ಭಾರತ-ಕೆನಡಾ ಸಂಬಂಧದಲ್ಲಿ ಬಿರುಕು; ಮಸೂರ್ ಬೇಳೆ ವ್ಯಾಪಾರಿಗಳಿಗೆ ಆತಂಕ

ಆಸ್ಟ್ರೇಲಿಯಾ ಮತ್ತು ಕೆನಡಾ ಭಾರತಕ್ಕೆ ಬೇಳೆ ಪೂರೈಸುವ ಎರಡು ಪ್ರಮುಖ ಮೂಲಗಳಾಗಿವೆ. 2022-23ರ ಹಣಕಾಸು ವರ್ಷದಲ್ಲಿ ಭಾರತವು ಆಸ್ಟ್ರೇಲಿಯಾದಿಂದ 3.5 ಲಕ್ಷ ಟನ್ ಮಸೂರ್ ಆಮದು ಮಾಡಿಕೊಂಡಿದ್ದರೆ ಕೆನಡಾದಿಂದ 4.85 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿದೆ. 2023-24 ಹಣಕಾಸು ವರ್ಷದಲ್ಲಿ ಆಸ್ಟ್ರೇಲಿಯಾ ಮತ್ತು ಕೆನಡಾದಿಂದ ಕ್ರಮವಾಗಿ 2.67 ಲಕ್ಷ ಟನ್ ಮತ್ತು 1.90 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿದೆ.

ಭಾರತ-ಕೆನಡಾ ಸಂಬಂಧದಲ್ಲಿ ಬಿರುಕು; ಮಸೂರ್ ಬೇಳೆ ವ್ಯಾಪಾರಿಗಳಿಗೆ ಆತಂಕ
ಮಸೂರ್ ದಾಲ್
Follow us
|

Updated on: Sep 21, 2023 | 9:02 PM

ದೆಹಲಿ ಸೆಪ್ಟೆಂಬರ್ 21: ಬೇಳೆ ವ್ಯವಸಾಯ ಮತ್ತು ವ್ಯಾಪಾರಿಗಳು ಭಾರತ-ಕೆನಡಾ (Canada) ಸಂಬಂಧಗಳಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮೇಲೆ ನಿಕಟ ನಿಗಾ ಇರಿಸುತ್ತಿದ್ದಾರೆ. ಏಕೆಂದರೆ ಈ ಬಿಕ್ಕಟ್ಟಿನಿಂದಾಗಿ ಮಸೂರ್ (ಕೆಂಪು ದಾಲ್) (Masoor dal)ಲಭ್ಯತೆ ಮತ್ತು ಬೆಲೆಗಳ ಮೇಲೆ ಪರಿಣಾಮವುಂಟಾಗಬಹುದು. ಕೆನಡಾವು ಭಾರತಕ್ಕೆ ಮಸೂರ್ ಬೇಳೆಯ ಅತಿದೊಡ್ಡ ಮೂಲವಾಗಿದ್ದು ವಾರ್ಷಿಕ ಆಮದು ಸುಮಾರು 4-5 ಲಕ್ಷ ಟನ್‌ಗಳಷ್ಟಿದೆ. ಕೆನಡಾ ಬದಲು ಆಸ್ಟ್ರೇಲಿಯಾದ ಮಾರುಕಟ್ಟೆಯಿಂದ ತರಿಸಿದರೂ ಪೂರೈಕೆ ಸರಪಳಿಯು ತೊಂದರೆಗೊಳಗಾದರೆ ಮಸೂರ್ ಬೆಲೆಗಳು ಏರಿಕೆಯಾಗಬಹುದು.

