Omicron: ಭಾರತದ ಮೆಟ್ರೋ ಸಿಟಿಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಪತ್ತೆ

Insacog ಜೆನೋಮಿಕ್ ಕಣ್ಗಾವಲು ಮಾಹಿತಿಯ ಪ್ರಕಾರ, ರಾಜಸ್ಥಾನದಲ್ಲಿ ಶೇ.100ರಷ್ಟು, ದೆಹಲಿಯಲ್ಲಿ 90%, ಮಹಾರಾಷ್ಟ್ರದಲ್ಲಿ 80%, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ 70% ಪ್ರಕರಣಗಳಲ್ಲಿ ಒಮಿಕ್ರಾನ್ ಪ್ರಭೇದ ಇರುವುದು ದೃಢಪಟ್ಟಿದೆ.

Omicron: ಭಾರತದ ಮೆಟ್ರೋ ಸಿಟಿಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಪತ್ತೆ
ಪ್ರಾತಿನಿಧಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on: Jan 21, 2022 | 3:49 PM

ನವದೆಹಲಿ: ಭಾರತದಲ್ಲಿ ಈಗ ಒಮಿಕ್ರಾನ್ (Omicron) ಪ್ರಭೇದವೇ ಪ್ರಧಾನವಾಗಿ ಪತ್ತೆಯಾಗುತ್ತಿರುವ ಕೊರೊನಾವೈರಸ್ (Coronavirus) ಪ್ರಭೇದವಾಗಿದೆ. ಭಾರತದಲ್ಲಿ ಈಗ ಕೊರೊನಾದ ಶೇ.90-95 ಸ್ಯಾಂಪಲ್​ಗಳಲ್ಲಿ ಒಮಿಕ್ರಾನ್ ಪ್ರಭೇದ ಇರೋದು ದೃಢಪಡುತ್ತಿದೆ. ಕರ್ನಾಟಕದಲ್ಲಿ ಶೇ.70ರಷ್ಟು ಕೊರೊನಾ ಸ್ಯಾಂಪಲ್ ಗಳಲ್ಲಿ ಒಮಿಕ್ರಾನ್ ಪ್ರಭೇದದ ವೈರಸ್ ಇರುವುದು ದೃಢಪಟ್ಟಿದೆ. ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (Insacog) ಜೆನೋಮ್ ಸೀಕ್ವೆನ್ಸಿಂಗ್ ಡೇಟಾದ ಅಂಕಿ-ಅಂಶಗಳ ಪ್ರಕಾರ, ದೇಶದ ಮೆಟ್ರೋಪಾಲಿಟನ್ ನಗರಗಳಲ್ಲಿ ಕೊರೊನಾವೈರಸ್‌ನ ಒಮಿಕ್ರಾನ್ ಪ್ರಭೇದವೇ ಪ್ರಧಾನ ರೂಪಾಂತರವಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತಿದೆ. ದೇಶದಲ್ಲಿ ನಡೆದ ಜೆನೋಮಿಕ್ ಸೀಕ್ವೇನ್ಸಿಂಗ್​ನಲ್ಲಿ ದೇಶದಲ್ಲಿ ಶೇ.90ಕ್ಕಿಂತ ಹೆಚ್ಚು ಪ್ರಕರಣಗಳು ಒಮಿಕ್ರಾನ್ ಪ್ರಭೇದದ ಪ್ರಕರಣಗಳು ಎಂದು ತಿಳಿದು ಬಂದಿದೆ.

