AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿ ರಿಷಿಕೇಶ್ ನಿಗೂಢ ಸಾವಿನಿಂದ ಐಐಟಿ ದೆಹಲಿಗೆ ತೀವ್ರ ಆಘಾತ: ಮಾಜಿ ಡಿಜಿಪಿ ನೇತೃತ್ವದಲ್ಲಿ 5 ಸದಸ್ಯರ ತನಿಖಾ ಸಮಿತಿ ರಚನೆ

ಐಐಟಿ ದೆಹಲಿ ವಿದ್ಯಾರ್ಥಿ ರಿಷಿಕೇಶ್ ಕುಮಾರ್ ನಿಗೂಢ ಸಾವಿನ ಪ್ರಕರಣವು ಕ್ಯಾಂಪಸ್‌ನಲ್ಲಿ ಆಘಾತ ಮೂಡಿಸಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಬಳಿಕ, ಸಂಸ್ಥೆಯು ಮಾಜಿ ಡಿಜಿಪಿ ನೇತೃತ್ವದಲ್ಲಿ 5 ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ವಿದ್ಯಾರ್ಥಿ ಬೆಂಬಲ ವ್ಯವಸ್ಥೆ, ಆಡಳಿತಾತ್ಮಕ ಲೋಪಗಳು ಮತ್ತು ಶೈಕ್ಷಣಿಕ ಒತ್ತಡದ ಕುರಿತು ಎರಡು ವಾರಗಳಲ್ಲಿ ವರದಿ ಸಲ್ಲಿಸಲಿದೆ. ಮಾನಸಿಕ ಆರೋಗ್ಯ ನೆರವು ಮತ್ತು ಪಾರದರ್ಶಕತೆಗೆ ಒತ್ತು ನೀಡಲಾಗುತ್ತಿದೆ.

ವಿದ್ಯಾರ್ಥಿ ರಿಷಿಕೇಶ್ ನಿಗೂಢ ಸಾವಿನಿಂದ ಐಐಟಿ ದೆಹಲಿಗೆ ತೀವ್ರ ಆಘಾತ: ಮಾಜಿ ಡಿಜಿಪಿ ನೇತೃತ್ವದಲ್ಲಿ 5 ಸದಸ್ಯರ  ತನಿಖಾ ಸಮಿತಿ ರಚನೆ
ಐಐಟಿ ದೆಹಲಿ
ನಯನಾ ರಾಜೀವ್
|

Updated on: Aug 26, 2026 | 8:54 AM

Share

ನವದೆಹಲಿ, ಆಗಸ್ಟ್​ 26: ಪ್ರತಿಷ್ಠಿತ ಐಐಟಿ ದೆಹಲಿ(IIT Delhi)ಯಲ್ಲಿ ಎಂಎಸ್ಸಿ ಭೌತಶಾಸ್ತ್ರ ವಿದ್ಯಾರ್ಥಿ ರಿಷಿಕೇಶ್ ಕುಮಾರ್ ಅವರ ಸಾವಿನ ಪ್ರಕರಣವು ಕ್ಯಾಂಪಸ್‌ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ, ಸಂಸ್ಥೆಯ ಆಡಳಿತ ಮಂಡಳಿಯು ವಿದ್ಯಾರ್ಥಿಯ ಚಿಕಿತ್ಸೆ, ಮಾನಸಿಕ ಸಮಾಲೋಚನೆ ಹಾಗೂ ಸೆಮಿಸ್ಟರ್ ಹಿಂಪಡೆಯುವಿಕೆಯ ಸಂಪೂರ್ಣ ವಿವರಗಳನ್ನು ಒಳಗೊಂಡ ವಿಸ್ತೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಕ್ಯಾಂಪಸ್‌ನಲ್ಲಿ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ನಂತರ, ಘಟನೆಯ ನಿಷ್ಪಕ್ಷಪಾತ ತನಿಖೆಗಾಗಿ ಐದು ಸದಸ್ಯರ ಸ್ವತಂತ್ರ ಬಾಹ್ಯ ವಿಚಾರಣಾ ಸಮಿತಿ ರಚಿಸಲಾಗಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲು ಸ್ವತಂತ್ರ ಓಂಬುಡ್ಸ್‌ಪರ್ಸನ್ ನೇಮಕ ಮಾಡುವುದಾಗಿ ಸಂಸ್ಥೆ ಘೋಷಿಸಿದೆ.

ಸಮಿತಿಯ ಸದಸ್ಯರು: ಉತ್ತರಾಖಂಡದ ಮಾಜಿ ಡಿಜಿಪಿ ಅಶೋಕ್ ಕುಮಾರ್ ಅವರ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಿದ್ದು, ಇದರಲ್ಲಿ ಏಮ್ಸ್ (AIIMS) ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಪ್ರತಾಪ್ ಶರ್ಮಾ, ಇಬ್ಬರು ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಐಐಟಿ ರಿಜಿಸ್ಟ್ರಾರ್ ಇರಲಿದ್ದಾರೆ.

