AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯ ಪ್ರದೇಶದಲ್ಲಿ ಚುರುಕಾದ ರೈತರ ಪ್ರತಿಭಟನೆ; ಅಕ್ಟೋಬರ್ 28ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ಮಹಾಪಂಚಾಯತ್

Sanyukt Kisan Morcha ಸಂಯುಕ್ತ ಕಿಸಾನ್ ಮೋರ್ಚಾ ಅಕ್ಟೋಬರ್ 28 ರಂದು ನರಸಿಂಗಪುರ ಜಿಲ್ಲೆಯ ಗಾದರವಾಡದ ಸಾಲಿಚೌಕ ಪ್ರದೇಶದಲ್ಲಿ ಕಿಸಾನ್ ಮಹಾಪಂಚಾಯತ್ ನಡೆಸಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ನಿರೀಕ್ಷಿಸುವುದರ ಜೊತೆಗೆ, ಎಸ್‌ಕೆಎಂ ಸಮಿತಿಯ ಒಂಬತ್ತು ಸದಸ್ಯರ ಉಪಸ್ಥಿತಿಯನ್ನು ಸಭೆಯಲ್ಲಿ ನಿರೀಕ್ಷಿಸಲಾಗಿದೆ.

ಮಧ್ಯ ಪ್ರದೇಶದಲ್ಲಿ ಚುರುಕಾದ ರೈತರ ಪ್ರತಿಭಟನೆ; ಅಕ್ಟೋಬರ್ 28ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ಮಹಾಪಂಚಾಯತ್
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Oct 21, 2021 | 4:47 PM

Share

ಭೋಪಾಲ್: ಕನಿಷ್ಠ ಬೆಂಬಲ ಬೆಲೆ ಮತ್ತು ಇತರ ಬೇಡಿಕೆಗಳಿಗೆ 2017ರಲ್ಲಿ ರೈತರ ಚಳುವಳಿಯಲ್ಲಿ ಭಾಗವಹಿಸಿದ್ದ ಮಧ್ಯಪ್ರದೇಶವು  ಸದ್ಯ ರೈತರ ಆಂದೋಲದನದಿಂದ ದೂರವೇ ಉಳಿದಿದೆ. ಆದಾಗ್ಯೂ, ನಿಧಾನವಾಗಿ ಮತ್ತು ಸ್ಥಿರವಾಗಿ ಕೃಷಿ ಸಂಸ್ಥೆಗಳು ವಿಶೇಷವಾಗಿ ಕೆಲವು ಯುವ ರೈತ ಸಂಘದ ನಾಯಕರು ಹೊಸ ಕೃಷಿ ಮಾರುಕಟ್ಟೆ ಕಾನೂನುಗಳು, ಎಂಎಸ್​​ಪಿ​​  ಗ್ಯಾರಂಟಿ ಮತ್ತು ಇತರ ಸಮಸ್ಯೆಗಳ ವಿರುದ್ಧ ರೈತರನ್ನು ಒಗ್ಗೂಡಿಸುತ್ತಿದ್ದಾರೆ. ಈ ಪ್ರಯತ್ನಗಳ ಭಾಗವಾಗಿ ಸಂಯುಕ್ತ ಕಿಸಾನ್ ಮೋರ್ಚಾ (Samyukt Kisan Morcha)  ಅಕ್ಟೋಬರ್ 28 ರಂದು ನರಸಿಂಗಪುರ ಜಿಲ್ಲೆಯ ಗಾದರವಾಡದ ಸಾಲಿಚೌಕ ಪ್ರದೇಶದಲ್ಲಿ ಕಿಸಾನ್ ಮಹಾಪಂಚಾಯತ್ (Kisan Mahapanchayat) ನಡೆಸಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ನಿರೀಕ್ಷಿಸುವುದರ ಜೊತೆಗೆ, ಎಸ್‌ಕೆಎಂ ಸಮಿತಿಯ ಒಂಬತ್ತು ಸದಸ್ಯರ ಉಪಸ್ಥಿತಿಯನ್ನು ಸಭೆಯಲ್ಲಿ ನಿರೀಕ್ಷಿಸಲಾಗಿದೆ. ಇದು ರಾಷ್ಟ್ರೀಯ ರಾಜಧಾನಿ ಮತ್ತು ಹತ್ತಿರದ ರಾಜ್ಯಗಳಲ್ಲಿ ಕೃಷಿ ಸಂಚಲನವನ್ನು ಮುನ್ನಡೆಸುವ ಮುಂಭಾಗದ ಗುಂಪಾಗಿದೆ. ಒಂಬತ್ತು ಸದಸ್ಯರ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಶಿವ ಕುಮಾರ್ ಶರ್ಮಾ ‘ಕಕ್ಕಾಜಿ’ ನ್ಯೂಸ್ 18.ಕಾಮ್‌ ಜತೆ ಮಾತನಾಡಿದ್ದು, ಗದರ್ವಾಡಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಸ್‌ಕೆಎಂ ಸಮಿತಿಯ ಎಲ್ಲ ಸದಸ್ಯರು ಹಾಜರಿರುತ್ತಾರೆ ಎಂದು ಹೇಳಿದರು. “ನಾವು ಈಗಾಗಲೇ ಶಿಯೋಪುರ್, ರೇವಾ ಮತ್ತು ಜಬಲ್‌ಪುರದಲ್ಲಿ ಇಂತಹ ಮೂರು ಕಾರ್ಯಕ್ರಮಗಳನ್ನು ನಡೆಸಿದ್ದೇವೆ” ಎಂದು ಶರ್ಮಾ ಹೇಳಿದರು, ಮೂರು ಕೃಷಿ ಕಾನೂನುಗಳು ಮತ್ತು ಎಂಎಸ್‌ಪಿ ಗ್ಯಾರಂಟಿ ಬಗ್ಗೆ ಈ ಕಾರ್ಯಕ್ರಮದ ಮುಖ್ಯ ವಿಷಯವಾಗಿದೆ.