ಒಮಿಕ್ರಾನ್ ಹರಡುತ್ತಿದೆ ಎಂದು ಈ ಡೇಟಾ ತೋರಿಸುತ್ತದೆ. Insacog ನೆಟ್‌ವರ್ಕ್‌ನ ಜೆನೋಮಿಕ್ ಕಣ್ಗಾವಲು ಮಾಹಿತಿಯ ಪ್ರಕಾರ, ಡಿಸೆಂಬರ್ ನಾಲ್ಕನೇ ವಾರದಲ್ಲಿ ಒಮಿಕ್ರಾನ್ ಅನುಕ್ರಮ ಮಾದರಿಗಳು ಶೇ.50ರಷ್ಟು ಕಂಡುಬಂದಿವೆ. ಜನವರಿಯ ಎರಡನೇ ಮತ್ತು ಮೂರನೇ ವಾರದಲ್ಲಿ ಎಲ್ಲಾ ಪ್ರತ್ಯೇಕ ಮಾದರಿಗಳಲ್ಲಿ ಒಮಿಕ್ರಾನ್ ಪ್ರಭೇದವು ಶೇ. 90ರಿಂದ 95ರಷ್ಟಾಗಿದೆ. Insacog ಜೆನೋಮಿಕ್ ಕಣ್ಗಾವಲು ಮಾಹಿತಿಯ ಪ್ರಕಾರ, ರಾಜಸ್ಥಾನದಲ್ಲಿ ಶೇ.100ರಷ್ಟು ಪ್ರಕರಣಗಳಲ್ಲಿ ಒಮಿಕ್ರಾನ್ ಕಂಡುಬಂದಿದೆ ಎಂದು ತಿಳಿದು ಬಂದಿದೆ. ನಂತರ ದೆಹಲಿಯಲ್ಲಿ 90% ಪ್ರಕರಣಗಳು, ಮಹಾರಾಷ್ಟ್ರದಲ್ಲಿ 80%, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ 70% ಪ್ರಕರಣಗಳಲ್ಲಿ ಒಮಿಕ್ರಾನ್ ಪ್ರಭೇದ ಇರುವುದು ದೃಢಪಟ್ಟಿದೆ.

“ಭಾರತವು ಒಂದು ದೊಡ್ಡ ದೇಶವಾಗಿದೆ ಮತ್ತು ಒಟ್ಟಾರೆಯಾಗಿ ಭಾರತದಲ್ಲಿ ಒಮಿಕ್ರಾನ್ ಪ್ರಾಬಲ್ಯ ಹೊಂದಿದ್ದರೂ, ಒಮಿಕ್ರಾನ್ ಭಾರತದ ಎಲ್ಲಾ ಪ್ರದೇಶಗಳಲ್ಲಿ ಡೆಲ್ಟಾವನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎಂದು ನಾವು ಹೇಳಲಾಗುವುದಿಲ್ಲ. ಆದರೆ, ಜನವರಿ 2022ರ ಆರಂಭದಲ್ಲಿ ಮುಂಬೈ ಮತ್ತು ದೆಹಲಿಯಂತಹ ದೊಡ್ಡ ಮಹಾನಗರಗಳಲ್ಲಿ ನಾವು ಅಂಥದ್ದನ್ನು ನೋಡಬಹುದು ಎಂದು ಇನ್ಸಾಕಾಗ್‌ನ ಭಾಗವಾಗಿರುವ CSIR-IGIB ನಿರ್ದೇಶಕ ಅನುರಾಗ್ ಅಗರವಾಲ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಈಗ ಜೆನೋಮಿಕ್ ಸಿಕ್ವೇನ್ಸಿಂಗ್ ಸ್ಯಾಂಪಲ್ ಪೈಕಿ ಶೇ.70 ರಷ್ಟು ಒಮಿಕ್ರಾನ್ ಪ್ರಭೇದದ ಪ್ರಕರಣವಿದೆ. ಪಶ್ಚಿಮ ಬಂಗಾಳ, ಕರ್ನಾಟಕದ ಜೆನೋಮಿಕ್ ಸಿಕ್ವೇನ್ಸಿಂಗ್ ಸ್ಯಾಂಪಲ್ ಪೈಕಿ ಶೇ.70 ರಷ್ಟು ಒಮಿಕ್ರಾನ್ ಪ್ರಭೇದ ಪತ್ತೆಯಾಗಿದೆ. ರಾಜಸ್ಥಾನದ ಜೆನೋಮಿಕ್ ಸಿಕ್ವೇನ್ಸಿಂಗ್ ಸ್ಯಾಂಪಲ್ ಪೈಕಿ ಶೇ.100 ರಷ್ಟು ಒಮಿಕ್ರಾನ್ ಪ್ರಭೇದವಿದೆ. ದೆಹಲಿಯಲ್ಲಿ ಶೇ.90 ರಷ್ಟು, ಮಹಾರಾಷ್ಟ್ರದಲ್ಲಿ ಶೇ.80 ರಷ್ಟು ಒಮಿಕ್ರಾನ್ ಪ್ರಭೇದದ ಕೊರೊನಾ ಪ್ರಕರಣ ಪತ್ತೆಯಾಗಿದೆ ಎಂದು ಜೆನೋಮಿಕ್ ಕನ್ಸೋರ್ಟಿಯಂ INSACOG ನಿಂದ ಮಾಹಿತಿ ಲಭ್ಯವಾಗಿದೆ.

