ಆಗ್ರಾ: ತಾಜ್‌ಮಹಲ್‌ನಲ್ಲಿ ‘ಗಂಗಾಜಲ’ ಅರ್ಪಿಸಿದ ಇಬ್ಬರ ಬಂಧನ; ವಿಡಿಯೊ ವೈರಲ್

ತಾಜ್ ಮಹಲ್ ಆವರಣದ ಭದ್ರತೆಯ ಕರ್ತವ್ಯದಲ್ಲಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಅವರನ್ನು ಬಂಧಿಸಿದೆ. ಪ್ರವಾಸಿಗರು ನೀರಿನ ಬಾಟಲಿಗಳನ್ನು ತರಲು ಅನುಮತಿಸುವ ಟಿಕೆಟ್ ಖರೀದಿಸಿದ ನಂತರ ಈ ವ್ಯಕ್ತಿಗಳು ಸ್ಮಾರಕದ ಆವರಣವನ್ನು ಪ್ರವೇಶಿಸಿದ್ದರು. ಷಹಜಹಾನ್ ಮತ್ತು ಮುಮ್ತಾಜ್ ಮಹಲ್ ಅವರ ಮೂಲ ಸಮಾಧಿಗಳನ್ನು ಹೊಂದಿರುವ ತಾಜ್ ಮಹಲ್‌ನ ನೆಲಮಾಳಿಗೆಗೆ ಹೋಗುವ ಮುಚ್ಚಿದ ಮೆಟ್ಟಿಲುಗಳ ಮೇಲೆ ಆರೋಪಿಗಳಲ್ಲಿ ಒಬ್ಬರು ಪ್ಲಾಸ್ಟಿಕ್ ಬಾಟಲಿಯಿಂದ ನೀರನ್ನು ಸುರಿಯುವುದನ್ನು ವಿಡಿಯೊ ಕ್ಲಿಪ್ ತೋರಿಸುತ್ತದೆ

ಆಗ್ರಾ: ತಾಜ್‌ಮಹಲ್‌ನಲ್ಲಿ ‘ಗಂಗಾಜಲ’ ಅರ್ಪಿಸಿದ ಇಬ್ಬರ ಬಂಧನ; ವಿಡಿಯೊ ವೈರಲ್
ತಾಜ್ ಮಹಲ್​​ನಲ್ಲಿ ಗಂಗಾಜಲ ಅರ್ಪಿಸಿದ ಯುವಕರು
Follow us
|

Updated on: Aug 03, 2024 | 4:28 PM

ಆಗ್ರಾ ಆಗಸ್ಟ್ 03: ಶನಿವಾರ ಶ್ರಾವಣ ಮಾಸದ ಸಂದರ್ಭದಲ್ಲಿ ಉತ್ತರ ಪ್ರದೇಶದ (Uttar pradesh) ಆಗ್ರಾದ ತಾಜ್ ಮಹಲ್‌ನಲ್ಲಿ (Taj Mahal) ಗಂಗಾಜಲವನ್ನು ಅರ್ಪಿಸಿದ ಆರೋಪದ ಮೇಲೆ ಬಲಪಂಥೀಯ ಸಂಘಟನೆಯ ಇಬ್ಬರನ್ನು ಬಂಧಿಸಲಾಗಿದೆ. ತಾಜ್ ಮಹಲ್ ಅನ್ನು ‘ತೇಜೋಮಹಾಲಯ’(TejoMahalay), ಶಿವ ಮಂದಿರ ಎಂದು ಪರಿಗಣಿಸಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪವಿತ್ರ ನೀರನ್ನು ಅರ್ಪಿಸಿದ್ದೇವೆ ಎಂದು ಬಂಧಿತರು ಹೇಳಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಭಾದೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಳ್ಳುವ ಇಬ್ಬರನ್ನು ತಾಜ್ ಮಹಲ್ ಆವರಣದಿಂದ ಬಂಧಿಸಿರುವುದನ್ನು ತಾಜ್‌ಗಂಜ್ ಪೊಲೀಸರು ಖಚಿತಪಡಿಸಿದ್ದಾರೆ.

ಷಹಜಹಾನ್ ಮತ್ತು ಮುಮ್ತಾಜ್ ಮಹಲ್ ಅವರ ಮೂಲ ಸಮಾಧಿಗಳನ್ನು ಹೊಂದಿರುವ ತಾಜ್ ಮಹಲ್‌ನ ನೆಲಮಾಳಿಗೆಗೆ ಹೋಗುವ ಮುಚ್ಚಿದ ಮೆಟ್ಟಿಲುಗಳ ಮೇಲೆ ಆರೋಪಿಗಳಲ್ಲಿ ಒಬ್ಬರು ಪ್ಲಾಸ್ಟಿಕ್ ಬಾಟಲಿಯಿಂದ ನೀರನ್ನು ಸುರಿಯುವುದನ್ನು ವಿಡಿಯೊ ಕ್ಲಿಪ್ ತೋರಿಸುತ್ತದೆ. ತಾಜ್ ಮಹಲ್ ಸ್ಮಾರಕವಲ್ಲ,ಅದು ಶಿವನ ದೇವಾಲಯ ಎಂದು ಅವರು ವಾದಿಸಿದ್ದಾರೆ. ಓಂ ಎಂದಿರುವ ಸ್ಟಿಕ್ಕರ್‌ನಲ್ಲಿ ಪವಿತ್ರ ನೀರನ್ನು ಸುರಿಯಲಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವೈರಲ್ ವಿಡಿಯೊ

ತಾಜ್ ಮಹಲ್ ಆವರಣದ ಭದ್ರತೆಯ ಕರ್ತವ್ಯದಲ್ಲಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಅವರನ್ನು ಬಂಧಿಸಿದೆ. ಪ್ರವಾಸಿಗರು ನೀರಿನ ಬಾಟಲಿಗಳನ್ನು ತರಲು ಅನುಮತಿಸುವ ಟಿಕೆಟ್ ಖರೀದಿಸಿದ ನಂತರ ಈ ವ್ಯಕ್ತಿಗಳು ಸ್ಮಾರಕದ ಆವರಣವನ್ನು ಪ್ರವೇಶಿಸಿದ್ದರು.  ತಾಜ್ ಮಹಲ್ ಅನ್ನು ಮರುನಾಮಕರಣ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಅದೇ ವೇಳೆ ಸಾಂದರ್ಭಿಕವಾಗಿ ಆರತಿ ಅಥವಾ ಪೂಜೆಗಳನ್ನು ಪ್ರಾರ್ಥನೆಯೊಂದಿಗೆ ನಡೆಸಲು ಪ್ರಯತ್ನಿಸಲಾಗಿದೆ.

ಇಂತಹ ಧಾರ್ಮಿಕ ಅರ್ಪಣೆಗಳಿಗೆ ಅನುಮತಿ ಕೋರಿ ಸ್ಥಳೀಯವಾಗಿ ನ್ಯಾಯಾಲಯದ ಮೊಕದ್ದಮೆ ಪ್ರಸ್ತುತ ನಡೆಯುತ್ತಿದೆ. ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾಗಿದೆ. ಹಿಂದುತ್ವ ಸಿದ್ಧಾಂತದ ಗುಂಪುಗಳು ತಾಜ್ ಮಹಲ್ ಅನ್ನು ‘ತೇಜೋಮಹಾಲಯ’ ಎಂದು ಕರೆಯುತ್ತಾರೆ.

ತಾಜ್ ಗಂಜ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಬಂಧನದಲ್ಲಿದ್ದು, ತನಿಖೆ ನಡೆಯುತ್ತಿದೆ ಎಂದು ಆಗ್ರಾ ನಗರ ಪೊಲೀಸ್ ಉಪ ಆಯುಕ್ತ ಸೂರಜ್  ರಾಯ್  ತಿಳಿಸಿದ್ದಾರೆ.

ಇದನ್ನೂ ಓದಿ: ಜಲಾವೃತಗೊಂಡ ಕೋಲ್ಕತ್ತಾ ವಿಮಾನ ನಿಲ್ದಾಣ, ಪಶ್ಚಿಮ ಬಂಗಾಳಕ್ಕೆ ಪ್ರವಾಹದ ಭೀತಿ

ಇದಕ್ಕೂ ಮುನ್ನ ಅಖಿಲ ಭಾರತ ಹಿಂದೂ ಮಹಾಸಭಾದ ಮಹಿಳಾ ಕಾರ್ಯಕರ್ತೆಯೊಬ್ಬರು ಕಾಸ್‌ಗಂಜ್‌ನ ಸೊರೊನ್‌ನಲ್ಲಿ ಗಂಗಾ ನದಿಯಿಂದ ನೀರನ್ನು ಹೊತ್ತು ತಾಜ್‌ಮಹಲ್ ಕಡೆಗೆ ಮೆರವಣಿಗೆ ನಡೆಸಿದ್ದರು. ಆದರೆ ಪೊಲೀಸರು ಬ್ಯಾರಿಕೇಡ್‌ನಲ್ಲಿ ತಡೆದರು.  ಹಿಂದೆ, ಬಲಪಂಥೀಯ ಕಾರ್ಯಕರ್ತರು ಮಹಾಶಿವರಾತ್ರಿಯ ಸಮಯದಲ್ಲಿ ತಾಜ್ ಮಹಲ್ ಸಂಕೀರ್ಣದೊಳಗೆ ‘ಶಿವ್ ಚಾಲೀಸಾ’ವನ್ನು ಪಠಿಸುತ್ತಿದ್ದರು. ಹಲವಾರು ವರ್ಷಗಳ ಹಿಂದೆ ಸಂಘಟನೆಯಾದ ಹಿಂದೂ ಜಾಗರಣ್ ಮಂಚ್‌ನ ಸದಸ್ಯರು, ಅದರ ಜಿಲ್ಲಾಧ್ಯಕ್ಷ ಗೌರವ್ ಠಾಕೂರ್ ಸೇರಿದಂತೆ, ಸ್ಮಾರಕದೊಳಗೆ ಕೇಸರಿ ಧ್ವಜವನ್ನು ಬೀಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?