ರಿಷಿಕೇಶ್ ಸಾವಿಗೆ ಕಾರಣವಾದ ಸಂದರ್ಭಗಳು, ಆಡಳಿತಾತ್ಮಕ ಲೋಪಗಳು ಮತ್ತು ವಿದ್ಯಾರ್ಥಿ ಬೆಂಬಲ ವ್ಯವಸ್ಥೆಯನ್ನು ಪರಿಶೀಲಿಸಿ ಸಮಿತಿಯು 2 ವಾರಗಳಲ್ಲಿ ವರದಿ ಸಲ್ಲಿಸಲಿದೆ.

ಮತ್ತಷ್ಟು ಓದಿ: ಎಬಿವಿಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿನಿಯರನ್ನ ಎಳೆದಾಡಿದ ಪೊಲೀಸರು: ಪ್ರಶ್ನಿಸಿದ ಮಾಧ್ಯಮದವರ ಮೇಲೆಯೇ ದರ್ಪ

ಚಿಕಿತ್ಸೆಯ ಹಿನ್ನೆಲೆ: ಜುಲೈ 2025 ರಲ್ಲಿ ಪ್ರವೇಶ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿ ರಿಷಿಕೇಶ್ ಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಸಂಸ್ಥೆಯ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಒಂದು ತಿಂಗಳು ಒಳರೋಗಿಯಾಗಿ ಚಿಕಿತ್ಸೆ ಕೊಡಿಸಲಾಗಿತ್ತು.

ಸೆಮಿಸ್ಟರ್ ರಜೆ: ವೈದ್ಯಕೀಯ ಸಲಹೆಯ ಮೇರೆಗೆ ಪೋಷಕರ ರಕ್ಷಣೆಯಲ್ಲಿದ್ದ ವಿದ್ಯಾರ್ಥಿಗೆ 2ನೇ ಮತ್ತು 3ನೇ ಸೆಮಿಸ್ಟರ್‌ಗಳಿಂದ ಅಧಿಕೃತವಾಗಿ ಹಿಂಪಡೆಯಲು ಅನುಮತಿ ನೀಡಲಾಗಿತ್ತು.

New Project (3)

ಮಾನಸಿಕ ಆರೋಗ್ಯ ನೆರವು: ಸಂಸ್ಥೆಯಲ್ಲಿ ಪ್ರಸ್ತುತ 15 ಆನ್-ಕ್ಯಾಂಪಸ್ ಕೌನ್ಸಿಲರ್‌ಗಳು ಹಾಗೂ ಏಮ್ಸ್ ಮತ್ತು ವಿಮಾನ್ಸ್‌ನಿಂದ ಮನೋವೈದ್ಯರಿದ್ದು, ಚಿಕಿತ್ಸಾ ವೆಚ್ಚವನ್ನು ಸಂಸ್ಥೆಯೇ ಭರಿಸುತ್ತಿದೆ. ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ಪರಿಹಾರವನ್ನೂ ಪ್ರಕಟಿಸಲಾಗಿದೆ.

ಪ್ರೀಮಿಯರ್ ಸಂಸ್ಥೆಗಳಲ್ಲಿ ಶೈಕ್ಷಣಿಕ ಒತ್ತಡ: ಐಐಟಿ, ಐಐಎಂ ಹಾಗೂ ಏಮ್ಸ್‌ನಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಠಿಣ ಪರೀಕ್ಷಾ ವ್ಯವಸ್ಥೆ ಮತ್ತು ಶೈಕ್ಷಣಿಕ ಒತ್ತಡದಿಂದಾಗಿ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಹೊಣೆಗಾರಿಕೆಗೆ ವಿದ್ಯಾರ್ಥಿಗಳ ಪಟ್ಟು: ವಿದ್ಯಾರ್ಥಿ ವ್ಯವಹಾರಗಳ ಡೀನ್ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿ ಒಕ್ಕೂಟಗಳು ಪಟ್ಟು ಹಿಡಿದಿದ್ದು, ಆಡಳಿತ ಮಂಡಳಿಯು ಮುಕ್ತ ಸಂವಾದ ಮತ್ತು ನೂತನ ಮಾರ್ಗದರ್ಶಕ ವ್ಯವಸ್ಥೆಯ ಮೂಲಕ ಕ್ಯಾಂಪಸ್‌ನಲ್ಲಿ ವಿಶ್ವಾಸ ಮರುಸ್ಥಾಪಿಸಲು ಮುಂದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us