AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಲಯದ ಉಳಿವಿಗಾಗಿ 5 ದೇಶಗಳ ಒಕ್ಕೂಟ ರಚನೆಗೆ ಸದ್ಗುರು ಕರೆ: ನೇಪಾಳ ಪ್ರಧಾನಿ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ

ನೇಪಾಳದಲ್ಲಿ ಹಿಮನದಿ ಕುಸಿತದ ನಂತರ, ಸದ್ಗುರು ಜಗ್ಗಿ ವಾಸುದೇವ್ ಅವರು ನೇಪಾಳ ಪ್ರಧಾನಿ ವಿಪತ್ತು ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಹಿಮಾಲಯದ ಪರಿಸರ ರಕ್ಷಣೆಗಾಗಿ ಭಾರತ, ಚೀನಾ, ಪಾಕಿಸ್ತಾನ, ನೇಪಾಳ ಮತ್ತು ಭೂತಾನ್ ಒಳಗೊಂಡ 5 ರಾಷ್ಟ್ರಗಳ ಒಕ್ಕೂಟ ರಚಿಸಲು ಕರೆ ನೀಡಿದರು. ನೈಸರ್ಗಿಕ ವಿಕೋಪಗಳನ್ನು 'ದೈವಿಕ ಕೋಪ' ಎಂದು ಕರೆಯುವ ಮೂಢನಂಬಿಕೆಗಳನ್ನು ಅವರು ಖಂಡಿಸಿದರು, ಸಾಮೂಹಿಕ ಹೊಣೆಗಾರಿಕೆಗೆ ಒತ್ತು ನೀಡಿದರು.

ಹಿಮಾಲಯದ ಉಳಿವಿಗಾಗಿ 5 ದೇಶಗಳ ಒಕ್ಕೂಟ ರಚನೆಗೆ ಸದ್ಗುರು ಕರೆ: ನೇಪಾಳ ಪ್ರಧಾನಿ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ
ಸದ್ಗುರು
ನಯನಾ ರಾಜೀವ್
|

Updated on: Aug 31, 2026 | 10:40 AM

Share

ಕಠ್ಮಂಡು, ಆಗಸ್ಟ್​ 31: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ(Flood)ದ  ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಇಷಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್, ನೇಪಾಳ ಪ್ರಧಾನಿ ವಿಪತ್ತು ಪರಿಹಾರ ನಿಧಿಗೆ 1ಕೋಟಿ ರೂ. ವೈಯಕ್ತಿಕ ದೇಣಿಗೆ ಘೋಷಿಸಿದ್ದಾರೆ.

ಕಠ್ಮಂಡುವಿನಲ್ಲಿ ನಡೆದ ನೇಪಾಳದೊಂದಿಗೆ ಒಗ್ಗಟ್ಟು ಸಮಾವೇಶದಲ್ಲಿ ಮಾತನಾಡಿದ ಅವರು, ಹಿಮಾಲಯ ಶ್ರೇಣಿಯ ಪರಿಸರ ರಕ್ಷಣೆಗಾಗಿ ಭಾರತ, ಚೀನಾ, ಪಾಕಿಸ್ತಾನ, ನೇಪಾಳ ಮತ್ತು ಭೂತಾನ್ ದೇಶಗಳನ್ನೊಳಗೊಂಡ ‘ಐದು ರಾಷ್ಟ್ರಗಳ ಹಿಮಾಲಯನ್ ಮಂಡಳಿ’ ರಚಿಸಲು ಕರೆ ನೀಡಿದರು.

ರಾಜಕೀಯ ಗಡಿಗಳನ್ನು ಮೀರಿದ ಸಹಕಾರ

“ಪರ್ವತಗಳಿಗೆ ರಾಜಕೀಯ, ಗಡಿಗಳು ಅಥವಾ ನೀವು ಮಾತನಾಡುವ ಭಾಷೆಗಳು ಅರ್ಥವಾಗುವುದಿಲ್ಲ. ಹಿಮಾಲಯವು ವಿಶ್ವದ ಅತ್ಯಂತ ಭವ್ಯ ಹಾಗೂ ಅತ್ಯಂತ ಸೂಕ್ಷ್ಮ ಪ್ರದೇಶ. ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ, ಹಿಮಾಲಯವನ್ನು ಹಂಚಿಕೊಂಡಿರುವ ಐದು ರಾಷ್ಟ್ರಗಳು ಒಂದಾಗಿ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ಬರಬೇಕು” ಎಂದು ಸದ್ಗುರು ಪ್ರತಿಪಾದಿಸಿದರು.