ಮಸೂರ್ ಪ್ರಸ್ತುತ ಚನಾ (ಕಡಲೆ) ನಂತರ ಎರಡನೇ ಅಗ್ಗದ ಬೇಳೆ. ಸರಾಸರಿಯಾಗಿ, ಮಸೂರ್ ಬೇಳೆ ಈಗ ದೇಶದ ವಿವಿಧ ಭಾಗಗಳಲ್ಲಿ 91-95/ಕೆಜಿ ನಡುವೆ ಚಿಲ್ಲರೆ ಮಾರಾಟವಾಗುತ್ತಿದೆ. ಕಡಲೆ ಬೇಳೆ ಅಗ್ಗವಾಗಿದ್ದು ಸುಮಾರು ರೂ 75-80/ಕೆಜಿ. ಹೆಸರು ಬೇಳೆ ಮತ್ತು ತೊಗರಿ ಬೇಳೆ ಚ್ಚಿನ ಭಾಗದಲ್ಲಿದ್ದು, ಕ್ರಮವಾಗಿ ಕೆಜಿಗೆ ರೂ 110 ಮತ್ತು ರೂ 150ನಂತೆ ಮಾರಾಟವಾಗುತ್ತಿದೆ. ಕೆಂಪು ಮಸೂರವು ರಾಬಿ ಬೆಳೆಗಳಲ್ಲಿ ಎರಡನೆಯದು. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶವು ದೇಶೀಯ ಉತ್ಪಾದನೆಯ ಸುಮಾರು 70 ಪ್ರತಿಶತವನ್ನು ವರದಿ ಮಾಡಿದೆ. ಮಸೂರ್ ಬೇಳೆ ವಾರ್ಷಿಕ ಬಳಕೆ ಅಂದಾಜು 18-20 ಲಕ್ಷ ಟನ್‌ಗಳು.

ಮಸೂರ್ ಬೇಳೆ ಸೇವನೆ ಹೆಚ್ಚು ಏಕೆ?

ಈ ವರ್ಷ ಭಾರತ ಈಗಾಗಲೇ ಸುಮಾರು 11 ಲಕ್ಷ ಟನ್ ಮಸೂರ್ ಆಮದು ಮಾಡಿಕೊಂಡಿದೆ. ಪ್ರಮುಖ ಬೇಳೆ ಮಿಲ್ಲರ್ ಮತ್ತು ವ್ಯಾಪಾರಿ ಇಂದೋರ್ ಮೂಲದ ಮಯೂರ್ ಕಾರ್ಪೊರೇಷನ್‌ನ ಉಪಾಧ್ಯಕ್ಷ ಹರ್ಷ ರೈ, ತೊಗರಿ ಬೇಳೆಗೆ ಬದಲಾಗಿ ಮಸೂರ್ ಬೇಳೆ ಬಳಕೆಯಾಗುತ್ತಿದೆ. ತೊಗರಿ ಬೇಳೆಗೆ ಬೆಲೆ ಹೆಚ್ಚಾದಾಗ ಜನರು ಮಸೂರ್ ಬೇಳೆ ಬಳಕೆ ಜಾಸ್ತಿ ಮಾಡಿದರು ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ಮತ್ತು ಕೆನಡಾ ಭಾರತಕ್ಕೆ ಬೇಳೆ ಪೂರೈಸುವ ಎರಡು ಪ್ರಮುಖ ಮೂಲಗಳಾಗಿವೆ. 2022-23ರ ಹಣಕಾಸು ವರ್ಷದಲ್ಲಿ ಭಾರತವು ಆಸ್ಟ್ರೇಲಿಯಾದಿಂದ 3.5 ಲಕ್ಷ ಟನ್ ಮಸೂರ್ ಆಮದು ಮಾಡಿಕೊಂಡಿದ್ದರೆ ಕೆನಡಾದಿಂದ 4.85 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿದೆ. 2023-24 ಹಣಕಾಸು ವರ್ಷದಲ್ಲಿ ಆಸ್ಟ್ರೇಲಿಯಾ ಮತ್ತು ಕೆನಡಾದಿಂದ ಕ್ರಮವಾಗಿ 2.67 ಲಕ್ಷ ಟನ್ ಮತ್ತು 1.90 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿದೆ.

