AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check ಅಸನಿ ಚಂಡಮಾರುತದ ನಡುವೆ ಆಂಧ್ರ ಕರಾವಳಿಗೆ ತೇಲಿ ಬಂದಿದ್ದು ಚಿನ್ನದ ರಥವೇ?; ಬಣ್ಣ ಮಾತ್ರ ಬಂಗಾರದ್ದು, ತೇರು ಸ್ಟೀಲಿನದ್ದು

ಅನೇಕ ವಿಶ್ವಾಸಾರ್ಹ ಮಾಧ್ಯಮಗಳು ಈ ಸಂಗತಿಯನ್ನು ವರದಿ ಮಾಡಿದ್ದು ಮೇ 10 ರಂದು ಶ್ರೀಕಾಕುಳಂನ ಕಡಲತೀರದಲ್ಲಿ ನಿಗೂಢವಾದ "ಚಿನ್ನದ ಬಣ್ಣದ" ರಥವು ದಡಕ್ಕೆ ತೇಲಿ ಬಂದಿದೆ ಎಂದು ಹೇಳಿವೆ

Fact Check ಅಸನಿ ಚಂಡಮಾರುತದ ನಡುವೆ ಆಂಧ್ರ ಕರಾವಳಿಗೆ ತೇಲಿ ಬಂದಿದ್ದು ಚಿನ್ನದ ರಥವೇ?; ಬಣ್ಣ ಮಾತ್ರ ಬಂಗಾರದ್ದು, ತೇರು ಸ್ಟೀಲಿನದ್ದು
ಆಂಧ್ರ ಕಡಲ ತೀರದಲ್ಲಿ ಚಿನ್ನದ ತೇರು
TV9 Web
| Edited By: |

Updated on: May 11, 2022 | 7:32 PM

Share

ಆಂಧ್ರಪ್ರದೇಶದಲ್ಲಿ ಅಸನಿ ಚಂಡಮಾರುತವು (cyclone Asani) ಭಾರೀ ಮಳೆಯನ್ನು ಉಂಟುಮಾಡುತ್ತದೆ ಎಂಬ ಸುದ್ದಿಯ ನಡುವೆ, ಆಂಧ್ರಪ್ರದೇಶದ (Andhra Pradesh) ಶ್ರೀಕಾಕುಳಂ ತೀರಕ್ಕೆ ಚಿನ್ನದ ತೇರು (chariot made of gold) ತೇಲಿಬಂದಿದೆ ಎಂಬುದು ಸುದ್ದಿಯಾಗಿದೆ. ವೈರಲ್ ವಿಡಿಯೊದಲ್ಲಿ ಜನರು ಸಮುದ್ರದಿಂದ ದಡಕ್ಕೆ ರಥವನ್ನು ಎಳೆಯುತ್ತಿರುವುದನ್ನು ಕಾಣಬಹುದು. ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಅನೇಕ ಜನರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸಮುದ್ರದಲ್ಲಿ ಚಿನ್ನದ ರಥ ಕಂಡುಬಂದಿದೆ. ಅಸನಿ ಚಂಡಮಾರುತದಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕರಾವಳಿಗೆ ಚಿನ್ನದ ರಥ ತೇಲಿ ಬಂದಿದೆ. ರಥವು ಮಠದ ಆಕಾರದಲ್ಲಿದೆ. ಬಹುಶಃ ಅದು ಥೈಲ್ಯಾಂಡ್ ಅಥವಾ ಮ್ಯಾನ್ಮಾರ್‌ನಿಂದ ತೇಲುತ್ತಾ ಆಂಧ್ರಪ್ರದೇಶದ ಕರಾವಳಿಯನ್ನು ತಲುಪಿದೆ ಎಂದು ನೆಟ್ಟಿಗರು ಬರೆದಿದ್ದಾರೆ.

ಫ್ಯಾಕ್ಟ್ ಚೆಕ್ ಅನೇಕ ವಿಶ್ವಾಸಾರ್ಹ ಮಾಧ್ಯಮಗಳು ಈ ಸಂಗತಿಯನ್ನು ವರದಿ ಮಾಡಿದ್ದು ಮೇ 10 ರಂದು ಶ್ರೀಕಾಕುಳಂನ ಕಡಲತೀರದಲ್ಲಿ ನಿಗೂಢವಾದ “ಚಿನ್ನದ ಬಣ್ಣದ” ರಥವು ದಡಕ್ಕೆ ತೇಲಿ ಬಂದಿದೆ ಎಂದು ಹೇಳಿವೆ. ಸ್ಥಳೀಯರು ಚಿನ್ನದ ಬಣ್ಣದ ರಥವನ್ನು ಸಮುದ್ರ ತೀರಕ್ಕೆ ಎಳೆದುಕೊಂಡು ಹೋಗುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಆದರೆ ರಥವು ಚಿನ್ನದಿಂದ ಮಾಡಲ್ಪಟ್ಟಿದೆ ಎಂದು ಎಲ್ಲಿಯೂ ವರದಿಯಾಗಿಲ್ಲ. ಈ ವೈರಲ್ ಸುದ್ದಿ ಬಗ್ಗೆ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಮಾಡಿದೆ.