2024 ರಲ್ಲಿ ನಡೆಯಲಿರುವ ದೊಡ್ಡ ಹೋರಾಟಕ್ಕಾಗಿ ನಾವು ರೈತರನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದೇವೆ ಎಂದು 2017 ರ ಮಧ್ಯಪ್ರದೇಶದ ಕೃಷಿ ಚಳವಳಿಯ ಸಂದರ್ಭದಲ್ಲಿ ರಾಷ್ಟ್ರೀಯ ಗಮನ ಸೆಳೆದ ಮಾಜಿ ಭಾರತೀಯ ಕಿಸಾನ್ ಸಂಘದ ಮುಖ್ಯಸ್ಥ ಕಕ್ಕಾಜಿ ದೃಢಪಡಿಸಿದರು. ಇದರಲ್ಲಿ ಮಂಡಸೌರ್ ಜಿಲ್ಲೆಯಲ್ಲಿ ಪೋಲೀಸ್ ಗುಂಡಿನ ದಾಳಿಯಲ್ಲಿ ಐದು ರೈತರು ಸಾವನ್ನಪ್ಪಿದ್ದಾರೆ.

ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ತಮ್ಮ ಸಹವರ್ತಿಗಳನ್ನು ಕೆರಳಿಸಿರುವ ಕೃಷಿ ಸಮಸ್ಯೆಗಳ ಬಗ್ಗೆ ಮಧ್ಯಪ್ರದೇಶದಲ್ಲಿನ ರೈತರು ಯಾಕೆ ದುಃಖವನ್ನು ಪ್ರದರ್ಶಿಸುವಲ್ಲಿ ವಿಫಲರಾದರು ಎಂದು ಕೇಳಿದಾಗ, ಶರ್ಮಾ ಅವರು ಭೌಗೋಳಿಕ ಪರಿಸ್ಥಿತಿಗಳಿಗೆ ಅನುಕೂಲವಾಗಿ ಹೆಚ್ಚಿನದನ್ನು ಮಾಡಬೇಕಿಗದೆ ಎಂದು ಹೇಳಿದರು.  ಅಶಾಂತಿಯು  ನವದೆಹಲಿ, ಪಂಜಾಬ್ ಮತ್ತು ಹರಿಯಾಣದ ಮೇಲೆ ಕೇಂದ್ರೀಕೃತವಾಗಿತ್ತು ಹಾಗಾಗಿ ಸೀಮಿತ ಸಂಖ್ಯೆಯ ಸ್ಥಳೀಯ ರೈತರು ಅಲ್ಲಿಗೆ ತಲುಪಿದರು ಎಂದು ಅವರು ಹೇಳಿದರು.

ಆದಾಗ್ಯೂ, ಅಲ್ಲಿಂದ ಮೆರವಣಿಗೆಗೆ ಕರೆ ಬಂದಾಗಲೆಲ್ಲಾ ಮಧ್ಯಪ್ರದೇಶದ ರೈತರು ಈ ಇದಕ್ಕೆ ಪ್ರತಿಕ್ರಿಯಿಸುತ್ತಾರೆ. ಕೆಲವು ದಿನಗಳ ಹಿಂದೆ ರೈಲು ರೋಕೋ ಪ್ರತಿಭಟನೆ ನಡೆದಿದ್ದು ಈ ರೀತಿಯ ಪ್ರತಿಭಟನೆ ನಡೆಸುತ್ತಾರೆ ಎಂದು ಹಿರಿಯ ರೈತ ಸಂಘದ ನಾಯಕ ಹೇಳಿಕೊಂಡಿದ್ದಾರೆ.