ಕೆನಡಾದಲ್ಲಿ ಮಸೂರ್ ಬೆಳೆಯ ಗಾತ್ರದ ಬಗ್ಗೆಯೂ ಕಳವಳವಿದೆ. ಈಗ ಕೊಯ್ಲು ಮಾಡಲಾಗುತ್ತಿರುವ 2023 ರ ಬೆಳೆಯನ್ನು ಸುಮಾರು 15.4 ಲೀ.ಗೆ ನಿಗದಿಪಡಿಸಲಾಗಿದೆ.  ಕಳೆದ ವರ್ಷದ 23 ಲೀ ಆಗಿತ್ತು. ಇದು ಈಗಾಗಲೇ ಆಮದು ಮಾಡಿದ ಮಸೂರ್‌ನ ಬೆಲೆಗಳು ಪ್ರತಿ ಟನ್‌ಗೆ $760-770 ಕ್ಕೆ ಏರಲು ಕಾರಣವಾಗಿದೆ. ಅಂದರೆ ಕಳೆದ ಒಂದು ತಿಂಗಳಲ್ಲಿ $100 ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ: ಇತರ ದೇಶಗಳಲ್ಲಿರುವ ಕೆನಡಿಯನ್ನರು ಕೂಡಾ ಭಾರತೀಯ ವೀಸಾಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ: ಎಂಇಎ

ಕೆನಡಾಕ್ಕೂ ಕಳವಳ

ಭಾರತ ಭಯೋತ್ಪಾದಕ ಎಂದು ಹೆಸರಿಸಿರುವ ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ ಸಂಬಂಧಗಳಲ್ಲಿ ಬಿರುಕುವುಂಟಾಗಿದೆ. ಆದಾಗ್ಯೂ ಭಾರತವು ಈ ಆರೋಪವನ್ನು ತಿರಸ್ಕರಿಸಿದೆ.

ಗುರುವಾರ, ಭಾರತ ಸರ್ಕಾರ ಕೆನಡಾದ ನಾಗರಿಕರಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ. ಯಾವುದೇ ಇತರ ಪ್ರತೀಕಾರದ ಪರಿಣಾಮಗಳನ್ನು ಮಾಡಲಾಗಿಲ್ಲವಾದರೂ, ಆಮದು ಸುಂಕವನ್ನು ಹೆಚ್ಚಿಸಿದರೆ ಅಥವಾ ಅಂತಹ ಯಾವುದೇ ರೀತಿಯ ಪರಿಣಾಮಗಳ ಸಂದರ್ಭದಲ್ಲಿ, ಮಸೂರ್ ದಾಲ್ ಬೆಲೆಗಳು ಏರಿಕೆಯಾಗಬಹುದು ಎಂದು ದಾಲ್ ಉದ್ಯಮದವರು ಹೇಳುತ್ತಾರೆ. ಆಸ್ಟ್ರೇಲಿಯಾವು ಭಾರತದ ಬೇಡಿಕೆಯನ್ನು ಪೂರೈಸಬಹುದು. ಆದರೆ ಯಾವುದೇ ಅರ್ಥದಲ್ಲಿ ಏಕಸ್ವಾಮ್ಯವು ಅಪೇಕ್ಷಣೀಯವಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ. “ಕೆನಡಾಕ್ಕೆ, ಭಾರತವು ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ ಆದ್ದರಿಂದ ಈ ಮಾರುಕಟ್ಟೆಗೆ ಹಾನಿಯಾಗದಿರುವುದು ಅವರ ಹಿತಾಸಕ್ತಿಯಾಗಿದೆ. ನಾವು ಕಾದು ನೋಡಬೇಕಾಗಿದೆ” ಎಂದು ಲಾತೂರ್ ಮೂಲದ ಬೇಳೆ ವ್ಯಾಪಾರಿಯೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