ಇಂಡಿಯಾ ಟುಡೇ ಶ್ರೀಕಾಕುಳಂ ಜಿಲ್ಲೆಯ ಜಿಲ್ಲಾಧಿಕಾರಿ ಐಎಎಸ್ ಅಧಿಕಾರಿ ಶ್ರೀಕೇಶ್ ಬಿ ಲತಾಕರ್ ಅವರೊಂದಿಗೆ ಮಾತನಾಡಿದ್ದು, ರಥವು ಚಿನ್ನದಿಂದ ಮಾಡಲಾಗಿಲ್ಲ ಆದರೆ ಚಿನ್ನದ ಬಣ್ಣದ್ದಾಗಿದೆ ಎಂದು ಅವರು  ಸ್ಪಷ್ಟಪಡಿಸಿದ್ದಾರೆ. “ರಥವು ಈಗ ಸ್ಥಳೀಯ ಪೊಲೀಸರ ವಶದಲ್ಲಿದೆ” ಎಂದು ಅವರು ಹೇಳಿರುವುದಾಗಿ ವರದಿ ಮಾಡಿದೆ.

ಹೆಚ್ಚಿನ ದೃಢೀಕರಣಕ್ಕಾಗಿ, ಇಂಡಿಯಾ ಟುಡೇ ರಥವನ್ನು ನೋಡಿದ ಶ್ರೀಕಾಕುಳಂನ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿದೆ. ಶ್ರೀಕಾಕುಳಂನ ತೆಕ್ಕಲಿ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಎಂ ವೆಂಕಟ ಗಣೇಶ್ ಅವರು ‘ಇಂಡಿಯಾ ಟುಡೇ’ ಜತೆ ದೂರವಾಣಿ ಮೂಲಕ ಮಾತನಾಡಿದ್ದು , ತನಿಖೆಯ ನಂತರ ಪೊಲೀಸರಿಗೆ “ರಥದಲ್ಲಿ ಚಿನ್ನದಂತಹ ಯಾವುದೇ ಬೆಲೆಬಾಳುವ ಲೋಹ ಪತ್ತೆಯಾಗಿಲ್ಲ. ಇದು ಉಕ್ಕು (ಸ್ಟೀಲ್) ಮತ್ತು ಮರದಿಂದ ಮಾಡಲ್ಪಟ್ಟಿದೆ. ಆದರೆ ಅದರ ಬಣ್ಣ ಮಾತ್ರ ಬಂಗಾರದ್ದು. ಇದನ್ನು ಮತ್ತಷ್ಟು ಪರಿಶೀಲಿಸಲು ನಾವು ಇಂದು ಬಾಂಬ್ ಸ್ಕ್ವಾಡ್ ಅನ್ನು ಕರೆದಿದ್ದೇವೆ ಎಂದು ಹೇಳಿದ್ದಾರೆ.

ಈ ರಥ ಎಲ್ಲಿಂದ ಬಂತು ಎಂಬುದು ಜಿಲ್ಲಾಡಳಿತಕ್ಕೆ ಇನ್ನೂ ಖಚಿತ ಮಾಹಿತಿ ನೀಡಿಲ್ಲ. “ಅದರ ಮೇಲೆ ಕೆಲವು ಶಾಸನಗಳಿವೆ. ಅವುಗಳನ್ನು ಅರ್ಥೈಸಿಕೊಳ್ಳಲು ತಜ್ಞರ ನೆರವು ಪಡೆಯುತ್ತಿದ್ದೇವೆ. ಇದು ನಮಗೆ ಕೆಲವು ಸುಳಿವು ನೀಡಬಹುದು ”ಲತಾಕರ್ ಹೇಳಿದ್ದಾರೆ. ಒಟ್ಟಿನಲ್ಲಿ ವೈರಲ್ ಸುದ್ದಿಯಲ್ಲಿ ಹೇಳಿದಂತೆ ಇದು ಚಿನ್ನದ ರಥ ಅಲ್ಲ. ಚಿನ್ನದ ಬಣ್ಣದ ರಥ ಅಷ್ಟೇ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