ಮತ್ತಷ್ಟು ಓದಿ: ಶಾಲೆಯ ಗಂಟೆ ಬಾರಿಸಿ 1,643 ಮಕ್ಕಳ ಜೀವ ಉಳಿಸಿದ ಶಿಕ್ಷಕ: ಪ್ರವಾಹಕ್ಕೆ ಶಾಲೆಯೇ ಧ್ವಂಸವಾದರೂ ಮಕ್ಕಳು ಬಚಾವ್

ಸಾಮೂಹಿಕ ಹೊಣೆಗಾರಿಕೆ

ಇಂತಹ ಬೃಹತ್ ಹಿಮಕುಸಿತಗಳನ್ನು ನೇಪಾಳದಂತಹ ಸಣ್ಣ ರಾಷ್ಟ್ರಗಳು ಏಕಾಂಗಿಯಾಗಿ ನಿಭಾಯಿಸಲು ಸಾಧ್ಯವಿಲ್ಲ. ಎಲ್ಲ ರಾಷ್ಟ್ರಗಳು ಜಂಟಿ ವೈಜ್ಞಾನಿಕ ಸಮನ್ವಯ ನಡೆಸದಿದ್ದರೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದರು.

ನೈಸರ್ಗಿಕ ದುರಂತಕ್ಕೆ ‘ದೈವಿಕ ಕಾರಣ’ ಕಟ್ಟಬೇಡಿ

ಮೂಢನಂಬಿಕೆ ಬೇಡ: ವಿಪತ್ತನ್ನು ಕೇವಲ “ದೈವಿಕ ಕೋಪ” ಎಂದು ಕರೆಯುವುದನ್ನು ಸದ್ಗುರು ಕಟುವಾಗಿ ತಿರಸ್ಕರಿಸಿದರು. ಇಂತಹ ಮೂಢನಂಬಿಕೆಗಳು ಸಂತ್ರಸ್ತರ ನೈಜ ನೋವಿನ ತೀವ್ರತೆಯನ್ನು ಕಡಿಮೆ ಮಾಡುತ್ತವೆ ಎಂದು ಎಚ್ಚರಿಸಿದರು. ನಾವು ಶಾಶ್ವತವಲ್ಲ, ಯಾವುದೇ ಕ್ಷಣದಲ್ಲೂ ಸಾವು ಬರಬಹುದು ಎಂಬ ಅರಿವು ಮನುಷ್ಯನಿಗೆ ಸದಾ ಇದ್ದರೆ, ನಾವು ಪರಿಸರ ಮತ್ತು ಬದುಕನ್ನು ಹೆಚ್ಚು ಜವಾಬ್ದಾರಿಯುತವಾಗಿ ಕಟ್ಟಿಕೊಳ್ಳುತ್ತೇವೆ” ಎಂದು ವಿವರಿಸಿದರು.

Sadguru 2

80 ಮಂದಿ ನಾಪತ್ತೆ: ಗಡಿಯ ಚೀನಾ ಭಾಗದಲ್ಲಿರುವ ಗೈರಾಂಗ್ ವಲಸೆ ಕೇಂದ್ರದಲ್ಲಿದ್ದ ಈಶ ಸೇಕ್ರೆಡ್ ವಾಕ್ಸ್ (Kailash Sojourn) ಯಾತ್ರೆಯ 77 ಯಾತ್ರಿಕರು ಹಾಗೂ 3 ಮಂದಿ ಸ್ವಯಂಸೇವಕರು ಈ ದುರಂತದಲ್ಲಿ ನಾಪತ್ತೆಯಾಗಿದ್ದಾರೆ.

ಮೃತರ ಆತ್ಮಶಾಂತಿಗೆ ಪೂಜೆ: ದುರಂತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲ ಅಗಲಿದ ಜೀವಗಳ ಶಾಂತಿಗಾಗಿ 2026ರ ಸೆಪ್ಟೆಂಬರ್ 3 ರಂದು ತಮಿಳುನಾಡಿನ ಕೊಯಮತ್ತೂರಿನ ಇಷಾ ಯೋಗ ಕೇಂದ್ರದಲ್ಲಿ ವಿಶೇಷ ‘ಕಾಲಭೈರವ ಕರ್ಮ’ ನೆರವೇರಿಸುವುದಾಗಿ ಸದ್ಗುರು ತಿಳಿಸಿದರು.

Follow Us
ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ
ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ
‘ಬಿಗ್ ಬಾಸ್ ಕನ್ನಡ ಸೀಸನ್ 13’: ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು?
‘ಬಿಗ್ ಬಾಸ್ ಕನ್ನಡ ಸೀಸನ್ 13’: ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು?
ಇಂದು ಹೇರಂಭ ಸಂಕಷ್ಟ ಚತುರ್ಥಿ; ಸಿಂಹವಾಹನಸ್ಥ ವಿನಾಯಕನ ಆರಾಧನೆಯ ದಿನ
ಇಂದು ಹೇರಂಭ ಸಂಕಷ್ಟ ಚತುರ್ಥಿ; ಸಿಂಹವಾಹನಸ್ಥ ವಿನಾಯಕನ ಆರಾಧನೆಯ ದಿನ
ಪ್ರಕಾಶ್ ರಾಜ್​​​ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಪ್ರಕಾಶ್ ರಾಜ್​​​ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು