AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸಚಿವರ ಪ್ರಗತಿ ಪರಿಶೀಲನೆಗೆ ಪ್ರಧಾನಿ ಮೋದಿ ಅಖಾಡಕ್ಕೆ: ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಒತ್ತು, ಸೋಮವಾರ ಮಹತ್ವದ ಸಭೆ

ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳು ಜನಸಾಮಾನ್ಯರಿಗೆ ತಲುಪಿರುವ ಕುರಿತು ಪ್ರಧಾನಿ ಮೋದಿ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಕೃಷಿ, ಆರೋಗ್ಯ, ಶಿಕ್ಷಣ ಸಚಿವಾಲಯಗಳ ಸಾಧನೆ ಹಾಗೂ ಸಚಿವರ ವೈಯಕ್ತಿಕ ಕಾರ್ಯಕ್ಷಮತೆ ಮೌಲ್ಯಮಾಪನ ಮಾಡಲಾಗುತ್ತದೆ. ಕೇವಲ ಘೋಷಣೆಗಳಲ್ಲದೆ, ಯೋಜನೆಗಳ ನೈಜ ಪರಿಣಾಮ ಮತ್ತು ನೇರ ಫಲಾನುಭವಿ ತಲುಪುವಿಕೆಗೆ ಒತ್ತು ನೀಡಲಾಗಿದ್ದು, ಲೋಪದೋಷ ಸರಿಪಡಿಸಿ, ಮುಂಬರುವ ದಿನಗಳಲ್ಲಿ ಸುಧಾರಣೆಗೆ ಈ ಸಭೆ ದಿಕ್ಸೂಚಿಯಾಗಿದೆ.

ಕೇಂದ್ರ ಸಚಿವರ ಪ್ರಗತಿ ಪರಿಶೀಲನೆಗೆ ಪ್ರಧಾನಿ ಮೋದಿ ಅಖಾಡಕ್ಕೆ: ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಒತ್ತು, ಸೋಮವಾರ ಮಹತ್ವದ ಸಭೆ
ನರೇಂದ್ರ ಮೋದಿ
ನಯನಾ ರಾಜೀವ್
|

Updated on:Sep 06, 2026 | 3:32 PM

Share

ನವದೆಹಲಿ, ಸೆಪ್ಟೆಂಬರ್ 06: ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಎಷ್ಟರಮಟ್ಟಿಗೆ ತಲುಪಿವೆ ಎಂಬುದನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ(ಸೆ.7) ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಕೃಷಿ, ಆರೋಗ್ಯ, ಶಿಕ್ಷಣ ಸೇರಿದಂತೆ ಪ್ರಮುಖ ಸಚಿವಾಲಯಗಳ ಸಾಧನೆ ಮತ್ತು ಕೇಂದ್ರ ಸಚಿವರ ವೈಯಕ್ತಿಕ ಕಾರ್ಯಕ್ಷಮತೆಯನ್ನು ಸಭೆಯಲ್ಲಿ ಕೂಲಂಕಷವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಕೇವಲ ಯೋಜನೆಗಳನ್ನು ಘೋಷಿಸುವುದಷ್ಟೇ ಅಲ್ಲದೆ, ನೆಲಮಟ್ಟದಲ್ಲಿ ಅವು ಬೀರಿದ ನೈಜ ಪರಿಣಾಮವೇ ಈ ಬಾರಿಯ ಮುಖ್ಯ ಮಾನದಂಡವಾಗಿದೆ.

ಪ್ರಮುಖ ಸಚಿವಾಲಯಗಳ ಮೇಲೆ ನಿಗಾ: ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರೋಗ್ಯ, ಕೃಷಿ ಹಾಗೂ ನಗರಾಭಿವೃದ್ಧಿ ಸಚಿವಾಲಯಗಳು ಈ ಮೌಲ್ಯಮಾಪನದಲ್ಲಿ ಪ್ರಮುಖವಾಗಿ ಪರಿಶೀಲನೆಗೆ ಒಳಪಡಲಿವೆ. ಸಂಪುಟ ದರ್ಜೆಯ ಸಚಿವರ ಜೊತೆಗೆ ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು ರಾಜ್ಯ ಸಚಿವರನ್ನೂ (MoS) ಸಭೆಗೆ ಕರೆಯಲಾಗಿದ್ದು, ತಳಮಟ್ಟದಲ್ಲಿ ಯೋಜನೆಗಳ ಅನುಷ್ಠಾನದ ಕುರಿತು ವಿವರಣೆ ಕೇಳಲಾಗುತ್ತದೆ.

