರೀಕ್ಷೆಗೆ ಅನುಮತಿ ನೀಡಿತ್ತು.

ಒಟ್ಟಾರೆಯಾಗಿ 14 ದಿನಗಳ ಕಸ್ಟಡಿಗೆ ತೆಗೆದುಕೊಳ್ಳಬಹುದು. 5-5 ದಿನಗಳವರೆಗೆ ಎರಡು ಬಾರಿ ಕಸ್ಟಡಿ ತೆಗೆದುಕೊಳ್ಳಲಾಗಿದೆ. ಇಂದು ಮತ್ತೆ 4 ದಿನಗಳ ಕಸ್ಟಡಿ ನೀಡಲಾಗಿದೆ. ಈಗ ಈ ಸಮಯದಲ್ಲಿ ಪಾಲಿಗ್ರಾಫಿ ಪರೀಕ್ಷೆ ಮತ್ತು ನಂತರ ನಾರ್ಕೋ ಪರೀಕ್ಷೆ ಇರುತ್ತದೆ. ಈ ವೇಳೆ ಪೊಲೀಸರ ಮುಂದಿರುವ ಸವಾಲು ಏನೆಂದರೆ, ಈ ನಾಲ್ಕು ದಿನಗಳಲ್ಲಿ ಅಫ್ತಾಬ್​ನಿಂದ ಎಲ್ಲ ರಹಸ್ಯಗಳನ್ನು ಹೊರತೆಗೆಯಬೇಕು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಬೇಕು.

ಪುರಾವೆಗಳನ್ನು ಹುಡುಕಲು ಪೊಲೀಸರು 14 ವಿವಿಧ ತಂಡಗಳನ್ನು ನಿಯೋಜಿಸಿದ್ದಾರೆ. 6 ತಿಂಗಳಿಂದ ಹಲವು ವಿಷಯಗಳು ನೆನಪಾಗುತ್ತಿಲ್ಲ ಎಂದು ಅಫ್ತಾಬ್ ಹೇಳಿದ್ದಾರೆ. ಶ್ರದ್ಧಾಳ ತಲೆಬುರುಡೆಯನ್ನು ಕೆರೆಯ ಬಳಿ ಎಸೆದಿರುವುದಾಗಿ ಅಫ್ತಾಬ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾನೆ. ದವಡೆಯ ಒಂದು ಭಾಗವೂ ಪತ್ತೆಯಾಗಿದ್ದು, ಇದು ಶ್ರದ್ಧಾ ಅವರದ್ದೋ ಅಥವಾ ಬೇರೆಯವರದ್ದೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಲ್ಯಾಬ್‌ಗೆ ಕಳುಹಿಸಲಾಗಿದೆ.

ಇಲ್ಲಿ ಅಫ್ತಾಬ್ ಶ್ರದ್ಧಾಳನ್ನು ಕೊಂದು ಮೃತ ದೇಹವನ್ನು ತುಂಡರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ನ್ಯಾಯಾಲಯದಲ್ಲಿ ಅಫ್ತಾಬ್ ಪೂನಾವಾಲಾ ಅವರ ಪುನರಾವರ್ತಿತ ಹೇಳಿಕೆಯನ್ನು ಸಹ ಸಾಕ್ಷಿಯಾಗಿ ಪರಿಗಣಿಸಲಾಗುವುದಿಲ್ಲ, ಏಕೆಂದರೆ ಆತನನ್ನು ರಿಮಾಂಡ್‌ಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು ಹೀಗಾಗಿ ಇದನ್ನು ನಿಜವಾದ ವಿಚಾರಣೆ ಎಂದು ಕರೆಯಲಾಗುವುದಿಲ್ಲ.

ಕೋಪದಿಂದ ಶ್ರದ್ಧಾಳನ್ನು ಕೊಲೆ ಮಾಡಿರುವುದಾಗಿ ನ್ಯಾಯಾಧೀಶರಿಗೆ ತಿಳಿಸಿದ್ದಾರೆ. ಎಲ್ಲವನ್ನು ಪೊಲೀಸರಿಗೆ ಹೇಳಿರುವುದಾಗಿಯೂ ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ಬಳಿ ಯಾವುದೇ ಪ್ರಾಥಮಿಕ ಸಾಕ್ಷಿಗಳಿಲ್ಲ. ಹೌದು… ಸದ್ಯ ಪೊಲೀಸರ ಬಳಿ ಆರು ತಿಂಗಳ ಹಿಂದೆ ನಡೆದ ಕೊಲೆಯ ಸಾಂದರ್ಭಿಕ ಸಾಕ್ಷ್ಯವಷ್ಟೇ ಇದೆ. ಪ್ರತಿ ಹಂತವನ್ನು ಸ್ವತಂತ್ರವಾಗಿ ಪರಿಶೀಲಿಸಬೇಕಾದ ಕಾರಣ ಪೊಲೀಸರು ವಿಧಿವಿಜ್ಞಾನವನ್ನು ಅವಲಂಬಿಸಿದ್ದಾರೆ.

