AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್-ಮೋದಿಯ ಸ್ನೇಹ ಮುರಿದುಬಿದ್ದಿದ್ದು ಹೇಗೆ? ಇಲ್ಲಿಯವರೆಗೂ ಏನೇನಾಯ್ತು?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ಸ್ನೇಹವನ್ನು ಅನೇಕ ಮಾಧ್ಯಮಗಳು ಹೊಗಳಿದ್ದವು. ಟ್ರಂಪ್ ಕೂಡ ಹೋದಲ್ಲೆಲ್ಲ ಮೋದಿ ನನ್ನ ಅತ್ಯಂತ ಒಳ್ಳೆಯ ಗೆಳೆಯ ಎಂದೇ ಹೇಳುತ್ತಿದ್ದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇಳೆಯೂ ಪ್ರಧಾನಿ ಮೋದಿ ಅಮೆರಿಕಕ್ಕೆ ಹೋಗಿ ಪ್ರಚಾರ ಮಾಡಿದ್ದರು. ಇದರಿಂದ ಅಮೆರಿಕದ ಭಾರತೀಯ ಅನಿವಾಸಿಗಳ ಬೆಂಬಲ ಟ್ರಂಪ್​ಗೆ ಸಿಕ್ಕಿತ್ತು. ಆದರೆ, ಟ್ರಂಪ್-ಮೋದಿಯ ನಡುವಿನ ಆ ಒಳ್ಳೆಯ ಸ್ನೇಹ ಮುರಿದುಬಿದ್ದಿದ್ದು ಹೇಗೆ?

ಟ್ರಂಪ್-ಮೋದಿಯ ಸ್ನೇಹ ಮುರಿದುಬಿದ್ದಿದ್ದು ಹೇಗೆ? ಇಲ್ಲಿಯವರೆಗೂ ಏನೇನಾಯ್ತು?
Modi - Trump
ಸುಷ್ಮಾ ಚಕ್ರೆ
|

Updated on: Aug 28, 2025 | 3:48 PM

Share

ನವದೆಹಲಿ, ಆಗಸ್ಟ್ 28: ಮೊನ್ನೆ-ಮೊನ್ನೆಯವರೆಗೂ ಕುಚಿಕು ಗೆಳೆಯರಂತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ನಡುವೆ ಬಿರುಕು ಉಂಟಾಗಿದೆ. ಅವರಿಬ್ಬರ ನಡುವೆ ಈಗ ಶೀತಲ ಸಮರ ಉಂಟಾಗಿದೆ. ಭಾರತದ ಮೇಲೆ ಅಮೆರಿಕ (United States) ಹೆಚ್ಚುವರಿ ಶೇ. 25ರಷ್ಟು ಸುಂಕ ಘೋಷಿಸಿದ ನಂತರ ಎರಡೂ ದೇಶಗಳ ನಡುವಿನ ಅಂತರ ಹೆಚ್ಚಾಗಿದೆ. ಮೇಲ್ನೋಟಕ್ಕೆ ಟ್ರಂಪ್ ವಿರುದ್ಧ ಮೋದಿ ನೇರವಾಗಿ ಎಲ್ಲೂ ಹೇಳಿಕೆ ನೀಡದಿದ್ದರೂ ಪರೋಕ್ಷವಾಗಿ ತಮ್ಮ ಭಾಷಣದಲ್ಲಿ ಟ್ರಂಪ್ ವಿರುದ್ಧ ಚಾಟಿ ಬೀಸುತ್ತಲೇ ಇರುತ್ತಾರೆ. ಅವರಿಬ್ಬರ ನಡುವಿನ ಸಂಬಂಧದಲ್ಲಿ ಇದುವರೆಗೂ ಏನೆಲ್ಲ ಆಯ್ತು? ಅವರ ಸ್ನೇಹ ಮುರಿದುಬೀಳಲು ಕಾರಣವಾದ ಘಟನೆಗಳು ಯಾವುವು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಪಾಕಿಸ್ತಾನದ ಅಂದಿನ ಪ್ರಧಾನಿ ಇಮ್ರಾನ್ ಖಾನ್ ಶ್ವೇತಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎರಡೂ ದೇಶಗಳು ಒಪ್ಪಿಕೊಂಡರೆ ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧರಿರುವುದಾಗಿ ಡೊನಾಲ್ಡ್ ಟ್ರಂಪ್ 2019ರಲ್ಲಿ ಹೇಳಿದ್ದರು. ಈ ಹೇಳಿಕೆಯು ಭಾರತವನ್ನು ಆಘಾತಗೊಳಿಸಿತು. ಇದು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಅವಕಾಶ ನೀಡುವುದಿಲ್ಲ, ಇದು ದ್ವಿಪಕ್ಷೀಯ ವಿಷಯ ಎಂಬ ಭಾರತದ ದೀರ್ಘಕಾಲೀನ ನಿಲುವಿಗೆ ಬದ್ಧವಾಗಿದ್ದ ಮೋದಿ ಆ ಪ್ರಸ್ತಾಪಕ್ಕೆ ಸೊಪ್ಪು ಹಾಕಲಿಲ್ಲ. ಇದರಿಂದ ಟ್ರಂಪ್ ಅವರಿಗೆ ಸ್ವಲ್ಪ ಮುಜುಗರವಾಗಿತ್ತು.

ಇದನ್ನೂ ಓದಿ: ಕರ್ನಾಟಕ ಸೇರಿದಂತೆ 5 ರಾಜ್ಯಗಳ 12,300 ಕೋಟಿ ಮೌಲ್ಯದ ರೈಲ್ವೆ ಯೋಜನೆಗಳಿಗೆ ಮೋದಿ ಸಂಪುಟ ಒಪ್ಪಿಗೆ

ಸೆಪ್ಟೆಂಬರ್ 2024ರಲ್ಲಿ ಪ್ರಧಾನಿ ಮೋದಿ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ಮತ್ತು ಅಧ್ಯಕ್ಷ ಜೋ ಬೈಡೆನ್ ಆಯೋಜಿಸಿದ್ದ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲು ಯುಎಸ್‌ಗೆ ಭೇಟಿ ನೀಡಿದ್ದರು. ಆಗ ಎರಡನೇ ಅವಧಿಗೆ ಪ್ರಚಾರ ನಡೆಸುತ್ತಿದ್ದ ಟ್ರಂಪ್ ಅವರನ್ನು ಭೇಟಿ ಮಾಡಲು ಭಾರತೀಯ ಸಂವಾದಕರು ಮೋದಿಯ ಸಹಾಯ ಕೋರಿದರು. ಅದೇ ಸಮಯದಲ್ಲಿ ಅವರ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಕೂಡ ಮೋದಿಯನ್ನು ಸಂಪರ್ಕಿಸಿದರು. ಟ್ರಂಪ್ ಭಾರತೀಯ ಪ್ರಧಾನಿಯನ್ನು ನೋಡಲು ಸಿದ್ಧರಿದ್ದರು ಮತ್ತು ಮಿಚಿಗನ್‌ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮೋದಿ ಅವರನ್ನು ಭೇಟಿಯಾಗುತ್ತಿರುವುದಾಗಿ ಘೋಷಿಸಿದರು. ಆದರೆ ಕಮಲಾ ಹ್ಯಾರಿಸ್ ಅವರ ಪ್ರಚಾರ ವಿಳಂಬವಾಯಿತು. ಈ ವೇಳೆ ಒಬ್ಬ ಅಭ್ಯರ್ಥಿಯನ್ನು ಮಾತ್ರ ಭೇಟಿಯಾಗಲು ಮೋದಿ ಬಯಸಿದ ಕಾರಣದಿಂದ ಭಾರತೀಯ ಕಡೆಯವರು ಟ್ರಂಪ್ ಸಭೆಯಿಂದ ಹಿಂದೆ ಸರಿದರು. ಟ್ರಂಪ್‌ಗೆ ಇದು ಅಸಮಾಧಾನ ಮೂಡಿತ್ತು. ಏಕೆಂದರೆ ಅವರು ಈಗಾಗಲೇ ಮೋದಿಯನ್ನು ಭೇಟಿಯಾಗುವುದಾಗಿ ಘೋಷಿಸಿದ್ದರು.

ಆದರೂ, ಎರಡನೇ ಅವಧಿಗೆ ಗೆದ್ದ ನಂತರ ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾದ ಮೊದಲ ವಿದೇಶಿ ನಾಯಕರಲ್ಲಿ ಪ್ರಧಾನಿ ಮೋದಿ ಒಬ್ಬರಾದರು. ಈ ವರ್ಷ ಫೆಬ್ರವರಿ 13ರಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಮೋದಿಯನ್ನು ಭೇಟಿ ಮಾಡಿದಾಗ ಅವರಿಬ್ಬರೂ ಸುಂಕದ ಬಗ್ಗೆ ಚರ್ಚಿಸಿದ್ದರು. ಆದರೂ ಅಮೆರಿಕ ತನ್ನದೇ ನಿರ್ಧಾರ ತೆಗೆದುಕೊಂಡಿತು.

ಇದಲ್ಲದೆ, ಟ್ರಂಪ್ MAGA ಬಗ್ಗೆ ಮಾತನಾಡಿದಾಗ, ಅದು MIGA ಅಥವಾ ವಿಕಸಿತ ಭಾರತದ ಸ್ವಂತ ಕಲ್ಪನೆಯೊಂದಿಗೆ ಸರಿಹೊಂದುತ್ತದೆ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯಿಸಿದರು. ನಂತರ ಓವಲ್ ಆಫೀಸ್ ಸಭೆಯ ಮೊದಲು ಬ್ಲೇರ್ ಹೌಸ್‌ನಲ್ಲಿ ಎಲಾನ್ ಮಸ್ಕ್ ಮೋದಿಯವರನ್ನು ಭೇಟಿ ಮಾಡಿದ್ದರು. ಆ ಹೊತ್ತಿಗೆ ಟ್ರಂಪ್ ಭಾರತದಲ್ಲಿ ಟೆಸ್ಲಾ ಮತ್ತು ಆಪಲ್‌ನ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲು ಪ್ರಾರಂಭಿಸಿದ್ದರು.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧವನ್ನು ಮೋದಿಯ ಯುದ್ಧ ಎಂದು ಕರೆದ ಟ್ರಂಪ್ ಸಲಹೆಗಾರ ಪೀಟರ್

ಇದೆಲ್ಲ ಆದ ನಂತರ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿತು. ಆ ಘರ್ಷಣೆಯ ಸಮಯದಲ್ಲಿ ಟ್ರಂಪ್ ಮತ್ತು ಮೋದಿ ನಡುವೆ ಯಾವುದೇ ಫೋನ್ ಸಂಭಾಷಣೆ ನಡೆದಿರಲಿಲ್ಲ ಎಂದು ಭಾರತ ಹೇಳುತ್ತಿದ್ದರೂ, ಅಮೆರಿಕ ಮಾತ್ರ ತಾನೇ ಎರಡೂ ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದು ಎಂದು ಹೇಳಿಕೊಂಡರು. ಇದು ಜಾಗತಿಕ ಮಟ್ಟದಲ್ಲಿ ಮತ್ತು ಭಾರತದೊಳಗೆ ಕೂಡ ಮೋದಿ ಸರ್ಕಾರಕ್ಕೆ ತೀವ್ರ ಮುಜುಗರ ತಂದಿತು.

ಕೆನಡಾದಲ್ಲಿ ನಡೆದ ಜಿ-7 ಶೃಂಗಸಭೆಯಿಂದ ಹಿಂದಿರುಗುವಾಗ ಅಮೆರಿಕ ಅಧ್ಯಕ್ಷ ಟ್ರಂಪ್ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಮೆರಿಕಕ್ಕೆ ಊಟಕ್ಕೆ ಆಹ್ವಾನಿಸಿದ್ದರು. ಟ್ರಂಪ್ ಅವರು ಶ್ವೇತಭವನಕ್ಕೆ ಬರುವಂತೆ ನೀಡಿದ ಆಹ್ವಾನವನ್ನು ಮೋದಿ ನಿರಾಕರಿಸಿದ್ದು ಕೂಡ ಎರಡೂ ದೇಶಗಳ ನಡುವೆ ಅಂತರ ಹೆಚ್ಚಲು ಕಾರಣವಾಯಿತು.

ಇದಾದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನೇ ಮುಂದಿಟ್ಟುಕೊಂಡು ಭಾರತಕ್ಕೆ ದಂಡದ ರೂಪದಲ್ಲಿ ಹೆಚ್ಚುವರಿ ಶೇ. 25ರಷ್ಟು ಸುಂಕ ಘೋಷಿಸುವ ಮೂಲಕ ಒಟ್ಟು ಸುಂಕವನ್ನು ಶೇ. 50ಕ್ಕೆ ಏರಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