ಮಧ್ಯವರ್ತಿಗಳ ಹಾವಳಿ ಮತ್ತು ಸೋರಿಕೆಯಿಲ್ಲದೆ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪುವಂತೆ ಮಾಡಲು ಕೈಗೊಂಡ ಕ್ರಮಗಳು ಹಾಗೂ ಬಾಕಿ ಉಳಿದಿರುವ ಗುರಿಗಳ ಬಗ್ಗೆ ಚರ್ಚೆ ನಡೆಯಲಿದೆ. ಪ್ರಧಾನಿ ಜನ್ ಧನ್ ಯೋಜನೆ, ಉಜ್ವಲ ಯೋಜನೆ, ಪಿಎಂ ಆವಾಸ್ ಯೋಜನೆ (ವಸತಿ), ಆಯುಷ್ಮಾನ್ ಭಾರತ್ (ಆರೋಗ್ಯ ವಿಮೆ), ಪಿಎಂ-ಕಿಸಾನ್, ಜಲ ಜೀವನ್ ಮಿಷನ್ (ಮನೆ ಮನೆಗೆ ನಲ್ಲಿ ನೀರು) ಮತ್ತು ಸ್ವಚ್ಛ ಭಾರತ್ ಅಭಿಯಾನಗಳ ನೆಲಮಟ್ಟದ ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ.

ಮತ್ತಷ್ಟು ಓದಿ: ಪಾಕ್ ಪ್ರಧಾನಿ ಎದುರಲ್ಲೇ ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ:ಟೆರರಿಸಂ ಯಾರಿಗೂ ಆಸ್ತಿಯಾಗಲ್ಲ, ಎರಡು ನಿಲುವು ಬಿಡಿ ಎಂದು ಖಡಕ್ ಎಚ್ಚರಿಕೆ

ಕೇವಲ ಘೋಷಣೆಯಲ್ಲ, ಫಲಿತಾಂಶ ಮಾನದಂಡ: ಕೇವಲ ಯೋಜನೆಗಳನ್ನು ಘೋಷಿಸುವುದು ಸರ್ಕಾರದ ಉದ್ದೇಶವಲ್ಲ; ಅವು ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಮಟ್ಟವನ್ನು ಹೇಗೆ ಬದಲಾಯಿಸಿವೆ ಎಂಬ ನೈಜ ಫಲಿತಾಂಶ ಮತ್ತು ಹೊಣೆಗಾರಿಕೆಯನ್ನು ಈ ಬಾರಿ ಪ್ರಮುಖ ಮಾನದಂಡವಾಗಿ ಇರಿಸಲಾಗಿದೆ.

ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಧ್ಯೇಯ: ಬಡ, ಹಿಂದುಳಿದ ಮತ್ತು ದಲಿತ ಸಮುದಾಯಗಳ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣವೇ ಸರ್ಕಾರದ ಆಡಳಿತದ ಮೂಲ ಅಡಿಪಾಯವಾಗಿದ್ದು, ಮುಂಬರುವ ದಿನಗಳಲ್ಲಿ ಯಾವುದೇ ಲೋಪದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಈ ಸಭೆ ದಿಕ್ಸೂಚಿಯಾಗಲಿದೆ.

ಸಂಪುಟ ಪುನಾರಚನೆ ಅಥವಾ ಜವಾಬ್ದಾರಿ ಬದಲಾವಣೆ ಸಾಧ್ಯತೆ?: ಸಚಿವರ ಕಾರ್ಯಕ್ಷಮತೆಯ ಮೌಲ್ಯಮಾಪನದ ನಂತರ, ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದ ಇಲಾಖೆಗಳಿಗೆ ಹೊಸ ಗುರಿಗಳನ್ನು ನಿಗದಿಪಡಿಸುವುದು ಅಥವಾ ಸಚಿವರ ಕಾರ್ಯಭಾರದಲ್ಲಿ ಅಗತ್ಯ ಬದಲಾವಣೆಗಳನ್ನು ತರುವ ಸಾಧ್ಯತೆಯೂ ಇದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:32 pm, Sun, 6 September 26

Follow Us