ಮುಂದಿನ ಕೆಲವು ವಾರಗಳಲ್ಲಿ ಡೆಲ್ಟಾದಿಂದ ಒಮಿಕ್ರಾನ್‌ಗೆ ಬದಲಿಯಾಗಿ ದೇಶದಲ್ಲಿ ಹರಡುವ ಸಾಧ್ಯತೆಯಿದೆ ಎಂದು ಅಗರವಾಲ್ ಹೇಳುತ್ತಾರೆ. “ಬದಲಿಯು ಸಣ್ಣ ನಗರಗಳಿಗೆ ಹರಡುವ ನಿರೀಕ್ಷೆಯಿದೆ, ಇದು ಜನವರಿ ಮಧ್ಯದ ವೇಳೆಗೆ ಅನೇಕ ಶ್ರೇಣಿ-2 ನಗರಗಳಲ್ಲಿ ಸಂಭವಿಸಿದೆ ಎಂದು ತೋರುತ್ತದೆ. ನಂತರ ಶ್ರೇಣಿ 3-ನಗರಗಳು, ಭಾರತದ ಗ್ರಾಮೀಣ ಮತ್ತು ಕಡಿಮೆ ಸಂಪರ್ಕಿತ ಭಾಗಗಳಿಗೆ ಮುಂದಿನ ಕೆಲವು ವಾರಗಳಲ್ಲಿ ಇದು ಸಂಭವಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಅನುರಾಗ್ ಅಗರವಾಲ್‌ ಹೇಳಿದ್ದಾರೆ.

ಅನುರಾಗ್ ಅಗರವಾಲ್‌ ಪ್ರಕಾರ ಡೆಲ್ಟಾವನ್ನು ಸಂಪೂರ್ಣವಾಗಿ ಬದಲಾಯಿಸುವುದು ಅಸಂಭವವಾಗಿದೆ. ಏಕೆಂದರೆ ಲಸಿಕೆ ಹಾಕದ ಮತ್ತು ಹಿಂದೆ ಸೋಂಕಿಗೆ ಒಳಗಾಗದ ಜನರಲ್ಲಿ ಒಮಿಕ್ರಾನ್ ಡೆಲ್ಟಾಕ್ಕಿಂತ ಹೆಚ್ಚಿನ ಪ್ರಸರಣ ಪ್ರಯೋಜನವನ್ನು ಹೊಂದಿಲ್ಲ. ಕೆಲವು ಸ್ಥಳಗಳಲ್ಲಿ ಡೆಲ್ಟಾ ಇನ್ನೂ ಎಲ್ಲಾ ಪ್ರಕರಣಗಳಲ್ಲಿ ಶೇ. 20-30ರಷ್ಟಿದೆ. “ಡೆಲ್ಟಾ ಸೈದ್ಧಾಂತಿಕವಾಗಿ ಒಮಿಕ್ರಾನ್‌ನೊಂದಿಗೆ ಯಶಸ್ವಿಯಾಗಿ ಸ್ಪರ್ಧಿಸಬಹುದಾದ ಅಂತಹ ಜನಸಂಖ್ಯೆಯು ಭಾರತದಲ್ಲಿ ಚಿಕ್ಕದಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಡೆಲ್ಟಾ ಸ್ಥಾನವನ್ನು ಒಮಿಕ್ರಾನ್ ಆಕ್ರಮಿಸಿಕೊಂಡರೆ ಮಾ. 11ರ ವೇಳೆಗೆ ಕೊವಿಡ್ ಸ್ಥಳೀಯವಾಗಬಹುದು; ಐಸಿಎಂಆರ್​ ವಿಜ್ಞಾನಿ

ನಾಲ್ಕನೇ ಕೊವಿಡ್ ಲಸಿಕೆ ಒಮಿಕ್ರಾನ್ ವಿರುದ್ಧ ಭಾಗಶಃ ಪರಿಣಾಮಕಾರಿಯಾಗಿದೆ: ಇಸ್ರೇಲಿ ಅಧ್ಯಯನ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?