ಮೇ 18 ರಂದು ಶ್ರದ್ಧಾ ವಾಕರ್‌ನನ್ನು ಕೊಂದಿರುವುದಾಗಿ ಅಫ್ತಾಬ್ ಪೂನಾವಾಲಾ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಶವದ ಎಲ್ಲಾ ಭಾಗಗಳು ಪತ್ತೆಯಾಗಿಲ್ಲ, ವಿಶೇಷವಾಗಿ ಶ್ರದ್ಧಾಳ ತಲೆ, ಹೀಗಾಗಿ ಮೇ 18ರ ನಂತರ ಶ್ರದ್ಧಾ ಬದುಕಿಲ್ಲ ಎಂಬುದನ್ನು ಪೊಲೀಸರು ಸಾಬೀತುಪಡಿಸಿದ್ದಾರೆ.

ಹೀಗಿರುವಾಗ ಪೊಲೀಸರು ಶ್ರದ್ಧಾ ಅವರ ಆಪ್ತರು ಹಾಗೂ ಸ್ನೇಹಿತರನ್ನು ಕೂಡ ಸಂಪರ್ಕಿಸುತ್ತಿದ್ದು, ಮೇ 18ರ ನಂತರ ಶ್ರದ್ಧಾ ಅವರನ್ನು ಸಂಪರ್ಕಿಸಿದ್ದಾರಾ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಅದೇ ವೇಳೆ ಅಫ್ತಾಬ್ ಪೂನವಾಲಾ ಹೇಳಿದ ಸ್ಥಳಗಳಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಮೂಳೆಗಳು ಮತ್ತು ಮಾನವ ದವಡೆ ಶ್ರದ್ಧಾ ಅವರದ್ದೇ ಅಥವಾ ಇಲ್ಲವೇ, ಆಕೆಯ ತಂದೆ ಮತ್ತು ಸಹೋದರನೊಂದಿಗೆ ಡಿಎನ್‌ಎ ಹೊಂದಾಣಿಕೆ ಮಾಡಲಾಗುತ್ತಿದೆ, ಅವರ ವರದಿಯನ್ನು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಅಫ್ತಾಬ್ ಶ್ರದ್ಧಾಳನ್ನು ಕೊಂದ ಕೊಲೆಯ ಆಯುಧವೇ ಪ್ರಮುಖ ವಿಷಯ. ತನ್ನ ಗೆಳತಿಯ ಕತ್ತು ಹಿಸುಕಿ ಕೊಂದಿರುವುದಾಗಿ ಪೂನಾವಾಲಾ ಹೇಳಿಕೊಂಡಿದ್ದಾನೆ. ದೇಹವನ್ನು ಛಿದ್ರಗೊಳಿಸಲು ಬಳಸಿದ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಆದರೆ ಆರು ತಿಂಗಳ ಬಳಿಕವೂ ಫೋರೆನ್ಸಿಕ್ ಪುರಾವೆಗಳ ಬಗ್ಗೆ ಸ್ವಲ್ಪ ಭರವಸೆ ಇದೆ.

ಅದೇ ಸಮಯದಲ್ಲಿ, ದೆಹಲಿ ಪೊಲೀಸರು ಅಫ್ತಾಬ್‌ನ ಸ್ನಾನಗೃಹದ ಟೈಲ್ಸ್‌ನಿಂದ ಕೆಲವು ಪುರಾವೆಗಳನ್ನು ಕಂಡುಕೊಂಡಿದ್ದಾರೆ. ವಿಧಿವಿಜ್ಞಾನ ತಜ್ಞರು ಈ ಸಾಕ್ಷ್ಯವನ್ನು ಪಡೆದುಕೊಂಡಿದ್ದಾರೆ. ಪುರಾವೆಗಳು ಯಾವುವು, ಅದನ್ನು ಇನ್ನೂ ಹೇಳಲಾಗಿಲ್ಲ. ಈ ಹಿಂದೆ ಅಫ್ತಾಬ್ ಅವರ ಸ್ನಾನಗೃಹದ ಹೆಂಚುಗಳ ಮೇಲೂ ರಕ್ತದ ಕುರುಹುಗಳು ಪತ್ತೆಯಾಗಿದ್ದವು. ತಜ್ಞರ ವರದಿ ಬರಲು 2 ವಾರ ಬೇಕು.

ಕೊಲೆಗೆ ಕಾರಣವೂ ಸಮಸ್ಯೆಯಾಗಿದ್ದು, ಇದು ಪೂರ್ವಯೋಜಿತವಲ್ಲ ಎಂದು ಅಫ್ತಾಬ್ ಪೂನವಾಲಾ ಹೇಳಿಕೊಂಡಿದ್ದಾನೆ. ಜಗಳದ ವೇಳೆ ಪ್ರಚೋದನೆ ಹಾಗೂ ಕೋಪದಲ್ಲಿ ಶ್ರದ್ಧಾ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