ಕೃಷಿ ನಾಯಕ ರಾಕೇಶ್ ಟಿಕಾಯತ್ ಅವರು ಅಕ್ಟೋಬರ್ 28 ರ ಕಾರ್ಯಕ್ರಮದ ಭಾಗವಾಗುತ್ತಿಲ್ಲ ಎಂದು ಶರ್ಮಾ  ಹೇಳಿದ್ದಾರೆ. ಕೆಲವು ಯುವ ಕೃಷಿ ನಾಯಕರು ಕಾರ್ಯಕ್ರಮವನ್ನು ಮರು ನಿಗದಿಪಡಿಸಲಾಗಿದೆ ಹಾಗಾಗಿ ರಾಕೇಶ್ ಟಿಕಾಯತ್ ಅಕ್ಟೋಬರ್ 28 ರಂದು ಈ ಕಾರ್ಯಕ್ರಮದ ಭಾಗವಾಗಬಹುದು ಎಂದು ಹೇಳಿಕೊಂಡಿದ್ದರು. “ನಾವು ಯಾವಾಗಲೂ ಕೃಷಿ ಸಮಸ್ಯೆಗಳಿಗೆ ಪ್ರತಿಕ್ರಿಯಿಸುತ್ತೇವೆ ನಮ್ಮ ಪಕ್ಷದ ಸೆಲ್‌ನ ರೈತರಿಗೆ ಭಾಗವಹಿಸಲು ನಾವು ಒತ್ತಾಯಿಸುತ್ತೇವೆ “ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಕಿಸಾನ್ ಮೋರ್ಚಾದ ಕಾರ್ಯಾಧ್ಯಕ್ಷ ಕೇದಾರ ಶಂಕರ್ ಸಿರೋಹಿ ನ್ಯೂಸ್ 18.ಕಾಮ್‌ಗೆ ತಿಳಿಸಿದರು.

“ದೀರ್ಘಾವಧಿಯಲ್ಲಿ, ಕೃಷಿ-ಮಾರುಕಟ್ಟೆ ಕಾನೂನುಗಳು ರೈತರ ಹಿತಾಸಕ್ತಿಗೆ ಅಡ್ಡಿಯಾಗಲಿವೆ ಮತ್ತು ಅವುಗಳನ್ನು ರದ್ದುಗೊಳಿಸಲು ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ಸಿರೋಹಿ ಹೇಳಿದರು.

ಮಧ್ಯಪ್ರದೇಶದ ರೈತರು ರಸಗೊಬ್ಬರ ಕೊರತೆ, ಬೆಳೆ ವಿಮೆ ಪಾವತಿ ಮಾಡದಿರುವುದು ಮತ್ತು ಮುಂಗಾರು ಮತ್ತು ಇತ್ತೀಚೆಗೆ ಅಕಾಲಿಕ ಮಳೆಯ ಸಮಯದಲ್ಲಿ ಬೆಳೆ ಹಾನಿ ಬಗ್ಗೆ ದೂರು ನೀಡುತ್ತಿದ್ದಾರೆ. ಆದರೆ ಕೃಷಿ ಕ್ಷೇತ್ರದಲ್ಲಿ ಯಾವುದೇ ಸಂಘಟಿತ ಅಭಿಯಾನಗಳು ನಡೆದಿಲ್ಲ.

ಏತನ್ಮಧ್ಯೆ, ಸುಮಾರು ಹತ್ತಾರು ಯುವಕರು ಸಣ್ಣ ಕೂಟಗಳು ಮತ್ತು ಸಾರ್ವಜನಿಕ ಸಭೆಗಳ ಮೂಲಕ ರಾಜ್ಯದಾದ್ಯಂತ ರೈತರನ್ನು ಒಗ್ಗೂಡಿಸುತ್ತಿದ್ದಾರೆ ಎಂದು ಕೃಷಿ ನಾಯಕರು ದೃಢೀಕರಿಸುತ್ತಾರೆ. ಬುಧವಾರ, ಕೃಷಿ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ಅವರ ಸೋದರಳಿಯ ಗೌರವ್ ಬಲಿಯಾನ್ ಟಿಕಾಯತ್ ಅವರು ಗ್ವಾಲಿಯರ್‌ನಲ್ಲಿರುವ ಕಿಸಾನ್ ಪಂಚಾಯತ್‌ನಲ್ಲಿ ಭಾಷಣ ಮಾಡಿದರು. ಈ ಕಾರ್ಯಕ್ರಮವನ್ನು ಭಾರತೀಯ ಕಿಸಾನ್ ಯೂನಿಯನ್ ಆಯೋಜಿಸಿದೆ. ಕಳೆದ ಭಾನುವಾರ, ಕೃಷಿ ಚಳವಳಿಯ ಭಾಗವಾಗಿದ್ದ ಕೃಷಿ ಪದವೀಧರ ವಿಜಯ್ ಚೌಧರಿ, ಖಾರ್ಗೋನ್ ನಲ್ಲಿ ಕೃಷಿ ಸಮಸ್ಯೆಗಳ ಕುರಿತು ಸಭೆಯಲ್ಲಿ ಮಾತನಾಡಿದ್ದು, ಸಾಕಷ್ಟು ಜನಸಂದಣಿಯನ್ನು ಸೆಳೆಯಿತು.

ಇದನ್ನೂ ಓದಿ: ಬಾಂಗ್ಲಾದೇಶ ಹಿಂಸಾಚಾರವನ್ನು ಪ್ರಚೋದಿಸಿದ ಧರ್ಮ ನಿಂದನೆ ಘಟನೆಗೆ ಕಾರಣವಾದ  ವ್ಯಕ್ತಿಯನ್ನು ಗುರುತಿಸಿದ ಪೊಲೀಸ್

Published On - 4:46 pm, Thu, 21 October 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